ಬೆಂಗಳೂರಿಗರೇ ಗಮನಿಸಿ, ಕಾವೇರಿ ನೀರನ್ನು ವಾಹನ ತೊಳೆಯಲು ಬಳಸಿದ್ರೆ 5000 ರೂ ದಂಡ ಪಾವತಿಸಬೇಕಾದೀತು, ಬೆಂಗಳೂರು ಜಲ ಮಂಡಳಿ ಮಹತ್ವದ ಆದೇಶ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿಗರೇ ಗಮನಿಸಿ, ಕಾವೇರಿ ನೀರನ್ನು ವಾಹನ ತೊಳೆಯಲು ಬಳಸಿದ್ರೆ 5000 ರೂ ದಂಡ ಪಾವತಿಸಬೇಕಾದೀತು, ಬೆಂಗಳೂರು ಜಲ ಮಂಡಳಿ ಮಹತ್ವದ ಆದೇಶ

ಬೆಂಗಳೂರಿಗರೇ ಗಮನಿಸಿ, ಕಾವೇರಿ ನೀರನ್ನು ವಾಹನ ತೊಳೆಯಲು ಬಳಸಿದ್ರೆ 5000 ರೂ ದಂಡ ಪಾವತಿಸಬೇಕಾದೀತು, ಬೆಂಗಳೂರು ಜಲ ಮಂಡಳಿ ಮಹತ್ವದ ಆದೇಶ

BWSSB Updates: ಕುಡಿಯುವ ನೀರನ್ನು ವಿವಿಧ ಉದ್ದೇಶಗಳಿಗೆ ಬಳಸುವುದು ನಿಷೇಧಿಸಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಹೇಳಿದೆ. ಆದ್ದರಿಂದ ಬೆಂಗಳೂರಿಗರೇ ಗಮನಿಸಿ, ಕಾವೇರಿ ನೀರನ್ನು ವಾಹನ ತೊಳೆಯಲು ಬಳಸಿದ್ರೆ, ಕೈತೋಟಕ್ಕೆ ಬಳಸಿದರೆ 5000 ರೂ ದಂಡ ಪಾವತಿಸಬೇಕಾದೀತು.

ಕಾವೇರಿ ನೀರನ್ನು ವಾಹನ ತೊಳೆಯಲು ಬಳಸಿದ್ರೆ 5000 ರೂ ದಂಡ ಪಾವತಿಸಬೇಕಾದೀತು, ಬೆಂಗಳೂರು ಜಲ ಮಂಡಳಿ ಮಹತ್ವದ ಆದೇಶ ಹೊರಡಿಸಿದೆ. (ಸಾಂಕೇತಿಕ ಚಿತ್ರ)
ಕಾವೇರಿ ನೀರನ್ನು ವಾಹನ ತೊಳೆಯಲು ಬಳಸಿದ್ರೆ 5000 ರೂ ದಂಡ ಪಾವತಿಸಬೇಕಾದೀತು, ಬೆಂಗಳೂರು ಜಲ ಮಂಡಳಿ ಮಹತ್ವದ ಆದೇಶ ಹೊರಡಿಸಿದೆ. (ಸಾಂಕೇತಿಕ ಚಿತ್ರ)

BWSSB Updates: ಬೆಂಗಳೂರಿಗರೇ ಗಮನಿಸಿ, ಕಾವೇರಿ ನೀರನ್ನು ಕುಡಿಯುವುದಕ್ಕೆ ಹೊರತಾಗಿ ಅನ್ಯ ಉದ್ದೇಶಗಳಿಗೆ ಬಳಸಬಾರದು. ವಾಹನ ತೊಳೆಯುವುದು ಸೇರಿ ಕೈತೋಟಕ್ಕೆ, ಕಟ್ಟಡ ನಿರ್ಮಾಣಕ್ಕೆ ಹಾಗೂ ಇತರೆ ಉದ್ದೇಶಗಳಿಗೆ ಕಾವೇರಿ ನೀರು ಬಳಸಿದರೆ 5000 ರೂಪಾಯಿ ದಂಡ ಪಾವತಿಸಬೇಕಾದೀತು ಎಂದು ಬೆಂಗಳೂರು ಜಲಮಂಡಳಿ ಸೋಮವಾರ (ಫೆ 17) ಎಚ್ಚರಿಸಿದೆ. ಬೇಸಿಗೆ ಶುರುವಾಗಿದ್ದು, ಕಾವೇರಿ ನೀರನ್ನು ಅಗತ್ಯ ಉದ್ದೇಶಕ್ಕೆ ಬಳಸಬೇಕೇ ಹೊರತು, ಅನ್ಯ ಉದ್ದೇಶಗಳಿಗಲ್ಲ. ಈ ಬಗ್ಗೆ ಈಗಲೇ ಮುಂಜಾಗ್ರತಾ ಕ್ರಮ ಅನುಸರಿಸಬೇಕು ಎಂದು ಮಂಡಳಿ ಬೆಂಗಳೂರಿಗರಲ್ಲಿ ಮನವಿ ಮಾಡಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿಗರೇ ಗಮನಿಸಿ, ಕಾವೇರಿ ನೀರನ್ನು ವಾಹನ ತೊಳೆಯಲು ಬಳಸಿದ್ರೆ 5000 ರೂ ದಂಡ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964ರ ಕಲಂ 33 ಮತ್ತು 34 ರ ಅನುಸಾರ ಬೆಂಗಳೂರು ನಗರದಲ್ಲಿ ಕುಡಿಯುವ ನೀರನ್ನು ವಾಹನಗಳ ಸ್ವಚ್ಛತೆ, ಕೈದೋಟಕ್ಕೆ, ಕಟ್ಟಡ ನಿರ್ಮಾಣಕ್ಕೆ, ಮನೋರಂಜಕವಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ, ಸಿನಿಮಾ ಮಂದಿರ ಮತ್ತು ಮಾಲುಗಳಲ್ಲಿನ ಕುಡಿಯುವ ನೀರಿನ ಹೊರತು ಇನ್ನಿತರೆ ಬಳಕೆ, ರಸ್ತೆ ನಿರ್ಮಾಣ ಮತ್ತು ಸ್ವಚ್ಚತೆಯ ಉದ್ದೇಶಗಳಿಗೆ ಬಳಸದಂತೆ ನಿಷೇಧಿಸಲಾಗಿದೆ ಎಂದು ಜಲಮಂಡಳಿಯ ಅಧ್ಯಕ್ಷ ಡಾ. ರಾಮ್‍ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ನಿಷೇಧ ಆದೇಶವನ್ನು ಉಲ್ಲಂಘನೆ ಮಾಡಿದಲ್ಲಿ, ಉಲ್ಲಂಘನೆ ಮಾಡುವವರ ವಿರುದ್ದ ಜಲಮಂಡಳಿಯ ಕಾಯ್ದೆ 1964 ರ ಕಲಂ 109 ರಂತೆ 5000 ರೂಪಾಯಿ ದಂಡ ವಿಧಿಸಲಾಗುವುದು. ಈ ಉಲ್ಲಂಘನೆಯು ಮರುಕಳಿಸಿದಲ್ಲಿ ದಂಡ ಮೊತ್ತ 5000 ರೂಪಾಯಿ ಜೊತೆಗೆ ಹೆಚ್ಚುವರಿಯಾಗಿ 500 ರೂಪಾಯಿ ಪ್ರತಿದಿನದಂತೆ ದಂಡ ಹಾಕಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ನೀರು ಪೋಲು ಮಾಡಬೇಡಿ; ಬೆಂಗಳೂರು ಜಲಮಂಡಳಿ ಮನವಿ

ಬೆಂಗಳೂರು ಮಹಾನಗರದಲ್ಲಿ ಖಾಯಂ ವಾಸಿಗಳು ಹಾಗೂ ಬಂದು ಹೋಗುವವರನ್ನು ಸೇರಿಸಿ ಸುಮಾರು 1 ಕೋಟಿ 40 ಲಕ್ಷ ಜನಸಂಖ್ಯೆಯನ್ನು ಗುರುತಿಸಲಾಗಿದೆ. ಎಲ್ಲರಿಗೂ ಕುಡಿಯುವ ನೀರನ್ನು ಪೂರೈಕೆ ಮಾಡುವುದು ಅವಶ್ಯವಾಗಿರುತ್ತದೆ. ಪ್ರಸ್ತುತ ಬೆಂಗಳೂರು ನಗರದಲ್ಲಿ ಪ್ರತಿದಿನ ಉಷ್ಣಾಂಶ ಏರುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆಯಿಂದ ಅಂತರ್ಜಲ ಕುಸಿದಿದ್ದು, ಬೆಂಗಳೂರು ನಗರದಲ್ಲಿ ನೀರನ್ನು ಪೋಲು ಮಾಡುವುದನ್ನು ತಡೆಗಟ್ಟಲು ಅವಶ್ಯವೆಂದು ಮನಗಂಡು ಕುಡಿಯುವ ನೀರನ್ನು ಸಾರ್ವಜನಿಕರು ಮಿತವಾಗಿ ಬಳಸುವಂತೆ ಅಗತ್ಯಪಡಿಸಲಾಗಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕ ಹಿತದೃಷ್ಠಿಯಿಂದ ಆದೇಶಿಸಿದೆ.

ಸಾರ್ವಜನಿಕರು ಕುಡಿಯುವ ನೀರನ್ನು ಇತರೆ ಉದ್ದೇಶಗಳಿಗಾಗಿ ಬಳಸುವುದು ಕಂಡುಬಂದಲ್ಲಿ ಕೂಡಲೇ ಬೆಂಗಳೂರು ಜಲಮಂಡಳಿಯ ಕಾಲ್ ಸೆಂಟರ್ ಸಂಖ್ಯೆ 1916 ಗೆ ಕರೆ ಮಾಡಿ ತಿಳಿಸಬೇಕು ಎಂದು ರಾಮ್‌ ಪ್ರಸಾತ್ ಮನೋಹರ್ ಮನವಿ ಮಾಡಿದ್ದಾರೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner