ಕನ್ನಡ ಸುದ್ದಿ  /  Karnataka  /  Bbmp Identifies 20,500 Illegal Street Trading And Shuts 132 In Bengaluru

BBMP action: ಅಕ್ರಮ ಬೀದಿ ಬದಿ ವ್ಯಾಪಾರಕ್ಕೆ ಬ್ರೇಕ್ ಹಾಕಲು ಮುಂದಾದ ಪಾಲಿಕೆ; ವ್ಯಾಪಾರಿಗಳ ಆಕ್ರೋಶ

ತಮಗೆ ಗೊತ್ತುಪಡಿಸದ ಜಾಗದಲ್ಲಿ ಅಕ್ರಮವಾಗಿ ವ್ಯಾಪಾರ ನಡೆಸುತ್ತಿರುವ ಬೀದಿ ಬದಿ ವ್ಯಾಪಾರಿಗಳ ಹಾವಳಿಗೆ ಕಡಿವಾಣ ಹಾಕಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದೆ.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ತಮಗೆ ಗೊತ್ತುಪಡಿಸದ ಜಾಗದಲ್ಲಿ ಅಕ್ರಮವಾಗಿ ವ್ಯಾಪಾರ ನಡೆಸುತ್ತಿರುವ ಬೀದಿ ಬದಿ ವ್ಯಾಪಾರಿಗಳ ಹಾವಳಿಗೆ ಕಡಿವಾಣ ಹಾಕಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದೆ.

40 ಅಡಿಗಿಂತಲೂ ಹೆಚ್ಚು ಅಗಲದ ರಸ್ತೆಗಳ ಮೇಲೆ ವ್ಯಾಪಾರ ಮಾಡುವ ವ್ಯಾಪಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಇದು ಹೈಕೋರ್ಟ್ ಆದೇಶದಲ್ಲಿಲ್ಲ ಎನ್ನುವುದು ಹಲವು ವ್ಯಾಪಾರಿಗಳ ವಾದವಾಗಿದೆ.

ವಸತಿ ಪ್ರದೇಶಗಳಲ್ಲಿ 40 ಅಡಿಗಿಂತ ಕಡಿಮೆ ಅಗಲದ ರಸ್ತೆಗಳಲ್ಲಿ ನಡೆಯುವ ವ್ಯಾಪಾರ ಸಂಸ್ಥೆಗಳಿಗೆ ಪಾಲಿಕೆ ಕಡಿವಾಣ ಹಾಕಲಿದೆ ಎಂದು ರಾಜ್ಯ ಸರ್ಕಾರ ಈ ಹಿಂದೆ ಹೇಳಿತ್ತು. ಆದರೆ ಪಾಲಿಕೆಯ ಕ್ರಮದ ಬಗ್ಗೆ ವ್ಯಾಪಾರಿಗಳ ಸಮುದಾಯ ಅಸಮಾಧಾನಗೊಂಡಿದೆ.

ಸಿಎಂ ಬಸವರಾಜ ಬೊಮ್ಮಾಯಿ ಅವರು ಶಾಸಕಾಂಗಕ್ಕೆ ಲಿಖಿತ ಉತ್ತರದಲ್ಲಿ ಪರಿಷ್ಕೃತ ಮಾಸ್ಟರ್ ಪ್ಲಾನ್ (ಆರ್‌ಎಂಪಿ) - 2015 ವಸತಿ ಪ್ರದೇಶಗಳು ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೂ - ಬಳಕೆಯ ಮಾರ್ಗಸೂಚಿಗಳನ್ನು ವಿವರಿಸುತ್ತದೆ ಮತ್ತು ಹಲವಾರು ಗುಂಪುಗಳು 2008 ಮತ್ತು 2011 ರಲ್ಲಿ ಹೈಕೋರ್ಟ್‌ಗೆ ಮೊರೆ ಹೋಗಿವೆ ಎಂದು ಹೇಳಿದ್ದರು.

ಹೈಕೋರ್ಟ್ 2014 ರ ಫೆಬ್ರವರಿ 19 ರಂದು, ವಸತಿ ಮುಖ್ಯ ಮತ್ತು ವಸತಿ ಮಿಶ್ರ ವಲಯಗಳಲ್ಲಿ ಅಂದರೆ ರಿಂಗ್ ನಂ.1, ರಿಂಗ್ ನಂ. 2 ಮತ್ತು ರಿಂಗ್ ನಂ. 3 ನಲ್ಲಿ ( ಇದು 40 ಅಡಿಗಿಂತಲೂ ಹೆಚ್ಚು ಅಗಲವಿರುವ ರಸ್ತೆಗಳು) ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಗೆ ಅವಕಾಶ ನೀಡಬಾರದು ಎಂದು ಆದೇಶಿಸಿತ್ತು.

ಸದ್ಯ ಎಂಟು ವಲಯಗಳ ವಸತಿ ಪ್ರದೇಶಗಳಲ್ಲಿ ಸುಮಾರು 20,500 ವ್ಯಾಪಾರ ಘಟಕಗಳನ್ನು ಬಿಬಿಎಂಪಿ ಗುರುತಿಸಿದೆ. ಈ ಪೈಕಿ 17,500 ಕ್ಕಿಂತ ಹೆಚ್ಚು 40 ಅಡಿಗಿಂತ ಹೆಚ್ಚು ಅಗಲವಿರುವ ರಸ್ತೆಗಳಲ್ಲಿ ಮತ್ತು ಸುಮಾರು 3,000 ಇತರ ವಿಸ್ತರಣೆಗಳಲ್ಲಿವೆ. ಅವುಗಳಲ್ಲಿ ಈಗಾಗಲೇ 132 ವ್ಯಾಪಾರ ಘಟಕಗಳಿಗೆ ಕಡಿವಾಣ ಹಾಕಿದೆ. 16,449 ಮಂದಿಗೆ ಪಾಲಿಕೆ ನೋಟಿಸ್ ನೀಡಿದೆ. ಆದರೆ ವಲಯವಾರು ವಿಶ್ಲೇಷಣೆಯು ಮುಚ್ಚಿದ 132 ಅಂಗಡಿಗಳಲ್ಲಿ 95% ಪೂರ್ವದಲ್ಲಿವೆ ಎಂದು ತೋರಿಸುತ್ತಿದ್ದು, ತದ್ವಿರುದ್ಧವಾಗಿ ದಕ್ಷಿಣ ವಲಯದಲ್ಲಿ ಹೆಚ್ಚಿನ ಸಂಖ್ಯೆಯ ನೋಟಿಸ್‌ಗಳನ್ನು ನೀಡಲಾಗಿದೆ.

ಬಿಬಿಎಂಪಿಯಿಂದ ಅಕ್ರಮ ವ್ಯಾಪಾರಿಗಳನ್ನು ಗುರುತಿಸುವುದು ಈ ಮಾನದಂಡವನ್ನು ಆಧರಿಸಿದೆ. ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಮಾತ್ರ ಜಾರಿಗೊಳಿಸುತ್ತಿದ್ದೇವೆ ಎಂದು ಪಾಲಿಕೆಯ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಹೈಕೋರ್ಟ್ ಆದೇಶದ ಮೇಲೆ ಕ್ರಮ ಕೈಗೊಳ್ಳಲು ಬಿಬಿಎಂಪಿ ಒಂಬತ್ತು ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದು ಏಕೆ ಎಂಬುದು ಸ್ಪಷ್ಟವಾಗಿಲ್ಲ.

ಇಂದಿನ ಪ್ರಮುಖ ಸುದ್ದಿ

Stabbing flight attendant: ವಿಮಾನದಲ್ಲಿ ಎಮರ್ಜೆನ್ಸಿ ಡೋರ್ ತೆಗೆಯಲು ಮುಂದಾದ ಪ್ರಯಾಣಿಕ.. ತಡೆಯಲು ಬಂದ ಸಿಬ್ಬಂದಿಗೆ ಇರಿತ

ಇತ್ತೀಚಿನ ದಿನಗಳಲ್ಲಿ ಚಲಿಸುತ್ತಿರುವ ವಿಮಾನಗಳಲ್ಲಿ ಪ್ರಯಾಣಿಕರು ನಿಯಮ ಉಲ್ಲಂಘಿಸುವುದು, ಅಸಭ್ಯವಾಗಿ ವರ್ತಿಸುವುದು ಸೇರಿದಂತೆ ಅಶಿಸ್ತಿನ ಪ್ರಯಾಣಿಕರ ದುರ್ವರ್ತನೆಗಳು ಹೆಚ್ಚಾಗುತ್ತಿವೆ. ಇದೀಗ ಕಾರಣವಿಲ್ಲದೆ ಎಮರ್ಜೆನ್ಸಿ ಡೋರ್ ತೆಗೆಯಲು ಪ್ರಯಾಣಿಕನೊಬ್ಬ ಯತ್ನಿಸಿದ್ದಾನೆ. ಅಷ್ಟೇ ಅಲ್ಲ ಇದನ್ನು ತಡೆಯಲು ಬಂದ ವಿಮಾನ ಸಿಬ್ಬಂದಿಯ ಕುತ್ತಿಗೆಗೆ ಚಮಚದಿಂದ ಇರಿದಿದ್ದಾನೆ. ವಿವರ ಓದಿಗೆ ಇಲ್ಲಿ ಕ್ಲಿಕ್​ ಮಾಡಿ

IPL_Entry_Point

ವಿಭಾಗ