ಬಂಡೀಪುರದಲ್ಲಿ ವ್ಯಾಘ್ರನ ಭರ್ಜರಿ ಬೇಟೆ: ಸಫಾರಿಗರ ಎದುರೇ ಜಿಂಕೆಯನ್ನು ಬೇಟೆಯಾಡಿದ ಹುಲಿ
ಕನ್ನಡ ಸುದ್ದಿ  /  ಕರ್ನಾಟಕ  /  ಬಂಡೀಪುರದಲ್ಲಿ ವ್ಯಾಘ್ರನ ಭರ್ಜರಿ ಬೇಟೆ: ಸಫಾರಿಗರ ಎದುರೇ ಜಿಂಕೆಯನ್ನು ಬೇಟೆಯಾಡಿದ ಹುಲಿ

ಬಂಡೀಪುರದಲ್ಲಿ ವ್ಯಾಘ್ರನ ಭರ್ಜರಿ ಬೇಟೆ: ಸಫಾರಿಗರ ಎದುರೇ ಜಿಂಕೆಯನ್ನು ಬೇಟೆಯಾಡಿದ ಹುಲಿ

ಬಂಡೀಪುರದಲ್ಲಿ ಸಫಾರಿಗರ ಎದುರೇ ಜಿಂಕೆಯನ್ನು ಬೇಟೆಯಾಡಿದ ಹುಲಿಯ ವಿಡಿಯೊ ಒಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಬಂಡೀಪುರದಲ್ಲಿ ಸಫಾರಿಗರ ಎದುರೇ ಜಿಂಕೆಯನ್ನು ಬೇಟೆಯಾಡಿದ ಹುಲಿ
ಬಂಡೀಪುರದಲ್ಲಿ ಸಫಾರಿಗರ ಎದುರೇ ಜಿಂಕೆಯನ್ನು ಬೇಟೆಯಾಡಿದ ಹುಲಿ

ಬಂಡೀಪುರ: ಸಫಾರಿ ಹೋಗಿದ್ದ ಪ್ರವಾಸಿಗರ ಎದುರೇ ಜಿಂಕೆಯನ್ನು ಬೇಟೆಯಾಡಿದ ಹುಲಿಯ ವಿಡಿಯೊ ಒಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಬಂಡೀಪುರದಲ್ಲಿ ವ್ಯಾಘ್ರನ ಭರ್ಜರಿ ಬೇಟೆಯನ್ನು ಕಂಡು ಸಫಾರಿಗರು ಒಂದು ಕ್ಷಣ ಆತಂಕಕ್ಕೊಳಗಾಗಿದ್ದಾರೆ. ಬಂಡೀಪುರದ ವಾಹನಗಳಲ್ಲಿ ಸಫಾರಿ ನಡೆಸುತ್ತಿರುವಾಗ, ಪ್ರವಾಸಿಗರ ಕಣ್ಣೆದುರಿನಲ್ಲೇ ಹುಲಿಯ ಬಾಯಿಗೆ ಜಿಂಕೆ ಸಿಲುಕಿದೆ. ಈ ಕ್ಷಣವನ್ನು ಪ್ರವಾಸಿಗರು ತಮ್ಮ ಮೊಬೈಲ್ ಮತ್ತು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಜಿಂಕೆಯನ್ನು ಕ್ಷಣಮಾತ್ರದಲ್ಲೇ ಹುಲಿ ಬೇಟೆಯಾಡಿದ್ದನ್ನು ಕಣ್ಣಾರೆ ಕಂಡು ಒಂದು ಕ್ಷಣ ಗಾಬರಿಗೊಂಡ ಸಫಾರಿಗರು, ಏನು ಮಾಡಬೇಕೆಂದು ತೋಚದೆ ಆತಂಕಕ್ಕೊಳಗಾದರು. ಭಾರಿ ಗಾತ್ರದ ಕೊಂಬಿನ ಜಿಂಕೆಯನ್ನು ಬೇಟೆಯಾಡಿ ಕಚ್ಚಿಕೊಂಡು ಧರಧರನೆ ಎಳೆದೊಯ್ದ ಹುಲಿಯನ್ನು ಕಂಡು ಪ್ರವಾಸಿಗರು ಭಯಗೊಂಡರು. ಭಾನುವಾರ ಮೇ 4ರಂದು ಸಂಜೆ ಪ್ರವಾಸಿಗರು ಸಫಾರಿಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ.

ಭಾರಿ ಗಾತ್ರದ ಜಿಂಕೆಯನ್ನು ಹುಲಿ ಕಚ್ಚಿ ಎಳೆದೊಯ್ಯುತ್ತಿರುವ ದೃಶ್ಯ ಮತ್ತು ಅದರ ಅತ್ಯಂತ ಸಮೀಪದಲ್ಲಿ ಪ್ರವಾಸಿಗರು ಸಫಾರಿ ನಡೆಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in