ಕನ್ನಡ ಸುದ್ದಿ  /  Entertainment  /  Vijay Sethupathi Sung For Sandesh Nagraj Production Wolf Movie

Vijay Sethupathi: ಸಂದೇಶ್‌ ನಾಗರಾಜ್‌ ನಿರ್ಮಾಣದ ಪ್ಯಾನ್‌ ಇಂಡಿಯಾ ಚಿತ್ರಕ್ಕೆ ಹಾಡಿದ ವಿಜಯ್‌ ಸೇತುಪತಿ!

ಇತ್ತೀಚೆಗಷ್ಟೇ ನಟ ಶಿವರಾಜ್‌ಕುಮಾರ್‌ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡಿ ಶುಭ ಕೋರಿದ್ದರು. ಇದೀಗ ವಿಜಯ್‌ ಸೇತುಪತಿ ಈ ಹಾಡನ್ನು ಹಾಡಿದ್ದು ಅವರ ಹಾಡನ್ನು ಕೇಳಲು ಸಿನಿಪ್ರಿಯರು ಕಾಯುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ತಮಿಳಿನ ಸಂಗೀತ ನಿರ್ದೇಶಕ ಅಮರೀಶ್‌ ಗಣೇಶ್‌ ಟ್ಯೂನ್‌ ನೀಡಿದ್ದಾರೆ.

'ವೂಲ್ಫ್‌'  ಚಿತ್ರಕ್ಕೆ ವಿಶೇಷ ಗೀತೆ ಹಾಡಿದ ವಿಜಯ್ ಸೇತುಪತಿ
'ವೂಲ್ಫ್‌' ಚಿತ್ರಕ್ಕೆ ವಿಶೇಷ ಗೀತೆ ಹಾಡಿದ ವಿಜಯ್ ಸೇತುಪತಿ

ಸ್ಟಾರ್‌ ನಟರು ಸಿನಿಮಾಗಳಿಗೆ ಹಾಡುವುದು ಈಗ ಡ್ರೆಂಡ್‌ ಆಗಿದೆ. ಇದೀಗ ತಮಿಳಿನ ಖ್ಯಾತ ನಟ ವಿಜಯ್‌ ಸೇತುಪತಿ ಕೂಡಾ ಸಿನಿಮಾವೊಂದಕ್ಕೆ ಹಾಡಿ ಸುದ್ದಿಯಾಗಿದ್ದಾರೆ. ಕನ್ನಡದಲ್ಲಿ ತಯಾರಾಗುತ್ತಿರುವ ಪ್ಯಾನ್‌ ಇಂಡಿಯಾ ಸಿನಿಮಾ ವೂಲ್ಫ್‌ಗಾಗಿ ವಿಜಯ್‌ ಸೇತುಪತಿ ವಿಶೇಷ ಹಾಡೊಂದನ್ನು ಹಾಡಿದ್ದಾರೆ.

'ವೂಲ್ಫ್‌' ಚಿತ್ರವನ್ನು ಸಂದೇಶ್‌ ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿಯಲ್ಲಿ ಸಂದೇಶ್‌ ನಾಗರಾಜ್‌ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಪ್ರಭುದೇವ ನಾಯಕನಾಗಿ ನಟಿಸುತ್ತಿದ್ದು ವಿನು ವೆಂಕಟೇಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ನಟ ಶಿವರಾಜ್‌ಕುಮಾರ್‌ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡಿ ಶುಭ ಕೋರಿದ್ದರು. ಇದೀಗ ವಿಜಯ್‌ ಸೇತುಪತಿ ಈ ಹಾಡನ್ನು ಹಾಡಿದ್ದು ಅವರ ಹಾಡನ್ನು ಕೇಳಲು ಸಿನಿಪ್ರಿಯರು ಕಾಯುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ತಮಿಳಿನ ಸಂಗೀತ ನಿರ್ದೇಶಕ ಅಮರೀಶ್‌ ಗಣೇಶ್‌ ಟ್ಯೂನ್‌ ನೀಡಿದ್ದಾರೆ. ವೂಲ್ಫ್‌ ಸಿನಿಮಾ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿದೆ. ಪ್ರಭುದೇವ, ಅಂಜು ಕುರಿಯನ್, ಲಕ್ಷ್ಮಿ ರೈ, ಪುಷ್ಪ ಖ್ಯಾತಿಯ ಅನಸೂಯ ಹಾಗೂ ಇನ್ನಿತರರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಚಿತ್ರೀಕರಣ ಮುಗಿಸಿ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿರುವ 'ವೂಲ್ಫ್‌'

ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ವೂಲ್ಫ್‌ ಸಿನಿಮಾ ಮುಕ್ತಾಯವಾಗಿದ್ದು ಚಿತ್ರೀಕರಣದ ಹಂತದಲ್ಲಿದೆ. ಈ ಚಿತ್ರಕ್ಕೆ ಪಾಂಡಿಚೇರಿ, ಚೆನೈ, ಬೆಂಗಳೂರು, ಅಂಡಮಾನ್, ನಿಕೋಬಾರ್ ಸೇರಿ ಹಲವು ಕಡೆಗಳಲ್ಲಿ ಒಟ್ಟು 65 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಅರುಳ್ ವಿನ್ಸೆಂಟ್ ಛಾಯಾಗ್ರಹಣವಿದೆ. ಲಾರೆನ್ಸ್ ಕಿಶೋರ್ ಸಂಕಲನ, ಪ್ರದೀಪ್ ದಿನೇಶ್ ಸಾಹಸ ನಿರ್ದೇಶನ, ಮಣಿ ಮೌಳಿ ಕಲಾ ನಿರ್ದೇಶನ ಹಾಗೂ ಗಣೇಶ್, ಶ್ರೀಧರ್, ಭೂಪತಿ ರಾಜ ನೃತ್ಯ ನಿರ್ದೇಶನ ವೂಲ್ಫ್‌ ಚಿತ್ರಕ್ಕಿದೆ.

ಮತ್ತಷ್ಟು ಮನರಂಜನೆ ಸುದ್ದಿಗಳು

ಗಾಯಕಿ ವಾಣಿ ಜಯರಾಮ್‌ ನಿಗೂಢ ಸಾವು ಪ್ರಕರಣ...ಪೋಸ್ಟ್‌ ಮಾರ್ಟಂ ರಿಪೋರ್ಟ್‌ನಲ್ಲಿ ಏನಿದೆ..?

ಪೊಲೀಸರು ಬಂದು ಮನೆಯ ಬಾಗಿಲು ತೆಗೆದಾಗ ವಾಣಿ ಜಯರಾಮ್‌ ನಿಧನರಾಗಿರುವುದು ತಿಳಿದು ಬಂದಿದೆ. ಆದರೆ ಪೊಲೀಸರು ನೋಡಿದಾಗ ವಾಣಿ ಜಯರಾಮ್‌ ಅವರು ನೆಲಕ್ಕೆ ಉರುಳಿ ಬಿದ್ದಿದ್ದು, ಅವರ ಹಣೆಯಲ್ಲಿ ಗಾಯದ ಗುರುತು ಕಂಡುಬಂದಿತ್ತು. ಈ ಕಾರಣದಿಂದ ಅವರದ್ದು ಸಹಜ ಸಾವಲ್ಲ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅವರ ದೇಹವನ್ನು ಪೋಸ್ಟ್‌ ಮಾರ್ಟಂಗೆ ರವಾನಿಸಲಾಗಿತ್ತು. ಸಂಪೂರ್ಣ ಸ್ಟೋರಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

'ಕ್ರಾಂತಿ' ಪ್ರಚಾರ ಮಾಡಲು ಹೋಗಿ ಕೆಲಸ ಕಳೆದುಕೊಂಡ ಅಭಿಮಾನಿ...ದರ್ಶನ್‌ ಪ್ರತಿಕ್ರಿಯೆ ಹೇಗಿತ್ತು..?

ಬೆಂಗಳೂರಿನಲ್ಲಿ ನಡೆದ 'ಕ್ರಾಂತಿ' ಸಕ್ಸಸ್‌ ಮೀಟ್‌ಗೆ ಅವಿನಾಶ್‌, ದರ್ಶನ್‌ ಅವರನ್ನು ಭೇಟಿ ಮಾಡಲು ಬಂದಿದ್ದಾರೆ. ಆತನನ್ನು ನೋಡಿದ ದರ್ಶನ್‌ ಏನಪ್ಪಾ ಕೆಲಸ ಕಳೆದುಕೊಂಡ್ಯಾ..? ಎಂದು ಕೈ ತೋರಿಸುತ್ತಾ ಅಲ್ಲಿಂದ ಮುಂದೆ ಹೋಗಿದ್ದಾರೆ. ಅವಿನಾಶ್‌ ಪರಿಸ್ಥಿತಿ ನೋಡಿ ಸೋಷಿಯಲ್‌ ಮೀಡಿಯಾದಲ್ಲಿ ಪರ ವಿರೋಧ ಕಮೆಂಟ್‌ ವ್ಯಕ್ತವಾಗುತ್ತಿದೆ. ಅಭಿಮಾನ ಇರಬೇಕು, ಆದರೆ ಕೆಲಸ ಕಳೆದುಕೊಳ್ಳುವ ಮಟ್ಟಿಗೆ ಇರಬಾರದು. ಪೂರ್ತಿ ಸುದ್ದಿಗೆ ಈ ಲಿಂಕ್‌ ಒತ್ತಿ.

ಥಾಯ್ಲೆಂಡ್‌ ಬೀಚ್‌ನಲ್ಲಿ ಅಕ್ಕ-ತಂಗಿಯರ ಮೋಜು ಮಸ್ತಿ....ಫೋಟೋ ಗ್ಯಾಲರಿ

ಸಾಮಾನ್ಯವಾಗಿ ಸಿನಿಮಾ ತಾರೆಯರು ಸ್ವಲ್ಪ ಬಿಡುವು ದೊರೆತರೆ ಸಾಕು ಮಾಲ್ಡೀವ್ಸ್‌, ಥಾಯ್ಲೆಂಡ್‌, ದುಬೈಗೆ ಹಾರುತ್ತಾರೆ. ಇದೀಗ ಸ್ಯಾಂಡಲ್‌ವುಡ್‌ ನಟಿ ನೇಹಾ ಗೌಡ ಹಾಗೂ ಕಿರುತೆರೆ ನಟಿ ನೇಹಾ ಗೌಡ ಥಾಯ್ಲೆಂಡ್‌ಗೆ ತೆರಳಿದ್ದಾರೆ. ಫೋಟೋ ಗ್ಯಾಲರಿ ನೋಡಲು ಇಲ್ಲಿ ಕ್ಲಿಕ್‌ ಮಾಡಿ.

IPL_Entry_Point