Ramachari: ರುಕ್ಕು ಹುಡುಕಲು ಚಾರು ಹರಸಾಹಸ; ಜೊತೆಗೆ ಬರದೇ ಇದ್ದರೂ ರಾಮಾಚಾರಿಗೆ ಹೆಂಡತಿಯದೇ ಚಿಂತೆ
ರಾಮಾಚಾರಿ ಮನೆಯಲ್ಲೇ ಇದ್ದರೂ ಚಾರು ಮತ್ತು ಮುರಾರಿ ತಡ ಮಾಡುವುದು ಬೇಡ ಎಂದುಕೊಂಡು ರುಕ್ಕುವನ್ನು ಹುಡುಕಲು ಹೋಗಿದ್ದಾರೆ. ಆದರೆ ಮುಂದೆ ಏನಾಗುತ್ತದೆ ಎಂಬುದರ ಬಗ್ಗೆ ಚಾರು ಹಾಗೂ ರಾಮಾಚಾರಿ ಇಬ್ಬರಿಗೂ ಭಯವಿದೆ.

ರಾಮಾಚಾರಿ ಮನೆಯಲ್ಲೇ ಇದ್ದರೂ ಚಾರು ಮತ್ತು ಮುರಾರಿ ತಡ ಮಾಡುವುದು ಬೇಡ ಎಂದುಕೊಂಡು ರುಕ್ಕುವನ್ನು ಹುಡುಕಲು ಹೋಗುತ್ತಾರೆ. ಇದಕ್ಕೆ ರಾಮಾಚಾರಿ ಅನುಮತಿ ಕೂಡ ಇರುತ್ತದೆ. ಆದರೆ ನಂತರದಲ್ಲಿ ರಾಮಾಚಾರಿಗೆ ತನ್ನ ಹೆಂಡತಿ ಹೇಗಿದ್ದಾಳೋ ಏನೋ? ಎಂದು ಅನುಮಾನ ಆರಂಭವಾಗಿದೆ. ಆ ಕಾರಣಕ್ಕಾಗಿ ಅವನು ಕಾಲ್ ಮಾಡುತ್ತಾನೆ. ಇನ್ನು ಇತ್ತ ಚಾರು ರುಕ್ಕು ಮಾವನ ಮನೆಯಲ್ಲಿ ಇರುತ್ತಾಳೆ ಎಂದುಕೊಂಡು ಬರುತ್ತಾಳೆ. ಆದರೆ ಅವಳು ಅಲ್ಲಿಗೆ ಹೋಗಿ ನೋಡುವಷ್ಟರಲ್ಲಿ ಅವಳು ಇರುವುದಿಲ್ಲ. ರಾಮದುರ್ಗಕ್ಕೆ ಬಂದರೂ ರುಕ್ಕು ಇರುವ ಜಾಗ ಮಾತ್ರ ಸಿಗಲಿಲ್ಲ ಎಂದು ಅವಳು ಬೇಸರದಲ್ಲಿರುತ್ತಾಳೆ. ಆದರೆ ಅವಳ ಚಿಕ್ಕಪ್ಪ ಒಳ್ಳೆಯವನಾಗಿರುತ್ತಾನೆ.
ಅವಳ ಮಾವ ಒಳ್ಳೆಯವನಾಗಿದ್ದ ಕಾರಣ ಅವನು ಎಲ್ಲವನ್ನೂ ಚಾರುಗೆ ವಿವರಿಸುತ್ತಾನೆ. ಇಲ್ಲಿ ಅವಳ ಪರಿಸ್ಥಿತಿ ಹೇಗಿದೆ. ಊರಿನವರು ಏನು ಅಂದುಕೊಂಡಿದ್ದಾರೆ. ಅವಳನ್ನು ಮೋಸಮಾಡಿ ಯಾರು ಕರೆದುಕೊಂಡು ಹೋಗಿದ್ದಾರೆ ಎನ್ನುವ ಎಲ್ಲ ವಿಷಯವನ್ನೂ ಅವನು ತಿಳಿಸಿ ಹೇಳುತ್ತಾನೆ. ಅದನ್ನೆಲ್ಲ ಕೇಳಿ ಚಾರುಗೆ ಸಮಾಧಾನ ಹಾಗೂ ಬೇಸರ ಎರಡೂ ಆಗುತ್ತದೆ. ಅವಳು ಈ ವಿಚಾರವನ್ನು ರಾಮಾಚಾರಿ ಬಳಿ ಹಂಚಿಕೊಳ್ಳಬೇಕು ಎಂದು ಬಯಸುತ್ತಾಳೆ. ಇನ್ನು ಮುರಾರಿ ತಾನು ಬಂದಿರುವ ಕಾರಣ ಒಂದು ಆದರೆ ಇಲ್ಲಿ ಆಗುತ್ತಿರುವುದೇ ಇನ್ನೊಂದು ಎಂದು ಗೊಂದಲದಲ್ಲಿ ಇದ್ದಾನೆ.
ಆದರೆ ರುಕ್ಕು ಮಾವ ತುಂಬಾ ಭರವಸೆ ನೀಡುತ್ತಾನೆ. ಅಲ್ಲಿ ಅವಳನ್ನು ಕಾಡುತ್ತಿದ್ದಾರೆ. ಅವಳು ಮೊದಲು ನಮ್ಮ ಮನೆಯಲ್ಲೇ ಇದ್ದಳು ಆದರೆ ಈಗ ಮೋಸ ಮಾಡಿ ಅವಳನ್ನು ಇಲ್ಲಿಂದ ಕರೆದುಕೊಂಡು ಹೋಗಿ ಚಿಕ್ಕಪ್ಪನ ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಅವರು ತುಂಬಾ ಕಟುಕರು ಎಂದು ಹೇಳುತ್ತಾನೆ. ನೀವೇನಾದರೂ ಅವಳನ್ನು ಕರೆದುಕೊಂಡು ಹೋಗುತ್ತೀರಾ ಎಂದಾದರೆ ನನ್ನ ಜೀವವನ್ನು ಬೇಕಾದರೂ ಒತ್ತೆ ಇಟ್ಟು ನಾನು ಅವಳನ್ನು ಬಿಡಿಸಿಕೊಂಡು ಬರಲು ನಿನಗೆ ಸಹಾಯ ಮಾಡುತ್ತೇನೆ ಎಂದು ಹೇಳುತ್ತಾನೆ.
ಚಾರು ಈಗ ಆ ಎಲ್ಲ ವಿಷಯವನ್ನು ರಾಮಾಚಾರಿಗೆ ಹೇಳಲು ಕಾಲ್ ಮಾಡಿದ್ದಾಳೆ. ರಾಮಾಚಾರಿ ಹೋದ ವಿಷಯ ಏನಾಯ್ತು ಎಂದು ಕೇಳಿದಾಗ ಎಲ್ಲವನ್ನೂ ಚಾರು ಹೇಳಿದ್ದಾಳೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ