ಕನ್ನಡ ಸುದ್ದಿ  /  Entertainment  /  Upendra's Daughter Will Act In Yuva Rajkumar's Movie

Aishwarya Upendra Movie: ಯುವ ರಾಜ್‌ಕುಮಾರ್‌ - ಸಂತೋಷ್‌ ಆನಂದ್‌ ರಾಮ್‌ ಚಿತ್ರದಲ್ಲಿ ಉಪೇಂದ್ರ ಪುತ್ರಿ ಐಶ್ವರ್ಯಾ; ನಾಯಕಿ ಪಾತ್ರವಾ?

ಹೊಂಬಾಳೆ ಫಿಲಂಸ್‌ ನಿರ್ಮಾಣ ಮಾಡಲಿರುವ ದೊಡ್ಡ ಬಜೆಟ್‌ನ ಸಿನಿಮಾಕ್ಕೆ ಸ್ಟಾರ್‌ ನಟನ ಮಗಳ ಎಂಟ್ರಿಯಾಗುತ್ತಿದೆ. ಇನ್ನೇನು ಈ ವಿಚಾರ ಅಧಿಕೃತವಾಗಿ ಬಿಡುಗಡೆ ಆಗಲಿದೆ.

ಯುವ ರಾಜ್‌ಕುಮಾರ್‌ - ಸಂತೋಷ್‌ ಆನಂದ್‌ ರಾಮ್‌ ಚಿತ್ರದಲ್ಲಿ ಉಪೇಂದ್ರ ಪುತ್ರಿ ಐಶ್ವರ್ಯಾ; ನಾಯಕಿ ಪಾತ್ರವಾ?
ಯುವ ರಾಜ್‌ಕುಮಾರ್‌ - ಸಂತೋಷ್‌ ಆನಂದ್‌ ರಾಮ್‌ ಚಿತ್ರದಲ್ಲಿ ಉಪೇಂದ್ರ ಪುತ್ರಿ ಐಶ್ವರ್ಯಾ; ನಾಯಕಿ ಪಾತ್ರವಾ?

Aishwarya Upendra Movie: ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ಕುಟುಂಬದ ಹಿನ್ನೆಲೆಯಿಂದ ಬಂದ ಮಕ್ಕಳು ಚಿತ್ರರಂಗಕ್ಕೆ ಬರುತ್ತಿರುವುದು ಹೊಸದೇನಲ್ಲ. ಈಗಾಗಲೇ ಸಾಕಷ್ಟು ಮಂದಿ ಬಂದು ನೆಲೆ ಕಂಡುಕೊಂಡಿದ್ದಾರೆ. ಇನ್ನು ಕೆಲವರು ಆ ಪ್ರಯತ್ನದಲ್ಲಿದ್ದಾರೆ. ಫ್ರೆಶ್‌ ಉದಾಹರಣೆ ಹೇಳಬೇಕೆಂದರೆ, ನೆನಪಿರಲಿ ಪ್ರೇಮ್‌ ಪುತ್ರಿ ಅಮೃತಾ ಸಹ ಧನಂಜಯ್‌ ನಿರ್ಮಾಣದ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶ ಪಡೆದಿದ್ದಾರೆ. ಇದೀಗ ಇನ್ನೋರ್ವ ನಾಯಕ ನಟನ ಮಗಳು ಚಂದನವನಕ್ಕೆ ಆಗಮಿಸುತ್ತಿದ್ದಾರೆ. ಹಾಗಂತ ಇದು ಈ ಪುಟಾಣಿಯ ಮೊದಲ ಸಿನಿಮಾ ಏನಲ್ಲ..

ಶರಣ್‌ ಅಭಿನಯದ ಗುರು ಶಿಷ್ಯರು ಸಿನಿಮಾ ಇತ್ತೀಚೆಗಷ್ಟೇ ತೆರೆಗೆ ಬಂದಿತ್ತು. ಈ ಸಿನಿಮಾದಲ್ಲಿ ಸ್ಯಾಂಡಲ್‌ವುಡ್‌ನ ನಟರ ಮಕ್ಕಳೇ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಇದೀಗ ಹೊಂಬಾಳೆ ಫಿಲಂಸ್‌ ನಿರ್ಮಾಣ ಮಾಡಲಿರುವ ದೊಡ್ಡ ಬಜೆಟ್‌ನ ಸಿನಿಮಾಕ್ಕೂ ಸ್ಟಾರ್‌ ನಟನ ಮಗಳ ಎಂಟ್ರಿಯಾಗುತ್ತಿದೆ. ಇನ್ನೇನು ಈ ವಿಚಾರ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಹಾಗಾದರೆ, ಯಾವುದಾ ಸಿನಿಮಾ? ಯಾವ ನಟನ ಮಗಳು? ಗೊಂದಲವಿದೆಯೇ? ಇಲ್ಲಿದೆ ನೋಡಿ ಉತ್ತರ.

ಉಪೇಂದ್ರ ಪುತ್ರಿ ನಟನೆ…

ರಿಯಲ್‌ ಸ್ಟಾರ್‌ ಉಪೇಂದ್ರ ಪುತ್ರಿ ಐಶ್ವರ್ಯಾ ಇದೀಗ ಸಿನಿಮಾರಂಗಕ್ಕೆ ಬಹು ವರ್ಷಗಳ ಬಳಿಕ ಮತ್ತೆ ಎಂಟ್ರಿಕೊಡುವ ಸಿದ್ಧತೆಯಲ್ಲಿದ್ದಾರೆ. ಈ ಹಿಂದೆ ದೇವಕಿ ಸಿನಿಮಾದಲ್ಲಿ ನಟಿಸಿದ್ದ ಐಶ್ವರ್ಯಾ, ಇದೀಗ ಡಾ. ರಾಜ್‌ ಕುಟುಂಬದ ಕುಡಿ ಯುವ ರಾಜ್‌ಕುಮಾರ್‌ ನಾಯಕನಾಗಿ ನಟಿಸಲಿರುವ ಮತ್ತು ಸಂತೋಷ್‌ ಆನಂದ್‌ ರಾಮ್‌ ನಿರ್ದೇಶನದ ಸಿನಿಮಾದಲ್ಲಿ ಐಶ್ವರ್ಯಾ ನಟಿಸಲಿದ್ದಾರಂತೆ. ಹೀಗೊಂದು ಸುದ್ದಿ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದ್ದಂತೆ, ಯುವ ಅವರಿಗೆ ನಾಯಕಿಯಾಗಿ ನಟಿಸಲಿದ್ದಾರಾ? ಎಂಬ ಪ್ರಶ್ನೆ ಮೂಡಿದೆ.

ಆದರೆ, ಸದ್ಯದ ಮಾಹಿತಿ ಪ್ರಕಾರ ಚಿತ್ರದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಐಶ್ವರ್ಯಾ ಬಣ್ಣ ಹಚ್ಚಲಿದ್ದಾರೆ. ನಾಯಕಿ ಬೇರೆಯವರಿರಲಿದ್ದಾರೆ. ಈ ಮಾಸ್‌ ಸಿನಿಮಾವನ್ನು ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್‌ ನಿರ್ಮಾಣ ಮಾಡುತ್ತಿದೆ. ಇನ್ನೇನು ಶೀಘ್ರದಲ್ಲಿ ಈ ವಿಚಾರವನ್ನು ಅಧಿಕೃತಗೊಳಿಸಲಿದೆ.

ಎಲ್ಲ ಅಂದುಕೊಂಡಂತೆ ಆಗಿದ್ದರೆ, ಈ ಮೊದಲೇ ಘೋಷಣೆ ಆದಂತೆ ಸಂತೋಷ್‌ ಆನಂದ್‌ರಾಮ್‌ ಮತ್ತು ಪುನೀತ್‌ ಕಾಂಬಿನೇಷನ್‌ ಸಿನಿಮಾ ಇಷ್ಟೊತ್ತಿಗಾಗಲೇ ಸಿದ್ಧವಾಗಿರುತ್ತಿತ್ತು. ಅಪ್ಪು ಅಕಾಲಿಕ ಸಾವಿನಿಂದ ಪ್ರಾಜೆಕ್ಟ್‌ಗಳಿಗೆಲ್ಲ ಪೂರ್ಣವಿರಾಮ ಬಿದ್ದಿತು. ಇದೀಗ ಪುನೀತ್‌ಗೆ ಮಾಡಬೇಕಿದ್ದ ಕಥೆಯನ್ನೇ ಸಂತೋಷ್‌ ಆನಂದ್‌ ರಾಮ್‌ ಯುವರಾಜ್‌ಕುಮಾರ್‌ಗೆ ಮಾಡುತ್ತಿರಬಹುದೇ? ಹೀಗೊಂದು ಅನುಮಾನ ಇದೆಯಾದರೂ, ಆ ಬಗ್ಗೆ ಸ್ಪಷ್ಟತೆ ಇಲ್ಲ.

IPL_Entry_Point