ಕನ್ನಡ ಸುದ್ದಿ  /  Entertainment  /  Vignesh Shivan: Vignesh Sivan Shares Rare Photo With Cute Kids And Maddi; The Photo Went Viral

Vignesh shivan: ಮುದ್ದಾದ ಮಕ್ಕಳು ಹಾಗೂ ಮಡದಿಯೊಂದಿಗಿನ ಅಪರೂಪದ ಫೋಟೊ ಹಂಚಿಕೊಂಡ ವಿಘ್ನೇಶ್‌ ಶಿವನ್‌; ಫೋಟೊ ವೈರಲ್‌

Vignesh shivan: ಇಂದು (ಮಾರ್ಚ್‌ 20) ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ ಶಿವನ್‌. ಇದರಲ್ಲಿ ನಯನತಾರಾ, ಶಿವನ್‌ ಹಾಗೂ ಕಂದಮ್ಮಗಳ ಕೈ ಹಿಡಿದುಕೊಂಡಿರುವ ಚಿತ್ರಣವಿದೆ. ಚಿತ್ರದಲ್ಲಿ ನಯನತಾರಾ ಹಾಗೂ ಶಿವನ್‌ ಒಬ್ಬರಿಗೊಬ್ಬರು ಕೈ ಹಿಡಿದುಕೊಂಡಿದ್ದು, ಅವರ ಕೈಯೊಳಗೆ ಮಕ್ಕಳ ಕೈಗಳಿವೆ.

ನಯನತಾರಾ ಹಾಗೂ ವಿಘ್ನೇಶ್‌ ದಂಪತಿ
ನಯನತಾರಾ ಹಾಗೂ ವಿಘ್ನೇಶ್‌ ದಂಪತಿ

ಕಾಲಿವುಡ್‌ನ ಖ್ಯಾತ ನಿರ್ದೇಶಕ ವಿಘ್ನೇಶ್‌ ಶಿವನ್‌ ತಮ್ಮ ಪತ್ನಿ ನಯನತಾರಾ ಹಾಗೂ ಮಕ್ಕಳಾದ ಉಯಿರ್‌, ಉಲಗಂ ಜೊತೆ ಇರುವ ಅಪರೂಪದ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳನ್ನು ಮೆಚ್ಚಿಸಿದ್ದಾರೆ.

ಇಂದು (ಮಾರ್ಚ್‌ 20) ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ ಶಿವನ್‌. ಇದರಲ್ಲಿ ನಯನತಾರಾ, ಶಿವನ್‌ ಕಂದಮ್ಮಗಳ ಕೈ ಹಿಡಿದುಕೊಂಡಿರುವ ಚಿತ್ರಣವಿದೆ.

ಚಿತ್ರದಲ್ಲಿ ನಯನತಾರಾ ಹಾಗೂ ಶಿವನ್‌ ಒಬ್ಬರಿಗೊಬ್ಬರು ಕೈ ಹಿಡಿದುಕೊಂಡಿದ್ದು, ಅವರ ಕೈಯೊಳಗೆ ಮಕ್ಕಳ ಕೈಗಳಿವೆ. ಕೆಂಪು ಬಟ್ಟೆ ಧರಿಸಿರುವ ಪುಟಾಣಿಗಳು ಹಾಸಿಗೆಯಲ್ಲಿ ಮಲಗಿರುವುದನ್ನು ಕಾಣಬಹುದು. ಚಿತ್ರದಲ್ಲಿ ನಯನತಾರಾ ಮಕ್ಕಳನ್ನೇ ದಿಟ್ಟಿಸಿ ನೋಡುತ್ತಿದ್ದಾರೆ. ಪೋಸ್ಟ್‌ನಲ್ಲಿ ಲೊಕೇಷನ್‌ ಚೆನ್ನೈ ಎಂದು ಟ್ಯಾಗ್‌ ಮಾಡಲಾಗಿದೆ.

ʼಕೆಂಪು ಹೃದಯದ ಸಂಜ್ಞೆಯೊಂದಿಗೆ ʼನಮ್ಮ ಪ್ರೀತಿಪಾತ್ರರ ಜೊತೆ ನಡೆಯುವ ಪ್ರತಿಯೊಂದು ವಿಷಯವೂ ನಮಗೆ ಸಂತೋಷ ನೀಡುತ್ತದೆ. ಸಂತೋಷವೆಂದರೆ ಪ್ರೀತಿʼ ಎಂದು ಚಿತ್ರ ಶೀರ್ಷಿಕೆ ಬರೆದುಕೊಂಡಿದ್ದಾರೆ. ಇದರೊಂದಿಗೆ ಬ್ಲೆಸ್ಡ್‌ ಎಂದು ಹ್ಯಾಷ್‌ಟ್ಯಾಗ್‌ ಹಾಕಿಕೊಂಡಿದ್ದಾರೆ. ಈ ಚಿತ್ರವನ್ನು ಮೆಚ್ಚಿಕೊಂಡಿರುವ ಅಭಿಮಾನಿಗಳು ಕಮೆಂಟ್‌ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ವಿಘ್ನೇಶ್‌ ಆಗಾಗ ತಮ್ಮ ಕುಟುಂಬ ಸದಸ್ಯರ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡುತ್ತಿರುತ್ತಾರೆ. ಇತ್ತೀಚೆಗೆ ನಮ್ಮ ಗಂಡು ಮಕ್ಕಳಿಗೆ ಮುತ್ತಿಡುತ್ತಿರುವ ಫೋಟೊವೊಂದನ್ನು ಹಂಚಿಕೊಂಡಿದ್ದರು. ಇದಕ್ಕೂ ಅಭಿಮಾನಿಗಳ ಮೆಚ್ಚುಗೆಯ ಮಹಪೂರವೇ ಹರಿದಿತ್ತು.

ಒಂದಿಷ್ಟು ವರ್ಷಗಳ ಕಾಲ ಸಹಜೀವನ ನಡೆಸಿದ್ದ ಈ ದಂಪತಿ ಕೊನೆಗೆ ಮದುವೆಯಾಗುವ ನಿರ್ಧಾರ ಮಾಡಿದ್ದರು. ನಯನತಾರಾ ಹಾಗೂ ವಿಘ್ನೇಶ್‌ 2022ರ ಜೂನ್‌ 9ರಂದು ಚೆನ್ನೈನಲ್ಲಿ ಸಪ್ತಪದಿ ತುಳಿದಿದ್ದರು. ಇವರ ಮದುವೆ ಆತ್ಮೀಯ ಸ್ನೇಹಿತರು ಹಾಗೂ ಆಯ್ದ ಅತಿಥಿಗಳನ್ನು ಮಾತ್ರ ಆಹ್ವಾನಿಸಲಾಗಿತ್ತು. ಶಾರುಖ್‌ಖಾನ್‌, ಎಆರ್‌ ರೆಹಮಾನ್‌, ಸೂರ್ಯ ಹಾಗೂ ರಜನಿಕಾಂತ್‌ ಇವರ ಮದುವೆಯಲ್ಲಿ ಪಾಲ್ಗೊಂಡಿದ್ದರು. ಬಾಡಿಗೆ ತಾಯ್ತನದ ಮೂಲಕ ಇವರು ಉಯಿರ್‌ ಹಾಗೂ ಉಲಗಂ ಜನಿಸಿದ್ದರು.

80ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ನಯನಾ

ಡಯಾನಾ ಮರಿಯಮ್ ಕುರಿಯನ್ ಹೆಸರಿನ ನಯನತಾರಾ ಜನಿಸಿದ್ದು, ಬೆಂಗಳೂರಿನಲ್ಲಿ. ತಮಿಳು ಸಿನಿಮಾಗಳಿಂದ ಹೆಚ್ಚು ಖ್ಯಾತಿ ಪಡೆದಿರುವ ಇವರು ತೆಲುಗು, ಮಲೆಯಾಳಂ ಸಿನಿಮಾಗಳಲ್ಲೂ ನಟಿಸುವ ಮೂಲಕ ಖ್ಯಾತಿ ಹೆಚ್ಚಿಸಿಕೊಂಡವರು. ಮಲಯಾಳಂನ ʼಮನಸ್ಸಿನಕ್ಕರೆʼ ಸಿನಿಮಾದ ಮೂಲಕ ಇವರು ನಟನೆ ಆರಂಭಿಸುತ್ತಾರೆ. ತಮಿಳಿನಲ್ಲಿ ಇವರು ಮೊದಲು ನಟಿಸಿದ ಸಿನಿಮಾ ಅಯ್ಯ. 2006ರಲ್ಲಿ ಬಿಡುಗಡೆಯಾದ ಲಕ್ಷ್ಮೀ ಚಿತ್ರದ ಮೂಲಕ ತೆಲುಗಿಗೂ ಪದಾರ್ಪಣೆ ಮಾಡುತ್ತಾರೆ. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆಯ ಪಡೆಯುವ ನಟಿ ಎಂಬ ಹೆಸರಿಗೂ ಪಾತ್ರರಾಗಿದ್ದಾರೆ ಈ ನಟಿ. 2 ದಶಕಗಳಲ್ಲಿ 80ಕ್ಕೂ ಹೆಚ್ಚು ವಿವಿಧ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ ಈ ಸುಂದರಿ.

ಹಲವು ಹಾಡುಗಳಿಗೆ ಶಿವನ್‌ ಸಾಹಿತ್ಯ

ನಿರ್ದೇಶನ, ನಿರ್ಮಾಣ, ಹಾಡುಗಾರಿಕೆ, ನಟನೆಯ ಮೂಲಕ ಹೆಸರು ಗಳಿಸಿರುವ ವಿಘ್ನೇಶ್‌ ಶಿವನ್‌ ತಮಿಳು ಸಿನಿಮಾಗಳಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆ. 5 ಸಿನಿಮಾಗಳಿಗೆ ಆಕ್ಷನ್‌ ಕಟ್‌ ಹೇಳಿರುವ ಇವರು ಹಲವಾರು ಚಿತ್ರಗಳಿಗೆ ಸಾಹಿತ್ಯ ಬರೆದಿದ್ದಾರೆ.

ಈ ಸಿನಿಮಾ ಸುದ್ದಿಯನ್ನೂ ಓದಿ

ಖ್ಯಾತ ನಟ ರಜನಿಕಾಂತ್‌ ಪುತ್ರಿ ಐಶ್ವರ್ಯ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ, ಹಣ ಕಳ್ಳತನವಾಗಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಕಳ್ಳತನವಾಗಿರುವುದು ಬೆಳಕಿಗೆ ಬರುತ್ತಿದ್ದಂತೆ ಐಶ್ವರ್ಯ ತೆನಾಂಪೇಟೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಈ ಘಟನೆ ಫೆಬ್ರವರಿ 10 ರಂದು ನಡೆದಿರುವ ಬಗ್ಗೆ ವರದಿಯಾಗಿದೆ.

ವಿಭಾಗ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ