ಮುದ್ದು ಸೊಸೆ: ಹೆಂಡತಿ ರತ್ನ ಮೇಲೆ ಹಲ್ಲೆಗೆ ಮುಂದಾದ ಚೆಲುವರಾಜ; ತಾಯಿಯ ಕ್ಷೇಮಕ್ಕಾಗಿ ಒಲ್ಲದ ಮದುವೆಯನ್ನು ಒಪ್ಪಿಕೊಂಡ ವಿದ್ಯಾ
ಕನ್ನಡ ಸುದ್ದಿ  /  ಮನರಂಜನೆ  /  ಮುದ್ದು ಸೊಸೆ: ಹೆಂಡತಿ ರತ್ನ ಮೇಲೆ ಹಲ್ಲೆಗೆ ಮುಂದಾದ ಚೆಲುವರಾಜ; ತಾಯಿಯ ಕ್ಷೇಮಕ್ಕಾಗಿ ಒಲ್ಲದ ಮದುವೆಯನ್ನು ಒಪ್ಪಿಕೊಂಡ ವಿದ್ಯಾ

ಮುದ್ದು ಸೊಸೆ: ಹೆಂಡತಿ ರತ್ನ ಮೇಲೆ ಹಲ್ಲೆಗೆ ಮುಂದಾದ ಚೆಲುವರಾಜ; ತಾಯಿಯ ಕ್ಷೇಮಕ್ಕಾಗಿ ಒಲ್ಲದ ಮದುವೆಯನ್ನು ಒಪ್ಪಿಕೊಂಡ ವಿದ್ಯಾ

ಕಲರ್ಸ್‌ ಕನ್ನಡದ ಮುದ್ದು ಸೊಸೆ ಧಾರಾವಾಹಿ 18 ನೇ ಸಂಚಿಕೆಯಲ್ಲಿ ಚೆಲುವ ಹೆಂಡತಿ ರತ್ನ ಮೇಲೆ ಹಲ್ಲೆ ಮಾಡಲು ಯತ್ನಿಸುತ್ತಾನೆ. ಅಮ್ಮನಿಗಾಗಿ ವಿದ್ಯಾ ಮದುವೆ ಆಗಲು ಒಪ್ಪಿಕೊಳ್ಳುತ್ತಾಳೆ. (ಬರಹ: ರಕ್ಷಿತಾ)

ಮುದ್ದು ಸೊಸೆ: ಹೆಂಡತಿ ರತ್ನ ಮೇಲೆ ಹಲ್ಲೆಗೆ ಮುಂದಾದ ಚೆಲುವರಾಜ; ತಾಯಿಯ ಕ್ಷೇಮಕ್ಕಾಗಿ ಒಲ್ಲದ ಮದುವೆಯನ್ನು ಒಪ್ಪಿಕೊಂಡ ವಿದ್ಯಾ
ಮುದ್ದು ಸೊಸೆ: ಹೆಂಡತಿ ರತ್ನ ಮೇಲೆ ಹಲ್ಲೆಗೆ ಮುಂದಾದ ಚೆಲುವರಾಜ; ತಾಯಿಯ ಕ್ಷೇಮಕ್ಕಾಗಿ ಒಲ್ಲದ ಮದುವೆಯನ್ನು ಒಪ್ಪಿಕೊಂಡ ವಿದ್ಯಾ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಭಾನುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 18ನೇ ಎಪಿಸೋಡ್‌ ಕಥೆ ಹೀಗಿದೆ. ಮಗನಿಗೆ ಸರ್ಪ್ರೈಸ್‌ ಕೊಡಲು ಶಿವರಾಮೇಗೌಡ ಅವನನ್ನು ವಿದ್ಯಾ ಮನೆಗೆ ಹೆಣ್ಣು ನೋಡಲು ಕರೆದೊಯ್ಯುತ್ತಾನೆ. ಪ್ರೀತಿಸಿದ ಹುಡುಗಿಯೇ ಹೆಂಡತಿಯಾಗಿ ಬರುತ್ತಿದ್ದಾಳೆ ಎಂದು ಭದ್ರ ಖುಷಿಯಾಗುತ್ತಾನೆ. ವಿದ್ಯಾ ಮಾತ್ರ ನನಗೆ ಈ ಮದುವೆ ಬೇಡವೆಂದು ಹಟ ಹಿಡಿಯುತ್ತಾಳೆ. ಆದರೆ ವಿದ್ಯಾ ಮಾತಿಗೆ ಬೆಲೆ ಕೊಡದ ಚೆಲುವ, ಬೀಗರ ಜೊತೆ ತಾಂಬೂಲ ಬದಲಿಸಿಕೊಳ್ಳುತ್ತಾನೆ. ಇನ್ಮುಂದೆ ವಿದ್ಯಾ ಓದುವುದು ಬೇಡ ಎಂದು ಶಿವರಾಮೇಗೌಡ ಕಂಡಿಷನ್‌ ಮಾಡುತ್ತಾನೆ. ಅದನ್ನು ಕೇಳಿ ವಿದ್ಯಾಗೆ ಆಕಾಶವೇ ತಲೆ ಮೇಲೆ ಬಿದ್ದಂತೆ ಆಗುತ್ತದೆ.

ಸಾವಿತ್ರಿ ಪ್ರಶ್ನೆಗಳಿಗೆ ಸಿಟ್ಟಾದ ಶಿವರಾಮೇಗೌಡ

ಮತ್ತೊಂದೆಡೆ ಸಾವಿತ್ರಿ ತನ್ನ ಅಣ್ಣ ಹೆಣ್ಣು ನೋಡಲು ಹೋಗಿರುವುದು ಎಲ್ಲಿಗೆ ಎಂದು ತಿಳಿಯದೆ ಒದ್ದಾಡುತ್ತಾಳೆ. ಮನೆ ಕೆಲಸದವನ ಬಳಿ ವಿಷಯ ಕೇಳುತ್ತಾಳೆ. ನಿಮ್ಮ ಮನೆಗೆ ಊಟ ತಂದುಕೊಂಡುತ್ತಿದ್ದ ರತ್ನಕ್ಕನ ಮಗಳನ್ನೇ ಹೆಣ್ಣು ನೋಡಲು ಹೋಗಿರುವುದು ಎಂದು ಆತ ಹೇಳುತ್ತಾನೆ. ಅದನ್ನು ಕೇಳಿ ಸಾವಿತ್ರಿ ಸಿಟ್ಟಾಗುತ್ತಾಳೆ. ಅಣ್ಣ ಇವತ್ತು ಮನೆಗೆ ಬರಲಿ ಇವತ್ತು ಒಂದು ನಿರ್ಧಾರವಾಗಲೇಬೇಕು ಎಂದು ಕಾಯುತ್ತಾ ಕೂರುತ್ತಾಳೆ. ಹೆಣ್ಣು ನೋಡಲು ಹೋದವರು ಮನೆಗೆ ವಾಪಸ್‌ ಬರುತ್ತಾರೆ. ಮನೆ ಒಳಗೆ ಹೋಗುತ್ತಿದ್ದ ಶಿವರಾಮೇಗೌಡನನ್ನು ತಡೆದುನಿಲ್ಲಿಸುವ ಸಾವಿತ್ರಿ ನೀನು ಮಾಡಿದ್ದು ಸರೀನಾ? ಮನೆಯಲ್ಲಿರುವ ಚಿನ್ನದಂಥ ನನ್ನ ಮಗಳನ್ನು ಬಿಟ್ಟು ಹೊರಗೆ ನೀನು ಹೆಣ್ಣು ನೋಡಲು ಹೋಗಿದ್ದು ಸರಿಯೇ? ಅದೂ ಆ ಕುಡುಕನ ಮಗಳೇ ಆಗಬೇಗಿತ್ತಾ ಎಂದು ಕೇಳುತ್ತಾಳೆ.

ಶಿವರಾಮೇಗೌಡ ಎಷ್ಟು ತಾಳ್ಮೆಯಿಂದ ಇರಲು ಯತ್ನಿಸಿದರೂ ಸಾವಿತ್ರಿ ಮಾತ್ರ ಕೊಂಕು ಮಾತುಗಳನ್ನು ಆಡುತ್ತಾಳೆ. ನೀನು ಈ ಮಾಡಿಬಂದಿರುವ ಕೆಲಸ ನಿನ್ನ ಮಾನ, ಮರ್ಯಾದೆ, ಗೌರವ, ಅಂತಸ್ತಿಗೆ ತಕ್ಕದ್ದಾ? ಆ ಹುಡುಗಿಗಿಂತ ನನ್ನ ಮಗಳು ಯಾವುದರಲ್ಲಿ ಕಡಿಮೆ ಇದ್ದಾಳೆ ಎಂದು ಹೀಗೆ ಮಾಡಿದೆ. ನನ್ನ ಮಗಳನ್ನು ಮದುವೆ ಮಾಡಿಕೊಳ್ಳಲು ಜಾತಕ ಹೊಂದುವುದಿಲ್ಲ ಎಂದು ಕಾರಣ ಕೊಟ್ಟೆ, ಈಗ ಆ ಹುಡುಗಿ ಜಾತಕ ಹೊಂದಿಕೊಂಡಿದ್ಯಾ ಎಂದು ಕೋಪದಿಂದ ಕೇಳುತ್ತಾಳೆ. ನನ್ನ ಮಗನ ಮದುವೆ ಮಾಡಲು ಹೊರಟಿರುವುದು ಜಾತಕ ಹೊಂದಾಣಿಕೆ ಮಾಡಿ ಅಲ್ಲ, ಅವನ ಮನಸ್ಸು ಹೊಂದಾಣಿಕೆ ನೋಡಿ. ಮರ್ಯಾದೆ, ಗೌರವ, ಅಂತಸ್ತಿಗಿಂತ ನನಗೆ ನನ್ನ ಮಗನ ಸುಖ, ಸಂತೋಷ ಮುಖ್ಯ. ಅದಕ್ಕೋಸ್ಕರ ನಾನು ಏನು ಬೇಕಾದರೂ ಮಾಡುತ್ತೇನೆ. ಯಾರು ಏನೇ ಅಂದರೂ ಈ ಮದುವೆ ನಡೆಯುತ್ತದೆ. ಮತ್ತೊಮ್ಮೆ ಈ ಮದುವೆ ಬಗ್ಗೆ ಏನೂ ಮಾತನಾಡಬೇಡ, ಎಲ್ಲರೂ ಕೇಳಿಸಿಕೊಳ್ಳಿ, ಈ ಬುಧವಾರವೇ ಮದುವೆ. ಇಷ್ಟವಿದ್ದವರು ಈ ಮದುವೆಗೆ ಬರಬಹುದು, ಇಷ್ಟವಿಲ್ಲದವರು ಬಸ್‌ ಹತ್ತಿಕೊಂಡು ಊರಗೆ ಹೋಗಬಹುದು ಎಂದು ಖಡಕ್‌ ಮಾತುಗಳನ್ನಾಡುತ್ತಾನೆ.

ಅಪ್ಪನ ಬಲವಂತಕ್ಕೆ ಬೇಡದ ಮದುವೆಗೆ ಒಪ್ಪಿಗೆ ಸೂಚಿಸಿದ ವಿದ್ಯಾ

ಗೌಡರ ಮನೆಯಿಂದ ಮಗಳನ್ನು ಹೆಣ್ಣು ಕೇಳಲು ಬಂದಿದ್ದು, ತಾಂಬೂಲ ಬದಲಿಸಿಕೊಂಡಿದ್ದು ಎಲ್ಲವನ್ನೂ ನೆನಪಿಸಿಕೊಂಡು ಚೆಲುವ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತಾನೆ. ಅಷ್ಟು ದೊಡ್ಡ ಮನೆಯವರು ನಮ್ಮ ವಿದ್ಯಾಳನ್ನು ಇಷ್ಟಪಟ್ಟು ಹೆಣ್ಣು ಕೇಳಲು ಬಂದಿದ್ದು ನನಗೆ ನಂಬಲು ಅಗುತ್ತಿಲ್ಲ ಚೆಲುವ, ನಮ್ಮ ವಿದ್ಯಾ ಬಹಳ ಪುಣ್ಯ ಮಾಡಿದ್ದಾಳೆ ಎಂದು ಕಾಳವ್ವ ಹೇಳುತ್ತಾಳೆ. ವಿದ್ಯಾ ಮಾತ್ರವಲ್ಲ ಅವ್ವ, ನಾವೆಲ್ಲರೂ ಪುಣ್ಯ ಮಾಡಿದ್ದೇವೆ ಅದಕ್ಕೆ ಈ ಸಂಬಂಧ ನಮ್ಮನ್ನು ಹುಡುಕಿ ಬಂದಿದೆ. ಇವತ್ತು ಊರಿನಲ್ಲಿ ನನ್ನದೇ ಸುದ್ದಿ, ನಾನು ಊರಿಗೆ ದೊಡ್ಡ ಮನುಷ್ಯ ಆಗಿದ್ದೇನೆ ಎನ್ನುತ್ತಾನೆ. ಚೆಲುವ ತನ್ನ ತಾಯಿಯೊಂದಿಗೆ ಮಾತನಾಡುವಾಗ ಅಲ್ಲಿಗೆ ವಿದ್ಯಾ ಬರುತ್ತಾಳೆ. ಮುಂದಿನ ವಾರ ಮದುವೆ ಇಟ್ಟುಕೊಂಡು ನೀನು ಈ ರೀತಿ ನಿದ್ರೆ ಕೆಡಬಾರದು, ಹೋಗಿ ಮಲಗು ಎಂದು ಚೆಲುವ ಹೇಳುತ್ತಾನೆ. ನೀನು ಏನು ಹೇಳಬೇಕು ಎಂದುಕೊಂಡಿದ್ದೀಯೋ ಹೇಳಿಬಿಡು ಎಂದು ಸರಸ್ವತಿ ಅಕ್ಕನ ಬಳಿ ಹೇಳುತ್ತಾಳೆ.

ಅಪ್ಪ ನನಗೆ ಈ ಮದುವೆ ಬೇಡ, ನನಗೆ ಓದಬೇಕೆಂದು ಬಹಳ ಇಷ್ಟ, ನಾನು ಓದಿ ಡಾಕ್ಟರ್‌ ಆಗಬೇಕೆಂದು ಕನಸ್ಸು ಕಟ್ಟಿಕೊಂಡಿದ್ದೇನೆ ಎನ್ನುತ್ತಾಳೆ. ನಾನು ನಿನಗೆ ಜನ್ಮ ಕೊಟ್ಟ ಅಪ್ಪ, ಯಾವಾಗ ಏನು ಮಾಡಬೇಕೆಂದು ನನಗೆ ಚೆನ್ನಾಗಿ ಗೊತ್ತಿದೆ ಸುಮ್ಮನೆ ಹೋಗು ಎನ್ನುತ್ತಾನೆ. ವಿದ್ಯಾ ಪದೇ ಪದೆ ಮದುವೆ ಬೇಡ ಎಂದು ಹೇಳಿದಾಗ ಚೆಲುವ ಸಿಟ್ಟಾಗಿ ರತ್ನಳನ್ನು ಕರೆಯುತ್ತಾನೆ. ಮಗುವನ್ನೂ ಚಿವುಟಿ, ತೊಟ್ಟಿಲು ತೂಗುವುದನ್ನು ನಿನ್ನ ಬಳಿ ಕಲಿಯಬೇಕು. ಹೆಣ್ಣು ಮಕ್ಕಳನ್ನು ನನ್ನ ವಿರುದ್ಧ ಎತ್ತಿ ಕಟ್ಟಿ ಈಗ ಏನೂ ಗೊತ್ತಿಲ್ಲದಂತೆ ನಾಟಕ ಮಾಡುತ್ತಿದ್ದೀಯ ಎಂದು ಕೇಳುತ್ತಾನೆ. ಅಡುಗೆ ಮನೆಯಲ್ಲಿದ್ದ ಸೌದೆಯನ್ನು ತಂದು ರತ್ನಳಿಗೆ ಹೊಡೆಯಲು ಮುಂದಾಗುತ್ತಾನೆ. ಅಪ್ಪನನ್ನು ತಡೆಯುವ ವಿದ್ಯಾ, ಇದರಲ್ಲಿ ಅಮ್ಮನದ್ದು ಏನೂ ತಪ್ಪಿಲ್ಲ ಅಪ್ಪ , ನಾನೇ ಕೇಳಿಬಿಟ್ಟೆ . ಸರಿ ನೀನು ಹೇಳಿದಂತೆ ಕೇಳುತ್ತೇನೆ, ಮದುವೆ ಆಗುತ್ತೇನೆ, ದಯವಿಟ್ಟು ಅಮ್ಮನಿಗೆ ಹೊಡೆಯಬೇಡ ಎಂದು ಮನವಿ ಮಾಡುತ್ತಾಳೆ. ಮದುವೆ ಬೇಡ ಎಂದು ಮತ್ತೆ ಹೇಳಿದರೆ ನಿನ್ನ ಅಮ್ಮನ್ನು ಜೀವಂತ ಉಳಿಸುವುದಿಲ್ಲ ಎಂದು ಚೆಲುವ ಎಚ್ಚರಿಕೆ ಕೊಡುತ್ತಾನೆ.

ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ

‌ಭದ್ರೇಗೌಡ - ತ್ರಿವಿಕ್ರಮ್‌

ಶಿವರಾಮೇಗೌಡ - ಮುನಿ

ಶಿವರಾಮೇಗೌಡ ತಾಯಿ - ಲಕ್ಷ್ಮೀ ನಾಡಗೌಡ

ವಿದ್ಯಾ - ಪ್ರತಿಮಾ ಠಾಕೂರ್‌

ರತ್ನ (ವಿದ್ಯಾ ತಾಯಿ) - ಹರಿಣಿ ಶ್ರೀಕಾಂತ್

ಸರೂ (ವಿದ್ಯಾ ತಂಗಿ) - ಗ್ರೀಷ್ಮಾ

ಸಾವಿತ್ರಿ - ಶಿಲ್ಪಾ ಅಯ್ಯರ್‌

ಕ್ವಾಟ್ಲೆ - ನಿಶಿತ್‌ ರಾಜ್‌ ಶೆಟ್ಟಿ

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.