ಗೌತಮ್‌ ದಿವಾನ್‌ ಕುಟುಂಬದ ಸಂಬಂಧ ಕಡಿದುಕೊಂಡ ಜೀವನ್‌; ಶಕುಂತಲಾ ಗ್ಯಾಂಗ್‌ಗೆ ಆತಂಕ- ಅಮೃತಧಾರೆ ಧಾರಾವಾಹಿ ಸ್ಟೋರಿ
ಕನ್ನಡ ಸುದ್ದಿ  /  ಮನರಂಜನೆ  /  ಗೌತಮ್‌ ದಿವಾನ್‌ ಕುಟುಂಬದ ಸಂಬಂಧ ಕಡಿದುಕೊಂಡ ಜೀವನ್‌; ಶಕುಂತಲಾ ಗ್ಯಾಂಗ್‌ಗೆ ಆತಂಕ- ಅಮೃತಧಾರೆ ಧಾರಾವಾಹಿ ಸ್ಟೋರಿ

ಗೌತಮ್‌ ದಿವಾನ್‌ ಕುಟುಂಬದ ಸಂಬಂಧ ಕಡಿದುಕೊಂಡ ಜೀವನ್‌; ಶಕುಂತಲಾ ಗ್ಯಾಂಗ್‌ಗೆ ಆತಂಕ- ಅಮೃತಧಾರೆ ಧಾರಾವಾಹಿ ಸ್ಟೋರಿ

ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಜೀವನ್‌ಗೆ ಭೂಪತಿ ವಾರ್ನಿಂಗ್‌ ನೀಡಿದ್ದಾನೆ. ಗೌತಮ್‌ ಬೇಕಾ, ಭೂಪತಿ ಬೇಕಾ ಎಂಬ ಗೊಂದಲದಲ್ಲಿ ಜೀವನ್‌ ಸಿಲುಕಿದ್ದಾನೆ. ಗೌತಮ್‌ ಕುಟುಂಬದ ಜತೆಗಿನ ಸಂಬಂಧ ಕಡಿದುಕೊಳ್ಳುತ್ತಾನೆ. ಈ ಮೂಲಕ ತನಗೆ ಕಷ್ಟ ಕಾಲದಲ್ಲಿ ಸಹಾಯ ಮಾಡಿದ ಎಲ್ಲರನ್ನೂ ಮರೆಯುತ್ತಾನೆ.

ಗೌತಮ್‌ ದಿವಾನ್‌ ಕುಟುಂಬದ ಸಂಬಂಧ ಕಡಿದುಕೊಂಡ ಜೀವನ್‌; ಶಕುಂತಲಾ ಗ್ಯಾಂಗ್‌ಗೆ ಆತಂಕ- ಅಮೃತಧಾರೆ
ಗೌತಮ್‌ ದಿವಾನ್‌ ಕುಟುಂಬದ ಸಂಬಂಧ ಕಡಿದುಕೊಂಡ ಜೀವನ್‌; ಶಕುಂತಲಾ ಗ್ಯಾಂಗ್‌ಗೆ ಆತಂಕ- ಅಮೃತಧಾರೆ

ಅಮೃತಧಾರೆ ಧಾರಾವಾಹಿ: ಭೂಪತಿ ಜತೆ ಜೀವನ್‌ ಮಾತನಾಡುತ್ತಿದ್ದಾನೆ. "ಸಡನ್‌ ಆಗಿ ಇನ್‌ವೆಸ್ಟ್‌ಮೆಂಟ್‌ ವಾಪಸ್‌ ಕೊಡಿ ಎಂದು ಕೇಳಿದ್ರೆ ನಾನು ಏನು ಮಾಡಲಿ" ಎಂದು ಜೀವನ್‌ ಹೇಳುತ್ತಾನೆ. "ನೀನು ಗೌತಮ್‌ಗೆ ಬಯ್ಯೋದು, ಅವನು ಇಲ್ಲಿಗೆ ಬಂದು ನನಗೆ ಕಿರಿಕಿರಿ ಮಾಡೋದು. ನನಗೆ ಇಷ್ಟವಾಗೋಲ್ಲ. ನಿನಗೆ ಅವರು ಬೇಕಾ, ನಾನು ಬೇಕಾ ಎಂದು ತೀರ್ಮಾನ ಮಾಡು. ಇನ್ಮುಂದೆ ನಿನ್ನ ವಿಚಾರಕ್ಕೆ ನಿನ್ನ ಮನೆಯವರು ಇಲ್ಲಿಗೆ ಬರಬಾರದು" ಎಂದು ಭೂಪತಿ ಹೇಳುತ್ತಾನೆ. ಗೌತಮ್‌ ಬೇಕಾ, ಭೂಪತಿ ಬೇಕಾ ಎಂಬ ಗೊಂದಲದಲ್ಲಿ ಜೀವನ್‌ ಸಿಲುಕಿದ್ದಾನೆ. ಕೊನೆಗೆ "ನನಗೆ ನೀವೇ ಬೇಕು ಸರ್‌" ಎಂದು ಜೀವನ್‌ ಹೇಳುತ್ತಾನೆ. "ನನ್ನ ಅಪ್ಪ ಮತ್ತು ಅಮ್ಮನಿಗೂ ಇದನ್ನೇ ಹೇಳುವೆ" ಎಂದು ಹೇಳುತ್ತಾನೆ. ಈ ಮೂಲಕ ತನಗೆ ಕಷ್ಟ ಕಾಲದಲ್ಲಿ ಸಹಾಯ ಮಾಡಿದ ಎಲ್ಲರನ್ನೂ ಮರೆಯುತ್ತಾನೆ. ಈ ಮೂಲಕ ಗೌತಮ್‌ನ ಒಂದು ಕೊಂಡಿ ಕಳಚಿತು. ಅವನನ್ನು ಒಂಟಿ ಮಾಡುವುದೇ ನನ್ನ ಪ್ಲ್ಯಾನ್‌ ಎಂದು ಭೂಪತಿ ಯೋಚಿಸುತ್ತಾರೆ.

ಅಪೇಕ್ಷಾ ಯೋಚನೆ ಮಾಡುತ್ತಿದ್ದಾಳೆ. ಅವಳಿಗೆ ತವರಿನ ನೆನಪಾಗಿದೆ. ಆಗ ಅಲ್ಲಿಗೆ ಪಾರ್ಥ ಬರುತ್ತಾನೆ. ಏನಾಯ್ತು ಎಂದು ಕೇಳುತ್ತಾನೆ. "ನನಗೆ ಒಂದೆರಡು ಅಪ್ಪ ಅಮ್ಮನ ಮನೆಗೆ ಹೋಗಬೇಕೆಂದು ಅನಿಸ್ತಾ ಇದೆ" ಎನ್ನುತ್ತಾಳೆ. ಇದನ್ನು ಕೇಳಿ ಪಾರ್ಥನಿಗೆ ಅಚ್ಚರಿಯಾಗುತ್ತದೆ. ಇದು ನಿನ್ನ ಬಾಯಿಂದಲೇ ಕೇಳಿಬರುವ ಮಾತಾ ಎಂದು ಅಚ್ಚರಿಗೊಳ್ಳುತ್ತಾನೆ. "ನಾವು ಒಂದೆರಡು ದಿನ ಅಲ್ಲಿಗೆ ಹೋಗಿ ಬಂದ್ರೆ ಅವರಿಗೂ ಖುಷಿಯಾಗಬಹುದು" ಎನ್ನುತ್ತಾಳೆ. ಪಾರ್ಥನಿಗೆ ಖುಷಿಯಾಗಿ ಸರಿ ಎನ್ನುತ್ತಾನೆ. ಹಳೆಯ ಅಪೇಕ್ಷಾ ವಾಪಸ್‌ ಸಿಕ್ಕಂತೆ ಆಗುತ್ತದೆ ಎನ್ನುತ್ತಾನೆ. ಅಲ್ಲಿ ಅಣ್ಣ ಏನು ಮಾಡುತ್ತಿದ್ದಾನೆ ಎಂದು ತಿಳಿಯಲು ನಾವು ಅಲ್ಲಿಗೆ ಹೋಗಬೇಕು ಎಂದು ಅಪೇಕ್ಷಾ ಹೇಳುತ್ತಾಳೆ. ಪಾರ್ಥ ಒಪ್ಪುತ್ತಾನೆ.

ಲಕ್ಕಿ ಲಕ್ಷ್ಮಿಕಾಂತ್‌ ಮತ್ತು ಶಕುಂತಲಾದೇವಿ ಮಾತನಾಡುತ್ತಿದ್ದಾರೆ. ಆನಂದ್‌ನನ್ನು ಕೆಲಸದಿಂದ ತೆಗೆಯುವ ಯೋಜನೆ ವಿಫಲವಾದ ಕುರಿತು ಮಾತನಾಡುತ್ತಿದ್ದಾರೆ. ಆಗ ಅಲ್ಲಿಗೆ ಗೌತಮ್‌ ಬರುತ್ತಾರೆ. "ಜೈದೇವ್‌ನ ಕುರಿತು ನಾನು ತೆಗೆದುಕೊಂಡ ನಿರ್ಧಾರ ಸರಿ ಅನಿಸುತ್ತಾ ಅಮ್ಮಾ" ಎಂದು ಗೌತಮ್‌ ಕೇಳುತ್ತಾರೆ. "ಕಂಪನಿಯನ್ನು ಆರಂಭದಲ್ಲಿ ಕಟ್ಟಿಬೆಳೆಸಿದವರನ್ನು ಕೆಲಸದಿಂದ ತೆಗೆಯುವುದು ಸರಿಯಾಗೋಲ್ಲ. ಅವನು ಬಿಸ್ನೆಸ್‌ ಅನ್ನು ಬಿಸ್ನೆಸ್‌ ಆಗಿ ನೋಡ್ತಾನೆ" ಎಂದು ಗೌತಮ್‌ ಹೇಳುತ್ತಾನೆ. "ಕಂಪನಿಗಾಗಿ ಅವನು ಏನಾದರೂ ನಿರ್ಧಾರ ತೆಗೆದುಕೊಂಡರೆ ಅದಕ್ಕೆ ಬೆಂಬಲ ನೀಡಬೇಕು ಅಲ್ವಾ" ಎಂದು ಶಕುಂತಲಾದೇವಿ ಹೇಳುತ್ತಾರೆ. ಹೀಗೆ ಒಂದಿಷ್ಟು ಮಾತು ನಡೆಯುತ್ತದೆ. ಇನ್ನೊಂದೆಡೆ ಭೂಮಿಕಾ ಯೋಚಿಸುತ್ತಾರೆ. "ಶಕುಂತಲಾದೇವಿ ಬಗ್ಗೆ ನಾನು ಏನು ಹೇಳಿದರೂ ಗೌತಮ್‌ ನಂಬೋಲ್ಲ. ಮೊದಲು ನಾನು ಸಾಕ್ಷಿ ಕಲೆ ಹಾಕಬೇಕು" ಎಂದು ಭೂಮಿಕಾ ಯೋಚಿಸುತ್ತಾರೆ. ಹೀಗೆ, ಶಕುಂತಲಾ ಗ್ಯಾಂಗ್‌ಗೆ ಎಲ್ಲೋ ಆತಂಕವೂ ಇದೆ.

ಜೀವನ್‌ ಮನೆಗೆ ಬರುತ್ತಾನೆ. ಸದಾಶಿವ ಮತ್ತು ಮಂದಾಕಿನಿ ಕುಶಲ ವಿಚಾರಿಸುತ್ತಾರೆ. ಏನು ಸೀರಿಯಸ್‌ ಆಗಿದ್ದಿ ಎಂದು ಮಂದಾಕಿನಿ ಕೇಳುತ್ತಾರೆ. "ಎಲ್ಲಾ ಸಮಸ್ಯೆ ನನ್ನಿಂದ ಆರಂಭವಾಯಿತು. ಇನ್ನು ಮೇಲೆ ಯಾರೂ ಅಕ್ಕನ ಮನೆಗೆ ಹೋಗಬಾರದು. ಅವರೂ ಇಲ್ಲಿಗೆ ಬರಬಾರದು. ಕನೆಕ್ಷನ್‌ ಕಟ್‌ ಆಗಬೇಕು" ಎಂದು ಜೀವನ್‌ ಹೇಳುತ್ತಾನೆ. ಇದಕ್ಕೆ ಎಲ್ಲರೂ ವಿರೋಧ ವ್ಯಕ್ತಪಡಿಸುತ್ತಾರೆ.

ಧಾರಾವಾಹಿ ಹೆಸರು: ಅಮೃತಧಾರೆ.

ಯಾವ ಚಾನೆಲ್‌: ಜೀ ಕನ್ನಡ

ಪ್ರಸಾರ ಸಮಯ: ಪ್ರತಿದಿನ ರಾತ್ರಿ 7 ಗಂಟೆಗೆ

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ: ಛಾಯಾ ಸಿಂಗ್‌: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ವರ್ಷ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ), ರಾಣವ್‌: ಜೈದೇವ್‌, ಚಂದನ್‌: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ), ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ).

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in