ಪುಷ್ಪಾ ನಿರ್ದೇಶಕ ಸುಕುಮಾರ್ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದ ಸಿನಿಮಾಗಳಿವು; ಆದರೆ ಸುಕ್ಕು ಅದೃಷ್ಟ ಬದಲಿಸಿದ್ದು ಮಾತ್ರ ಈ ಚಿತ್ರ!
ಕನ್ನಡ ಸುದ್ದಿ  /  ಮನರಂಜನೆ  /  ಪುಷ್ಪಾ ನಿರ್ದೇಶಕ ಸುಕುಮಾರ್ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದ ಸಿನಿಮಾಗಳಿವು; ಆದರೆ ಸುಕ್ಕು ಅದೃಷ್ಟ ಬದಲಿಸಿದ್ದು ಮಾತ್ರ ಈ ಚಿತ್ರ!

ಪುಷ್ಪಾ ನಿರ್ದೇಶಕ ಸುಕುಮಾರ್ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದ ಸಿನಿಮಾಗಳಿವು; ಆದರೆ ಸುಕ್ಕು ಅದೃಷ್ಟ ಬದಲಿಸಿದ್ದು ಮಾತ್ರ ಈ ಚಿತ್ರ!

ಪುಷ್ಪಾ ನಿರ್ದೇಶಕ ಪೂರ್ಣ ಪ್ರಮಾಣದ ಡೈರೆಕ್ಟರ್ ಆಗುವ ಮೊದಲು 4 ಸಿನಿಮಾಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು. ಈ ಎಲ್ಲಾ ಸಿನಿಮಾಗಳು ಹಾಸ್ಯ ಪ್ರಧಾನವಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದ್ದವು.

ಪುಷ್ಪಾ ನಿರ್ದೇಶಕ ಸುಕುಮಾರ್ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದ ಸಿನಿಮಾಗಳಿವು
ಪುಷ್ಪಾ ನಿರ್ದೇಶಕ ಸುಕುಮಾರ್ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದ ಸಿನಿಮಾಗಳಿವು

ಪುಷ್ಪ-2 ಚಿತ್ರ ನಟ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಅವರ ವೃತ್ತಿಜೀವನದ ಅತಿ ದೊಡ್ಡ ಹಿಟ್ ಆಗಿದೆ. ಈ ಆ್ಯಕ್ಷನ್ ಸಿನಿಮಾವು ವಿಶ್ವದಾದ್ಯಂತ 1800 ಕೋಟಿ ಗಳಿಕೆ ಮಾಡಿದೆ. ಇದು ಭಾರತೀಯ ಸಿನಿಮಾ ಇತಿಹಾಸದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮೂರನೇ ಚಿತ್ರ ಎನ್ನಿಸಿಕೊಂಡು ಇತಿಹಾಸ ನಿರ್ಮಿಸಿತು.

ಸುಕುಮಾರ್ ತಾನ್ನೊಬ್ಬ ಯಶಸ್ವಿ ನಿರ್ದೇಶಕ ಎಂದು ಪ್ರೂವ್ ಮಾಡಿಕೊಳ್ಳುವ ಮೊದಲು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಆರಂಭಿಸಿದ್ದರು. ನಿರ್ದೇಶಕರಾಗಿ ತಮ್ಮ ವೃತ್ತಿಜೀವನದ ಆರಂಭದಿಂದಲೂ, ಅವರು ಪರಸ್ಪರ ಯಾವುದೇ ಸಂಬಂಧವಿಲ್ಲದೆ ವೈವಿಧ್ಯಮಯ ಚಲನಚಿತ್ರಗಳನ್ನು ನಿರ್ಮಿಸುವ ಮೂಲಕ ಸೃಜನಶೀಲ ಪ್ರತಿಭೆಯಾಗಿ ಖ್ಯಾತಿಯನ್ನು ಗಳಿಸಿದ್ದಾರೆ. ಲವ್‌, ಆಕ್ಷನ್, ಫ್ಯಾಮಿಲಿ, ಎಮೋಷನಲ್‌ ಹೀಗೆ ಎಲ್ಲಾ ಪ್ರಕಾರಗಳಲ್ಲಿಯೂ ಅವರು ಸಿನಿಮಾ ಮಾಡಿದ್ದಾರೆ. ಆದರೆ ಸುಕುಮಾರ್ ಸಹಾಯಕ ನಿರ್ದೇಶಕರಾಗಿ ಹಾಸ್ಯ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಎಂಬುದು ಗಮನಾರ್ಹ.

ಚಲನಚಿತ್ರಗಳಲ್ಲಿನ ಆಸಕ್ತಿಯಿಂದಾಗಿ ಉಪನ್ಯಾಸಕ ಹುದ್ದೆಗೆ ರಾಜೀನಾಮೆ ನೀಡಿದ ಸುಕುಮಾರ್, ಬರಹಗಾರ ಅಕುಲಾ ಶಿವ ಅವರ ಮೂಲಕ ಸಹಾಯಕ ನಿರ್ದೇಶಕರಾಗಿ ಟಾಲಿವುಡ್‌ಗೆ ಪ್ರವೇಶ ಪಡೆದರು. ಅವರು ಸಂಪಾದಕ ಮೋಹನ್ ನಿರ್ಮಿಸಿದ ಹನುಮಾನ್ ಜಂಕ್ಷನ್, ಕ್ಷೇಮಂಗಾ ವೆಳ್ಳಿ ಲಾಭಂಗಾ ರಂಡಿ, ಮನಸ್ಸಿಚ್ಚಿ ಚೂಡು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಇವು ಕಾಮಿಡಿ ಸಿನಿಮಾಗಳಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಗಳಿಸಿದ್ದವು.

ಒಂದೂವರೆ ಸಾವಿರ ಸಂಬಳ

ಸುಕುಮಾರ್ ಸಹಾಯಕ ನಿರ್ದೇಶಕರಾಗಿ ತಿಂಗಳಿಗೆ ಒಂದೂವರೆ ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ವಿ.ವಿ. ವಿನಾಯಕ್ ಅವರ ಕಿರಿಯ ಸಹೋದರ ವಿಜಯ್ ‘ಹನುಮಾನ್ ಜಂಕ್ಷನ್‘ ಚಿತ್ರಕ್ಕೆ ಕ್ಯಾಮೆರಾ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದರು. ವಿಜಯ್ ಮೂಲಕ ಸುಕುಮಾರ್ ವಿನಾಯಕ್ ಅವರಿಗೆ ಪರಿಚಯವಾದರು.

ಆ ಸಮಯದಲ್ಲಿ, ವಿನಾಯಕ್ ದಿಲ್ ಚಿತ್ರ ನಿರ್ಮಿಸಲು ಪ್ರಯತ್ನಿಸುತ್ತಿದ್ದರು. ಸುಕುಮಾರ್ ವಿನಾಯಕ್ ಅವರೊಂದಿಗೆ ದಿಲ್ ಚಿತ್ರಕ್ಕೆ ಅಸಿಸ್ಟೆಂಟ್ ಆಗಿ ಸೇರಿಕೊಂಡರು. ಆ ನಿರ್ಧಾರವು ಸುಕುಮಾರ್ ಅವರ ಚಲನಚಿತ್ರ ವೃತ್ತಿಜೀವನವನ್ನು ಬದಲಿಸಿತ್ತು.

ಸುಕುಮಾರ್ ಅದೃಷ್ಟ ಬದಲಿಸಿದ್ದ ಚಿತ್ರವಿದು

ಚಿತ್ರ ನಿರ್ಮಾಪಕ ದಿಲ್ ರಾಜು ಅವರಿಗೆ ಸುಕುಮಾರ್ ಆರ್ಯ ಚಿತ್ರದ ಕಥೆ ಹೇಳುತ್ತಾರೆ. ಕಥೆ ಇಷ್ಟವಾದ ದಿಲ್ ರಾಜು ಸುಕುಮಾರ್ ಅವರನ್ನು ನಿರ್ದೇಶಕನನ್ನಾಗಿ ಪರಚಯಿಸುತ್ತಾರೆ. ಈ ಜೋಡಿ ಅಲ್ಲು ಅರ್ಜುನ್ ನಟನೆಯ ಸಿನಿಮಾ ತೆರೆ ಮೇಲೆ ತರುತ್ತದೆ.

ಆರ್ಯ ಸಿನಿಮಾ ಸೂಪರ್ ಹಿಟ್ ಆದ ನಂತರ ಸುಕುಮಾರ್ ಟಾಲಿವುಡ್‌ನಲ್ಲಿ ಮನೆ ಮಾತಾಗುತ್ತಾರೆ. ಆರ್ಯ ಚಿತ್ರಕ್ಕೆ ಮೊದಲು ನಚಿಕೇತ ಎಂದು ಹೆಸರು ಇಡಲಾಗಿತ್ತು. ನಂತರ ಆ ಹೆಸರನ್ನು ಜನರನ್ನು ಸೆಳೆಯುವುದಿಲ್ಲ ಎನ್ನುವ ಕಾರಣಕ್ಕೆ ಆರ್ಯ ಎಂದು ಬದಲಿಸಲಾಗುತ್ತದೆ. ಈ ಸಿನಿಮಾ ಸುಕುಮಾರ್ ಅದೃಷ್ಟವನ್ನೇ ಬದಲಿಸುತ್ತದೆ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.