ಅಣ್ಣಯ್ಯ: ತಾಳಿ ಕಟ್ಟು ಎಂದು ಸೀನನ ಬಳಿ ಹಟ ಹಿಡಿದ ಪಿಂಕಿ; ಅತ್ತೆ ಮನೆಯಲ್ಲಿ ಅನುಭವಿಸುತ್ತಿರುವ ನೋವನ್ನು ಗೋಡಂಬಿ ಬಳಿ ತೋಡಿಗೊಂಡ ಗುಂಡಮ್ಮ
ಜೀ ಕನ್ನಡದ ಅಣ್ಣಯ್ಯ ಧಾರಾವಾಹಿ 190ನೇ ಎಪಿಸೋಡ್ನಲ್ಲಿ ಸೀನನ ಮನೆಗೆ ಬರುವ ಪಿಂಕಿ ತನಗೆ ತಾಳಿ ಕಟ್ಟು ಎಂದು ಸೀನನ ಮುಂದೆ ಹಟ ಹಿಡಿಯುತ್ತಾಳೆ. ಅವಳಿಗೆ ಲೀಲಾ ಕುಮ್ಮಕ್ಕು ಕೊಡುತ್ತಾಳೆ (ಬರಹ: ರಕ್ಷಿತಾ)

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಸೋಮವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 190ನೇ ಎಪಿಸೋಡ್ ಕಥೆ ಹೀಗಿದೆ. ಗೋಡಂಬಿ ಮೇಲೆ ಆದ ಹಲ್ಲೆಗೆ ಸಂಬಂಧಿಸಿದಂತೆ ಪಾರ್ವತಿ ಪೊಲೀಸರಿಗೆ ದೂರು ಕೊಡುತ್ತಾಳೆ. ಕಾನ್ಸ್ಟೆಬಲ್ ಬಂದು ಶಿವಣ್ಣನ ಬಳಿ ಸ್ಟೇಟ್ಮೆಂಟ್ ಪಡೆಯುತ್ತಾರೆ. ಹಿಂದಿನ ರಾತ್ರಿ ಮುಸುಕುಧಾರಿಯೊಬ್ಬ ಗೋಡಂಬಿ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದನ್ನು ಶಿವಣ್ಣನ ಬಳಿ ಸೀನ ಹೇಳುತ್ತಾನೆ. ಅದನ್ನು ಕೇಳಿ ಶಿವಣ್ಣ ಶಾಕ್ ಆಗುತ್ತಾನೆ. ಮತ್ತೊಂದೆಡೆ ವೀರಭದ್ರ, ಮಗನನ್ನು ಕಾಪಾಡಲು ಹರಸಾಹಸ ಮಾಡುತ್ತಿದ್ದಾನೆ.
ಹೆಂಡತಿ ರಶ್ಮಿಯನ್ನು ಆಸ್ಪತ್ರೆಯಲ್ಲೇ ಬಿಟ್ಟು ಸೀನ ಮನೆಗೆ ಬರುತ್ತಾನೆ. ಗುಂಡಮ್ಮನ ಬಟ್ಟೆಗಳನ್ನು ಒಂದು ಬ್ಯಾಗಿಗೆ ಜೋಡಿಸಿಕೊಳ್ಳುತ್ತಾನೆ. ಅದನ್ನು ನೋಡಿ ಸೀನನ ತಾಯಿ ಲೀಲಾ ಕೋಪಗೊಳ್ಳುತ್ತಾಳೆ. ನಿನ್ನನ್ನು ಅವಳು ನಾಯಿಯಂತೆ ಕಾಣುತ್ತಿದ್ದಾಳೆ. ಅವಳಿಗೆ ಬಟ್ಟೆ ಏಕೆ ತೆಗೆದುಕೊಂಡು ಹೋಗುತ್ತಿದ್ದೀಯ? ಅವಳ ಸೇವೆ ಮಾಡುವುದು ಅಲ್ಲದೆ ಅವಳ ಜೊತೆ ಸಲಿಗೆಯಿಂದ ನಡೆದುಕೊಳ್ಳುತ್ತಿದ್ದೀಯ ಎಂದು ರೇಗುತ್ತಾಳೆ. ಇಷ್ಟು ದಿನ ಪ್ರೀತಿಯಿಂದ ಮಾತನಾಡಿಸುತ್ತಿದ್ದ ತಾಯಿ ಈ ರೀತಿ ಉಲ್ಟಾ ಮಾತನಾಡುವುದನ್ನು ನೋಡಿ ಸೀನ ಆಶ್ಚರ್ಯಗೊಳ್ಳುತ್ತಾನೆ, ಇದೇನಮ್ಮ ಹೀಗೆ ಮಾತನಾಡುತ್ತಿದ್ದೀಯ ಎಂದು ಕೇಳುತ್ತಾನೆ, ಮತ್ತೇನು ಹೇಳಲಿ? ಪಿಂಕಿಗೆ ಕೊಟ್ಟಿರುವ ಮಾತು ನಿನಗೆ ನೆನಪಿದೆಯೋ ಇಲ್ಲವೋ ಎಂದು ಕೇಳುತ್ತಾಳೆ. ನೆನಪಿದೆ ಎಂದು ಸೀನ ಹೇಳುತ್ತಾನೆ.
ಪಿಂಕಿಯನ್ನು ಮನೆಗೆ ಕರೆತಂದ ಲೀಲಾ
ಹೆಂಡತಿಯನ್ನು ಗತ್ತಾಗಿ ಇಟ್ಟುಕೊಳ್ಳುವುದನ್ನು ಮೊದಲು ಕಲಿ ಎಂದು ಲೀಲಾ, ಮಗನನ್ನು ಬೈಯ್ಯುತ್ತಾಳೆ. ರಶ್ಮಿ ಅಳುತ್ತಿದ್ದಳು ಅದಕ್ಕೆ ಅವಳನ್ನು ಆಸ್ಪತ್ರೆಯಲ್ಲಿ ಬಿಟ್ಟು ನಾನು ಬಂದೆ ಎಂದು ಸೀನ ಉತ್ತರಿಸುತ್ತಾನೆ. ಅವಳ ಕಣ್ಣೀರಿಗೆ ಕರಗಿಹೋದ್ಯಾ? ಅಷ್ಟು ಚೆನ್ನಾಗಿರುವ ಪಿಂಕಿಯನ್ನು ಬಿಟ್ಟು ಇವಳಿಗೆ ಬಟ್ಟೆ ತೆಗೆದುಕೊಂಡು ಹೋಗುತ್ತಿದ್ದೀಯ, ನಿನ್ನೆ ರಾತ್ರಿ ಆದದ್ದು ಪಿಂಕಿಗೆ ಗೊತ್ತಾದರೆ ಎದೆ ಹೊಡೆದುಕೊಳ್ಳುತ್ತಾಳೆ. ನಿನ್ನನ್ನು ಏನೋ ಅಂದುಕೊಂಡಿದ್ದೆ, ನನ್ನ ಮುಂದೆ ನಿನ್ನ ಹೆಂಡತಿಯನ್ನು ಡುಮ್ಮಿ ಅನ್ನೋದು, ರೂಮ್ನಲ್ಲಿ ಹೋಗಿ ರನ್ನ ಚಿನ್ನ ಅಂತ ಕರೆಯುತ್ತೀಯ. ಪಿಂಕಿಯೇ ನಿನ್ನ ಹೆಂಡತಿ ಅಂತ ಹೇಳುತ್ತಿದ್ದೆ, ಈಗ ಆ ಡುಮ್ಮಿಯ ಜೊತೆ ಖುಷಿಯಾಗಿದ್ದೀಯ, ಪಿಂಕಿ ನಿನ್ನ ಜೊತೆಯಲ್ಲಿದ್ದಾಗ ನಿನಗೆ ನಿದ್ರೆಯೇ ಬರಬಾರದು, ಅದು ಹೇಗೆ ನಿನಗೆ ನಿದ್ರೆ ಬರುತ್ತೆ ಎಂದು ಲೀಲಾ ಮಗನನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ.
ನೀನು ಅಂದುಕೊಂಡಂತೆ ಏನೂ ಆಗಿಲ್ಲ, ನಾನಿನ್ನೂ ಶುದ್ಧವಾಗಿದ್ದೇನೆ, ಬೇಕಾದರೆ ಆಣೆ ಮಾಡುತ್ತೇನೆ ಎಂದು ಸೀನ ತಾಯಿಯ ತಲೆ ಮೇಲೆ ಕೈ ಇಡುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಪಿಂಕಿ ಬರುತ್ತಾಳೆ. ಆಣೆ ಮಾಡಬೇಕಿರುವುದು ಅತ್ತೆ ಮೇಲಲ್ಲ, ನನ್ನ ಮೇಲೆ ಎನ್ನುತ್ತಾಳೆ. ಪಿಂಕಿಯನ್ನು ನೋಡುತ್ತಿದ್ದಂತೆ ಸೀನ ಗಾಬರಿಯಾಗುತ್ತಾನೆ, ಚೆನ್ನಾಗಿದ್ದೀಯ ಎಂದು ಕೇಳುತ್ತಾನೆ. ನನ್ನ ಜೀವನಕ್ಕೆ ಬೆಂಕಿ ಹಚ್ಚಿ ನೀನು ನಿನ್ನ ಹೆಂಡತಿ ಚಳಿ ಕಾಯಿಸಿಕೊಳ್ಳುತ್ತಿದ್ದೀರ. ನಿನ್ನನ್ನೇ ಮದುವೆ ಆಗುತ್ತೇನೆ, ನೀನೇ ನನ್ನ ಹೆಂಡತಿ ಎಂದು ಹೇಳುತ್ತಿದ್ದವನು ಈಗ ನನ್ನನ್ನು ಮರೆತಿದ್ದೀಯ ಎಂದು ಕೇಳುತ್ತಾಳೆ. ನಾನು ಈಗ ಗೋಡಂಬಿ ನೋಡಲು ಆಸ್ಪತ್ರೆಗೆ ಹೋಗುತ್ತಿದ್ದೇನೆ, ಅಲ್ಲಿಂದ ಬಂದು ಮಾತನಾಡೋಣ ಎನ್ನುತ್ತಾನೆ. ಇಲ್ಲ ಇವತ್ತು ನೀನು ಎಲ್ಲಿಗೂ ಹೋಗಬಾರದು, ಇಂದೇ ಎಲ್ಲಾ ನಿರ್ಧಾರವಾಗಬೇಕು, ಅದಕ್ಕೆ ನಾನು ಪಿಂಕಿಯನ್ನು ಇಲ್ಲಿಗೆ ಕರೆಸಿದ್ದೇನೆ ಎಂದು ಲೀಲಾ ಹೇಳುತ್ತಾಳೆ. ನೀನು ನಿಜವಾಗಿಯೂ ನನ್ನ ಪ್ರೀತಿಸುತ್ತಿದ್ದರೆ ನನಗೆ ಇಲ್ಲೇ ತಾಳಿ ಕಟ್ಟು ಎಂದು ಪಿಂಕಿ ಹೇಳುತ್ತಾಳೆ. ಲೀಲಾ ಅವಳಿಗೆ ತಾಳಿ ಕೊಡುತ್ತಾಳೆ. ಅದನ್ನು ನೋಡಿ ಸೀನ ಶಾಕ್ ಆಗುತ್ತಾನೆ.
ಗೋಡಂಬಿ ಬಳಿ ಕಷ್ಟ ಹೇಳಿಕೊಂಡು ಕಣ್ಣೀರಿಟ್ಟ ರಶ್ಮಿ
ಇತ್ತ ಆಸ್ಪತ್ರೆಯಲ್ಲಿ ಗುಂಡಮ್ಮ ಗೋಡಂಬಿ ಬಳಿ ಅತ್ತೆ ಮನೆಯಲ್ಲಿ ತಾನು ಅನುಭವಿಸುತ್ತಿರುವ ಕಷ್ಟವನ್ನು ಹೇಳಿಕೊಂಡು ಅಳುತ್ತಾಳೆ. ಗೋಡಂಬಿ ಕೈ ಹಿಡಿದು ಕಣ್ಣೀರಿಡುವ ರಶ್ಮಿ, ಅಣ್ಣ ನಿನ್ನ ಹೆಸರಿನಲ್ಲಿ ನಾನು ಇಲ್ಲಿ ಊಟ ಮಾಡುತ್ತಿದ್ದೇನೆ, ನಿನಗೇನು ಬೇಸರ ಇಲ್ಲ ತಾನೇ. ಮದುವೆ ಆದಾಗಿನಿಂದ ಅತ್ತೆ ಮನೆಯಲ್ಲಿ ನಾನು ಊಟ ಮಾಡಿರುವುದು ಒಂದೇ ಬಾರಿ. ಅತ್ತೆ ಮನೆಯಲ್ಲಿ ನನಗೆ ಊಟ ಕೊಡುತ್ತಿಲ್ಲ. ಅಡುಗೆ ಆಗುತ್ತಿದ್ದಂತೆ ನಾನು ಊಟ ಮಾಡಿಬಿಟ್ಟೆ ಎಂದು ಲೀಲತ್ತೆ ಸುಳ್ಳು ಹೇಳುತ್ತಾರೆ. ನನಗೆ ಹಸಿವು ತಡೆದುಕೊಂಡು ಇರಲು ಆಗುವುದಿಲ್ಲ. ಅಂತದರಲ್ಲಿ ಅವರು ಹೀಗೆಲ್ಲಾ ಮಾಡಿದರೆ ನನಗೆ ಬಹಳ ನೋವಾಗುತ್ತದೆ. ಅಣ್ಣನ ಮನೆಯಲ್ಲಿ ರಾಣಿ ರೀತಿ ಇದ್ದೆ, ಆದರೆ ಈಗ ಒಂದು ತುತ್ತಿಗೂ ಕಷ್ಟಪಡುವಂತಾಗಿದೆ.
ಅತ್ತಿಗೆ ಮಾಡಿಕೊಟ್ಟ ಚಕ್ಲಿ, ಕೋಡುಬಳೆ, ರವೆಉಂಡೆಯನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇನೆ. ಆದರೆ ನನ್ನ ಮಾವ ಬಹಳ ಒಳ್ಳೆಯವರು, ಅವರಿಗಾಗಲೀ ಸೀನನಿಗಾಗಲಿ ಈ ವಿಷಯ ಗೊತ್ತಿಲ್ಲ, ನಾನು ಹೇಳುವುದೂ ಇಲ್ಲ, ಒಂದಲ್ಲಾ ಒಂದು ದಿನ ಲೀಲತ್ತೆ ಸರಿ ಆಗುತ್ತಾರೆ ಎಂದು ಸುಮ್ಮನಿದ್ದೇನೆ, ಈಗ ನಿನ್ನ ಜೊತೆ ಆಸ್ಪತ್ರೆಯಲ್ಲಿ ಇದ್ದೀನಿ, ಬೆಳಗ್ಗೆ ತಿಂಡಿ ಆಯ್ತು, ಈಗ ಊಟ ಬಂದುಬಿಡುತ್ತೆ, ಹೀಗೆ ನಿನ್ನ ಹೆಸರಿನಲ್ಲಿ ನಾನು ಅನ್ನ ತಿನ್ನುತ್ತಿದ್ದೇನೆ ಎಂದು ರಶ್ಮಿ ಅಳುತ್ತಾಳೆ. ಅವಳ ಮಾತುಗಳಿಗೆ ಗೋಡಂಬಿ ಸ್ಪಂದಿಸುತ್ತಾನೆ. ಕಣ್ಣು ಬಿಟ್ಟು ನಿಧಾನವಾಗಿ ರಶ್ಮಿ ತಲೆ ಮೇಲೆ ಕೈ ಇಡುತ್ತಾನೆ.
ಪಿಂಕಿ ಬಲವಂತಕ್ಕೆ ಸೀನ ಅವಳಿಗೆ ತಾಳಿ ಕಟ್ಟೇಬಿಡುತ್ತಾನಾ? ರಶ್ಮಿ ಕಷ್ಟಕ್ಕೆ ಸ್ಪಂದಿಸುವ ಗೋಡಂಬಿ ಸಂಪೂರ್ಣ ಎಚ್ಚರಗೊಂಡು ಮಾತನಾಡುತ್ತಾನಾ? ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಅಣ್ಣಯ್ಯ ಧಾರಾವಾಹಿ ಪಾತ್ರವರ್ಗ
ಮಾರಿಗುಡಿ ಶಿವು - ವಿಕಾಸ್ ಉತ್ತಯ್ಯ
ಪಾರ್ವತಿ - ನಿಶಾ ರವಿಕೃಷ್ಣನ್
ವೀರಭದ್ರ - ನಾಗೇಂದ್ರ ಶಾ
ಸೌಭಾಗ್ಯ - ಮಧುಮತಿ
ಸುಶೀಲ - ಶ್ವೇತಾ
ರತ್ನ - ನಾಗಶ್ರೀ ಬೇಗಾರ್
ರಾಧಾ - ರಾಘವಿ
ರಶ್ಮಿ - ಪ್ರತೀಕ್ಷಾ ಶ್ರೀನಾಥ್
ರಮ್ಯಾ - ಅಂಕಿತಾ ಗೌಡ
ನಾಗೇಗೌಡ - ಸಂದೀಪ್ ನೀನಾಸಂ
ಪರಶು - ಚಿರಂಜೀವಿ
ಜಿಮ್ ಸೀನ - ಸುಷ್ಮಿತ್ ಜೈನ್
ವಿಭಾಗ