ನಮ್ಮ ಪೂರ್ವಜರು ನಿರ್ಮಿಸಿದ್ದನ್ನು ನಾವು ಮಾರಾಟ ಮಾಡಿದ್ದೇವೆ: ಬದಲಾದ ಜಯನಗರದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಬೆಂಗಳೂರು ನಿವಾಸಿ
ಕನ್ನಡ ಸುದ್ದಿ  /  ಕರ್ನಾಟಕ  /  ನಮ್ಮ ಪೂರ್ವಜರು ನಿರ್ಮಿಸಿದ್ದನ್ನು ನಾವು ಮಾರಾಟ ಮಾಡಿದ್ದೇವೆ: ಬದಲಾದ ಜಯನಗರದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಬೆಂಗಳೂರು ನಿವಾಸಿ

ನಮ್ಮ ಪೂರ್ವಜರು ನಿರ್ಮಿಸಿದ್ದನ್ನು ನಾವು ಮಾರಾಟ ಮಾಡಿದ್ದೇವೆ: ಬದಲಾದ ಜಯನಗರದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಬೆಂಗಳೂರು ನಿವಾಸಿ

ನಮ್ಮ ಹಿಂದಿನ ತಲೆಮಾರು ನಿರ್ಮಿಸಿದ್ದ ಸುಂದರ ಮತ್ತು ಪ್ರಶಾಂತ ಜಯನಗರವನ್ನು ನಾವಿಂದು ಕಳೆದುಕೊಂಡಿದ್ದೇವೆ. ಅದಕ್ಕೆ ನಮ್ಮ ರಿಯಲ್ ಎಸ್ಟೇಟ್ ದುರಾಸೆಯೇ ಪ್ರಮುಖ ಕಾರಣ ಎಂದು ವಿಷಾದಿಸುವ ಬೆಂಗಳೂರು ನಿವಾಸಿಯೊಬ್ಬರ ಭಾವನಾತ್ಮಕ ಪೋಸ್ಟ್ ವೈರಲ್ ಆಗಿದೆ.

ಜಯನಗರದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಬೆಂಗಳೂರು ನಿವಾಸಿ
ಜಯನಗರದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಬೆಂಗಳೂರು ನಿವಾಸಿ (X/@sriharikaranth)

ಪ್ರಶಾಂತ ವಸತಿ ಪ್ರದೇಶಕ್ಕೆ ಹೆಸರಾಗಿದ್ದ ಜಯನಗರವನ್ನು ವಾಣಿಜ್ಯ ಕೇಂದ್ರವಾಗಿ ಪರಿವರ್ತಿಸಲಾಗಿದೆ ಎಂದು ವಿಷಾದಿಸುವ ಬೆಂಗಳೂರು ನಿವಾಸಿಯೊಬ್ಬರ ಭಾವನಾತ್ಮಕ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನಮ್ಮ ಪೂರ್ವಜರು ನಿರ್ಮಿಸಿದ್ದನ್ನು ನಾವು ಮಾರಾಟ ಮಾಡಿದ್ದೇವೆ. ಅದರ ಪರಿಣಾಮವಾಗಿ ಹಿಂದಿನ ತಲೆಮಾರುಗಳು ನಿರ್ಮಿಸಿದ ಒಂದು ಕಾಲದಲ್ಲಿ ಶಾಂತವಾಗಿದ್ದ ಪ್ರದೇಶವನ್ನು ಈಗ ವಾಣಿಜ್ಯೀಕರಣ ಮತ್ತು ರಿಯಲ್ ಎಸ್ಟೇಟ್ ದುರಾಸೆಯಿಂದ ಹೇಗೆ ಸಂಪೂರ್ಣವಾಗಿ ಬದಲಾಯಿಸಲಾಗಿದೆ ಎಂಬುದನ್ನು ಜಯನಗರ ನಿವಾಸಿಯೊಬ್ಬರು ವಿವರಿಸಿದ್ದಾರೆ.

ಎಕ್ಸ್‌ನಲ್ಲಿ ವೈರಲ್ ಆದ ಪೋಸ್ಟ್‌‌‌‌ನಲ್ಲಿ ಬಳಕೆದಾರರೊಬ್ಬರು ಹೀಗೆ ಹೇಳಿದ್ದಾರೆ, "ಒಂದು ಕಾಲದಲ್ಲಿ ಶಾಂತಿಯುತ ವಸತಿ ಪ್ರದೇಶವಾದ ಜಯನಗರವು ಜನನಿಬಿಡ, ಗದ್ದಲ ಮತ್ತು ಧೂಳು ತುಂಬಿದ ವಾಣಿಜ್ಯ ಕೇಂದ್ರವಾಗಿ ಮಾರ್ಪಟ್ಟಿದೆ. ಜೀವನದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಪೂರ್ವಜರು ಎಲ್ಲವನ್ನೂ ಮಕ್ಕಳಿಗಾಗಿ ಮಾಡಿಟ್ಟಿದ್ದರು. ಆದರೆ ನಂತರದ ತಲೆಮಾರುಗಳು ಹಣದ ಹಿಂದೆ ಹೋಗಿ ಅದನ್ನು ರಿಯಲ್ ಎಸ್ಟೇಟ್‌‌‌‌ಗೆ ಮಾರಾಟ ಮಾಡಿದರು, ಇದು ಮಾರಾಟ ಮಾಡಲು ಸಿದ್ಧರಿಲ್ಲದವರನ್ನು ಸಹ ಮಾರಾಟ ಮಾಡಲು ಪ್ರೇರೇಪಿಸಿತು" ಎಂದು ಪೋಸ್ಟ್‌‌‌‌ನಲ್ಲಿ ಬರೆದಿದ್ದಾರೆ.

ಅವರ ಪೋಸ್ಟ್ ಹೀಗಿದೆ:

ಜಯನಗರದ ಕಥೆಯನ್ನು ವಿಜಯನಗರ ಚಂದ್ರಾಲೇಔಟ್‌‌‌‌ನಿಂದ ಹಿಡಿದು ಅದರಾಚೆಗೂ ನಗರದಾದ್ಯಂತ ಮುಂದುವರಿಯುತ್ತಿದೆ ಎಂದು ಬರೆದುಕೊಂಡಿದ್ದಾರೆ.

X ಬಳಕೆದಾರರು ಇದಕ್ಕೆ ಹೇಗೆ ಪ್ರತಿಕ್ರಿಯಿಸಿದ್ದಾರೆ?

"ನಾವು ಜಯನಗರದ ಜನರು ಪ್ರತಿದಿನ ಇದರ ಬಗ್ಗೆ ಅಸಮಾಧಾನ ಹೊಂದಿದ್ದೇವೆ. ಪ್ರತಿ ಬೀದಿಯಲ್ಲೂ ಈಗ ವಾಣಿಜ್ಯ ಕಟ್ಟಡಗಳೇ ಕಾಣುತ್ತಿವೆ" ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಚಂದ್ರಾಲೇಔಟ್, ಆರ್‌‌‌‌ಪಿಸಿ ಲೇಔಟ್, ವಿಜಯನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ವಿಷಯದಲ್ಲೂ ಇದೇ ಆಗಿದೆ. ಪ್ರತಿಯೊಂದು ದೊಡ್ಡ ಮನೆಯನ್ನು ಪಿಜಿಯಾಗಿ ಪರಿವರ್ತಿಸಲಾಗುತ್ತಿದೆ. ಒಳಚರಂಡಿ ವ್ಯವಸ್ಥೆ, ನೀರು ಸರಬರಾಜು, ರಸ್ತೆಗಳು ಎಲ್ಲವೂ ಓವರ್ ಲೋಡ್ ಆಗಿದೆ. ಈ ರೀತಿಯ ವಾಣಿಜ್ಯ ಚಟುವಟಿಕೆಯೊಂದಿಗೆ ಹೊಂದಿಕೊಳ್ಳಲು ಇಲ್ಲಿನ ಮೂಲ ಜನರಿಗೆ ಸಾಧ್ಯವಾಗುತ್ತಿಲ್ಲ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ಕಟ್ಟಡ ನಿಯಮಗಳನ್ನು ಉಲ್ಲಂಘಿಸಿ ಬೆಂಗಳೂರಿನಲ್ಲಿ ಪೇಯಿಂಗ್ ಗೆಸ್ಟ್ ವಸತಿಗಳು ವೇಗವಾಗಿ ಹೆಚ್ಚುತ್ತಿರುವ ಬಗ್ಗೆ ಸಂಭಾಷಣೆಗಳನ್ನು ಈ ಪೋಸ್ಟ್ ಪ್ರಾರಂಭಿಸಿದೆ. ಆನ್‌‌‌‌ಲೈನ್‌‌‌‌ನಲ್ಲಿ ಅನೇಕರು ನಗರವನ್ನು "ವಿಶ್ವದ ಪಿಜಿ ರಾಜಧಾನಿ" ಎಂದು ಕರೆದಿರುವುದರಿಂದ, ನಿವಾಸಿಗಳು ಮೂಲಸೌಕರ್ಯಗಳ ಮೇಲಿನ ಒತ್ತಡ ಮತ್ತು ಸಾಂಪ್ರದಾಯಿಕ ಮನೆಗಳು ಕಣ್ಮರೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಅಂಗಳಗಳನ್ನು ಹೊಂದಿರುವ ಮನೆಗಳನ್ನು ನೆಲಸಮಗೊಳಿಸಲಾಗುತ್ತಿದೆ ಅಥವಾ ಹೆಚ್ಚಿನ ಮಹಡಿಗಳಿಗಾಗಿ ಮಾರ್ಪಡಿಸಲಾಗುತ್ತಿದೆ. ಈ ಮನೆಗಳನ್ನು ಪೂರ್ವಜರಿಂದ ಪಡೆದ ತಲೆಮಾರುಗಳು ಅವುಗಳನ್ನು ಮಾರಾಟ ಮಾಡಲು ಮುಂದಾಗುತ್ತಿವೆ ಮತ್ತು ತೆರೆದ ಸ್ಥಳಗಳು ಕಣ್ಮರೆಯಾಗುತ್ತಿವೆ ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in