ಇವಳೇ ನಮ್ಮ ಮನೆ ಮುದ್ದು ಸೊಸೆ, ವಿದ್ಯಾ ಮೇಲಿನ ಪ್ರೀತಿಯನ್ನು ಕ್ವಾಟ್ಲೆ ಬಳಿ ಹೇಳಿಕೊಂಡ ಭದ್ರ; ಚೆಲುವನ ವರ್ತನೆಗೆ ಸಿಟ್ಟಾದ ಶಿವರಾಮೇಗೌಡ
ಕನ್ನಡ ಸುದ್ದಿ  /  ಮನರಂಜನೆ  /  ಇವಳೇ ನಮ್ಮ ಮನೆ ಮುದ್ದು ಸೊಸೆ, ವಿದ್ಯಾ ಮೇಲಿನ ಪ್ರೀತಿಯನ್ನು ಕ್ವಾಟ್ಲೆ ಬಳಿ ಹೇಳಿಕೊಂಡ ಭದ್ರ; ಚೆಲುವನ ವರ್ತನೆಗೆ ಸಿಟ್ಟಾದ ಶಿವರಾಮೇಗೌಡ

ಇವಳೇ ನಮ್ಮ ಮನೆ ಮುದ್ದು ಸೊಸೆ, ವಿದ್ಯಾ ಮೇಲಿನ ಪ್ರೀತಿಯನ್ನು ಕ್ವಾಟ್ಲೆ ಬಳಿ ಹೇಳಿಕೊಂಡ ಭದ್ರ; ಚೆಲುವನ ವರ್ತನೆಗೆ ಸಿಟ್ಟಾದ ಶಿವರಾಮೇಗೌಡ

Muddu Sose:ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಎಪಿಸೋಡ್‌ 8ರಲ್ಲಿ ಶಿವರಾಮೇಗೌಡ ತನ್ನ ಮಗನಿಗಾಗಿ ಮಾಡಿದ ಪೂಜೆ ಯಶಸ್ವಿಯಾಗುತ್ತದೆ. ತಾನು ವಿದ್ಯಾಳನ್ನು ಪ್ರೀತಿಸುತ್ತಿರುವುದಾಗಿ ಕ್ವಾಟ್ಲೆ ಬಳಿ ಭದ್ರ ಹೇಳುತ್ತಾನೆ. ಜಾತ್ರೆಯಲ್ಲಿ ಚೆಲುವನ ಅವಾಂತರ ನೋಡಿ ಶಿವರಾಮೇಗೌಡ ಸಿಟ್ಟಾಗುತ್ತಾನೆ. (ಬರಹ: ರಕ್ಷಿತಾ)

ಇವಳೇ ನಮ್ಮ ಮನೆ ಮುದ್ದು ಸೊಸೆ, ವಿದ್ಯಾ ಮೇಲಿನ ಪ್ರೀತಿಯನ್ನು ಕ್ವಾಟ್ಲೆ ಬಳಿ ಹೇಳಿಕೊಂಡ ಭದ್ರ; ಚೆಲುವನ ವರ್ತನೆಗೆ ಸಿಟ್ಟಾದ ಶಿವರಾಮೇಗೌಡ
ಇವಳೇ ನಮ್ಮ ಮನೆ ಮುದ್ದು ಸೊಸೆ, ವಿದ್ಯಾ ಮೇಲಿನ ಪ್ರೀತಿಯನ್ನು ಕ್ವಾಟ್ಲೆ ಬಳಿ ಹೇಳಿಕೊಂಡ ಭದ್ರ; ಚೆಲುವನ ವರ್ತನೆಗೆ ಸಿಟ್ಟಾದ ಶಿವರಾಮೇಗೌಡ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಬುಧವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 8ನೇ ಎಪಿಸೋಡ್‌ ಕಥೆ ಹೀಗಿದೆ. ಭದ್ರನಿಗೆ ಮದುವೆ ಆಗಲೆಂದು ಶಿವರಾಮೇಗೌಡ, ಮನೆ ದೇವರಿಗೆ ಮಾಡಿದ ಪೂಜೆ ಯಶಸ್ವಿಯಾಗಿದೆ. ತಾನು ಇಷ್ಟು ದಿನ ಪ್ರೀತಿಯಿಂದ ಸಾಕಿದ ಮೇಕೆ ಬಲಿಯಾಗುತ್ತಿದೆ ಎಂದು ಅಳುತ್ತಿದ್ದ ವಿದ್ಯಾ ನಂತರ ಅದರಿಂದಲೇ ಮಾಡಿದ ಬಾಡೂಟ ಸವಿದು ಖುಷಿಯಾಗುತ್ತಾಳೆ. ಮೇಕೆಯನ್ನು ಕಾಪಾಡು ಎಂದು ಬೇಡಿಕೊಂಡ ಹುಡುಗಿ ಈಗ ಇಷ್ಟು ಚೆನ್ನಾಗಿ ಊಟ ಮಾಡುತ್ತಿದ್ದಾಳೆ ಎಂದು ತಿಳಿದು ಭದ್ರ ಹುಸಿ ಕೋಪ ತೋರುತ್ತಾನೆ.

ವಿದ್ಯಾ ಮೇಲೆ ದರ್ಪ ತೋರಿದ ವಿನಂತಿ

ಊಟ ಮಾಡಿದ ಜನರು ಅಡುಗೆಯನ್ನು ಹೊಗಳಿ ಹೋಗುತ್ತಾರೆ. ದೇವಿಗೆ ಮಂಗಳಾರತಿ ಮಾಡುವ ಸಮಯವಾಗುತ್ತದೆ. ವಿನಂತಿ ಎಲ್ಲೂ ಕಾಣದ್ದನ್ನು ನೋಡಿ ಎಲ್ಲಿ ಹೋದಳು ಅವಳು ಎಂದು ಮೋನಾ ಕೇಳುತ್ತಾಳೆ. ಭದ್ರನಿಗೆ ಒಳ್ಳೆಯದಾಗಲಿ ಎಂದು ವಿನಂತಿ ದೇವಿಗೆ ವಿಶೇಷ ಪೂಜೆ ಮಾಡಿಸುತ್ತಿದ್ದಾಳೆ. ಪೂಜಾ ಸಾಮಗ್ರಿಯನ್ನು ಕಾರಿನ ಬಳಿ ಬಿಟ್ಟು ಬಂದಿದ್ದಾಳೆ. ಅದನ್ನು ತರಲು ಹೋಗಿದ್ದಾಳೆ ಎಂದು ಸಾವಿತ್ರಿ ಹೇಳುತ್ತಾಳೆ. ಸರಿ ಹಾಗಾದರೆ ಅವಳೂ ಬರಲಿ ಎಂದು ಶಿವರಾಮೇಗೌಡ ಹೇಳುತ್ತಾನೆ. ಇತ್ತ ವಿನಂತಿ ಪೂಜಾ ಸಾಮಗ್ರಿ ತರುವಾಗ ಅವಳಿಗೆ ವಿದ್ಯಾ ಡಿಕ್ಕಿ ಹೊಡೆದು ತೆಂಗಿನ ಕಾಯಿ ಕೆಳಗೆ ಬೀಳುತ್ತದೆ. ತಾನು ತಪ್ಪು ಮಾಡದಿದ್ದರೂ ವಿದ್ಯಾ ಕ್ಷಮೆ ಕೇಳುತ್ತಾಳೆ. ಆದರೆ ವಿನಂತಿ ದುರಹಂಕಾರಿಯಂತೆ ವರ್ತಿಸುತ್ತಾಳೆ. ನೀನು ತಂದ ತೆಂಗಿಕಾಯಿ ಬಿರುಕು ಬಿಟ್ಟಿದೆ, ಇದನ್ನು ದೇವಿ ಮುಂದೆ ಇಟ್ಟರೆ ಅಪಶಕುನ ಎಂದು ಪೂಜಾರಿ ಹೇಳುತ್ತಾರೆ. ಕಾಯಿ ಇಲ್ಲದೆ ಪೂಜೆ ಮಾಡಿ ಸಾಕು ಎಂದು ಗೋವಿಂದೇಗೌಡ ಹೇಳುತ್ತಾನೆ. ಪೂಜಾರಿ ಮಹಾಮಂಗಳಾರತಿ ಮಾಡುತ್ತಾರೆ. ಅಷ್ಟರಲ್ಲಿ ಪೂಜಾರಿ ಮೈಮೇಲೆ ದೇವಿ ಬರುತ್ತಾಳೆ. ನಾನು ಹೇಳಿದಂತೆ ಪೂಜೆ ಮಾಡಿದ್ದೀಯ, ನಾನು ನಿನಗೆ ಕೊಟ್ಟ ಮಾತಿನಂತೆ ನಿನ್ನ ಮಗನ ಮದುವೆಯನ್ನು ಯಾವುದೇ ವಿಘ್ನ ಇಲ್ಲದಂತೆ ಮಾಡಿಸುತ್ತೇನೆ. ನಿಮ್ಮ ಕುಟುಂಬದವರ ಮೇಲೆ ನನ್ನ‌ ಆಶೀರ್ವಾದ ಸದಾ ಇರುತ್ತದೆ ಎನ್ನುತ್ತಾಳೆ. ಅದನ್ನು ಕೇಳಿ ಶಿವರಾಮೇಗೌಡ ಖುಷಿಯಾಗುತ್ತಾನೆ. ಆದರೆ ಈಶ್ವರಿ ಮಾತ್ರ ಸಪ್ಪೆ ಮೋರಿ ಹಾಕಿ ನಿಲ್ಲುತ್ತಾಳೆ.

ಭದ್ರೇಗೌಡ ವಿದ್ಯಾ ಬಗ್ಗೆಯೇ ಯೋಚಿಸುತ್ತಿರುತ್ತಾನೆ, ನಾನು ಮದುವೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೇನೆ, ನನಗೆ ಒಬ್ಬಳು ಹುಡುಗಿ ಇಷ್ಟವಾಗಿದ್ಧಾಳೆ ಎಂದು ಕ್ವಾಟ್ಲೆ ಬಳಿ ಭದ್ರ ಹೇಳುತ್ತಾನೆ, ನಿನ್ನ ಮನಸ್ಸು ಗೆದ್ದ ಆ ಹುಡುಗಿ ಯಾರು ಎಂದು ಕ್ವಾಟ್ಲೆ ಕೇಳುತ್ತಾನೆ. ಆಗ ಭದ್ರ ಅವಳೇ ನೋಡು ನನ್ನ ಭಾವೀ ಪತ್ನಿ, ನಮ್ಮ ಮನೆ ಮುದ್ದು ಸೊಸೆ ಎಂದು ವಿದ್ಯಾ ಕಡೆ ಕೈ ತೋರಿಸುತ್ತಾನೆ. ಇಡೀ ಮಂಡ್ಯದಲ್ಲಿ ನಿನಗೆ ಬೇರೆ ಹುಡುಗಿ ಸಿಗಲಿಲ್ಲವೇ ಎಂದು ಕ್ವಾಟ್ಲೆ ಕೇಳುತ್ತಾನೆ, ಹಾಗಲ್ಲ ಅವಳಷ್ಟು ಬೇರೆ ಯಾರೂ ಇಷ್ಟ ಆಗಲಿಲ್ಲ ಎಂದು ಭದ್ರ ಹೇಳುತ್ತಾನೆ. ನಂತರ ವಿದ್ಯಾ ಬಳಿ ಹೋಗಿ ಮೇಕೆಯನ್ನು ಉಳಿಸಿಕೊಳ್ಳಲಾಗದಿದ್ದಕ್ಕೆ ಕ್ಷಮೆ ಕೇಳುತ್ತಾನೆ. ತನ್ನ ಬಳಿ ಇದ್ದ ವಿದ್ಯಾ ಕಾಲ್ಗೆಜ್ಜೆಯನ್ನು ಅವಳಿಗೆ ಕೊಟ್ಟು ಬರುತ್ತಾನೆ.

ಚೆಲುವನ ಅವಾಂತರ ಕಂಡು ಕೋಪಗೊಂಡ ಶಿವರಾಮೇಗೌಡ, ಭದ್ರೇಗೌಡ

ಜಾತ್ರೆಯಲ್ಲಿ ಜೂಜು ಆಡುವ ಚೆಲುವ ಎಲ್ಲಾ ದುಡ್ಡನ್ನು ಕಳೆದುಕೊಳ್ಳುತ್ತಾನೆ. ಜೂಜು ಆಡಿಸುವವನ ಬಳಿ ನನ್ನ ದುಡು ವಾಪಸ್‌ ಕೊಡು, ನೀನು ನನಗೆ ಮೋಸ ಮಾಡಿದ್ದೀಯ ಎಂದು ಜೋರು ಮಾಡುತ್ತಾನೆ. ಅಲ್ಲಿ ಅಷ್ಟು ಗಲಾಟೆ ನಡೆಯುತ್ತಿರುವುದನ್ನು ಶಿವರಾಮೇಗೌಡ ಗಮನಿಸುತ್ತಾನೆ. ಅಲ್ಲಿ ಏನು ನಡೆಯುತ್ತಿದೆ ಎಂದು ತನ್ನ ಚಿಕ್ಕಪ್ಪ ಚಿಕ್ಕೇಗೌಡನನ್ನು ಕೇಳುತ್ತಾನೆ. ಅವನು ಯಾರಿಗೂ ಉಪಯೋಗ ಬರುವಂಥವನಲ್ಲ, ಜೂಜು ಆಡಿ ಹಣ ಕಳೆದುಕೊಂಡು ಈಗ ಗಲಾಟೆ ಮಾಡುತ್ತಿದ್ದಾನೆ ಎಂದು ಚಿಕ್ಕೇಗೌಡ ಹೇಳುತ್ತಾನೆ. ಜೂಜು ಆಡಿಸುವವನು ಎಲ್ಲಾ ಹಣವನ್ನು ತೆಗೆದುಕೊಂಡು ಓಡುತ್ತಾನೆ. ಅವನನ್ನು ಹಿಡಿಯಲು ಚೆಲುವ ಕೂಡಾ ಓಡುತ್ತಾನೆ. ಹಿಡಿಯುವ ಭರದಲ್ಲಿ ಗೋಪಾಲನನ್ನು ತಳ್ಳಿ ಹೋಗುತ್ತಾನೆ. ಚೆಲುವನ ಅವಾಂತರ ಕಂಡು ಶಿವರಾಮೇಗೌಡ ಸಿಟ್ಟಾಗುತ್ತಾನೆ.

ಚೆಲುವನನ್ನು ಭದ್ರ ಕೂಡಾ ನೋಡುತ್ತಾನೆ. ಇಂಥ ಕುಡುಕರಿಗೆ ಬಾರಿಸಬೇಕು, ಆಗಲೇ ಇವರು ಬುದ್ಧಿ ಕಲಿಯುತ್ತಾರೆ ಎಂದು ಕ್ವಾಟ್ಲೆ ಬಳಿ ಹೇಳುತ್ತಾನೆ. ಹಾಗೆಲ್ಲಾ ಹೇಳಬಾರದು, ಆತನಿಗೆ ಯಾರು ಮರ್ಯಾದೆ ಕೊಡದಿದ್ದರೂ ನೀನು ಮಾತ್ರ ಕೊಡಬೇಕು ಎನ್ನುತ್ತಾನೆ, ನಾನೇಕೆ ಅವನಿಗೆ ಮರ್ಯಾದೆ ಕೊಡಬೇಕು ಎಂದು ಭದ್ರ ಕೇಳುತ್ತಾನೆ. ಹೆಣ್ಣು ಕೊಟ್ಟ ಮಾವನನ್ನು ಕಣ್ಣು ಕೊಟ್ಟ ದೇವರು ಎನ್ನುತ್ತಾರೆ, ಆತ ಬೇರೆ ಯಾರೋ ಅಲ್ಲ, ನೀನು ಪ್ರೀತಿಸುತ್ತಿರುವ ವಿದ್ಯಾ ತಂದೆ ಎಂದು ಕ್ವಾಟ್ಲೆ ಹೇಳುತ್ತಾನೆ. ಅವನ ಮಾತು ಕೇಳಿ ಭದ್ರ ಬೇಸರಗೊಳ್ಳುತ್ತಾನೆ.

ತನ್ನ ಪ್ರೀತಿಯನ್ನು ಭದ್ರ ಅಪ್ಪನ ಬಳಿ ಹೇಳಿಕೊಳ್ಳುತ್ತಾನಾ? ಚೆಲುವನ ಮಗಳನ್ನು ಸೊಸೆಯನ್ನಾಗಿ ಮಾಡಿಕೊಳ್ಳಲು ಶಿವರಾಮೇಗೌಡ ಒಪ್ಪುತ್ತಾನಾ? ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.

ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ

ಭದ್ರೇಗೌಡ - ತ್ರಿವಿಕ್ರಮ್‌

ಶಿವರಾಮೇಗೌಡ - ಮುನಿ

ಶಿವರಾಮೇಗೌಡ ತಾಯಿ - ಲಕ್ಷ್ಮೀ ನಾಡಗೌಡ

ವಿದ್ಯಾ - ಪ್ರತಿಮಾ ಠಾಕೂರ್‌

ರತ್ನ (ವಿದ್ಯಾ ತಾಯಿ) - ಹರಿಣಿ ಶ್ರೀಕಾಂತ್

ಸಾವಿತ್ರಿ - ಶಿಲ್ಪಾ ಅಯ್ಯರ್‌

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.