ಬೆಂಗಳೂರು ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮತ್ತೆರಡು ಹೆದ್ದಾರಿ ಟೋಲ್‌: ನಾಳೆಯಿಂದ ಆರಂಭ, ಎಲ್ಲೆಲ್ಲಿವೆ ಹೊಸ ಟೋಲ್‌ಗಳು
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮತ್ತೆರಡು ಹೆದ್ದಾರಿ ಟೋಲ್‌: ನಾಳೆಯಿಂದ ಆರಂಭ, ಎಲ್ಲೆಲ್ಲಿವೆ ಹೊಸ ಟೋಲ್‌ಗಳು

ಬೆಂಗಳೂರು ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮತ್ತೆರಡು ಹೆದ್ದಾರಿ ಟೋಲ್‌: ನಾಳೆಯಿಂದ ಆರಂಭ, ಎಲ್ಲೆಲ್ಲಿವೆ ಹೊಸ ಟೋಲ್‌ಗಳು

ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ತಮಿಳುನಾಡಿನ ದಿಂಡಿಗಲ್‌ ರಾಷ್ಟ್ರೀಯ ಹೆದ್ದಾರಿಯ ಎರಡು ಕಡೆಗಳಲ್ಲಿ ಟೋಲ್‌ ಸಂಗ್ರಹ ಶುಕ್ರವಾರದಿಂದ ಶುರುವಾಗಲಿದೆ.

ಬೆಂಗಳೂರಿನಿಂದ ದಿಂಡಿಗಲ್‌ ಸಂಪರ್ಕಿಸುವ ಹೆದ್ದಾರಿಯ ಕರ್ನಾಟಕ ಭಾಗದಲ್ಲಿ ಎರಡು ಟೋಲ್‌ ಬರಲಿವೆ.( ಪ್ರಾತಿನಿಧಿಕ ಚಿತ್ರ)
ಬೆಂಗಳೂರಿನಿಂದ ದಿಂಡಿಗಲ್‌ ಸಂಪರ್ಕಿಸುವ ಹೆದ್ದಾರಿಯ ಕರ್ನಾಟಕ ಭಾಗದಲ್ಲಿ ಎರಡು ಟೋಲ್‌ ಬರಲಿವೆ.( ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳಲ್ಲಿ ಎರಡು ಹೊಸ ಟೋಲ್‌ಗಳು ಮೇ 9 ರ ಶುಕ್ರವಾರದಿಂದ ಆರಂಭವಾಗಲಿವೆ. ಈಗಾಗಲೇ ಬೆಂಗಳೂರು ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಟೋಲ್‌ಗಳಿವೆ. ಬೆಂಗಳೂರು ಮೈಸೂರು, ಬೆಂಗಳೂರು ಪುಣೆ, ದೇವನಹಳ್ಳಿ, ಹೊಸಕೋಟೆ ಸಹಿತ ಹಲವು ಭಾಗಗಳಲ್ಲಿ ಟೋಲ್‌ಗಳ ಮೂಲಕ ರಾಷ್ಟ್ರೀ ಹೆದ್ಧಾರಿ ಪ್ರಾಧಿಕಾರವು ವಾಹನಗಳ ಸಂಚಾರಕ್ಕೆ ಶುಲ್ಕ ಸಂಗ್ರಹಿಸುತ್ತಿದೆ. ಈಗ ಬೆಂಗಳೂರು ಸಂಪರ್ಕ ಇರುವ ಎರಡು ಹೆದ್ದಾರಿಗಳಲ್ಲಿ ಟೋಲ್‌ ವ್ಯವಸ್ಥೆ ಮಾಡಲಾಗಿದೆ.ಬೆಂಗಳೂರಿನಿಂದ ತಮಿಳುನಾಡಿನ ದಿಂಡಿಗಲ್‌ಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ 948ರ ದಕ್ಷಿಣ ಬೆಂಗಳೂರು ಜಿಲ್ಲೆಯ ಕನಕಪುರ ತಾಲ್ಲೂಕಿನ ಸೋಮನಹಳ್ಳಿ ಗ್ರಾಮ ಹಾಗೂ ಚಾಮರಾಜನಗರ ಜಿಲ್ಲೆಯ ಅಟ್ಟುಗೂಳಿಪುರ ಗ್ರಾಮದ ಬಳಿ ಟೋಲ್‌ಗೇಟ್‌ಗಳಲ್ಲಿ ಸೇವೆ ಶುರುವಾಗಲಿದೆ. ಈ ರಸ್ತೆಯಲ್ಲಿ ಹಣ ಪಾವತಿ ಮಾಡಿ ಸಂಚರಿಸುವ ವ್ಯವಸ್ಥೆ ಶುರುವಾಗಲಿದ್ದು, ವಾಹನಗಳಿಗೆ ದರ ನಿಗದಿ ಮಾಡಲಾಗಿದೆ.

ಹಲವು ವರ್ಷದ ಹಿಂದೆಯೇ ಸೋಮನಹಳ್ಳಿ ಹಾಗೂ ಅಟ್ಟುಗೂಳಿಪುರದಲ್ಲಿ ಟೋಲ್‌ ನಿರ್ಮಿಸಿದರೂ ರಸ್ತೆ ಕಾಮಗಾರಿಯಿಂದಾಗಿ ಆರಂಭಿಸಿರಲಿಲ್ಲ. ಈಗ ಕೆಲಸ ಪೂರ್ಣಗೊಂಡು ರಸ್ತೆ ಬಳಕೆಗೆ ಮುಕ್ತಗೊಳಿಸಲಾಗಿದೆ. ಇದರಿಂದ ಟೋಲ್‌ ಕೂಡ ಆರಂಭವಾಗುತ್ತಿದೆ.

ಸೋಮನಹಳ್ಳಿ ಟೋಲ್‌

ಸೋಮನಹಳ್ಳಿ ಟೋಲ್‌ ಗೇಟ್‌ನಲ್ಲಿ ಕಾರು, ಜೀಪು, ವ್ಯಾನ್‌ ಹಾಗೂ ಲಘು ವಾಹನಕ್ಕೆ ಒಂದು ಬಾರಿಗೆ ರೂ.85 ಹಾಗೂ ಅದೇ ದಿನ ವಾಪಸ್‌ಬರಲು ರೂ.130 ನಿಗದಿ ಮಾಡಲಾಗಿದೆ.ಮಾಸಿಕ ಪಾಸ್‌ಗೆ ರೂ2855 ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ ಸಂಚರಿಸಲು ನೊಂದಣಿಗೊಂಡಿರುವ ವಾಣಿಜ್ಯ ವಾಹನಗಳಿಗೆ ರೂ.45 ನಿಗದಿ ಮಾಡಲಾಗಿದೆ. ಮಿನಿ ಬಸ್‌,ಎಲ್‌ಸಿವಿ,.ಎಲ್‌ಜಿವಿ ವಾಹನಕ್ಕೆ ಒಂದು ಬಾರಿಗೆ ರೂ.140 ಹಾಗೂ ಅದೇ ದಿನ ವಾಪಸ್‌ಬರಲು ರೂ.205 ನಿಗದಿ ಮಾಡಲಾಗಿದೆ.ಮಾಸಿಕ ಪಾಸ್‌ಗೆ ರೂ 4610 ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ ಸಂಚರಿಸಲು ನೊಂದಣಿಗೊಂಡಿರುವ ವಾಣಿಜ್ಯ ವಾಹನಗಳಿಗೆ ರೂ.70 ನಿಗದಿ ಮಾಡಲಾಗಿದೆ. ಬಸ್‌ ಹಾಗೂ ಟ್ರಕ್‌ ವಾಹನಕ್ಕೆ ಒಂದು ಬಾರಿಗೆ ರೂ. 290 ಹಾಗೂ ಅದೇ ದಿನ ವಾಪಸ್‌ ಬರಲು ರೂ.435 ನಿಗದಿ ಮಾಡಲಾಗಿದೆ.ಮಾಸಿಕ ಪಾಸ್‌ಗೆ ರೂ 9660 ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ ಸಂಚರಿಸಲು ನೊಂದಣಿಗೊಂಡಿರುವ ವಾಣಿಜ್ಯ ವಾಹನಗಳಿಗೆ ರೂ.145 ನಿಗದಿ ಮಾಡಲಾಗಿದೆ.

ಭಾರೀ ವಾಹನಕ್ಕೆ ಒಂದು ಬಾರಿಗೆ ರೂ.315 ಹಾಗೂ ಅದೇ ದಿನ ವಾಪಸ್‌ಬರಲು ರೂ.475 ನಿಗದಿ ಮಾಡಲಾಗಿದೆ.ಮಾಸಿಕ ಪಾಸ್‌ಗೆ ರೂ 10540 ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ ಸಂಚರಿಸಲು ನೊಂದಣಿಗೊಂಡಿರುವ ವಾಣಿಜ್ಯ ವಾಹನಗಳಿಗೆ ರೂ.160 ನಿಗದಿ ಮಾಡಲಾಗಿದೆ.

ಜೆಸಿಬಿಯಂತಹ ವಾಹನಕ್ಕೆ ಒಂದು ಬಾರಿಗೆ ರೂ.455 ಹಾಗೂ ಅದೇ ದಿನ ವಾಪಸ್‌ಬರಲು ರೂ.680 ನಿಗದಿ ಮಾಡಲಾಗಿದೆ.ಮಾಸಿಕ ಪಾಸ್‌ಗೆ ರೂ ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ ಸಂಚರಿಸಲು ನೊಂದಣಿಗೊಂಡಿರುವ ವಾಣಿಜ್ಯ ವಾಹನಗಳಿಗೆ ರೂ.225 ನಿಗದಿ ಮಾಡಲಾಗಿದೆ.

ಭಾರೀ ಪ್ರಮಾಣದ ಸರಕು ಸಾಗಿಸುವ ವಾಹನಕ್ಕೆ ಒಂದು ಬಾರಿಗೆ ರೂ. 555 ಹಾಗೂ ಅದೇ ದಿನ ವಾಪಸ್‌ಬರಲು ರೂ.830 ನಿಗದಿ ಮಾಡಲಾಗಿದೆ.ಮಾಸಿಕ ಪಾಸ್‌ಗೆ ರೂ 18440 ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ ಸಂಚರಿಸಲು ನೊಂದಣಿಗೊಂಡಿರುವ ವಾಣಿಜ್ಯ ವಾಹನಗಳಿಗೆ ರೂ. 275 ನಿಗದಿ ಮಾಡಲಾಗಿದೆ.

ಅಟ್ಟುಗೂಳಿಪುರ ಟೋಲ್‌

ಅಟ್ಟುಗೂಳಿಪುರ ಟೋಲ್‌ ಗೇಟ್‌ನಲ್ಲಿ ಕಾರು, ಜೀಪು, ವ್ಯಾನ್‌ ಹಾಗೂ ಲಘು ವಾಹನಕ್ಕೆ ಒಂದು ಬಾರಿಗೆ ರೂ. 35 ಹಾಗೂ ಅದೇ ದಿನ ವಾಪಸ್‌ಬರಲು ರೂ.50 ನಿಗದಿ ಮಾಡಲಾಗಿದೆ.ಮಾಸಿಕ ಪಾಸ್‌ಗೆ ರೂ 1130ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ ಸಂಚರಿಸಲು ನೊಂದಣಿಗೊಂಡಿರುವ ವಾಣಿಜ್ಯ ವಾಹನಗಳಿಗೆ ರೂ.15 ನಿಗದಿ ಮಾಡಲಾಗಿದೆ. ಮಿನಿ ಬಸ್‌,ಎಲ್‌ಸಿವಿ,.ಎಲ್‌ಜಿವಿ ವಾಹನಕ್ಕೆ ಒಂದು ಬಾರಿಗೆ ರೂ.55 ಹಾಗೂ ಅದೇ ದಿನ ವಾಪಸ್‌ಬರಲು ರೂ.80 ನಿಗದಿ ಮಾಡಲಾಗಿದೆ.ಮಾಸಿಕ ಪಾಸ್‌ಗೆ ರೂ 1825 ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ ಸಂಚರಿಸಲು ನೊಂದಣಿಗೊಂಡಿರುವ ವಾಣಿಜ್ಯ ವಾಹನಗಳಿಗೆ ರೂ.25 ನಿಗದಿ ಮಾಡಲಾಗಿದೆ. ಬಸ್‌ ಹಾಗೂ ಟ್ರಕ್‌ ವಾಹನಕ್ಕೆ ಒಂದು ಬಾರಿಗೆ ರೂ. 115 ಹಾಗೂ ಅದೇ ದಿನ ವಾಪಸ್‌ ಬರಲು ರೂ.170 ನಿಗದಿ ಮಾಡಲಾಗಿದೆ.ಮಾಸಿಕ ಪಾಸ್‌ಗೆ ರೂ 3830ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ ಸಂಚರಿಸಲು ನೊಂದಣಿಗೊಂಡಿರುವ ವಾಣಿಜ್ಯ ವಾಹನಗಳಿಗೆ ರೂ.55 ನಿಗದಿ ಮಾಡಲಾಗಿದೆ.

ಭಾರೀ ವಾಹನಕ್ಕೆ ಒಂದು ಬಾರಿಗೆ ರೂ.125 ಹಾಗೂ ಅದೇ ದಿನ ವಾಪಸ್‌ಬರಲು ರೂ.190 ನಿಗದಿ ಮಾಡಲಾಗಿದೆ.ಮಾಸಿಕ ಪಾಸ್‌ಗೆ ರೂ 4175ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ ಸಂಚರಿಸಲು ನೊಂದಣಿಗೊಂಡಿರುವ ವಾಣಿಜ್ಯ ವಾಹನಗಳಿಗೆ ರೂ. 65 ನಿಗದಿ ಮಾಡಲಾಗಿದೆ.

ಜೆಸಿಬಿಯಂತಹ ವಾಹನಕ್ಕೆ ಒಂದು ಬಾರಿಗೆ ರೂ.180 ಹಾಗೂ ಅದೇ ದಿನ ವಾಪಸ್‌ಬರಲು ರೂ. 270 ನಿಗದಿ ಮಾಡಲಾಗಿದೆ.ಮಾಸಿಕ ಪಾಸ್‌ಗೆ ರೂ 6005 ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ ಸಂಚರಿಸಲು ನೊಂದಣಿಗೊಂಡಿರುವ ವಾಣಿಜ್ಯ ವಾಹನಗಳಿಗೆ ರೂ. 90 ನಿಗದಿ ಮಾಡಲಾಗಿದೆ.

ಭಾರೀ ಪ್ರಮಾಣದ ಸರಕು ಸಾಗಿಸುವ ವಾಹನಕ್ಕೆ ಒಂದು ಬಾರಿಗೆ ರೂ. 220 ಹಾಗೂ ಅದೇ ದಿನ ವಾಪಸ್‌ ಬರಲು ರೂ.330 ನಿಗದಿ ಮಾಡಲಾಗಿದೆ.ಮಾಸಿಕ ಪಾಸ್‌ಗೆ ರೂ 7310 ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ ಸಂಚರಿಸಲು ನೊಂದಣಿಗೊಂಡಿರುವ ವಾಣಿಜ್ಯ ವಾಹನಗಳಿಗೆ ರೂ.110 ನಿಗದಿ ಮಾಡಲಾಗಿದೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.