ಕರ್ನಾಟಕದ 17 ಪೊಲೀಸ್‌ ಅಧಿಕಾರಿ-ಸಿಬ್ಬಂದಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ, ಶ್ಲಾಘನೀಯ ಸೇವಾ ಪದಕ ಪ್ರಕಟ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದ 17 ಪೊಲೀಸ್‌ ಅಧಿಕಾರಿ-ಸಿಬ್ಬಂದಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ, ಶ್ಲಾಘನೀಯ ಸೇವಾ ಪದಕ ಪ್ರಕಟ

ಕರ್ನಾಟಕದ 17 ಪೊಲೀಸ್‌ ಅಧಿಕಾರಿ-ಸಿಬ್ಬಂದಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ, ಶ್ಲಾಘನೀಯ ಸೇವಾ ಪದಕ ಪ್ರಕಟ

Presidents Medals: ಕರ್ನಾಟಕ ರಾಜ್ಯದ 17 ಪೊಲೀಸ್‌ ಅಧಿಕಾರಿ, ಸಿಬ್ಬಂದಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ, ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ. (ವರದಿ-ಎಚ್.‌ ಮಾರುತಿ)

ಕರ್ನಾಟಕದ 17 ಪೊಲೀಸ್‌ ಅಧಿಕಾರಿ, ಸಿಬ್ಬಂದಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ, ಶ್ಲಾಘನೀಯ ಸೇವಾ ಪದಕ ಪ್ರಕಟ
ಕರ್ನಾಟಕದ 17 ಪೊಲೀಸ್‌ ಅಧಿಕಾರಿ, ಸಿಬ್ಬಂದಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ, ಶ್ಲಾಘನೀಯ ಸೇವಾ ಪದಕ ಪ್ರಕಟ

ಬೆಂಗಳೂರು: 2025ರ ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ರಾಜ್ಯದ ಹಲವು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕ ಮತ್ತು ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ. ವಿಶಿಷ್ಟ ಸೇವಾ ಪದಕಕ್ಕೆ ಬಸವರಾಜು ಶರಣಪ್ಪ ಜಿಳ್ಳೆ ಡಿಐಜಿಪಿ (ಕೆಎಸ್​ಆರ್​ಪಿ, ಬೆಂಗಳೂರು); ಹಂಜಾ ಹುಸೇನ್ ಕಮಾಂಡೆಂಟ್ (12ನೇ ಪಡೆ, ಕೆಎಸ್​ಆರ್​ಪಿ, ತುಮಕೂರು) ಭಾಜನರಾಗಿದ್ದಾರೆ.

ಶ್ಲಾಘನೀಯ ಸೇವಾ ಪದಕಕ್ಕೆ ರೇಣುಕಾ ಕೆ ಸುಕುಮಾರ, ಐಪಿಎಸ್ ( ಡಿಐಜಿಪಿ, ಡಿಸಿಆರ್‌ಇ ಬೆಂಗಳೂರು); ಸಂಜೀವ ಎಂ ಪಾಟೀಲ್, ಐಪಿಎಸ್ (ಎಐಜಿಪಿ, ಜನರಲ್, ಪೊಲೀಸ್ ಪ್ರಧಾನ ಕಛೇರಿ, ಬೆಂಗಳೂರು ನಗರ) ಬಿಎಂ ಪ್ರಸಾದ್ ಕಮಾಂಡೆಂಟ್, (ಐಆರ್‌ಚಿ, ಮುನಿರಾಬಾದ್, ಕೊಪ್ಪಳ) ಇವರು ಪುರಸ್ಕೃತರಾಗಿದ್ದಾರೆ.

ಶ್ಲಾಘನೀಯ ಸೇವಾ ಪದಕ ಪುರಸ್ಕೃತರು

  1. ವೀರೇಂದ್ರ ನಾಯಕ್ ಎನ್. ಡೆಪ್ಯೂಟಿ ಕಮಾಂಡೆಂಟ್, (11ನೇ ಪಡೆ ಕೆಎಸ್​ಆರ್​​ಪಿ ಹಾಸನ)
  2. ಗೋಪಾಲ್ ಡಿ ಜೋಗಿನ - ಎಸಿಪಿ (ಸಿಸಿಬಿ ಬೆಂಗಳೂರು ನಗರ)
  3. ಗೋಪಾಲಕೃಷ್ಣ ಬಿ ಗೌಡ‌ - ಡಿವೈಎಸ್‌ಪಿ (ಚಿಕ್ಕೋಡಿ ಉಪ ವಿಭಾಗ, ಬೆಳಗಾವಿ ಜಿಲ್ಲೆ)
  4. ಹೆಚ್. ಗುರುಬಸವರಾಜ - ಪೊಲೀಸ್ ಇನ್ಸ್​​ಪೆಕ್ಟರ್ (ಕರ್ನಾಟಕ ಲೋಕಾಯುಕ್ತ, ಚಿತ್ರದುರ್ಗ) 
  5. ಜಯರಾಜ್‌ ಹೆಚ್​​ - ಪೊಲೀಸ್ ಇನ್ಸ್‌ಪೆಕ್ಟರ್, (ಗೋವಿಂದಪುರ ಪೊಲೀಸ್ ಠಾಣೆ, ಬೆಂಗಳೂರು ನಗರ)
  6. ಪ್ರದೀಪ್ ಬಿಆರ್ - ಸರ್ಕಲ್ ಇನ್ಸ್‌ಪೆಕ್ಟರ್ ಆಫ್ ಪೊಲೀಸ್ (ಹೊಳೆನರಸಿಪುರ ವೃತ್ತ, ಹಾಸನ ಜಿಲ್ಲೆ)
  7. ಮೊಹಮದ್ ಮುಕರಮ್ - ಪೊಲೀಸ್ ಇನ್ಸ್‌ಪೆಕ್ಟರ್‌ (ಸಿಸಿಬಿ, ಬೆಂಗಳೂರು ನಗರ)
  8. ವಸಂತ್ ಕುಮಾರ ಎಂಎ - ಪೊಲೀಸ್ ಇನ್ಸ್‌ಪೆಕ್ಟರ್‌ (ಬ್ಯುರೋ ಆಫ್ ಇಮಿಗ್ರೇಷನ್‌)‌
  9. ಮಂಜುನಾಥ ವಿಜಿ - ಎಎಸ್‌ಐ (ಸಿಐಡಿ, ಬೆಂಗಳೂರು)

ಶ್ಲಾಘನೀಯ ಸೇವಾ ಪದಕ ಪುರಸ್ಕೃತರು

  1. ಅಲ್ತಾಪ್ ಹುಸೇನ್ ಎನ್ ದಖನಿ - ಎಎಸ್‌ಐ, (ವಿಲ್ಸನ್‌ಗಾರ್ಡನ್ ಪೊಲೀಸ್ ಠಾಣೆ, ಬೆಂಗಳೂರು ನಗರ)
  2. ಬಲೇಂದ್ರನ್ ಸ್ಪೇ - ಆರ್‌ಹೆಚ್‌ಸಿ 4ನೇ ಪಡೆ, (ಕೆಎಸ್​​ಆರ್​​ಪಿ, ಬೆಂಗಳೂರು)
  3. ಅರುಣಕುಮಾರ - ಸಿಹೆಚ್‌ಸಿ, (ಡಿಐಜಿಪಿ ಕಛೇರಿ, ಈಶಾನ್ಯ ವಲಯ ಕಲಬುರಗಿ)
  4. ನಯಾಜ್ ಅಂಜುಮ್ - ಎಹೆಚ್‌ಸಿ (ಡಿಪಿಓ, ಚಿಕ್ಕಮಗಳೂರು)
  5. ಶ್ರೀನಿವಾಸ ಎಂ - ಸಿಹೆಚ್‌ಸಿ-8229, (ಡಿಸಿಪಿ ಪಶ್ಚಿಮ ವಿಭಾಗ ಕಛೇರಿ, ಬೆಂಗಳೂರು ನಗರ)
  6. ಅಶ್ರಫ್ ಪಿಎಂ (ಹಿರಿಯ ಗುಪ್ತ ಸಹಾಯಕರು ರಾಜ್ಯ ಗುಪ್ತವಾರ್ತೆ, ಬೆಂಗಳೂರು)
  7. ಶಿವಾನಂದ ಬಿ - ಸಿಹೆಚ್‌ಸಿ-105 ( ಕುಂದಾಪುರ ಪೊಲೀಸ್ ಠಾಣೆ, ಉಡುಪಿ ಜಿಲ್ಲೆ)
  8. ಎನ್.‌ ಕೃಷ್ಣ - ಹೆಡ್‌ ಕಾನ್‌ ಸ್ಟೇಬಲ್‌ ಸಿಬಿಐ, ಎಸಿಬಿ ಬೆಂಗಳೂರು ಇವರಿಗೆ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಪತಿಗಳ ಶೌರ್ಯ ಪ್ರಶಸ್ತಿ ಪ್ರಕಟಿಸಲಾಗಿದೆ.

Whats_app_banner