Museums Day 2024: ಬೆಂಗಳೂರು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ಮೈಸೂರು ಮ್ಯೂಸಿಯಂಗಳಿಗೆ ಹೊಸ ರೂಪ, ಏನಿದರ ವಿಶೇಷ
ಕನ್ನಡ ಸುದ್ದಿ  /  ಕರ್ನಾಟಕ  /  Museums Day 2024: ಬೆಂಗಳೂರು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ಮೈಸೂರು ಮ್ಯೂಸಿಯಂಗಳಿಗೆ ಹೊಸ ರೂಪ, ಏನಿದರ ವಿಶೇಷ

Museums Day 2024: ಬೆಂಗಳೂರು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ಮೈಸೂರು ಮ್ಯೂಸಿಯಂಗಳಿಗೆ ಹೊಸ ರೂಪ, ಏನಿದರ ವಿಶೇಷ

ಕರ್ನಾಟಕದ ಇತಿಹಾಸ, ಪರಂಪರೆ, ಸಂಸ್ಕೃತಿಯನ್ನು ಸಾರುವ ಸರ್ಕಾರಿ ಸಂಗ್ರಹಾಲಗಳಲ್ಲಿ ಆರನ್ನು ಪುನಶ್ಚೇನಗೊಳಿಸಲಾಗುತ್ತಿದೆ. ಇದರ ವಿವರ ಇಲ್ಲಿದೆ.

ಯಳಂದೂರಿನ ಮ್ಯೂಸಿಯಂ ಅನ್ನು ಪುನಶ್ಚೇತನಗೊಳಿಸಲಾಗುತ್ತಿದೆ.
ಯಳಂದೂರಿನ ಮ್ಯೂಸಿಯಂ ಅನ್ನು ಪುನಶ್ಚೇತನಗೊಳಿಸಲಾಗುತ್ತಿದೆ.

ಬೆಂಗಳೂರು: ಕರ್ನಾಟಕದಲ್ಲಿ ಮ್ಯೂಸಿಯಂಗಳು ಸಾಕಷ್ಟಿವೆ. ಖಾಸಗಿಯಾಗಿಯೂ ಹಲವಾರು ಮ್ಯೂಸಿಯಂಗಳು ಆಕರ್ಷಿಸುತ್ತಿವೆ. ಕರ್ನಾಟಕದ ಪಾರಂಪರಿಕ, ಪುರಾತತ್ವ ಹಾಗೂ ವಸ್ತು ಸಂಗ್ರಹಾಲಯಗಳ ಇಲಾಖೆಯಡಿಯಲ್ಲಿಯೇ ಕರ್ನಾಟಕದ ಹಲವು ಕಡೆ ಇರುವ ಮ್ಯೂಸಿಯಂಗಳು ಈಗಲೂ ವಿಶೇಷವಾಗಿವೆ. ಕೆಲವು ಹೊಸವರಾದರೆ ಇನ್ನಷ್ಟು ಶತಮಾನಗಳಷ್ಟು ಹಳೆಯವು, ಬೆಂಗಳೂರು. ಮಂಗಳೂರು, ಮೈಸೂರು, ರಾಯಚೂರು, ಮಡಿಕೇರಿ, ಕಲಬುರಗಿ, ಶ್ರೀರಂಗಪಟ್ಟಣ, ಚಿತ್ರದುರ್ಗ, ಅಥಣಿ, ಯಳಂದೂರು, ಬಸವಕಲ್ಯಾಣ, ಕಿತ್ತೂರು, ಗದಗ, ಹೂವಿನ ಹಡಗಲಿಯಲ್ಲಿ ಸರ್ಕಾರಿ ವಸ್ತು ಸಂಗ್ರಹಾಲಯಗಳಿವೆ. ಈಗಲೂ ಪ್ರವಾಸಿಗರು ಈ ಭಾಗಕ್ಕೆ ಬಂದಾಗ ವಸ್ತು ಸಂಗ್ರಹಾಲಯ ವೀಕ್ಷಿಸುತ್ತಾರೆ. ಕೆಲವನ್ನೂ ಈಗ ಪುನಶ್ಚೇತನಗೊಳಿಸಲಾಗುತ್ತಿದೆ. ಶಿವಮೊಗ್ಗದ ಶಿವಪ್ಪನಾಯಕ ಅರಮನೆಯನ್ನು ವಸ್ತು ಸಂಗ್ರಹಲಾಯವಾಗಿ ಪರಿವರ್ತಿಸಲಾಗುತ್ತಿದೆ.

ಬೆಂಗಳೂರು, ಮಂಗಳೂರು, ಮಡಿಕೇರಿ, ಯಳಂದೂರು, ಮೈಸೂರು ವಸ್ತು ಸಂಗ್ರಹಾಲಯಳಿಗೆ ಹೊಸ ರೂಪ ನೀಡುವ ಪ್ರಯತ್ನಗಳು ನಡೆದಿವೆ. ಬಹುತೇಕ ಕಡೆ ಕೆಲಸ ಮುಗಿದಿದೆ. ಚುನಾವಣೆ ನೀತಿ ಸಂಹಿತೆ ಇರುವ ಕಾರಣಕ್ಕೆ ಉದ್ಘಾಟನೆ ವಿಳಂಬವಾಗಿದೆ. ಚುನಾವಣೆ ಮುಗಿಯುತ್ತಲೇ ವಸ್ತು ಪ್ರದರ್ಶನಗಳನ್ನು ಉದ್ಘಾಟಿಸಲಾಗುತ್ತದೆ. ಆದರೆ ಪ್ರವಾಸಿಗರ ವೀಕ್ಷಣೆಗೆ ಇವು ಲಭ್ಯವಿವೆ ಎನ್ನುವುದು ಕರ್ನಾಟಕ ಪರಂಪರೆ, ಪುರಾತತ್ವ ಹಾಗೂ ವಸ್ತು ಸಂಗ್ರಹಲಾಯಗಳ ಇಲಾಖೆ ನಿರ್ದೇಶಕ ಹಾಗೂ ಹಿರಿಯ ಕೆ.ಎ.ಎಸ್‌.ಅಧಿಕಾರಿ ಎ.ದೇವರಾಜು ಹೇಳುತ್ತಾರೆ.

ಕರ್ನಾಟಕದಲ್ಲಿ ಸರ್ಕಾರಿ ವಸ್ತು ಸಂಗ್ರಹಾಲಯಗಳು ಚೆನ್ನಾಗಿವೆ. ಅವುಗಳಿಗೆ ಕಾಲಕಾಲಕ್ಕೆ ಹೊಸ ರೂಪ ನೀಡಿದರೆ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸಬಹುದು ಎನ್ನುವ ಸಲಹೆಯನ್ನು ಇಲಾಖೆಯ ನಿವೃತ್ತ ಆಯುಕ್ತ ಡಾ.ಸಿ.ಜಿ.ಬೆಟ್ಟಸೂರಮಠ.

  • ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿರುವ ಸರ್ಕಾರಿ ವಸ್ತು ಸಂಗ್ರಹಾಲಯವು ದೇಶದ ಹಳೆಯ ವಸ್ತು ಸಂಗ್ರಹಾಲಯಗಳಲ್ಲಿ ಒಂದಾಗಿದೆ. 1860ರಲ್ಲಿ ಡಾ.ಎಡ್ವರ್ಡ್ ಗ್ರೀನ್ ಬೆರ್ಲ್‍ಫೋರ್ ಎಂಬ ಬ್ರಿಟಿಷ್ ಅಧಿಕಾರಿ ಬೆಂಗಳೂರಿನಲ್ಲಿ ಒಂದು ಸಂಗ್ರಹಾಲಯವನ್ನು ಪ್ರಾರಂಭಿಸಲು ತೀರ್ಮಾನಿಸಿ ಮೈಸೂರಿನ ಎಲ್ಲಾ ಪ್ರಾಂತ್ಯಗಳಿಂದಲೂ ಅಪರೂಪದ ವಸ್ತುಗಳನ್ನು ಶೇಖರಣೆ ಮಾಡತೊಡಗಿದರು. 1865ರ ಹೊತ್ತಿಗೆ ಈ ಕಲಾಕೃತಿಗಳು ಸು.3000ಕ್ಕೂ ಹೆಚ್ಚು ಸಂಗ್ರಹವಾದ ಕಾರಣ 1865ರಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ವಸ್ತು ಸಂಗ್ರಹಾಲಯವನ್ನು ಹಳೆಯ ಜೈಲಿನ ಕಟ್ಟಡವೊಂದರಲ್ಲಿ ಪ್ರಾರಂಭಿಸಲಾಯಿತು. ಈಗಲೂ ಇದು ಸುಸ್ಥಿತಿಯಲ್ಲಿದೆ. ಇದನ್ನೂ ಕೂಡ ನವೀಕರಣಗೊಳಿಸುವ ಕೆಲಸ ನಡೆದಿದೆ.

ಇದನ್ನೂ ಓದಿರಿ: Personality Test: ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವದ ಕುರಿತ ರಹಸ್ಯ ವಿಚಾರ ತಿಳಿಸುತ್ತೆ ಈ ಚಿತ್ರ

  • ಕೊಡಗು ಸೌಂದರ್ಯಕ್ಕೆ, ಕಾಫಿ, ಏಲಕ್ಕಿ, ಕಿತ್ತಲೆಗಳಿಗೆ ಜೊತೆಗೆ ಇಲ್ಲಿನ ಸಂಸ್ಕೃತಿ ಆಚಾರ-ವಿಚಾರಗಳು ಹಾಗೂ ವೇಶ-ಭೂಷಣಗಳು ಮತ್ತು ಭಾಷೆ, ವಿಶೇಷವಾದುದು. ಕೊಡವರು ಇಂದಿಗೂ ಕೂಡ ತಮ್ಮ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿದೆ. ಕೊಡಗಿನ ಐತಿಹಾಸಿಕ, ಸಾಂಸ್ಕೃತಿಗಳ ವಸ್ತುಗಳನ್ನು ಸಂರಕ್ಷಿಸಲು 1971ರಲ್ಲಿ ಕೋಟೆ ಪ್ರದೇಶದಲ್ಲಿರುವ ಚರ್ಚ್ ಕಟ್ಟಡದಲ್ಲಿ ಈ ಸರ್ಕಾರಿ ವಸ್ತುಸಂಗ್ರಹಾಲಯ ಪ್ರಾರಂಭಿಸಲಾಗಿದ್ದು. ಇದನ್ನೂ ಉನ್ನತೀಕರಿಲಾಗಿದೆ.ಚಾಮರಾಜನಗರ ಜಿಲ್ಲೆ ದಿವಾನ್ ಪೂರ್ಣಯ್ಯನವರ ಸ್ಮರಣಾರ್ಥ ಜಹಗೀರ‍್ದಾರ್ ಬಂಗಲೆಯನ್ನು ನವೀಕರಿಸಿ ದಿವಾನ್ ಪೂರ್ಣಯ್ಯನವರ ಹೆಸರಿನಲ್ಲಿ ಸರ್ಕಾರಿ ವಸ್ತು ಸಂಗ್ರಹಾಲಯವನ್ನು -2014ರಲ್ಲಿಯೇ ಉದ್ಘಾಟನೆ ಮಾಡಿ ಸಾರ್ವಜನಿಕ ವೀಕ್ಷಣೆಗೆ ಅನುವು ಮಾಡಿಕೊಡಲಾಗಿದೆ. ವಸ್ತು ಸಂಗ್ರಹಾಲಯ ಕಟ್ಟಡವೂ ಕೂಡ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಸುಮಾರು 250 ವರ್ಷಗಳ ಹಿಂದಿನ ದಿವಾನ್ ಪೂರ್ಣಯ್ಯನವರು ವಾಸಿಸುತ್ತಿದ್ದ ಬಂಗಲೆ ಇದಾಗಿದೆ. ಈ ಬಂಗಲೆಯು ವಿಶಾಲವಾದ ಅನೇಕ ಕೊಠಡಿಗಳಿಂದ ಕೂಡಿದೆ. ಈ ಕಟ್ಟಡವು ದಿವಾನ್‍ಪೂರ್ಣಯ್ಯ ಜಹಗೀರ‍್ದಾರ್ ಬಂಗಲೆ ಎಂದು ಪ್ರಸಿದ್ಧಿ ಪಡೆದಿದೆ.ಈಗ ಇದರ ನವೀಕರಣಕ್ಕೆ ಬ್ರಿಗೇಡ್‌ ಗ್ರೂಪ್‌ ನೆರವಿನೊಂದಿಗೆ ಪುನಶ್ಚೇತನಗೊಳಿಸಲಾಗುತ್ತಿದೆ.
  • ಮಂಗಳೂರಿನ ಶ್ರೀಮಂತಿಬಾಯಿ ಸ್ಮಾರಕ ಸರ್ಕಾರಿ ವಸ್ತುಸಂಗ್ರಹಾಲಯ ಕರ್ನಲ್ ವಿ. ಆರ್. ಮಿರಾಜ್‍ಕರ್‍ ರವರು ತಮ್ಮ ತಾಯಿಯವರ ಸ್ಮರಣಾರ್ಥ ಬಳುವಳಿಯಾಗಿ ಕೊಟ್ಟಿರುವ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಕಟ್ಟಡವನ್ನು ಶ್ರೀ ಮಿರಾಜ್‍ಕರ್‍ ಅವರು 1955 ರಲ್ಲಿ ಕರ್ನಾಟಕ ಸರ್ಕಾರಕ್ಕೆ ದಾನವಾಗಿ ನೀಡಿದರು. 1955 ರಲ್ಲಿ ತನ್ನ ತಾಯಿಯ ಸ್ಮರಣಾರ್ಥವಾಗಿ ಸರ್ಕಾರಕ್ಕೆ ದಾನ ನೀಡಿದ ನಂತರ 1960ರಲ್ಲಿ ಅಧಿಕೃತವಾಗಿ ಆಗಿನ ಉಪರಾಷ್ಟ್ರಪತಿಯಾಗಿದ್ದ ಬಿ.ಡಿ. ಜತ್ತಿ ಅವರು ಶ್ರೀಮಂತಿಬಾಯಿ ಸ್ಮಾರಕ ಸರ್ಕಾರಿ ವಸ್ತುಸಂಗ್ರಹಾಲಯವೆಂಬ ನಾಮಕರಣದೊಂದಿಗೆ ಈ ವಸ್ತುಸಂಗ್ರಹಾಲಯವನ್ನು ಉದ್ಘಾಟನೆ ಮಾಡಿದರು. ಈಗ ಇದರ ನವೀಕರಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.

ಇದನ್ನೂ ಓದಿರಿ: ಆರ್‌ಸಿಬಿ-ಸಿಎಸ್‌ಕೆ ಪಂದ್ಯ ನೋಡೋಕೆ ಬೈಕ್‌ನಲ್ಲಿ ಹೋಗ್ತಿದ್ದಾರಾ; ತಲೆಗೆ ಹೆಲ್ಮೆಟ್ ಮರೆಯಬೇಡಿ, ಬೆಂಗಳೂರು ಟ್ರಾಫಿಕ್ ಪೊಲೀಸರ ಸಂದೇಶ

  • ಮೈಸೂರಿನ ನಗರ ನಿಲ್ದಾಣ ಹಿಂಭಾಗದಲ್ಲಿರುವ ವೆಲ್ಲಿಂಗ್ಟನ್‌ ಆರ್ಟ್‌ ಗ್ಯಾಲರಿ ಎರಡು ಶತಮಾನಕ್ಕೂ ಹಳೆಯದ್ದು. ಟಿಪ್ಪು ಕಾಲದಲ್ಲಿ ಇಲ್ಲಿ ಆಡಳಿಗಾರನಾಗಿದ್ದ ವೆಲ್ಲಿಂಗ್ಟನ್‌ ಆರಂಭಿಸಿದ್ದ ಆರ್ಟ್‌ ಗ್ಯಾಲರಿಯನ್ನು ಈಗ ವಿಶಾಲವಾಗಿ ಅಭಿವೃದ್ದಿಪಡಿಸಲಾಗಿದೆ. ವಿಶಾಲ ಜಾಗದ ಮೊದಲ ಮಹಡಿಯಲ್ಲಿ ವಸ್ತು ಸಂಗ್ರಹಾಲಯ ವಿಭಿನ್ನ ರೂಪ ಪಡೆದುಕೊಂಡಿದೆ. ಮೈಸೂರಿನ ಇತಿಹಾಸ ಸಾರುವ ವಸ್ತುಗಳ ಪ್ರದರ್ಶನ ಇಲ್ಲಿದೆ. ಇದೂ ಕೂಡ ಉದ್ಘಾಟನೆಗೆ ಕಾಯುತ್ತಿದೆ.
  • ಶಿವಮೊಗ್ಗದ ಹೃದಯಭಾಗದಲ್ಲಿರುವ ಶಿವಪ್ಪನಾಯಕ ಅರಮನೆ ಶತಮಾನಗಳಷ್ಟು ಹಳೆಯದ್ದು. ಶಿವಪ್ಪನಾಯಕನ ಆಡಳಿತ ಕಾಲದಲ್ಲಿ ನಿರ್ಮಿಸಿದ್ದು ಇದನ್ನು ಸಂರಕ್ಷಿಸಿಕೊಂಡು ಪ್ರಮುಖ ಪ್ರವಾಸಿ ತಾಣವಾಗಿ ರೂಪಿಸಲಾಗಿದೆ. ಈಗ ಈ ಅರಮನೆ ವಸ್ತು ಸಂಗ್ರಹಾಲಯವಾಗಿಯೂ ಬದಲಾಗಿದೆ. ಇದನ್ನು ಅಭಿವೃದ್ದಿಪಡಿಸಲಾಗಿದ್ದು. ಶಿವಪ್ಪನಾಯಕನ ಕಾಲದ ವಸ್ತುಗಳು. ಘಟನಾವಳಿಯ ಛಾಯಾಚಿತ್ರ, ಈ ಭಾಗದ ವಿಶೇಷಗಳ ವಸ್ತುಪ್ರದರ್ಶನ ಇದಾಗಲಿದೆ.

ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.