ಅಮೃತಧಾರೆ ಧಾರಾವಾಹಿಯಲ್ಲಿ ಹೆತ್ತವರ ಕಣ್ಣೀರಧಾರೆ: ಸದಾಶಿವ- ಮಂದಾಕಿನಿ ಜೀವ ಕಳೆದುಕೊಳ್ಳುತ್ತಾರ? ಮರ್ಯಾದೆಗೆ ಅಂಜಿದ ಮೇಷ್ಟ್ರು
ಕನ್ನಡ ಸುದ್ದಿ  /  ಮನರಂಜನೆ  /  ಅಮೃತಧಾರೆ ಧಾರಾವಾಹಿಯಲ್ಲಿ ಹೆತ್ತವರ ಕಣ್ಣೀರಧಾರೆ: ಸದಾಶಿವ- ಮಂದಾಕಿನಿ ಜೀವ ಕಳೆದುಕೊಳ್ಳುತ್ತಾರ? ಮರ್ಯಾದೆಗೆ ಅಂಜಿದ ಮೇಷ್ಟ್ರು

ಅಮೃತಧಾರೆ ಧಾರಾವಾಹಿಯಲ್ಲಿ ಹೆತ್ತವರ ಕಣ್ಣೀರಧಾರೆ: ಸದಾಶಿವ- ಮಂದಾಕಿನಿ ಜೀವ ಕಳೆದುಕೊಳ್ಳುತ್ತಾರ? ಮರ್ಯಾದೆಗೆ ಅಂಜಿದ ಮೇಷ್ಟ್ರು

ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಸದಾಶಿವ ಮತ್ತು ಮಂದಾಕಿನಿ ದುಃಖದಲ್ಲಿದ್ದಾರೆ. ಇವರಿಬ್ಬರನ್ನು ಮಗ ಜೀವನ್‌ ಮನೆಯಿಂದ ಹೊರಗೆ ಹಾಕಿದ್ದಾನೆ. ಸಭ್ಯಸ್ಥರಾಗಿ ಮಾನ ಮರ್ಯಾದೆಗೆ ಅಂಜಿ ಬದುಕಿದ ಜೀವಗಳು ಕಣ್ಣೀರಾಗಿವೆ. ದುಃಖದ ಪ್ರವಾಹವೇ ಹರಿದಿದೆ.

ಅಮೃತಧಾರೆ ಧಾರಾವಾಹಿಯಲ್ಲಿ ಹೆತ್ತವರ ಕಣ್ಣೀರಧಾರೆ: ಸದಾಶಿವ- ಮಂದಾಕಿನಿ ಜೀವ ಕಳೆದುಕೊಳ್ಳುತ್ತಾರ? ಮರ್ಯಾದೆಗೆ ಅಂಜಿದ ಮೇಷ್ಟ್ರು
ಅಮೃತಧಾರೆ ಧಾರಾವಾಹಿಯಲ್ಲಿ ಹೆತ್ತವರ ಕಣ್ಣೀರಧಾರೆ: ಸದಾಶಿವ- ಮಂದಾಕಿನಿ ಜೀವ ಕಳೆದುಕೊಳ್ಳುತ್ತಾರ? ಮರ್ಯಾದೆಗೆ ಅಂಜಿದ ಮೇಷ್ಟ್ರು

ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಒಂದಿಷ್ಟು ಪ್ರಮುಖ ಬೆಳವಣಿಗೆಗಳು ನಡೆದಿವೆ. ಮಹಿಮಾ ಕುಡಿಯುತ್ತಿದ್ದಾಳೆ. ಈ ರೀತಿ ಮನೆಯಲ್ಲಿ ಕುಡಿಯುವುದು ತಪ್ಪಲ್ವ ಎಂದು ಜೀವನ್‌ ಕೇಳುತ್ತಾನೆ. "ಮನೆಯಲ್ಲಿ ಕುಡಿದರೂ ಲಿವರ್‌ ಡ್ಯಾಮೇಜ್‌ ಆಗುತ್ತದೆ. ಹೊರಗೆ ಕುಡಿದರೂ ಲಿವರ್‌ ಡ್ಯಾಮೇಜ್‌ ಆಗುತ್ತದೆ. ನೀನು ಹೊರಗೆ ಕುಡಿಯುವೆ. ನಾನು ಕುಡಿದರೆ ತಪ್ಪೇನು" ಎಂದು ಮಹಿಮಾ ಹೇಳುತ್ತಾಳೆ. "ಲಿವರ್‌ ಡ್ಯಾಮೇಜ್‌ ಆಗಲಿ, ಅಪ್ಪ ಅಮ್ಮನಿಗೆ ಗೊತ್ತಾದ್ರೆ ಏನಾಗುತ್ತದೆ" ಎಂದು ಜೀವನ್‌ ಹೇಳುತ್ತಾನೆ. "ನೀನು ಹೊರಗೆ ಕುಡಿಯಬೇಡ. ಇಲ್ಲೇ ಕುಡಿಯೋಣ. ಕುಡಿದು ಕುಡಿದು ಸಂಸಾರ ಮಾಡೋಣ" ಎನ್ನುತ್ತಾಳೆ. ಆಗ ಸದಾಶಿವ ಮತ್ತು ಮಂದಾಕಿನಿಯ ಎಂಟ್ರಿ ಆಗುತ್ತದೆ. "ಅಪ್ಪ ನೋಡಿಲ್ಲ" ಎನ್ನುತ್ತಾನೆ. "ಕುಡಿಯಲಿ ಬಿಡಪ್ಪ, ಇದರಲ್ಲಿ ತಪ್ಪೇನು.. ನೀನು ಕುಡಿದ್ರೆ ಕೇಳಲಾಗದು ಅಂದ್ಮೆಲೆ, ಸೊಸೆಯನ್ನು ಹೇಗೆ ಕೇಳಲಾಗುತ್ತದೆ" ಎನ್ನುತ್ತಾರೆ ಸದಾಶಿವ. "ಈಗ ಗೊತ್ತಾಯ್ತು, ನೀವೇ ನನ್ನ ನೆಮ್ಮದಿ ಹಾಳು ಮಾಡಲು ಪ್ಲ್ಯಾನ್‌ ಮಾಡಿದ್ದೀರಿ" ಎನ್ನುತ್ತಾನೆ ಜೀವನ್‌. "ಹೌದು ಅವರೇ ಮಾಡಿದ್ದು " ಎನ್ನುತ್ತಾರೆ ಮಂದಾಕಿನಿ.

ಹೆತ್ತವರನ್ನು ಮನೆಯಿಂದ ಹೊರಹಾಕಿದ ಜೀವನ್‌

"ಇದು ನನ್ನ ಮನೆ. ನಾನು ಮಾಡಿದ್ದೇ ರೂಲ್ಸ್‌. ನನಗೆ ಹೇಗೆ ಬೇಕೋ ಹಾಗೆ ಇರ್ತಿನಿ. ನೀವ್ಯಾರು ಇಲ್ಲಿರಬೇಡಿ. ನಡೀರಿ ಇಲ್ಲಿಂದ. ತೊಲಗಿ, ಗೆಟ್‌ಲಾಸ್ಟ್‌" ಎಂದು ಹೇಳುತ್ತಾನೆ. ಈ ಮಾತು ಕೇಳಿ ಅಪ್ಪ ಅಮ್ಮನಿಗೆ ಆಘಾತವಾಗುತ್ತದೆ. "ಜೀವ ಏನು ಮಾತನಾಡ್ತ ಇದ್ದೀಯ" ಎಂದು ಮಹಿಮಾ ಕೇಳುತ್ತಾಳೆ. "ನಡೀರಿ ಆಚೆ, ಗೆಟ್‌ ಲಾಸ್ಟ್‌" ಎಂದು ಜೀವನ್‌ ಹೇಳುತ್ತಾನೆ. ಮಹಿಮಾಳ ಮಾತು ಕೇಳುವುದಿಲ್ಲ. ಅಪ್ಪ ಮತ್ತು ಅಮ್ಮನನ್ನು ಮನೆಯಿಂದ ಹೊರಗೆ ಹಾಕುತ್ತಾನೆ. ಮನೆಯ ಹೊರಗಡೆ ಜನರೆಲ್ಲರೂ ನೋಡುತ್ತಾರೆ. ಮರ್ಯಾದೆ ಎಂದುಕೊಂಡು ಬದುಕಿದ್ದ ಸದಾಶಿವ ತಲೆತಗ್ಗಿಸುವಂತೆ ಆಗುತ್ತದೆ. ಜನರ ಮುಂದೆ ಕೆಟ್ಟದ್ದಾಗಿ ಅಪ್ಪನ ಬಗ್ಗೆ ಮಾತನಾಡುತ್ತಾನೆ. "ಇವರು ಸಭ್ಯಸ್ಥ ಅಲ್ಲ, ಸ್ಯಾಡಿಸ್ಟ್‌" ಎಂದೆಲ್ಲ ಹೇಳುತ್ತಾನೆ. ಜನರು ತಮಗೆ ತೋಚಿದಂತೆ ಮನಸ್ಸಲ್ಲಿ ಅಂದುಕೊಳ್ಳುತ್ತಾರೆ. ಮಂದಾಕಿನಿಯ ಕೈ ಹಿಡಿದು ಸದಾಶಿವ ಭಾರವಾದ ಹೆಜ್ಜೆ ಹಾಕುತ್ತ ಹೊರಗೆ ಹೋಗುತ್ತಾರೆ.

ಗೌತಮ್‌ ದಿವಾನ್‌ ಮನೆಯಲ್ಲಿ ಡಾಕ್ಟರ್‌ ಇದ್ದಾರೆ. ಭೂಮಿಕಾಳನ್ನು ಚೆಕ್‌ ಮಾಡುತ್ತಾರೆ. ಬಳಿಕ ಡಾಕ್ಟರ್‌ ಗೌತಮ್‌ ಬಳಿ ಮಾತನಾಡುತ್ತಾರೆ. "ಏಜ್‌ ಫ್ಯಾಕ್ಟ್‌ ಇರೋದ್ರಿಂದ ಸ್ವಲ್ಪ ಹೆಚ್ಚು ಕೇರ್‌ ತೆಗೆದುಕೊಳ್ಳಬೇಕು. ಡೆಲಿವರಿಯಾಗುವವರೆಗೆ ಹೆಂಡತಿಯನ್ನು ಹೆಚ್ಚು ಸೇಫ್‌ ಆಗಿ ನೋಡಿಕೊಳ್ಳಿ. ಗಾಬರಿಯಾಗುವಂತಹ ವಿಚಾರ ನೇರವಾಗಿ ಹೇಳಬೇಡಿ. ಮೊದಲೇ ಸೂಚನೆ ನೀಡಿ ಹೇಳಿ" ಎಂದು ಡಾಕ್ಟರ್‌ ಹೇಳುತ್ತಾರೆ. ಈ ಮೂಲಕ ಗಾಬರಿಯಾಗುವಂತಹ ವಿಷಯವನ್ನು ಗೌತಮ್‌ ಮುಂದಿನ ದಿನಗಳಲ್ಲಿ ಭೂಮಿಕಾಗೆ ಹೇಳುವಂತೆ ಇಲ್ಲ ಎಂದು ಡಾಕ್ಟರ್‌ ಮೂಲಕ ತಿಳಿಸಲಾಗಿದೆ.

ಬೀದಿಬದಿಯಲ್ಲಿ ಕುಳಿತು ಸದಾಶಿವ ಮತ್ತು ಮಂದಾಕಿನಿ ದುಃಖದಲ್ಲಿ ಮಾತನಾಡುತ್ತಾರೆ. "ಇಂತಹ ದಿನ ನನ್ನ ಬದುಕಿನಲ್ಲಿ ಬರುತ್ತದೆ ಎಂದುಕೊಂಡಿರಲಿಲ್ಲ" ಎಂದು ಸದಾಶಿವ ಕಣ್ಣೀರಾಗುತ್ತಾರೆ. ಇನ್ನೊಂದೆಡೆ ಮಹಿಮಾ ಬೇಸರದಲ್ಲಿದ್ದಾಳೆ. ಇವರನ್ನು ಎಲ್ಲಿ ಅಂತ ಹುಡುಕೋದು ಎಂದು ಬೇಸರದಲ್ಲಿದ್ದಾಳೆ. ಕಾಲ್‌ ಮಾಡಿದರೂ ಮಾವ ಕಾಲ್‌ ಪಿಕ್‌ ಮಾಡುವುದಿಲ್ಲ. ಬಳಿಕ ಜೀವನ್‌ ಬಳಿ ಜಗಳ ಮಾಡುತ್ತಾಳೆ. "ನನಗೆ ಯಾವ ಕನಿಕರ, ಮಣ್ಣು ಮಸಿ ಇಲ್ಲ. ಅವರನ್ನು ಇಲ್ಲಿಗೆ ಕರೆತರಬೇಡ. ಹಳೆ ತಲೆಗಳು ಇದ್ದರೆ ನೆಮ್ಮದಿ ಇರುವುದಿಲ್ಲ" ಎಂದು ಜೀವನ್‌ ಹೇಳುತ್ತಾನೆ.

ಭೂಪತಿ ಮನೆಯಲ್ಲಿ ಜೈದೇವ್‌ ಮತ್ತು ದಿಯಾ ಇದ್ದಾರೆ. "ಪ್ರಮೋಷನ್‌ ಸಿಕ್ಕ ಖುಷಿಗೆ ಪಾರ್ಟಿ ಮಾಡೋಣ" ಎಂದು ಭೂಪತಿ ಹೇಳುತ್ತಾರೆ. ಇನ್ನೊಂದೆಡೆ ಸದಾಶಿವ "ನಾವು ಬದುಕಿ ಸಾಧಿಸುವುದು ಏನು ಇಲ್ಲ. ನಾವು ಹೋಗುವುದೇ ವಾಸಿ. ಗಾಬರಿಯಾಗಬೇಡ. ಶಾಂತವಾಗಿ ಯೋಚನೆ ಮಾಡು. ಇಷ್ಟೆಲ್ಲ ಆದ ಮೇಲೆ ಬದುಕಬೇಕ. ಸ್ವಂತ ಮಗನಿಗೆ ಬುದ್ದಿ ಹೇಳಲಾಗದ ತಂದೆ ನಾನು. ವಿಫಲ ಅಪ್ಪ ನಾನು" ಎಂದೆಲ್ಲ ಹೇಳುತ್ತಾರೆ. ಇದನ್ನು ಕೇಳಿ ಮಂದಾಕಿನಿ ಗಾಬರಿಯಾಗುತ್ತಾರೆ.

ಡಿಸ್ಕ್ಲೈಮರ್‌: ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ನಿಮ್ಮನ್ನು ಪ್ರೀತಿಸುವ, ಬೆಂಬಲಿಸುವ ಆಪ್ತರು ಇದ್ದೇ ಇರುತ್ತಾರೆ. ನಿಮ್ಮ ಸಮಸ್ಯೆಗಳನ್ನು ಅಂಥವರೊಂದಿಗೆ ಹಂಚಿಕೊಂಡು ನೆರವು ಪಡೆಯಿರಿ. ಆತ್ಮಹತ್ಯೆಯ ಆಲೋಚನೆಗಳು ಮನಸ್ಸಿಗೆ ಪದೇಪದೆ ಬರುತ್ತಿದ್ದರೆ ಹಿಂಜರಿಕೆಯಿಲ್ಲದೆ ಆಪ್ತಸಮಾಲೋಚಕರ ಮಾರ್ಗದರ್ಶನ ಪಡೆದುಕೊಳ್ಳಿ. ತುರ್ತು ಸಂದರ್ಭದಲ್ಲಿ ಬೆಂಗಳೂರಿನ SAHAI ಸಹಾಯವಾಣಿ (080 - 25497777) ಅಥವಾ ನಿಮ್ಹಾನ್ಸ್‌ ಸಹಾಯವಾಣಿಯ (080 – 4611 0007) ನೆರವು ಪಡೆಯಿರಿ

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in