Amruthadhaare Story:ಅಮೃತಧಾರೆ ಸೀರಿಯಲ್ನಲ್ಲಿ ಮಂಕಾದ ಭೂಮಿಕಾ; ಪಾರ್ಥನ ಮದುವೆ ವಿಷಯ ಪಾರ್ಥನಿಗೆ ಬಿಟ್ಟು ಮತ್ತೆಲ್ಲರಿಗೂ ಗೊತ್ತಾಯ್ತು
Amruthadhaare serial Yesterday Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಪಾರ್ಥನ ಮದುವೆ ವಿಚಾರವೇ ಪ್ರಮುಖ ಹೈಲೈಟ್. ಪಾರ್ಥನಿಗೆ ಹುಡುಗಿ ಹುಡುಕುತ್ತಿರುವ ವಿಷಯ ಅಪೇಕ್ಷಾಳಿಗೆ ತಿಳಿದು ಅವಳ ಮನಸ್ಸು ವಿಲವಿಲ ಒದ್ದಾಡಿದೆ. ಆನಂದ್ ಮೇಲೆ ಅಪರ್ಣಾ ಮುನಿಸು ದೂರವಾಗಿದೆ.

Amruthadhaare serial: ಅಶ್ವಿನಿ ಮತ್ತು ಜೈದೇವ್ ಮಾತನಾಡುತ್ತ ಇರುತ್ತಾರೆ. ಪಾರ್ಥನ ಮದುವೆಯ ಕಥೆಯನ್ನು ಅಪೇಕ್ಷಾಗೆ ಗೊತ್ತು ಪಡಿಸಿದರೆ ಇನ್ನೂ ಮಜಾ ಇರುತ್ತದೆ ಎಂದು ಮಾತನಾಡುತ್ತಾರೆ. ಈ ವಿಷಯವನ್ನು ಮಹಿಮಾಗೆ ತಿಳಿಸಿದರೆ ಒಳ್ಳೆಯದು ಎಂದು ಮಾತನಾಡುತ್ತಾರೆ. ಅಶ್ವಿನಿ ಮಹಿಮಾಗೆ ಕಾಲ್ ಮಾಡುತ್ತಾರೆ. "ಪಾರ್ಥನಿಗೆ ಮಾಮ್ ಮದುವೆ ಮಾಡಬೇಕೆಂದಿದ್ದಾರೆ" ಎಂದು ಅಶ್ವಿನಿ ಕಾಲ್ ಮಾಡಿ ಮಹಿಮಾಗೆ ವಿಷಯ ತಿಳಿಸುತ್ತಾಳೆ. "ಅಮ್ಮ ನೋಡಿದ ಹುಡುಗಿನ ಮದುವೆಯಾಗ್ತನೆ ಅಂದ್ರೆ ರಿಯಲಿ ಗ್ರೇಟ್" ಎಂದು ಮಹಿಮಾ ಖುಷಿವ್ಯಕ್ತಪಡಿಸುತ್ತಾರೆ.
ಪಾರ್ಥನ ಮದುವೆ ವಿಷಯ ಅಪೇಕ್ಷಾಗೆ ಗೊತ್ತಾಯ್ತು
ಮಹಿಮಾ ಮನೆಯಲ್ಲಿ ಎಲ್ಲರ ಮುಂದೆ ಮಾತನಾಡುತ್ತಾಳೆ. ಅಪ್ಪಿನೂ ಅಲ್ಲಿ ಇದ್ದಾಳೆ. "ಪಾರ್ಥನಿಗೆ ಹುಡುಗಿ ಹುಡುಕೋ ಪ್ರೊಸೆಸ್ ಸ್ಟಾರ್ಟ್ ಆಗಿದೆಯಂತೆ" ಎಂದು ಮಹಿಮಾ ಹೇಳಿದಾಗ ಅಪೇಕ್ಷಾಗೆ ಧರೆಯೇ ಕುಸಿದಂತೆ ಆಗುತ್ತದೆ. ಮಂದಾಕಿನಿಯಂತೂ ಎಂತಹ ಸ್ವೀಟ್ ನ್ಯೂಸ್ ಕೊಟ್ಟೆ ಎನ್ನುತ್ತಾಳೆ. ಆದರೆ, ಅಪ್ಪಿಯ ಕಥೆ ಯಾರಿಗೂ ಗೊತ್ತಿಲ್ಲ. "ಪಾರ್ಥನ ಮದುವೆಯಾಗೋ ಹುಡುಗಿ ಅದೃಷ್ಟವಂತೆ. ಅಷ್ಟು ಮುದ್ದಿನ ಹುಡುಗ ಅವನು" ಎಂದು ಮಂದಾಕಿನಿ ಹೊಗಳುತ್ತಾರೆ. "ಪಾರ್ಥ ಅವರು ಈ ಮದುವೆಗೆ ಒಪ್ಪಿಕೊಂಡಿದ್ದಾರ" ಎಂದು ಅಪೇಕ್ಷಾ ಕೇಳುತ್ತಾಳೆ. "ಅವನ ಕೇಳುವ ಅವಶ್ಯಕತೆಯೇ ಇಲ್ಲ. ಅವನೂ ನಮ್ಮ ಅಕ್ಕನ ರೀತಿ ಅರೇಂಜ್ ಮ್ಯಾರೇಜ್ ಆಗ್ತನಂತೆ. ನಮ್ಮ ಅಮ್ಮ ಯಾರನ್ನು ಹೇಳ್ತಾರೋ ಅವರನ್ನೇ ಕಣ್ಣು ಮುಚ್ಚಿ ತಾಳಿ ಕಟ್ತಾನಂತೆ" ಎಂದು ಮಹಿಮಾ ಹೇಳಿದಾಗ ಅಶ್ವಿನಿಗೆ ದಿಗಿಲಾಗುತ್ತದೆ. "ಪಾರ್ಥ ಅವರು ನಿಜವಾಗಿಯೂ ಮದುವೆಗೆ ಒಪ್ಪಿಕೊಂಡು ಬಿಟ್ರ" ಎಂದು ಆಲೋಚಿಸುತ್ತಾಳೆ.
ಇದನ್ನು ಓದಿ: ಅಮೃತಧಾರೆ ಧಾರಾವಾಹಿಯ ಎಲ್ಲಾ ಸಂಚಿಕೆಗಳು
ಅಪರ್ಣಾಳಿಗೆ ಏನೋ ಅನುಮಾನ
ಆನಂದ್ ಮತ್ತು ಅಪರ್ಣಾ ಡುಮ್ಮ ಸರ್ ಕುರಿತು ಮಾತನಾಡುತ್ತಿದ್ದಾರೆ. ಭೂಮಿಕಾಳ ಪ್ರೀತಿಯಿಂದ ಡುಮ್ಮ ಸರ್ ಇನ್ನಷ್ಟು ಖುಷಿಯಾಗಿದ್ದಾರೆ ಎಂದು ಅಪರ್ಣಾ ಹೇಳುತ್ತಾಳೆ. ಪಾರ್ಥನ ಮದುವೆಯ ವಿಚಾರದಲ್ಲಿ ಖುಷಿಯಾಗಿದ್ದಾರೆ ಎನ್ನುತ್ತಾನೆ ಆನಂದ್. "ಪಾರ್ಥನಿಗೆ ಒಂದು ಮಾತು ಕೇಳದೆ ಮದುವೆ ಮಾಡ್ತಾ ಇದ್ದರಲ್ವ. ಇದು ಸರಿಯಾಗಿಲ್ಲ. ಆತನನ್ನು ಕೇಳಬೇಕಿತ್ತು" ಎಂದು ಅಪರ್ಣಾ ಹೇಳುತ್ತಾಳೆ. "ಅವತ್ತು ನಮ್ಮ ಮನೆಯಲ್ಲಿ ಪಾರ್ಟಿ ಆಯ್ತು ಅಲ್ವ. ಅವನನ್ನು ಅಬ್ಸರ್ವ್ ಮಾಡಿದ್ಯ. ಅದು ಆಕ್ಟ್ ರೀತಿ ಇರಲಿಲ್ಲ. ಅವನು ಮನಸ್ಸಿನ ಮಾತಿನ ರೀತಿ ಇತ್ತು" ಎಂದು ಅಪರ್ಣಾ ಹೇಳುತ್ತಾಳೆ. "ಅವನು ಆ ರೀತಿ ಫೀಲ್ ಮಾಡಿಕೊಂಡಿದ್ದಾನೆ ಅಂದ್ರೆ ಯಾರೋ ಹುಡುಗಿ ಇರಬೇಕು" ಎಂಬ ಅನುಮಾನ ವ್ಯಕ್ತಪಡಿಸುತ್ತಾಳೆ. "ಹಾಗೆಲ್ಲ ಇರೋದಿಲ್ಲ" ಎನ್ನುತ್ತಾನೆ. ಆ ಸಮಯದಲ್ಲಿ ಆತನ ಪಾರ್ಟ್ ಟೈಮ್ ಕೆಲಸದ ಕುರಿತು ಹೇಳುತ್ತಾನೆ. ಆಮೇಲೆ ಪಾರ್ಥನ ಕೆಲಸದ ಕಥೆಯ ಸುಳಿವು ನೀಡುತ್ತಾನೆ.
ವಧು ಅನ್ವೇಷಣೆ
ಗೌತಮ್ ಎಲ್ಲರ ಫೋಟೋ ನೋಡುತ್ತಾನೆ. ಆತನಿಗೆ ಎಲ್ಲಾ ಹುಡುಗಿಯರ ಫೋಟೋ ಇಷ್ಟವಾಗುತ್ತದೆ. ಭೂಮಿಕಾಳ ಅಭಿಪ್ರಾಯ ಕೇಳುತ್ತಾನೆ. ನಾನು ಈ ಫೋಟೋ ಮತ್ತು ಜಾತಕವನ್ನು ಜ್ಯೋತಿಷಿಗಳಿಗೆ ಕಳುಹಿಸೋಣ. ಅವರು ಓಕೆ ಮಾಡಿದ ಫೋಟೋಗಳನ್ನು ಶಾರ್ಟ್ ಲಿಸ್ಟ್ ಮಾಡೋಣ. ಶಾಸ್ತ್ರಿಗಳು ಹೇಳಿದ ಹೆಣ್ಣು ಮಕ್ಕಳಲ್ಲಿ ಯಾರು ಬೆಸ್ಟ್ ಎಂದು ನೀವು ಸೆಲೆಕ್ಟ್ ಮಾಡಿ ಎಂದು ಸಹಾಯ ಕೇಳುತ್ತಾನೆ. ಭೂಮಿಕಾಳ ಮನಸ್ಸು ಅಲ್ಲೋಲ ಕಲ್ಲೋಲವಾಗಿರುತ್ತದೆ.
ಮನೆಗೆ ಅಪ್ಪ ಬಂದಾಗ ಅಪೇಕ್ಷಾ ಓಡೋಡಿ ಬರುತ್ತಾಳೆ. ಅಪ್ಪನ ರೂಂಗೆ ಬಂದು "ಪಾರ್ಥನಿಗೆ ಹುಡುಗಿ ಹುಡುಕುತ್ತಿದ್ದಾರೆ" ಎನ್ನುವ ಮಾಹಿತಿ ನೀಡುತ್ತಾಳೆ. ಆದರೆ, ಪಾರ್ಥನ ವಿಷಯದಲ್ಲಿ ಸದಾಶಿವ ಕಠೋರವಾಗಿರುತ್ತಾರೆ. "ಟಾಸ್ಕ್ ಕೊಟ್ಟಿದ್ದಾರೆ ಎಂದಾದರೆ ಫಲಿತಾಂಶಕ್ಕೆ ಕಾಯಬೇಕು" ಎಂದು ಹೇಳುತ್ತಾಳೆ. "ಅವನು ಸೋತರೆ ಅವನ ಮನೆಯಲ್ಲಿ ಹುಡುಕಿದ ಹುಡುಗಿಯನ್ನು ಅವನು ಮದುವೆಯಾಗಬೇಕು. ಅವನು ಚಾಲೆಂಜ್ನಲ್ಲಿ ಗೆದ್ದರೆ ಅವನ ಜತೆ ನಿನ್ನ ಮದುವೆ ಮಾಡ್ತಿನಿ. ಅವನು ಈ ಚಾಲೆಂಜ್ನಲ್ಲಿ ಗೆಲ್ಲಲು ಸಾಧ್ಯವಾಗೋದೇ ಇಲ್ಲ. ಅದು ನನಗೆ ಗೊತ್ತು" ಎಂದು ಸದಾಶಿವ ಹೇಳುತ್ತಾರೆ. "ಕಾಲ ಎಲ್ಲಾ ನಿರ್ಧಾರ ಮಾಡುತ್ತದೆ. ಅಲ್ಲಿವರೆಗೆ ಕಾಯಿ" ಎನ್ನುತ್ತಾರೆ.
ಗೌತಮ್ ಮತ್ತು ಶಕುಂತಲಾ ಎಲ್ಲರೂ ಹುಡುಗಿಯ ಫೋಟೋಗಳನ್ನು ನೋಡುತ್ತ ಇದ್ದಾರೆ. ಎಲ್ಲರೂ ಆ ಹುಡುಗಿಯ ಈ ಹುಡುಗಿಯ ಎಂದು ಫೋಟೋ ನೋಡ್ತಾ ಇದ್ದಾರೆ. ರೂಪವಂತೆ, ಗುಣವಂತೆ ಎಂದೆಲ್ಲ ಚರ್ಚೆ ಮಾಡುತ್ತಾರೆ. ಭೂಮಿಕಾ ಅಲ್ಲಿಂದ ಹೊರಕ್ಕೆ ಹೋಗುತ್ತಾಳೆ. ಅವಳ ಹಿಂದೆಯೇ ಶಕುಂತಲಾದೇವಿ ಬರುತ್ತಾರೆ. ಒಂದಿಷ್ಟು ಸೆಂಟಿಮೆಂಟ್ ಮಾತುಗಳನ್ನಾಡುತ್ತಾರೆ. ಈ ಮನೆಯ ಹಿರಿಸೊಸೆಯಾಗಿ ನಿನ್ನ ಕೊಡುಗೆ ತುಂಬಾ ಅಗತ್ಯ ಎಂದು ಹೇಳುತ್ತಾಳೆ. ಈ ಮೂಲಕ ಶಕುಂತಲಾ ನಾಟಕ ಮುಂದುವರೆಯುತ್ತದೆ.
ಆನಂದ್ಗೆ ಗೌತಮ್ ಹುಡುಗಿಯರ ಫೋಟೋಗಳನ್ನು ಕಳುಹಿಸಿದ್ದಾನೆ. ಅಪರ್ಣಾ ಮತ್ತು ಆನಂದ್ ಫೋಟೋಗಳನ್ನು ನೋಡುತ್ತಾರೆ. ಗೌತಮ್ ಕಾಲ್ ಮಾಡುತ್ತಾರೆ. "ಪಾರ್ಥನಿಗೆ ಯಾವ ಹುಡುಗಿ ಸೂಟ್ ಆಗುತ್ತಾಳೆ ನೋಡು" ಎನ್ನುತ್ತಾನೆ. ಅಪರ್ಣಾಳಿಗೆ ಕಾಲ್ ಕೊಡು ಎನ್ನುತ್ತಾನೆ. ಡುಮ್ಮ ಸರ್ ಹೆಣ್ಣಿನ ಧ್ವನಿಯಲ್ಲಿ ಮಾತನಾಡುತ್ತಾರೆ. ಕೊನೆಗೆ ಸಾರಿ ಕೇಳುತ್ತಾರೆ. ಎಲ್ಲಾ ಆದ ಬಳಿಕ ಪಾರ್ಥನಿಗೆ ಹುಡುಗಿ ಹುಡುಕುವ ಕೆಲಸಕ್ಕೆ ಸಹಾಯ ಕೇಳುತ್ತಾರೆ ಗೌತಮ್. "ನೀವು ಪಾರ್ಥನಿಗೆ ಕೇಳಿದ್ರೆ ಅವನೇ ಹೇಳಬಹುದು" ಎಂದು ಅಪರ್ಣಾ ಹೇಳುತ್ತಾಳೆ. "ಅವನಿಗೆ ಗೊತ್ತಾಗೋಲ್ಲ, ನಾವೇ ಹುಡುಕೋಣ" ಎಂದು ಗೌತಮ್ ಹೇಳಿದಾಗ ಓಕೆ ಎನ್ನುತ್ತಾಳೆ ಅಪರ್ಣಾ. ಇನ್ನೊಂದೆಡೆ ಜೈದೇವ್ಗೂ ಹುಡುಗಿ ಸೆಲೆಕ್ಟ್ ಮಾಡೋ ಕೆಲಸ ಆಗೋಲ್ಲ ಅನ್ತಾನೆ. ಅಶ್ವಿನಿಯೂ ಕೈ ಚೆಲ್ಲುವ ಸಾಧ್ಯತೆ ಇದೆ. ಕೊನೆಗೆ ಎಲ್ಲವೂ ಭೂಮಿಕಾಳ ತಲೆಗೆ ಬರುತ್ತಾ ಕಾದುನೋಡಬೇಕಿದೆ. ಸೀರಿಯಲ್ ನಾಳೆಗೆ ಮುಂದುವರೆದಿದೆ.
ಅಮೃತಧಾರೆ ಸೀರಿಯಲ್ ಪಾತ್ರವರ್ಗ
ಛಾಯಾ ಸಿಂಗ್: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ)
ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್: ಜೈದೇವ್
ಚಂದನ್: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ)
ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ)
ವಿಭಾಗ