ಅಣ್ಣಯ್ಯ: ಅತ್ತೆ ಶಾರದಾ ಬಗ್ಗೆ ಗಂಡನ ಬಳಿ ಕೇಳಿದ ಪಾರ್ವತಿ; ತಾಯಿ ಬಗ್ಗೆ ಮಾತನಾಡಿದ್ದನ್ನು ಸಹಿಸದೆ ಉಗ್ರ ರೂಪ ತಾಳಿದ ಮಾರಿಗುಡಿ ಶಿವು
ಕನ್ನಡ ಸುದ್ದಿ  /  ಮನರಂಜನೆ  /  ಅಣ್ಣಯ್ಯ: ಅತ್ತೆ ಶಾರದಾ ಬಗ್ಗೆ ಗಂಡನ ಬಳಿ ಕೇಳಿದ ಪಾರ್ವತಿ; ತಾಯಿ ಬಗ್ಗೆ ಮಾತನಾಡಿದ್ದನ್ನು ಸಹಿಸದೆ ಉಗ್ರ ರೂಪ ತಾಳಿದ ಮಾರಿಗುಡಿ ಶಿವು

ಅಣ್ಣಯ್ಯ: ಅತ್ತೆ ಶಾರದಾ ಬಗ್ಗೆ ಗಂಡನ ಬಳಿ ಕೇಳಿದ ಪಾರ್ವತಿ; ತಾಯಿ ಬಗ್ಗೆ ಮಾತನಾಡಿದ್ದನ್ನು ಸಹಿಸದೆ ಉಗ್ರ ರೂಪ ತಾಳಿದ ಮಾರಿಗುಡಿ ಶಿವು

ಜೀ ಕನ್ನಡದ ಅಣ್ಣಯ್ಯ ಧಾರಾವಾಹಿ 195ನೇ ಎಪಿಸೋಡ್‌ನಲ್ಲಿ ತನ್ನ ತಾಯಿ ಶಾರದಾ ಬಗ್ಗೆ ಕೇಳಿದ್ದಕ್ಕೆ ಹೆಂಡತಿ ಪಾರ್ವತಿ ಮೇಲೆ ಶಿವು ಕೋಪಗೊಳ್ಳುತ್ತಾನೆ. (ಬರಹ: ರಕ್ಷಿತಾ)

ಅಣ್ಣಯ್ಯ: ಅತ್ತೆ ಶಾರದಾ ಬಗ್ಗೆ ಗಂಡನ ಬಳಿ ಕೇಳಿದ ಪಾರ್ವತಿ; ತಾಯಿ ಬಗ್ಗೆ ಮಾತನಾಡಿದ್ದನ್ನು ಸಹಿಸದೆ ಉಗ್ರ ರೂಪ ತಾಳಿದ ಮಾರಿಗುಡಿ ಶಿವು
ಅಣ್ಣಯ್ಯ: ಅತ್ತೆ ಶಾರದಾ ಬಗ್ಗೆ ಗಂಡನ ಬಳಿ ಕೇಳಿದ ಪಾರ್ವತಿ; ತಾಯಿ ಬಗ್ಗೆ ಮಾತನಾಡಿದ್ದನ್ನು ಸಹಿಸದೆ ಉಗ್ರ ರೂಪ ತಾಳಿದ ಮಾರಿಗುಡಿ ಶಿವು (Zee Kannada )

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಶುಕ್ರವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 195ನೇ ಎಪಿಸೋಡ್‌ ಕಥೆ ಹೀಗಿದೆ. ಆಸ್ಪತ್ರೆಯಲ್ಲಿ ಪಾರ್ವತಿಯನ್ನು ಡಾಕ್ಟರ್‌ ಹೊಗಳಿದ್ದಕ್ಕೆ ಖುಷಿಯಾಗುವ ಶಿವು, ಅವಳನ್ನು ಕೆಲಸಕ್ಕೆ ಹೋಗುವಂತೆ ಹೇಳುತ್ತಾನೆ. ಆದರೆ ಪಾರ್ವತಿ ಕೆಲಸಕ್ಕೆ ಹೋಗಲು ನಿರಾಕರಿಸುತ್ತಾಳೆ. ನಾನು ಯಾವುದೋ ಆಸ್ಪತ್ರೆಗೆ ಕೆಲಸಕ್ಕೂ ಹೋಗಿ, ಮನೆಯನ್ನೂ ನಿಭಾಯಿಸುವುದು ಕಷ್ಟ ಎನ್ನುತ್ತಾಳೆ. ಹಾಗಾದರೆ ನಿನಗೊಂದು ಆಸ್ಪತ್ರೆ ಕಟ್ಟಿಸಿಕೊಡುತ್ತೇನೆ ಎಂದು ಶಿವಣ್ಣ ಹೇಳುತ್ತಾನೆ. ಅದೆಲ್ಲಾ ಆಗದ ಮಾತು ಎಂದು ಪಾರ್ವತಿ ಹೇಳುತ್ತಾಳೆ.

ಕ್ಲಿನಿಕ್‌ ಆರಂಭಿಸುವುದು ಬಿಟ್ಟು ಅತ್ತೆಯ ಹುಡುಕಾಟ ಆರಂಭಿಸಿದ ಪಾರು

ಆಸ್ಪತ್ರೆ ಕಟ್ಟಿಸುವುದು ಸುಲಭದ ಮಾತಲ್ಲ, ಅದಕ್ಕೆ ಬಹಳ ಉಪಕರಣಗಳು ಬೇಕು. ನನಗೆ ಲೈಸನ್ಸ್‌ ದೊರೆಯಬೇಕು. ಆಗಷ್ಟೇ ನಾನು ಆಸ್ಪತ್ರೆ ಶುರು ಮಾಡಬಹುದು. ಇದಕ್ಕೆಲ್ಲಾ ಬಹಳ ಹಣ ಬೇಕು ಎಂದು ಪಾರು ಹೇಳುತ್ತಾಳೆ. ಲೈಸನ್ಸ್‌ ಯಾರು ಕೊಡುತ್ತಾರೆ? ಅವರ ನಂಬರ್‌ ಕೊಡಿ ಮಾತನಾಡೋಣ ಎಂದು ಗೊರಕೆ ಹೇಳುತ್ತಾನೆ. ಅದೆಲ್ಲಾ ಫೋನ್‌ನಲ್ಲಿ ಮಾತನಾಡುವಂಥದ್ದಲ್ಲ. ಅದಕ್ಕಾಗಿ ಒಂದು ಕಾರ್ಯಕ್ರಮ ಮಾಡುತ್ತಾರೆ. ಅದರಲ್ಲಿ ನನಗೆ ಸರ್ಟಿಫಿಕೇಟ್‌ ಕೊಡುತ್ತಾರೆ. ಉಪಕರಣಗಳನ್ನು ಖರೀದಿಸಲು ಬಹಳ ಹಣ ಖರ್ಚಾಗುತ್ತದೆ ಎಂದು ಪಾರ್ವತಿ ಹೇಳುತ್ತಾಳೆ. ದುಡ್ಡಿಗೆ ನೀನು ಯೋಚನೆ ಮಾಡಬೇಡ ಎಂದು ಶಿವಣ್ಣ ಹೇಳುತ್ತಾನೆ. ಹೇಗೆ ಹೊಂದಿಸುತ್ತೀಯ ಎಂದು ಪಾರ್ವತಿ ಕೇಳುತ್ತಾಳೆ. ನನ್ನ ಕಿಡ್ನಿ ಮಾರಿಯಾದರೂ ಸರಿ ದುಡ್ಡು ತರುತ್ತೇನೆ ಎಂದು ಶಿವಣ್ಣ ಹೇಳುತ್ತಾನೆ.

ಗಂಡನ ಮಾತು ಕೇಳಿ ಪಾರ್ವತಿ ಗಾಬರಿಯಾಗುತ್ತಾಳೆ. ನಿಜವಾಗಿಯೂ ಕಿಡ್ನಿ ಮಾರುತ್ತೇನೆ ಎಂದುಕೊಂಡಿದ್ದೀಯ, ಸುಮ್ಮನೆ ತಮಾಷೆಗೆ ಹೇಳಿದೆ. ನಾನು ಇನ್ನೂ ಬಾಳಿ ಬದುಕಬೇಕು. ಈಗಷ್ಟೇ ಒಬ್ಬಳು ತಂಗಿಗೆ ಮದುವೆ ಆಗಿದೆ, ಇಬ್ಬರು ತಂಗಿಯರಿಗೆ ಮದುವೆ ಮಾಡಬೇಕು. ಕೊನೆ ತಂಗಿಗೆ ಒಳ್ಳೆ ವಿದ್ಯಾಭ್ಯಾಸ ಕೊಡಿಸಬೇಕು. ನನ್ನ ತಂಗಿಯರಿಗೆ ಮಕ್ಕಳಾಗಬೇಕು. ಅವರು ಮನೆಯೆಲ್ಲಾ ಓಡಾಡಬೇಕು. ನನ್ನನ್ನು ನಿನ್ನನ್ನು ಅತ್ತೆ ಮಾವ ಅಂತ ಕರೆಯಬೇಕೆಂದು ಶಿವು ಆಸೆ ವ್ಯಕ್ತಪಡಿಸುತ್ತಾನೆ. ಕ್ಲಿನಿಕ್‌ ವಿಚಾರ ಬಿಡು ಮಾವ ಅದು ಯಾವತ್ತಾದರೂ ತೆಗೆಯಬಹುದು. ಸದ್ಯಕ್ಕೆ ಬೇಡ ಎಂದು ಪಾರು ಹೇಳುತ್ತಾಳೆ. ಈಗ ಏಕೆ ಬೇಡ ಎಂದು ಶಿವು ಕೇಳುತ್ತಾನೆ. ನನ್ನ ಗುರಿಯೇ ಬೇರೆ ಇದೆ ಎಂದು ಪಾರು ಮನಸ್ಸಿನಲ್ಲಿ ಮಾತನಾಡಿಕೊಳ್ಳುತ್ತಾಳೆ. ಅಂದು ಶಿವು ಮೈ ಮೇಲೆ ಮಾಕಾಳವ್ವ ಬಂದು ಶಾರದಾ ಬಗ್ಗೆ ಮಾತನಾಡಿದ್ದನ್ನು ಪಾರ್ವತಿ ನೆನಪಿಸಿಕೊಳ್ಳುತ್ತಾಳೆ.

ತಾಯಿ ವಿಚಾರ ಮಾತನಾಡುತ್ತಿದ್ದಂತೆ ಸಿಟ್ಟಾದ ಶಿವು

ಶಿವು ಬಳಿ ಅವನ ತಾಯಿ ಬಗ್ಗೆ ಮಾತನಾಡಿದರೆ ಅವನಿಗೆ ಕೋಪ ಬರುತ್ತದೆ ಎಂದು ಪಾರುಗೆ ಗೊತ್ತಿದ್ದರೂ, ಅತ್ತೆಯನ್ನು ಹುಡುಕಲೇಬೇಕು ಎಂಬ ಉದ್ಧೇಶದಿಂದ ಶಿವು ಬಳಿ ಅತ್ತೆ ಬಗ್ಗೆ ಕೇಳಲು ನಿರ್ಧರಿಸುತ್ತಾಳೆ. ಮಾವ ನಿನ್ನ ಬಳಿ ಕೆಲವೊಂದು ಪ್ರಶ್ನೆಗಳನ್ನು ಕೇಳಬೇಕು ದಯವಿಟ್ಟು ಅದಕ್ಕೆ ಉತ್ತರ ಕೊಡು ಎಂದು ಕೇಳುತ್ತಾಳೆ. ಅದೇನು ಕೇಳು ಎಂದು ಶಿವು ಹೇಳುತ್ತಾನೆ. ನಿನ್ನ ತಾಯಿ ಬಗ್ಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಬೇಕು, ನಿನಗೆ ಅವರ ಬಗ್ಗೆ ಎಷ್ಟು ಗೊತ್ತೋ ಅಷ್ಟು ಹೇಳು. ಅವರು ಮನೆ ಬಿಟ್ಟು ಹೋಗಲು ಕಾರಣ ಏನು? ಈಗ ಎಲ್ಲಿದ್ದಾರೆ ಎಂದು ಕೇಳುತ್ತಾಳೆ. ಅದುವರೆಗೂ ಶಾಂತವಾಗಿದ್ದ ಶಿವು ತನ್ನ ತಾಯಿ ವಿಚಾರ ಕೇಳಿದೊಡನೆ ಉಗ್ರ ರೂಪ ತಾಳುತ್ತಾನೆ. ಇವತ್ತೇ ಕೊನೆ, ಇನ್ನು ನನ್ನ ಮುಂದೆ ಅವರ ಬಗ್ಗೆ ಮಾತನಾಡಬೇಡ ಎನ್ನುತ್ತಾನೆ.

ಅವರು ನಿನ್ನ ಹೆತ್ತ ತಾಯಿ, ಅವರ ಬಗ್ಗೆ ತಿಳಿದುಕೊಳ್ಳುವುದರಲ್ಲಿ ಏನು ತಪ್ಪು, ದಯವಿಟ್ಟು ಹೇಳು ಎಂದು ಪಾರು ಕೇಳುತ್ತಾಳೆ. ಪಾರು ಪದೇ ಪದೆ ತಾಯಿ ಬಗ್ಗೆ ಕೇಳುವುದಕ್ಕೆ ಶಿವು ಕೆಂಡಾಮಂಡಲವಾಗುತ್ತಾನೆ. ಸಿಟ್ಟಿನಿಂದ ಟೇಬಲ್‌ ಮೇಲಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡುತ್ತಾನೆ. ಮತ್ತೆ ಇದನ್ನು ಮುಂದುವರೆಸಬೇಡ. ಚಿಕ್ಕಂದಿನಲ್ಲೇ ನಮ್ಮನ್ನೆಲ್ಲಾ ಅನಾಥರನ್ನಾಗಿ ಮಾಡಿಹೋದವರು ಅವರು. ಓಡಿ ಹೋದವಳು ಮಕ್ಕಳು ಎಂದು ಜನರು ನನಗೆ ಹಾಗೂ ನನ್ನ ತಂಗಿಯರಿಗೆ ಬಹಳ ಅವಮಾನ ಮಾಡುತ್ತಾ ಬಂದಿದ್ದಾರೆ. ಅವರ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ ಎಂದು ಶಿವು ಕೋಪದಿಂದ ಹೇಳುತ್ತಾನೆ. ಗೊರಕೆ ಕೂಡಾ ಪಾರ್ವತಿ ಬಳಿ ಬಂದು, ದಯವಿಟ್ಟು ಅತ್ತಿಗೆ ಇನ್ಮುಂದೆ ಅವರ ಬಗ್ಗೆ ಕೇಳಬೇಡಿ. ಅವರ ತಾಯಿ ಬಗ್ಗೆ ಮಾತನಾಡಿದಾಗಲೆಲ್ಲಾ ಶಿವು ಅಣ್ಣ ಬಹಳ ಕೋಪಗೊಳ್ಳುತ್ತಾರೆ ಎಂದು ಹೇಳುತ್ತಾನೆ.

ಶಿವು ಮಾತಿಗೆ ಹೆದರಿ ಪಾರ್ವತಿ ತನ್ನ ಅತ್ತೆ ಹುಡುಕಾಟವನ್ನು ನಿಲ್ಲಿಸುತ್ತಾಳಾ? ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಅಣ್ಣಯ್ಯ ಧಾರಾವಾಹಿ ಪಾತ್ರವರ್ಗ

ಮಾರಿಗುಡಿ ಶಿವು - ವಿಕಾಸ್‌ ಉತ್ತಯ್ಯ

ಪಾರ್ವತಿ - ನಿಶಾ ರವಿಕೃಷ್ಣನ್‌

ವೀರಭದ್ರ - ನಾಗೇಂದ್ರ ಶಾ

ಸೌಭಾಗ್ಯ - ಮಧುಮತಿ

ಸುಶೀಲ - ಶ್ವೇತಾ

ರತ್ನ - ನಾಗಶ್ರೀ ಬೇಗಾರ್‌

ರಾಧಾ - ರಾಘವಿ

ರಶ್ಮಿ - ಪ್ರತೀಕ್ಷಾ ಶ್ರೀನಾಥ್‌

ರಮ್ಯಾ - ಅಂಕಿತಾ ಗೌಡ

ನಾಗೇಗೌಡ - ಸಂದೀಪ್ ನೀನಾಸಂ

ಪರಶು - ಚಿರಂಜೀವಿ

ಜಿಮ್‌ ಸೀನ - ಸುಷ್ಮಿತ್ ಜೈನ್

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.