ಕನ್ನಡ ಸುದ್ದಿ / ಕರ್ನಾಟಕ /
ಕರ್ನಾಟಕದ 17 ಪೊಲೀಸ್ ಅಧಿಕಾರಿ-ಸಿಬ್ಬಂದಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ, ಶ್ಲಾಘನೀಯ ಸೇವಾ ಪದಕ ಪ್ರಕಟ
Presidents Medals: ಕರ್ನಾಟಕ ರಾಜ್ಯದ 17 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ, ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ. (ವರದಿ-ಎಚ್. ಮಾರುತಿ)

ಕರ್ನಾಟಕದ 17 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ, ಶ್ಲಾಘನೀಯ ಸೇವಾ ಪದಕ ಪ್ರಕಟ
ಬೆಂಗಳೂರು: 2025ರ ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ರಾಜ್ಯದ ಹಲವು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕ ಮತ್ತು ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ. ವಿಶಿಷ್ಟ ಸೇವಾ ಪದಕಕ್ಕೆ ಬಸವರಾಜು ಶರಣಪ್ಪ ಜಿಳ್ಳೆ ಡಿಐಜಿಪಿ (ಕೆಎಸ್ಆರ್ಪಿ, ಬೆಂಗಳೂರು); ಹಂಜಾ ಹುಸೇನ್ ಕಮಾಂಡೆಂಟ್ (12ನೇ ಪಡೆ, ಕೆಎಸ್ಆರ್ಪಿ, ತುಮಕೂರು) ಭಾಜನರಾಗಿದ್ದಾರೆ.
ಶ್ಲಾಘನೀಯ ಸೇವಾ ಪದಕಕ್ಕೆ ರೇಣುಕಾ ಕೆ ಸುಕುಮಾರ, ಐಪಿಎಸ್ ( ಡಿಐಜಿಪಿ, ಡಿಸಿಆರ್ಇ ಬೆಂಗಳೂರು); ಸಂಜೀವ ಎಂ ಪಾಟೀಲ್, ಐಪಿಎಸ್ (ಎಐಜಿಪಿ, ಜನರಲ್, ಪೊಲೀಸ್ ಪ್ರಧಾನ ಕಛೇರಿ, ಬೆಂಗಳೂರು ನಗರ) ಬಿಎಂ ಪ್ರಸಾದ್ ಕಮಾಂಡೆಂಟ್, (ಐಆರ್ಚಿ, ಮುನಿರಾಬಾದ್, ಕೊಪ್ಪಳ) ಇವರು ಪುರಸ್ಕೃತರಾಗಿದ್ದಾರೆ.
ಶ್ಲಾಘನೀಯ ಸೇವಾ ಪದಕ ಪುರಸ್ಕೃತರು
- ವೀರೇಂದ್ರ ನಾಯಕ್ ಎನ್. ಡೆಪ್ಯೂಟಿ ಕಮಾಂಡೆಂಟ್, (11ನೇ ಪಡೆ ಕೆಎಸ್ಆರ್ಪಿ ಹಾಸನ)
- ಗೋಪಾಲ್ ಡಿ ಜೋಗಿನ - ಎಸಿಪಿ (ಸಿಸಿಬಿ ಬೆಂಗಳೂರು ನಗರ)
- ಗೋಪಾಲಕೃಷ್ಣ ಬಿ ಗೌಡ - ಡಿವೈಎಸ್ಪಿ (ಚಿಕ್ಕೋಡಿ ಉಪ ವಿಭಾಗ, ಬೆಳಗಾವಿ ಜಿಲ್ಲೆ)
- ಹೆಚ್. ಗುರುಬಸವರಾಜ - ಪೊಲೀಸ್ ಇನ್ಸ್ಪೆಕ್ಟರ್ (ಕರ್ನಾಟಕ ಲೋಕಾಯುಕ್ತ, ಚಿತ್ರದುರ್ಗ)
- ಜಯರಾಜ್ ಹೆಚ್ - ಪೊಲೀಸ್ ಇನ್ಸ್ಪೆಕ್ಟರ್, (ಗೋವಿಂದಪುರ ಪೊಲೀಸ್ ಠಾಣೆ, ಬೆಂಗಳೂರು ನಗರ)
- ಪ್ರದೀಪ್ ಬಿಆರ್ - ಸರ್ಕಲ್ ಇನ್ಸ್ಪೆಕ್ಟರ್ ಆಫ್ ಪೊಲೀಸ್ (ಹೊಳೆನರಸಿಪುರ ವೃತ್ತ, ಹಾಸನ ಜಿಲ್ಲೆ)
- ಮೊಹಮದ್ ಮುಕರಮ್ - ಪೊಲೀಸ್ ಇನ್ಸ್ಪೆಕ್ಟರ್ (ಸಿಸಿಬಿ, ಬೆಂಗಳೂರು ನಗರ)
- ವಸಂತ್ ಕುಮಾರ ಎಂಎ - ಪೊಲೀಸ್ ಇನ್ಸ್ಪೆಕ್ಟರ್ (ಬ್ಯುರೋ ಆಫ್ ಇಮಿಗ್ರೇಷನ್)
- ಮಂಜುನಾಥ ವಿಜಿ - ಎಎಸ್ಐ (ಸಿಐಡಿ, ಬೆಂಗಳೂರು)
ಶ್ಲಾಘನೀಯ ಸೇವಾ ಪದಕ ಪುರಸ್ಕೃತರು
- ಅಲ್ತಾಪ್ ಹುಸೇನ್ ಎನ್ ದಖನಿ - ಎಎಸ್ಐ, (ವಿಲ್ಸನ್ಗಾರ್ಡನ್ ಪೊಲೀಸ್ ಠಾಣೆ, ಬೆಂಗಳೂರು ನಗರ)
- ಬಲೇಂದ್ರನ್ ಸ್ಪೇ - ಆರ್ಹೆಚ್ಸಿ 4ನೇ ಪಡೆ, (ಕೆಎಸ್ಆರ್ಪಿ, ಬೆಂಗಳೂರು)
- ಅರುಣಕುಮಾರ - ಸಿಹೆಚ್ಸಿ, (ಡಿಐಜಿಪಿ ಕಛೇರಿ, ಈಶಾನ್ಯ ವಲಯ ಕಲಬುರಗಿ)
- ನಯಾಜ್ ಅಂಜುಮ್ - ಎಹೆಚ್ಸಿ (ಡಿಪಿಓ, ಚಿಕ್ಕಮಗಳೂರು)
- ಶ್ರೀನಿವಾಸ ಎಂ - ಸಿಹೆಚ್ಸಿ-8229, (ಡಿಸಿಪಿ ಪಶ್ಚಿಮ ವಿಭಾಗ ಕಛೇರಿ, ಬೆಂಗಳೂರು ನಗರ)
- ಅಶ್ರಫ್ ಪಿಎಂ (ಹಿರಿಯ ಗುಪ್ತ ಸಹಾಯಕರು ರಾಜ್ಯ ಗುಪ್ತವಾರ್ತೆ, ಬೆಂಗಳೂರು)
- ಶಿವಾನಂದ ಬಿ - ಸಿಹೆಚ್ಸಿ-105 ( ಕುಂದಾಪುರ ಪೊಲೀಸ್ ಠಾಣೆ, ಉಡುಪಿ ಜಿಲ್ಲೆ)
- ಎನ್. ಕೃಷ್ಣ - ಹೆಡ್ ಕಾನ್ ಸ್ಟೇಬಲ್ ಸಿಬಿಐ, ಎಸಿಬಿ ಬೆಂಗಳೂರು ಇವರಿಗೆ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಪತಿಗಳ ಶೌರ್ಯ ಪ್ರಶಸ್ತಿ ಪ್ರಕಟಿಸಲಾಗಿದೆ.
