ಬೆಂಗಳೂರಿನಲ್ಲಿ ಇಂದು ಪೊಲೀಸ್ ಮಾಸಿಕ ಜನಸಂಪರ್ಕ ಸಭೆ, ಎಲ್ಲೆಲ್ಲಿ ಯಾವ ಅಧಿಕಾರಿ ಸಿಗುತ್ತಾರೆ
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ನಡೆಸಿಕೊಂಡು ಬರುತ್ತಿರುವ ಮಾಸಿಕ ಪೊಲೀಸ್ ಜನಸಂಪರ್ಕ ಸಭೆ ಈ ತಿಂಗಳು ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಇಂದು ಏಪ್ರಿಲ್ 26ರ ಶನಿವಾರ ನಡೆಯಲಿವೆ.

ಬೆಂಗಳೂರು:ಬೆಂಗಳೂರು ನಗರ ಸುರಕ್ಷತೆ, ನಾಗರೀಕರ ಸಮಸ್ಯೆಗಳು ಸೇರಿದಂತೆ ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸರು ನಡೆಸಿಕೊಂಡು ಬರುತ್ತಿರುವ ನಮಸ್ಕಾರ ಬೆಂಗಳೂರು ಎನ್ನುವ ಕಾರ್ಯಕ್ರಮ 2025 ರ ಇಂದು ಏಪ್ರಿಲ್ 26ರ ಶನಿವಾರ ನಡೆಯಲಿದೆ.ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಅವರ ನೇತೃತ್ವದಲ್ಲಿ ಮಾಸಿಕ ಜನ ಸಂಪರ್ಕ ಸಭೆ ನಡೆಯುತ್ತಿದ್ದು. ಪೊಲೀಸ್ ಆಯುಕ್ತರ ಸಹಿತ ಎಲ್ಲಾ ಹಿರಿಯ ಅಧಿಕಾರಿಗಳು ಶನಿವಾರ ಲಭ್ಯ ಇರಲಿದ್ದಾರೆ. ವಿವಿಧ ಹಂತದ ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು ಹಾಗೂ ಉಪ ಆಯುಕ್ತರು ಸಭೆಗಳಲ್ಲಿ ಹಾಜರಿದ್ದು ಜನರ ಸಮಸ್ಯೆಗೆ ಪರಿಹಾರ ಕೊಡಲಿದ್ದಾರೆ. ಸಂಬಂಧಪಟ್ಟ ನಾಗರೀಕರು ನಿಗದಿತ ಉಪವಿಭಾಗಗಳಿಗೆ ಆಗಮಿಸಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರ ಒಳಗೆ ತಮ್ಮ ದೂರು ನೀಡಬಹುದು ಎಂದು ತಿಳಿಸಲಾಗಿದೆ.
ಬೆಂಗಳೂರು ನಗರ ಪೊಲೀಸರಿಗೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮಲ್ಲಿರುವ ಸಲಹೆಗಳು ಅಥವಾ ದೂರುಗಳನ್ನು ಏಪ್ರಿಲ್ 26ರ ಶನಿವಾರದಂದು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಹುಳಿಮಾವು, ಮೀನಾಕ್ಷಿ ಮಾಲ್ ಹತ್ತಿರದಲ್ಲಿರುವ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ನಡೆಯಲಿರುವ ಮಾಸಿಕ ಜನಸಂಪರ್ಕ ದಿವಸದಲ್ಲಿ ಮುಕ್ತವಾಗಿ ಚರ್ಚಿಸಬಹುದು. ಈ ಸಭೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಇತರ ಹಿರಿಯ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ.
ಬೆಂಗಳೂರು ನಗರ ಪೊಲೀಸರಿಗೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮಲ್ಲಿರುವ ಸಲಹೆಗಳು ಅಥವಾ ದೂರುಗಳನ್ನು ಏಪ್ರಿಲ್ 26ರ ಶನಿವಾರದಂದು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಹುಳಿಮಾವು, ಮೀನಾಕ್ಷಿ ಮಾಲ್ ಹತ್ತಿರದಲ್ಲಿರುವ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ನಡೆಯಲಿರುವ ಮಾಸಿಕ ಜನಸಂಪರ್ಕ ದಿವಸದಲ್ಲಿ ಮುಕ್ತವಾಗಿ ಚರ್ಚಿಸಬಹುದು. ಈ ಸಭೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಇತರ ಹಿರಿಯ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ.
ಹೆಚ್ಚುವರಿ ಪೊಲೀಸ್ ಆಯುಕ್ತರಾದ ವಿಕಾಸ್ಕುಮಾರ್ ವಿಕಾಸ್ ಅವರು ಕಲಾಸಿಪಾಳ್ಯ ಹಾಗೂ ಕಾಟನ್ಪೇಟೆ ಠಾಣೆ, ಜಂಟಿ ಆಯುಕ್ತರಾದ ರಮೇಶ್ ಬಾನೋತ್ ಅವರು ಬೆಳ್ಳಂದೂರು ಪೊಲೀಸ್ ಠಾಣೆ, ಉಪ ಪೊಲೀಸ್ ಆಯುಕ್ತರಾದ ಎಚ್.ಟಿ.ಶೇಖರ್ ಹಲಸೂರು ಗೇಟ್ ಠಾಣೆ, ಡಿ.ದೇವರಾಜು ಅವರು ಕೆಜಿಹಳ್ಳಿ ಪೊಲೀಸ್ ಠಾಣೆಯಲ್ಲಿ ಇರಲಿದ್ದಾರೆ.
ಎಸ್.ಗಿರೀಶ್ ಅವರು ಕಲಾಸಿಪಾಳ್ಯ ಹಾಗೂ ಕಾಟನ್ಪೇಟೆ ಠಾಣೆ, ಸಾರಾ ಫಾತೀಮಾ ಅವರು ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ.
ಸೈದುಲು ಅಡಾವತ್ ಅವರು ಯಶವಂತಪುರ ಠಾಣೆ, ವಿ.ಜೆ.ಸಜಿತ್ ಅವರು ದೇವನಹಳ್ಳಿ ಪೊಲೀಸ್ ಠಾಣೆ, ಲೋಕೇಶ ಜಗಲಾಸರ್ ಅವರು ತಲಘಟ್ಟಪುರ ಠಾಣೆ, ಡಾ.ಶಿವಕುಮಾರ್ ಗುಣಾರ ಅವರು ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಉಪಸ್ಥಿತರಲಿದ್ದಾರೆ.