ಬಿಗ್ಬಾಸ್ಗೇ ಕಾಗೆ ಹಾರಿಸಲು ಹೋಗಿ, ಮೊದಲ ದಿನವೇ ಪೇಚಿಗೆ ಸಿಲುಕಿದ ಧನರಾಜ್; ‘ನಿಂಗೀದು ಬೇಕಿತ್ತಾ ಮಗನೇ’ ಎಂದು ಕಾಲೆಳೆದ ನೆಟ್ಟಿಗರು
- Bigg boss Kannada season 11: ಈ ಸಲದ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಹಿರಿತೆರೆ ಮತ್ತು ಕಿರುತೆರೆ ಕಲಾವಿದರ ದಂಡೇ ಇದೆ. ಕಾಮಿಡಿ ಮಾಡುವವರ ನಡುವೆ, ಗಂಭೀರ ಸ್ವಭಾವದರೂ ಇದ್ದಾರೆ. ಈ ನಡುವೆ ಕನ್ಫೆಷನ್ ರೂಮ್ಗೆ ಬಂದ ಧನರಾಜ್ಗೆ ಬಿಗ್ಬಾಸ್ ಕಡೆಯಿಂದಲೇ ಕಾಮಿಡಿ ಶಿಕ್ಷೆ ಸಿಕ್ಕಿದೆ. ಏಕಿರಬಹುದು?
- Bigg boss Kannada season 11: ಈ ಸಲದ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಹಿರಿತೆರೆ ಮತ್ತು ಕಿರುತೆರೆ ಕಲಾವಿದರ ದಂಡೇ ಇದೆ. ಕಾಮಿಡಿ ಮಾಡುವವರ ನಡುವೆ, ಗಂಭೀರ ಸ್ವಭಾವದರೂ ಇದ್ದಾರೆ. ಈ ನಡುವೆ ಕನ್ಫೆಷನ್ ರೂಮ್ಗೆ ಬಂದ ಧನರಾಜ್ಗೆ ಬಿಗ್ಬಾಸ್ ಕಡೆಯಿಂದಲೇ ಕಾಮಿಡಿ ಶಿಕ್ಷೆ ಸಿಕ್ಕಿದೆ. ಏಕಿರಬಹುದು?
(1 / 5)
ಬಿಗ್ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಓಪನಿಂಗ್ ಕಂಡಿದೆ. ಬೇರೆ ಬೇರೆ ಕ್ಷೇತ್ರದ ಒಟ್ಟು 17 ಮಂದಿ ಸ್ಪರ್ಧಿಗಳು ಈ ಸಲ ಬಿಗ್ ಬಾಸ್ ಮನೆಯ ಬಾಗಿಲು ತಟ್ಟಿದ್ದಾರೆ.
(2 / 5)
ವಿಶೇಷ ಏನೆಂದರೆ ಈ ಸಲ ಸ್ವರ್ಗ ಮತ್ತು ನರಕದ ಪರಿಕಲ್ಪನೆಯಲ್ಲಿ ಶೋ ನಡೆಯುತ್ತಿದ್ದು, ಈಗಾಗಲೇ ಒಂದಷ್ಟು ಮಂದಿ ಸ್ವರ್ಗಕ್ಕೆ ಮತ್ತಷ್ಟು ಮಂದಿ ನರಕ ಸೇರಿದ್ದಾರೆ.
(3 / 5)
ಮನೆಯಲ್ಲಿ ಏನೆಲ್ಲ ಆಯ್ತು ಎಂಬುದರ ಬಗ್ಗೆ ಕಿರು ಝಲಕ್ ಎಂಬಂತೆ ಕಲರ್ಸ್ ಕನ್ನಡ ಪ್ರೋಮೋ ರಿಲೀಸ್ ಮಾಡಿದೆ. ಆ ಪ್ರೋಮೋದಲ್ಲಿ ಕಾಮಿಡಿ ನಟ ಧನರಾಜ್ ಆಚಾರ್ಗೆ ಬಿಗ್ ಬಾಸ್ ವಿಚಿತ್ರ ಶಿಕ್ಷೆ ನೀಡಿದ್ದಾರೆ.
(4 / 5)
ಕನ್ಫೆಷನ್ ರೂಮ್ಗೆ ಬಂದ ಧನರಾಜ್, ನೀವು ಮಾತನಾಡಿದ್ದು ಕೇಳಿಸಿಲ್ಲ ಬಿಗ್ ಬಾಸ್ ಎಂದಿದ್ದಾರೆ. ಅದಕ್ಕೆ ಉತ್ತರಿಸಿದ ಬಿಗ್ಬಾಸ್, ಬಿಗ್ ಬಾಸ್ಗೆ ಸರಿಯಾಗಿ ಮೈಕ್ ಹಾಕಿಕೊಳ್ಳಿ ಎಂದ ಮೊದಲ ವ್ಯಕ್ತಿ ನೀವೇ ಎಂದಿದ್ದಾರೆ.
ಇತರ ಗ್ಯಾಲರಿಗಳು