ಕನ್ನಡ ಸುದ್ದಿ  /  Entertainment  /  Yash Is The Kindest And Best Host, Says Malayalam Actor Dulquer Salmaan

Dulquer Salmaan‌ on Yash: ‘ಯಶ್‌ ಕಳುಹಿಸಿದ ಊಟ, ಆತಿಥ್ಯ ಎಂದೂ ಮರೆಯಲಾರೆ’; ಮೈಸೂರಿನ ದಿನಗಳನ್ನು ನೆನೆದ ದುಲ್ಖರ್‌ ಸಲ್ಮಾನ್

ಅಭಿಮಾನಿಗಳ ಜತೆಗೆ ಟ್ವಿಟರ್‌ ಸಂವಾದದಲ್ಲಿ ಮಲಯಾಳಿ ನಟ ದುಲ್ಖರ್‌ ಸಲ್ಮಾನ್‌ ಕನ್ನಡ ಸಿನಿಮಾದಲ್ಲಿ ನಟಿಸುವ ಮತ್ತು ಯಶ್‌ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಯಶ್‌ ಕಳುಹಿಸಿದ ಊಟ, ಆತಿಥ್ಯ ಎಂದೂ ಮರೆಯಲಾರೆ’; ಮೈಸೂರಿನ ದಿನಗಳನ್ನು ನೆನೆದ ದುಲ್ಖರ್‌ ಸಲ್ಮಾನ್
‘ಯಶ್‌ ಕಳುಹಿಸಿದ ಊಟ, ಆತಿಥ್ಯ ಎಂದೂ ಮರೆಯಲಾರೆ’; ಮೈಸೂರಿನ ದಿನಗಳನ್ನು ನೆನೆದ ದುಲ್ಖರ್‌ ಸಲ್ಮಾನ್

Dulquer Salmaan‌ on Yash: ಸೌತ್‌ ಸಿನಿಮಾ ಸ್ಟಾರ್ಸ್‌ಗಳಾದ ಯಶ್‌ ಮತ್ತು ದುಲ್ಖರ್‌ ಸಲ್ಮಾನ್‌ ಆಪ್ತ ಸ್ನೇಹಿತರು. ಈ ಇಬ್ಬರು ಕಲಾವಿದರು ಮುಖತಃ ಮಾತಿಗೆ ಸಿಕ್ಕಿದ್ದು ಕೆಲವೇ ಬಾರಿಯಾದರೂ, ಸಿನಿಮಾಗಳ ವಿಚಾರದಲ್ಲಿ ಒಬ್ಬರಿಗೊಬ್ಬರು ಸಾಥ್‌ ನೀಡಿದ ಉದಾಹರಣೆಗಳಿವೆ. ಇದೀಗ ಇದೇ ನಟ ಸ್ಯಾಂಡಲ್‌ವುಡ್‌ ಬಗ್ಗೆ ಮಾತನಾಡಿದ್ದಾರೆ. ಇಲ್ಲಿನ ಹೀರೋಗಳ ಬಗ್ಗೆಯೂ ಮನಸ್ಸಿನಾಳದಿಂದ ಉತ್ತರಿಸಿದ್ದಾರೆ. ನಟ ಯಶ್‌ ಅವರ ಆತಿಥ್ಯವನ್ನೂ ನೆನಪಿಸಿಕೊಂಡಿದ್ದಾರೆ.

ಟ್ವಿಟರ್‌ನಲ್ಲಿ ಸರಿಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅಭಿಮಾನಿಗಳ ಜತೆಗೆ ಸಂಪರ್ಕದಲ್ಲಿದ್ದ ದುಲ್ಖರ್‌, ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಈ ವೇಳೆ ಕನ್ನಡ ಸಿನಿಮಾ ಬಗ್ಗೆ ಮತ್ತು ಯಶ್‌ ಬಗ್ಗೆಯೂ ಒಂದಷ್ಟು ಪ್ರಶ್ನೆಗಳು ಅವರಿಗೆ ಎದುರಾಗಿವೆ. "ನೀವು ಮಲಯಾಳಂ, ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದೀರಿ.. ಸದ್ಯಕ್ಕೆ ಯಾವುದಾದರೂ ಕನ್ನಡ ಸಿನಿಮಾ ಮಾಡುವ ಯೋಜನೆ ಇದೆಯೇ? ಎಂಬ ಪ್ರಶ್ನೆ ಬಂದಿತ್ತು.

ಆ ಪ್ರಶ್ನೆಗೆ ಉತ್ತರಿಸಿದ ದುಲ್ಖರ್‌, "ಖಂಡಿತ ಕನ್ನಡ ಸಿನಿಮಾಗಳಲ್ಲಿ ನಟಿಸುವ ಆಸೆ ಇದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರೋದ್ಯಮವು ನಿರ್ಮಿಸುತ್ತಿರುವ ಎಲ್ಲಾ ಸಿನಿಮಾಗಳನ್ನು ನಾನು ಇಷ್ಟಪಟ್ಟಿದ್ದೇನೆ. ಅಷ್ಟೇ ಅಲ್ಲದೆ ಕನ್ನಡದ ನಟರು, ನಿರ್ದೇಶಕರೂ ನನಗೆ ಪರಿಚಯ. ಅವರ ಜತೆಗೂ ಈ ವಿಚಾರದ ಬಗ್ಗೆ ಮಾತನಾಡುತ್ತಿರುತ್ತೇನೆ" ಎಂದಿದ್ದಾರೆ.

ಹಾಗಾದರೆ ನಟ ಯಶ್‌ ಬಗ್ಗೆ ಏನು ಹೇಳಲು ಬಯಸುತ್ತೀರಿ? ಎಂದಾಗ.. ಮೈಸೂರಿನ ದಿನಗಳನ್ನು ಸ್ಮರಿಸಿಕೊಂಡರು. "ಯಶ್‌ ಒಬ್ಬ ಒಳ್ಳೆಯ ಸ್ನೇಹಿತ. ಸ್ನೇಹಜೀವಿ. ಒಳ್ಳೇ ಹೋಸ್ಟ್‌ ಕೂಡ. ನಾನು ಮೈಸೂರಿನಲ್ಲಿ ಸಿನಿಮಾ ಶೂಟಿಂಗ್‌ ಸಂದರ್ಭದಲ್ಲಿ ನಮ್ಮ ಇಡೀ ತಂಡಕ್ಕೆ ಅತ್ಯದ್ಭುತವಾದ ಊಟ ಕಳುಹಿಸಿಕೊಟ್ಟಿದ್ದರು. ಆ ಕ್ಷಣವನ್ನು ನಾನು ಯಾವತ್ತಿಗೂ ಮರೆಯಲಾರೆ" ಎಂದಿದ್ದಾರೆ ದುಲ್ಖರ್.‌

ಈ ಸಿನಿಮಾ ಸುದ್ದಿಗಳನ್ನೂ ಓದಿ

Sakuchi Trailer: ಸಿನಿಮಾ ಪ್ರೆಸ್‌ಮೀಟ್‌ನಲ್ಲೇ ಮೈ ಮೇಲೆ ದೈವ ಆವಾಹನೆ; ವೇದಿಕೆ ಮೇಲೆಯೇ ಕುಸಿದು ಬಿದ್ದ ‘ಸಕೂಚಿ’ ಚಿತ್ರದ ನಿರ್ದೇಶಕ VIDEO

ನಿರ್ದೇಶಕ ಅಶೋಕ ಚಕ್ರವರ್ತಿ ಆಕ್ಷನ್‌ ಕಟ್‌ ಹೇಳಿರುವ ‘ಸಕೂಚಿ’ ಸಿನಿಮಾ ಇನ್ನೇನು ಬಿಡುಗಡೆಯ ಸನಿಹ ಬಂದು ನಿಂತಿದೆ. ಕಳೆದ ಮೂರು ವರ್ಷದ ಹಿಂದೆ ಆರಂಭವಾದ ಈ ಚಿತ್ರವನ್ನು ಇದೇ ತಿಂಗಳ 17ರಂದು ಪ್ರೇಕ್ಷಕರ ಮುಂದಿಡಲು ನಿರ್ಧರಿಸಿದ್ದಾರೆ. ಅದೇ ರೀತಿ ಪ್ರಚಾರ ಕೆಲಸವನ್ನೂ ಚಿತ್ರತಂಡ ಆರಂಭಿಸಿದೆ. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್‌ ಸಹ ಬಿಡುಗಡೆ ಆಗಿತ್ತು. ಈ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮಕ್ಕೆ ಮಂತ್ರವಾದಿ ವೇಷದಲ್ಲಿಯೇ ನಿರ್ದೇಶಕರು ಎಂಟ್ರಿಕೊಟ್ಟಿದ್ದರು! ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

Athiya Shetty Trolled: ಕೈ ತುಂಬಾ ಹಣ ಇರುವಾಗ ಸಂಪ್ರದಾಯ ಪಾಲಿಸಲು ಸಮಸ್ಯೆ ಏನು.. ಹಿಗ್ಗಾ ಮುಗ್ಗಾ ಟ್ರೋಲ್‌ ಆದ ಆಥಿಯಾ ಶೆಟ್ಟಿ.. ವಿಡಿಯೋ

ಬಾಲಿವುಡ್‌ ನಟ ಸುನಿಲ್‌ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆಎಲ್ ರಾಹುಲ್, ಕಳೆದ ವಾರ ಮುಂಬೈನಲ್ಲಿ ಸರಳವಾಗಿ ವಿವಾಹವಾಗಿದ್ದರು. ಆಥಿಯಾ ಹಾಗೂ ರಾಹುಲ್‌ ಕುಟುಂಬ, ಆತ್ಮೀಯರಿಗಷ್ಟೇ ಮದುವೆಗೆ ಆಹ್ವಾನ ನೀಡಿತ್ತು. ಹೊಸದಾಗಿ ಮದುವೆಯಾಗಿದ್ದ ಈ ಜೋಡಿ 2 ದಿನಗಳ ಹಿಂದಷ್ಟೇ ಮುಂಬೈ ರೆಸ್ಟೋರೆಂಟ್‌ವೊಂದರಲ್ಲಿ ಡಿನ್ನರ್ ಡೇಟ್ ಮುಗಿಸಿ ಹೊರಡುವಾಗ ಪಾಪರಾಜಿಗಳು ತೆಗೆದಿದ್ದ ಫೋಟೋಗಳು ವೈರಲ್‌ ಆಗಿದ್ದವು. ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point