Amruthadhaare: ಹೆಂಡ್ತಿಗೆ ಚಿಕ್ಕಮಗಳೂರು ಎಸ್ಟೇಟ್‌ ಗಿಫ್ಟ್‌ ನೀಡಲು ಮುಂದಾದ ಗೌತಮ್‌; ಹನಿಮೂನ್‌ ಪ್ರಯಾಣದಲ್ಲಿ ಭೂಮಿಕಾಳಿಗೆ ಖುಷಿಯೋ ಖುಷಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amruthadhaare: ಹೆಂಡ್ತಿಗೆ ಚಿಕ್ಕಮಗಳೂರು ಎಸ್ಟೇಟ್‌ ಗಿಫ್ಟ್‌ ನೀಡಲು ಮುಂದಾದ ಗೌತಮ್‌; ಹನಿಮೂನ್‌ ಪ್ರಯಾಣದಲ್ಲಿ ಭೂಮಿಕಾಳಿಗೆ ಖುಷಿಯೋ ಖುಷಿ

Amruthadhaare: ಹೆಂಡ್ತಿಗೆ ಚಿಕ್ಕಮಗಳೂರು ಎಸ್ಟೇಟ್‌ ಗಿಫ್ಟ್‌ ನೀಡಲು ಮುಂದಾದ ಗೌತಮ್‌; ಹನಿಮೂನ್‌ ಪ್ರಯಾಣದಲ್ಲಿ ಭೂಮಿಕಾಳಿಗೆ ಖುಷಿಯೋ ಖುಷಿ

  • Amruthadhaare Serial Today Episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಹಲವು ಸನ್ನಿವೇಶಗಳು ಇವೆ. ಗೌತಮ್‌ ಮತ್ತು ಭೂಮಿಕಾ ತೆರೆದ ಜೀಪ್‌ನಲ್ಲಿ ಚಿಕ್ಕಮಗಳೂರು ಕಡೆಗೆ ಪ್ರಯಾಣ ಬೆಳೆಸಿರುವುದು ಸದ್ಯ ಝೀ ಕನ್ನಡ ವಾಹಿನಿಯ ಬಿಡುಗಡೆ ಮಾಡಿರುವ ಪ್ರಮೋದಲ್ಲಿ ಕಾಣಿಸಿದೆ.

ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಹಲವು ಸನ್ನಿವೇಶಗಳು ಇವೆ.  ಗೌತಮ್‌ ಮತ್ತು ಭೂಮಿಕಾ ತೆರೆದ ಜೀಪ್‌ನಲ್ಲಿ ಚಿಕ್ಕಮಗಳೂರು ಕಡೆಗೆ ಪ್ರಯಾಣ ಬೆಳೆಸಿರುವುದು ಸದ್ಯ ಝೀ ಕನ್ನಡ ವಾಹಿನಿಯ ಬಿಡುಗಡೆ ಮಾಡಿರುವ ಪ್ರಮೋದಲ್ಲಿ ಕಾಣಿಸಿದೆ. 
icon

(1 / 10)

ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಹಲವು ಸನ್ನಿವೇಶಗಳು ಇವೆ.  ಗೌತಮ್‌ ಮತ್ತು ಭೂಮಿಕಾ ತೆರೆದ ಜೀಪ್‌ನಲ್ಲಿ ಚಿಕ್ಕಮಗಳೂರು ಕಡೆಗೆ ಪ್ರಯಾಣ ಬೆಳೆಸಿರುವುದು ಸದ್ಯ ಝೀ ಕನ್ನಡ ವಾಹಿನಿಯ ಬಿಡುಗಡೆ ಮಾಡಿರುವ ಪ್ರಮೋದಲ್ಲಿ ಕಾಣಿಸಿದೆ. 

ಭೂಮಿಕಾಳಿಗೆ ಮದುವೆಯಾದ ಬಳಿಕ ಏನೂ ಗಿಫ್ಟ್‌ ನೀಡಿಲ್ಲ. ಅದಕ್ಕೆ ನಮ್ಮ ಚಿಕ್ಕಮಗಳೂರು ಎಸ್ಟೇಟ್‌ ಅನ್ನೇ ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದೇನೆ ಎಂದು ಗೌತಮ್‌ ಹೇಳುತ್ತಾರೆ. 
icon

(2 / 10)

ಭೂಮಿಕಾಳಿಗೆ ಮದುವೆಯಾದ ಬಳಿಕ ಏನೂ ಗಿಫ್ಟ್‌ ನೀಡಿಲ್ಲ. ಅದಕ್ಕೆ ನಮ್ಮ ಚಿಕ್ಕಮಗಳೂರು ಎಸ್ಟೇಟ್‌ ಅನ್ನೇ ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದೇನೆ ಎಂದು ಗೌತಮ್‌ ಹೇಳುತ್ತಾರೆ. 

ಈ ವಿಷಯ ಕೇಳಿ ಅಜ್ಜಮ್ಮ ಖುಷಿಯಾಗಿದ್ದಾರೆ. ಓಕೆ ಕೊಡು, ಆದರೆ, ನಮಗೆ ಮೊಮ್ಮಗನ ನೀಡಲು ಮರೆಯಬೇಡ ಎಂದು ಹೇಳಿದ್ದಾರೆ. 
icon

(3 / 10)

ಈ ವಿಷಯ ಕೇಳಿ ಅಜ್ಜಮ್ಮ ಖುಷಿಯಾಗಿದ್ದಾರೆ. ಓಕೆ ಕೊಡು, ಆದರೆ, ನಮಗೆ ಮೊಮ್ಮಗನ ನೀಡಲು ಮರೆಯಬೇಡ ಎಂದು ಹೇಳಿದ್ದಾರೆ. 

ಚಿಕ್ಕಮಗಳೂರು ಎಸ್ಟೇಟ್‌ ಗಿಫ್ಟ್‌ ನೀಡುವ ಗೌತಮ್‌ ನಿರ್ಧಾರವನ್ನು ಮನೆಹಾಳ ಮಾವ ಕೇಳಿಸಿಕೊಂಡಿದ್ದಾರೆ. ಈ ವಿಷಯವನ್ನು ಶಕುಂತಲಾದೇವಿ ಕಿವಿಗೆ ಹಾಕೋದು ಪಕ್ಕ. ಬಳಿಕ ಇವರು ಅಸೂಯೆವ್ಯಕ್ತಪಡಿಸುವುದು ಗ್ಯಾರಂಟಿ. 
icon

(4 / 10)

ಚಿಕ್ಕಮಗಳೂರು ಎಸ್ಟೇಟ್‌ ಗಿಫ್ಟ್‌ ನೀಡುವ ಗೌತಮ್‌ ನಿರ್ಧಾರವನ್ನು ಮನೆಹಾಳ ಮಾವ ಕೇಳಿಸಿಕೊಂಡಿದ್ದಾರೆ. ಈ ವಿಷಯವನ್ನು ಶಕುಂತಲಾದೇವಿ ಕಿವಿಗೆ ಹಾಕೋದು ಪಕ್ಕ. ಬಳಿಕ ಇವರು ಅಸೂಯೆವ್ಯಕ್ತಪಡಿಸುವುದು ಗ್ಯಾರಂಟಿ. 

ಇಂದಿನ ಸಂಚಿಕೆಯಲ್ಲಿ ಗೌತಮ್‌ ಮತ್ತು ಭೂಮಿಕಾ ತೆರೆದ ಜೀಪ್‌ನಲ್ಲಿ ಚಿಕ್ಕಮಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿನ ಪ್ರಕೃತಿ ಸೌಂದರ್ಯ ನೋಡಿ ಭೂಮಿಕಾ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ.
icon

(5 / 10)

ಇಂದಿನ ಸಂಚಿಕೆಯಲ್ಲಿ ಗೌತಮ್‌ ಮತ್ತು ಭೂಮಿಕಾ ತೆರೆದ ಜೀಪ್‌ನಲ್ಲಿ ಚಿಕ್ಕಮಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿನ ಪ್ರಕೃತಿ ಸೌಂದರ್ಯ ನೋಡಿ ಭೂಮಿಕಾ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ.

ಒಟ್ಟಾರೆ ಗೌತಮ್‌ ಮತ್ತು ಭೂಮಿಕಾರಿಗೆ ತಮ್ಮ ಹೃದಯದ ಮಾತುಗಳನ್ನು ಹೇಳಲು ಪ್ರಸಕ್ತ ಸ್ಥಳ ನಿಗದಿಯಾಗಿದೆ. ಈ ಹನಿಮೂನ್‌ ಮೂಲಕ ಇಬ್ಬರು ಮೂವರಾಗುವ ಕನಸಿನಲ್ಲಿ ಗೌತಮ್‌ ಮನೆಯವರಿದ್ದಾರೆ. 
icon

(6 / 10)

ಒಟ್ಟಾರೆ ಗೌತಮ್‌ ಮತ್ತು ಭೂಮಿಕಾರಿಗೆ ತಮ್ಮ ಹೃದಯದ ಮಾತುಗಳನ್ನು ಹೇಳಲು ಪ್ರಸಕ್ತ ಸ್ಥಳ ನಿಗದಿಯಾಗಿದೆ. ಈ ಹನಿಮೂನ್‌ ಮೂಲಕ ಇಬ್ಬರು ಮೂವರಾಗುವ ಕನಸಿನಲ್ಲಿ ಗೌತಮ್‌ ಮನೆಯವರಿದ್ದಾರೆ. 

ಚಿಕ್ಕಮಗಳೂರಿನಲ್ಲಿ ಇನ್ನೂ ಹಲವು ತೊಂದರೆಗಳು ಇವೆ. ಅಲ್ಲಿನ ಜಮೀನನ್ನು ಕಬಳಿಸಲು ಕೆಂಚ ಕಾಯ್ತಾ ಇದ್ದಾನೆ. ಆತನಿಂದ ಇವರಿಗೆ ಏನಾದರೂ ತೊಂದರೆ ಎದುರಾಗಬಹುದೇ ಎಂದು ಕಾದುನೋಡಬೇಕಿದೆ. 
icon

(7 / 10)

ಚಿಕ್ಕಮಗಳೂರಿನಲ್ಲಿ ಇನ್ನೂ ಹಲವು ತೊಂದರೆಗಳು ಇವೆ. ಅಲ್ಲಿನ ಜಮೀನನ್ನು ಕಬಳಿಸಲು ಕೆಂಚ ಕಾಯ್ತಾ ಇದ್ದಾನೆ. ಆತನಿಂದ ಇವರಿಗೆ ಏನಾದರೂ ತೊಂದರೆ ಎದುರಾಗಬಹುದೇ ಎಂದು ಕಾದುನೋಡಬೇಕಿದೆ. 

ಇದೇ ಸಮಯದಲ್ಲಿ ಭೂಮಿಕಾಳ ಹೆಸರಿಗೆ ಚಿಕ್ಕಮಗಳೂರು ಎಸ್ಟೇಟ್‌ ಬರೆಯಲು ಪ್ರಯತ್ನಿಸುವ ಗೌತಮ್‌ಗೆ ಶಕುಂತಲಾ  ಕಡೆಯಿಂದ ಏನಾದರೂ ತೊಂದರೆಯಾಗಬಹುದೇ ಎಂಬ ಆತಂಕವೂ ಇದೆ. 
icon

(8 / 10)

ಇದೇ ಸಮಯದಲ್ಲಿ ಭೂಮಿಕಾಳ ಹೆಸರಿಗೆ ಚಿಕ್ಕಮಗಳೂರು ಎಸ್ಟೇಟ್‌ ಬರೆಯಲು ಪ್ರಯತ್ನಿಸುವ ಗೌತಮ್‌ಗೆ ಶಕುಂತಲಾ  ಕಡೆಯಿಂದ ಏನಾದರೂ ತೊಂದರೆಯಾಗಬಹುದೇ ಎಂಬ ಆತಂಕವೂ ಇದೆ. 

ಇಂತಹ ಹಲವು ಆತಂಕಗಳ ನಡುವೆ ಗೌತಮ್‌ ಮತ್ತು ಭೂಮಿಕಾರ ಹನಿಮೂನ್‌ ಸುಸೂತ್ರವಾಗಿ ನಡೆದರೆ ಸಾಕು ಎಂದು ನೆಟ್ಟಿಗರು ಅಮೃತಧಾರೆ ಪ್ರಮೋಗೆ ಕಾಮೆಂಟ್‌ ಮಾಡಿದ್ದಾರೆ.
icon

(9 / 10)

ಇಂತಹ ಹಲವು ಆತಂಕಗಳ ನಡುವೆ ಗೌತಮ್‌ ಮತ್ತು ಭೂಮಿಕಾರ ಹನಿಮೂನ್‌ ಸುಸೂತ್ರವಾಗಿ ನಡೆದರೆ ಸಾಕು ಎಂದು ನೆಟ್ಟಿಗರು ಅಮೃತಧಾರೆ ಪ್ರಮೋಗೆ ಕಾಮೆಂಟ್‌ ಮಾಡಿದ್ದಾರೆ.

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು.  
icon

(10 / 10)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು.  


ಇತರ ಗ್ಯಾಲರಿಗಳು