ಈ ಪುಟ್ಟ ಪೋರ ಈಗ ಕನ್ನಡ ಕಿರುತೆರೆಯ ನಂಬರ್‌ 1 ಧಾರಾವಾಹಿಯ ರಗಡ್ ಹೀರೋ; ಯಾರಿರಬಹುದು ಗೆಸ್‌ ಮಾಡಿ
ಕನ್ನಡ ಸುದ್ದಿ  /  ಮನರಂಜನೆ  /  ಈ ಪುಟ್ಟ ಪೋರ ಈಗ ಕನ್ನಡ ಕಿರುತೆರೆಯ ನಂಬರ್‌ 1 ಧಾರಾವಾಹಿಯ ರಗಡ್ ಹೀರೋ; ಯಾರಿರಬಹುದು ಗೆಸ್‌ ಮಾಡಿ

ಈ ಪುಟ್ಟ ಪೋರ ಈಗ ಕನ್ನಡ ಕಿರುತೆರೆಯ ನಂಬರ್‌ 1 ಧಾರಾವಾಹಿಯ ರಗಡ್ ಹೀರೋ; ಯಾರಿರಬಹುದು ಗೆಸ್‌ ಮಾಡಿ

ಕನ್ನಡ ಕಿರುತೆರೆಯಲ್ಲಿ ತಮ್ಮ ನಟನೆಯ ಮೂಲಕವೇ ಗಮನ ಸೆಳೆದಿದ್ದಾರೆ ಈ ನಟ. ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿದರೂ, ಅಲ್ಲಿ ಸಿಗದ ಯಶಸ್ಸು ಇದೀಗ ಧಾರಾವಾಹಿಯಲ್ಲಿ ನಟಿಸುವ ಮೂಲಕ ಗಿಟ್ಟಿಸಿಕೊಂಡಿದ್ದಾರೆ. ಅಷ್ಟಕ್ಕೂ ಈ ಪುಟ್ಟ ಪೋರ ಯಾರಿರಬಹುದು? ಇಲ್ಲಿದೆ ನೋಡಿ ಉತ್ತರ.

ಈ ಪುಟ್ಟ ಹುಡುಗ ಈಗ ಕನ್ನಡ ಕಿರುತೆರೆಯ ನಂಬರ್‌ 1 ಧಾರಾವಾಹಿಯ ರಗಡ್ ಹೀರೋ; ಯಾರಿರಬಹುದು ಗೆಸ್‌ ಮಾಡಿ
ಈ ಪುಟ್ಟ ಹುಡುಗ ಈಗ ಕನ್ನಡ ಕಿರುತೆರೆಯ ನಂಬರ್‌ 1 ಧಾರಾವಾಹಿಯ ರಗಡ್ ಹೀರೋ; ಯಾರಿರಬಹುದು ಗೆಸ್‌ ಮಾಡಿ (Instagram)

ಕನ್ನಡ ಕಿರುತೆರೆಯಲ್ಲಿ ಹೊಸ ಹೊಸ ಕಲಾವಿದರ ಆಗಮನ ಹೆಚ್ಚಾಗುತ್ತಿದೆ. ನಟನೆಯ ತರಬೇತಿ ಪಡೆದು ಅಖಾಡಕ್ಕಿಳಿಯುತ್ತಿರುವವರು ಒಂದೆಡೆಯಾದರೆ, ನಟನೆಯನ್ನೇ ಹವ್ಯಾಸವನ್ನಾಗಿಸಿಕೊಂಡು, ಫ್ಯಾಷನ್‌ ಎಂಬಂತೆ ನಟನೆಯ ಗೀಳು ಅಂಟಿಸಿಕೊಂಡು ಕಿರುತೆರೆಗೆ ಆಗಮಿಸಿದವರೂ ಸಾಕಷ್ಟು ಜನರಿದ್ದಾರೆ. ಗಾಡ್‌ ಫಾದರ್‌ ಹಂಗಿಲ್ಲದೆ, ತಮ್ಮ ಪ್ರತಿಭೆಯ ಮೂಲಕವೇ ಸಾಧಿಸಬೇಕು, ಕಿರುತೆರೆ, ಸಿನಿಮಾ ಲೋಕದಲ್ಲಿ ಏನಾದರೂ ಹೆಸರು ಮಾಡಬೇಕು ಎಂದುಕೊಂಡು ಬಂದವರಿದ್ದಾರೆ. ಆ ಸಾಲಿಗೆ ಸೇರಲು ಹೊರಟಿದ್ದಾರೆ ಈ ನಟ.

ಕನ್ನಡ ಕಿರುತೆರೆಯಲ್ಲಿ ಪ್ರಸಾರ ಕಾಣುವ ಸೀರಿಯಲ್‌ವೊಂದರಲ್ಲಿ ನಾಯಕನಾಗಿ ನಟಿಸುತ್ತಿರುವ ಈ ನಟ, ಸದ್ಯ ಕಿರುತೆರೆ ವೀಕ್ಷಕರ ಇಷ್ಟದ ಹೀರೋ. ಅವರಾಡುವ ಮಾತು, ಆಂಗಿಕ ಅಭಿನಯ, ಖಡಕ್‌ ಲುಕ್‌ ಮೂಲಕವೇ ವೀಕ್ಷಕರ ಗಮನ ಸೆಳೆದಿದ್ದಾರೆ. ಕೇವಲ ಅಷ್ಟೇ ಅಲ್ಲ, ಇವರ ನಟನೆಯ ಧಾರಾವಾಹಿಯ ಟಿಆರ್‌ಪಿಯಯೂಲ್ಲಿ ನಂಬರ್‌ 1 ಸ್ಥಾನ ಅಲಂಕರಿಸಿದ ಉದಾಹರಣೆ ಇದೆ. ಈಗಲೇ ನಂಬರ್‌ 1 ಸ್ಥಾನದ ಆಸುಪಾಸಿನಲ್ಲಿಯೇ ಠಿಕಾಣಿ ಹೂಡಿರುತ್ತದೆ ಆ ಸೀರಿಯಲ್‌. ಹಾಗಾದರೆ, ಯಾರು ಈ ಪುಟಾಣಿ? ಈಗ ಹೇಗಾಗಿದ್ದಾರೆ? ಉತ್ತರಕ್ಕಾಗಿ ಮುಂದೆ ಓದಿ.

ಸೀರಿಯಲ್‌ಗೂ ಮುನ್ನ ಸಿನಿಮಾಗಳಲ್ಲಿ ನಟನೆ

ಕನ್ನಡ ಕಿರುತೆರೆಗೂ ಆಗಮಿಸುವ ಮುನ್ನ ಸಿನಿಮಾಗಳಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು ಈ ನಟ. ಬಾಲ್ಯದಿಂದಲೂ ಬಣ್ಣದ ನಂಟಿಗೆ ಅಂಟಿಕೊಂಡಿದ್ದ ಇವರು, ಕಾಲೇಜು ದಿನಗಳಲ್ಲಿಯೂ ನಟನೆ, ವೇದಿಕೆ ಕಾರ್ಯಕ್ರಮಗಳಲ್ಲಿ ಗುರುತಿಸಿಕೊಂಡರು. ಕಾಲೇಜು ಮುಗಿಸಿ, ಕಾನೂನು ಪದವಿ ಪಡೆದು, ಲಾಯರ್‌ ಆಗಿ ಬೆಂಗಳೂರಿನಲ್ಲಿ ತಮ್ಮದೇ ಸ್ವಂತ ಲಾ ಫರ್ಮ್‌ ಹೊಂದಿದ್ದಾರೆ ಈ ನಟ. ಜತೆ ಜತೆಗೆ ಕನಸಿನ ಮಳೆ, ಆನ, ಮೇರಿ ಸಿನಿಮಾಗಳಲ್ಲಿ ನಟಿಸಿದರೆ, ವಾಯ್ಸ್‌ ಓವರ್‌ ಆರ್ಟಿಸ್ಟ್‌ ಆಗಿಯೂ ಕೆಲಸ ಮಾಡಿದ ಅನುಭವ ಇವರಿಗಿದೆ.

ಮಾರಿಗುಡಿ ಶಿವಣ್ಣ

ಮೇಲಿನ ಫೋಟೋದಲ್ಲಿ ಕಾಣಿಸುವ ಈ ಪುಟಾಣಿ ಹುಡುಗ ಬೇರಾರು ಅಲ್ಲ, ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಅಣ್ಣಯ್ಯ ಸೀರಿಯಲ್‌ ಹೀರೋ ಮಾರಿಗುಡಿ ಶಿವಣ್ಣ. ಸೋಷಿಯಲ್‌ ಮೀಡಿಯಾದಲ್ಲಿ ಮಾರಿಗುಡಿ ಶಿವಣ್ಣ ಅಲಿಯಾಸ್‌ ವಿಕಾಶ್‌ ಉತ್ತಯ್ಯ ಅವರ ಬಾಲ್ಯದ ಫೋಟೋ ವೈರಲ್‌ ಆಗಿದೆ. ಸ್ವತಃ ವಿಕಾಶ್‌ ಅವರೇ ತಮ್ಮ ಬಾಲ್ಯದ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ. "ಪುಟಾಣಿ ಅಣ್ಣಯ್ಯ.. ಟೆಡ್ಡಿ ಬಿಯರ್‌ ಹಿಡಿದು ನಿಂತ ಟೆಡ್ಡಿ ಬಿಯರ್"‌ ಎಂಬ ಕ್ಯಾಪ್ಶನ್‌ ನೀಡಿದ್ದಾರೆ. ಈ ಫೋಟೋಕ್ಕೆ ನೆಟ್ಟಿಗರ ಮೆಚ್ಚುಗೆಯ ಕಾಂಪ್ಲಿಮೆಂಟ್‌ಗಳು ಸಂದಾಯವಾಗುತ್ತಿವೆ.

ಸಿನಿಮಾಗಳಲ್ಲೂ ಮಿಂಚು

ಇತ್ತೀಚೆಗಷ್ಟೇ ವಿಕಾಶ್‌ ಉತ್ತಯ್ಯ ನಾಯಕನಾಗಿ ನಟಿಸಿದ ಅಪಾಯವಿದೆ ಎಚ್ಚರಿಕೆ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಗೆ ಬಂದಿತ್ತು. ಆ ಸಿನಿಮಾ ಮೂಲಕ ನಾಯಕನಾಗಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು ವಿಕಾಶ್.‌ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕರೂ, ವಿಕಾಶ್‌ ನಟನೆಗೆ ಪೂರ್ಣಾಂಕ ಸಿಕ್ಕಿತ್ತು. ಇದೀಗ ಇನ್ನೂ ಹಲವು ಸಿನಿಮಾ ಆಫರ್‌ಗಳು ವಿಕಾಶ್‌ ಅವರ ಬಳಿ ಆಗಮಿಸುತ್ತಿವೆ. ಸೀರಿಯಲ್‌ ಜತೆಗೆ ಸಿನಿಮಾ ಕ್ಷೇತ್ರದಲ್ಲಿಯೂ ಗುರುತಿಸಿಕೊಳ್ಳಬೇಕೆಂಬ ಆಸೆಯೂ ಅವರಿಗಿದೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.