ಅಪೇಕ್ಷಾ ಪಾರ್ಥ ಲವ್‌ಗೆ ಯಾರ ಬೆಂಬಲವೂ ಇಲ್ಲ; ಈ ಪ್ರೀತಿ ಯಾಕೆ ಬೇಡ ಎಂದು ಕಾರಣ ನೀಡಿದ ಸದಾಶಿವ; ಅಮೃತಧಾರೆ ಸೀರಿಯಲ್‌ ಸ್ಟೋರಿ
ಕನ್ನಡ ಸುದ್ದಿ  /  ಮನರಂಜನೆ  /  ಅಪೇಕ್ಷಾ ಪಾರ್ಥ ಲವ್‌ಗೆ ಯಾರ ಬೆಂಬಲವೂ ಇಲ್ಲ; ಈ ಪ್ರೀತಿ ಯಾಕೆ ಬೇಡ ಎಂದು ಕಾರಣ ನೀಡಿದ ಸದಾಶಿವ; ಅಮೃತಧಾರೆ ಸೀರಿಯಲ್‌ ಸ್ಟೋರಿ

ಅಪೇಕ್ಷಾ ಪಾರ್ಥ ಲವ್‌ಗೆ ಯಾರ ಬೆಂಬಲವೂ ಇಲ್ಲ; ಈ ಪ್ರೀತಿ ಯಾಕೆ ಬೇಡ ಎಂದು ಕಾರಣ ನೀಡಿದ ಸದಾಶಿವ; ಅಮೃತಧಾರೆ ಸೀರಿಯಲ್‌ ಸ್ಟೋರಿ

Amruthadhaare serial Yesterday Episode: ಝೀ ಕನ್ನಡ ವಾಹಿನಿಯ ಅಮೃತಧಾರೆಯ ನಿನ್ನೆಯ ಸಂಚಿಕೆಯಲ್ಲೂ ಪಾರ್ಥ ಮತ್ತು ಅಪೇಕ್ಷಾರ ಪ್ರೇಮದ ನೋವಿನ ಕಥೆ ಮುಂದುವರೆದಿದೆ. ಇವರಿಬ್ಬರಿಗೆ ಯಾರ ಬೆಂಬಲವೂ ದೊರಕುತ್ತಿಲ್ಲ. ಪ್ರೀತಿ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಚಿಂತೆಯಲ್ಲಿದ್ದಾರೆ.

ಅಪೇಕ್ಷಾ ಪಾರ್ಥ ಲವ್‌ಗೆ ಯಾರ ಬೆಂಬಲವೂ ಇಲ್ಲ; ಈ ಪ್ರೀತಿ ಯಾಕೆ ಬೇಡ ಎಂದು ಕಾರಣ ನೀಡಿದ ಸದಾಶಿವ
ಅಪೇಕ್ಷಾ ಪಾರ್ಥ ಲವ್‌ಗೆ ಯಾರ ಬೆಂಬಲವೂ ಇಲ್ಲ; ಈ ಪ್ರೀತಿ ಯಾಕೆ ಬೇಡ ಎಂದು ಕಾರಣ ನೀಡಿದ ಸದಾಶಿವ

Amruthadhaare serial Yesterday Episode: ಅಶ್ವಿನಿ ಮತ್ತು ಜೈದೇವ್‌ ಮಾತನಾಡುತ್ತಿದ್ದಾರೆ. "ಪಾರ್ಥನ ಮದುವೆ ವಿಚಾರ ಖುಷಿಯಾಗುತ್ತಿದೆ. ಆತನ ಮದುವೆ ಚೆನ್ನಾಗಿ ಆಗಲಿ" ಎಂದು ಜೈದೇವ್‌ ಹೇಳುತ್ತಾನೆ. "ಪಾರ್ಥ ಅಪೇಕ್ಷಾನ ಮದುವೆಯಾಗಿಲ್ಲ ಅನ್ನೋದು ಖುಷಿಯಾಗ್ತಿದೆ" ಎಂದು ಅಶ್ವಿನಿ ಹೇಳುತ್ತಾರೆ. ಒಟ್ಟಾರೆ ಇಬ್ಬರೂ ಪಾರ್ಥನ ಮದುವೆ ಕುರಿತು ತುಸು ಓವರ್‌ ಆಗಿಯೇ ರಿಯಾಕ್ಟ್‌ ಮಾಡುತ್ತಾರೆ. "ನನ್ನ ಬಟರ್‌ಫ್ಲೈಗೆ ಕಣ್ಣು ಹಾಕ್ತಾನ. ಅವನು ನನ್ನ ತಮ್ಮ ಅಲ್ಲ. ನನ್ನ ಶತ್ರು" ಎಂದು ಮನಸ್ಸಲ್ಲಿ ಜೈದೇವ್‌ ಅಂದುಕೊಳ್ಳುತ್ತಾನೆ.

ಅಪೇಕ್ಷಾ ಮನೆಗೆ ಬಂದಿದ್ದಾಳೆ. ಸದಾಶಿವ ಗಂಭೀರವಾಗಿ ಕುಳಿತಿದ್ದಾಳೆ. ಅಮ್ಮನಿಗೆ ವಿಷಯ ಏನೂ ಗೊತ್ತಿಲ್ಲ. ಅಪೇಕ್ಷಾ ದುಃಖದಲ್ಲಿದ್ದಾಳೆ. ಆಗ ಮಹಿಮಾ ಬರುತ್ತಾಳೆ. "ನಾನು ರೆಸ್ಟ್‌ ಮಾಡ್ತಿನಿ" ಎನ್ನುತ್ತಾಳೆ ಅಪೇಕ್ಷಾ.

ಸದಾಶಿವ ದಾರಿಯಲ್ಲಿ ನಡೆಯುತ್ತ ಹೋಗುವಾಗ "ಇವರು ಮಾಸ್ಟ್ರು ಅಲ್ಲ ಪಕ್ಕಾ ಕ್ರಿಮಿನಲ್‌" ಎಂದು ಸುತ್ತಲಿನವರು ಮಾತನಾಡುತ್ತಾರೆ. "ಶ್ರೀಮಂತರ ಮನೆ ಮಕ್ಕಳಿಗೆ ಹೇಗೆ ಗಾಳ ಹಾಕಬೇಕು" ಎಂದು ಇನ್ನೂ ಕೆಲವರು ಮಾತನಾಡುತ್ತಾರೆ. ಹೀಗೆ ಎಲ್ಲರೂ ಮಾತನಾಡಬಹುದು ಎಂದು ಸದಾಶಿವರಿಗೆ ಕನಸು ಬೀಳುತ್ತದೆ. ಈ ರೀತಿ ಆಗಬಾರದು ಎಂದು ಸದಾಶಿವ ಭೂಮಿಕಾಳಿಗೆ ಕಾಲ್‌ ಮಾಡಿ "ನಿನ್ನ ಹತ್ರ ಸ್ವಲ್ಪ ಮಾಡಬೇಕು. ಸ್ವಲ್ಪ ಸಿಗು" ಎನ್ನುತ್ತಾರೆ. "ಸರಿ" ಎನ್ನುತ್ತಾಳೆ ಭೂಮಿಕಾ. "ನಮ್ಮನೆ ಪಕ್ಕದ ಪಾರ್ಕ್‌ಗೆ ಬಾ" ಎನ್ನುತ್ತಾನೆ.

ಈ ಮದುವೆ ನಡೆಯಬಾರದು ಎಂದ ಸದಾಶಿವ

ಸದಾಶಿವ ಮತ್ತು ಭೂಮಿಕಾ ಪಾರ್ಕ್‌ನಲ್ಲಿ ಮಾತನಾಡುತ್ತಾರೆ. "ಅಪೇಕ್ಷಾ ನನ್ನ ಕೊನೆ ಮಗಳು, ಚಿಕ್ಕವಳು ಎಂದು ತುಂಬಾ ಮುದ್ದಾಗಿ ಬೆಳೆಸಿಬಿಟ್ಟೆ. ನನ್ನ ಕಣ್ಣಲ್ಲಿ ಅವಳು ಚಿಕ್ಕ ಹುಡುಗಿಯಾಗಿದ್ದಳು. ಅವಳು ಒಂದು ತಪ್ಪು ಮಾಡಿದ್ದಾಳೆ. ಅವಳು ಪಾರ್ಥನ ಲವ್‌ ಮಾಡಿದ್ದಾಳೆ. ಅವಳು ಮಾಡಿದ ತಪ್ಪಿನಿಂದ ದೊಡ್ಡ ಪರಿಣಾಮವಾಗಬಹುದು. ಇವತ್ತು ಸಮಾಜದಲ್ಲಿ ಏನೂ ಮಾಡಿದರೂ ಮರೆಯುತ್ತಾರೆ. ಆದರೆ, ಕೆಲವು ವಿಚಾರಗಳನ್ನು ಸಮಾಜ ಮರೆಯೋದಿಲ್ಲ. ಅದನ್ನು ಯಾರೂ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ" ಎಂದು ಸದಾಶಿವ ಹೇಳುತ್ತಾರೆ.

"ಒಂದು ಮನೆಯ ಸೊಸೆಯಾಗಿ ಹೋಗಬೇಕಾದವಳು ಆ ಮದುವೆ ಮುರಿದು ಬಿದ್ದಮೇಲೆ ಮತ್ತೆ ಆ ಮನೆಗೆ ಹೇಗೆ ಸೊಸೆಯಾಗಿ ಹೋಗುತ್ತಾಳೆ. ಆಕೆ ಪಾರ್ಥನ ಲವ್‌ ಮಾಡ್ತಾಳೆ. ಇದು ಆದ್ರೆ ತಲೆ ಎತ್ತಿ ಹೋಗುವುದು ಹೇಗೆ. ಎಲ್ಲರ ನೆಮ್ಮದಿ ಹಾಳಾಗಿ ಹೋಗುತ್ತದೆ" ಎಂದು ಸದಾಶಿವ ಹೇಳುತ್ತಾಳೆ.

"ಈ ವಿಷಯ ನನಗೆ ಗೊತ್ತಿತ್ತು. ಪಾರ್ಥ ತುಂಬಾ ಒಳ್ಳೆಯವರು" ಎಂದು ಭೂಮಿಕಾ ಹೇಳುತ್ತಾಳೆ. "ಅವನು ಚಿನ್ನದಂತಹ ಹುಡುಗ. ಆದರೆ, ಈ ಮದುವೆಯಾದ್ರೆ ಎರಡು ಮನೆಯಲ್ಲಿ ಏನು ನಡೆಯುತ್ತದೆ ಎಂದು ನನಗೂ ನಿನಗೂ ಗೊತ್ತು" ಎಂದು ಸದಾಶಿವ ಹೇಳುತ್ತಾರೆ. "ಜನ ಏನೇ ಮಾತನಾಡಬಹುದು. ನಮ್ಮ ಅತ್ತೆ ಮನೆಯವರು ಏನು ಅಂದುಕೊಳ್ಳಬಹುದು" ಎಂದು ಹೇಳುತ್ತಾರೆ. "ಪ್ರತಿದಿನ ಅಪೇಕ್ಷಾ ಮುರಿದುಬಿದ್ದ ಮದುವೆಯ ಜೈದೇವ್‌ನ ಮುಖ ನೋಡಬೇಕು. ಪಾರ್ಥನಿಗೂ ಇದು ಮುಜುಗರ ತರುವ ವಿಷಯ. ಅಳಿಯಂದಿರುವ ಹೇಳುವಂತೆ ಸಂಬಂಧ ಎಲ್ಲಕ್ಕಿಂತ ಮುಖ್ಯ. ಎಲ್ಲರೂ ಒಟ್ಟಿಗೆ ಚೆನ್ನಾಗಿರಬೇಕು ಎನ್ನುವುದು ಅವರ ಆಸೆ" ಎಂದು ಹೇಳುತ್ತಾರೆ. "ನಮ್ಮಿಂದ ಸಂಬಂಧ ಹಾಳಾಗಬಾರದು. ಇಬ್ಬರ ಪ್ರೀತಿ ಉಳಿಸಲು ಹೋಗಿ ಎಲ್ಲರ ನೆಮ್ಮದಿ ಹೋಗುತ್ತದೆ. ಇಂತಹ ಪ್ರೀತಿ ಯಾಕೆ ಬೇಕು. ಇದರಿಂದ ಸಾಧಿಸುವುದು ಏನು?" ಎಂದು ಸದಾಶಿವ ಹೇಳುತ್ತಾರೆ.

"ಹೌದಪ್ಪ ನೀವು ಹೇಳುವುದು ಸರಿ. ಏನಾದರೂ ಪಡೆಯಬೇಕು ಅಂದ್ರೆ ಏನಾದರೂ ಕಳೆದುಕೊಳ್ಳಬೇಕು. ಈಗ ತಪ್ಪು ಅನಿಸಬಹುದು. ಆದರೆ, ಭವಿಷ್ಯದ ಕುರಿತು ಯೋಚಿಸಿದರೆ ಇದೇ ಸರಿ" ಎಂದು ಭೂಮಿಕಾ ಹೇಳುತ್ತಾಳೆ.

"ಪಾರ್ಥ ಮತ್ತು ಅಪೇಕ್ಷಾ ಒಂದಾಗಬಾರದು. ಇದನ್ನು ಹೇಳಲು ಕರೆಸಿದೆ. ಇದರಲ್ಲಿ ನನ್ನ ಜವಾಬ್ದಾರಿಯಷ್ಟೇ, ನಿನ್ನ ಜವಾಬ್ದಾರಿಯೂ ಇದೆ" ಎಂದು ಸದಾಶಿವ ಹೇಳುತ್ತಾರೆ. "ನೀವು ಏನೂ ಯೋಚನೆ ಮಾಡಬೇಡಿ. ನಾನು ನೋಡಿಕೊಳ್ಳುವೆ" ಎಂದು ಬೇಸರದಲ್ಲಿ ಭೂಮಿಕಾ ಮಾತು ನೀಡುತ್ತಾಳೆ. ಸದಾಶಿವ ಹೋಗುತ್ತಾರೆ. ಭೂಮಿಕಾ ಪಾರ್ಕ್‌ನಲ್ಲಿ ಇದ್ದಾರೆ.

ಹೇಗಾದರೂ ಪ್ರೀತಿನ ಉಳಿಸಿಕೊಳ್ಳಲೇಬೇಕು ಎಂದು ಅಪೇಕ್ಷಾ ಯೋಚಿಸುತ್ತಾಳೆ. ಅಕ್ಕನಿಗೆ ಕಾಲ್‌ ಮಾಡುತ್ತಾಳೆ. ಇನ್ನೊಂದು ಸಾರಿ ಮಾತನಾಡಬೇಕು ಎನ್ನುತ್ತಾಳೆ. ಪಾರ್ಕ್‌ನಲ್ಲಿ ಭೇಟಿಯಾಗುತ್ತಾರೆ. ಅಪೇಕ್ಷಾಳ ಮುಂದೆ ಭೂಮಿಕಾ ಕಠೋರವಾಗಿ ಮಾತನಾಡುತ್ತಾಳೆ. "ಪಾರ್ಥರನ್ನ ಬಿಟ್ಟು ಬದುಕುವ ಶಕ್ತಿ ನನಗಿಲ್ಲ. ಪಾರ್ಥ ಇಲ್ಲದೆ ನನ್ನ ಲೈಫ್‌ ಕಂಪ್ಲಿಟ್‌ ಆಗೋದಿಲ್ಲ" ಎನ್ನುತ್ತಾಳೆ.

"ನನಗೆ ನಿಮ್ಮಿಬ್ಬರ ಪ್ರೀತಿ ವಿಷಯ ಗೊತ್ತಿತ್ತು. ಜೈದೇವ್‌ಗಾಗಿ ಮದುವೆ ತ್ಯಾಗ ಮಾಡಿದ ವಿಷಯನೂ ಗೊತ್ತಿತ್ತು. ನಾನಲ್ಲ. ನಿನಗೆ ಯಾರೂ ಸಪೋರ್ಟ್‌ ಮಾಡೋದಿಲ್ಲ. ನೀನು ಪ್ರೀತಿ ಮಾಡಿದ್ದು ತಪ್ಪಲ್ಲ. ನಿಮ್ಮ ಸಂಬಂಧವನ್ನು ಯಾರೂ ಒಪ್ಪೋದಿಲ್ಲ. ಬರೀ ನಿಮ್ಮ ಬಗ್ಗೆ ಯೋಚನೆ ಮಾಡಬೇಡಿ. ಇತರರ ಬಗ್ಗೆನೂ ಯೋಚನೆ ಮಾಡಿ. ಇನ್ಮುಂದೆ ಈ ವಿಚಾರದ ಕುರಿತು ಮಾತನಾಡಬೇಡ" ಎಂದು ಭೂಮಿಕಾ ಅಲ್ಲಿಂದ ಹೋಗುತ್ತಾಳೆ.

ಇನ್ನೊಂದೆಡೆ ಪಾರ್ಥ ಭೂಮಿಕಾಳನ್ನು ಭೇಟಿಯಾಗುತ್ತಾನೆ. "ಅತ್ತಿಗೆ ನೀವು ಮಾಡಿದ್ದು ಸರಿನಾ"ಎಂದೆಲ್ಲ ಭಾವುಕನಾಗಿ ಮಾತನಾಡುತ್ತಾನೆ. "ನನಗೆ ಹೆಲ್ಪ್‌ ಮಾಡ್ತಿರಿ ಅಲ್ವ ಅತ್ತಿಗೆ. ನನ್ನ ಕೈ ಬಿಡೋದಿಲ್ಲ ಅಲ್ವ ಅತ್ತಿಗೆ" ಎಂದು ಕೇಳುತ್ತಾನೆ. "ಐ ಆಮ್‌ ಸಾರಿ ಪಾರ್ಥ. ನನಗೆ ಹೇಳಲು ಸಾಧ್ಯವಿಲ್ಲ. ಅಪೇಕ್ಷಾನ ಮರೆತುಬಿಡಿ" ಎನ್ನುತ್ತಾಳೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)