
Karnataka News Live March 28, 2025 : Ugadi 2025: ಯುಗಾದಿ ಮರುದಿನ ಹೊಸತೊಡಕು ಹಳೇ ಮೈಸೂರಿನಲ್ಲಿ ಪ್ರಸಿದ್ಧಿ; ಚಿಕನ್ ಬೆಲೆ ಕೆಜಿಗೆ 300 ಮಟನ್ ಬೆಲೆ ರೂ. 1000 ತಲುಪುವ ನಿರೀಕ್ಷೆ
'ಎಚ್ಟಿ ಕನ್ನಡ' ಲೈವ್ ಅಪ್ಡೇಟ್ಸ್'ಗೆ ಸ್ವಾಗತ. ಕರ್ನಾಟಕ ರಾಜ್ಯ, ಬೆಂಗಳೂರು ನಗರಕ್ಕೆ ಸಂಬಂಧಿಸಿದ March 28, 2025 ದಿನಾಂಕದ ಬ್ರೇಕಿಂಗ್ ನ್ಯೂಸ್, ಸ್ಥಳೀಯ ಸುದ್ದಿ, ತಾಜಾ ವಿದ್ಯಮಾನ, ಉಪಯುಕ್ತ ಮಾಹಿತಿ, ರಾಜಕೀಯ ಬೆಳವಣಿಗೆಗಳ ವಿವರ ಇಲ್ಲಿ ಲಭ್ಯ. ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳ ಬೆಳವಣಿಗೆಗಳೂ ಇಲ್ಲಿದೆ.
Fri, 28 Mar 202504:24 PM IST
- Ugadi 2025: ಯುಗಾದಿ ಭಾಗದಲ್ಲಿ ಹಳೆ ಮೈಸೂರು ಭಾಗದಲ್ಲಿ ನಡೆಯುವ ಹೊಸತೊಡಕು ಹಾಗೂ ಮಾಂಸದೂಟದ ಸವಿ ಬಲು ವಿಶೇಷ. ಈ ವರ್ಷ ಹೇಗಿದೆ ತಯಾರಿ, ಮಾಂಸದ ದರಗಳು. ಇಲ್ಲಿದೆ ವರದಿ.
- ವರದಿ: ಎಚ್. ಮಾರುತಿ, ಬೆಂಗಳೂರು
Fri, 28 Mar 202504:08 PM IST
- Scorpion Bite Treatment: ಬೇಸಿಗೆಯಲ್ಲಿ ಚೇಳುಗಳ ಚಲನೆ ಅಧಿಕ. ಈ ವೇಳೆ ಚೇಳು ಕಡಿದರೆ ಏನು ಮಾಡಬೇಕು ಎನ್ನುವುದಕ್ಕೆ ತಜ್ಞರಾದ ಡಾ.ಎನ್.ಬಿ.ಶ್ರೀಧರ ಅವರು ವಿವರಣೆ ನೀಡಿದ್ದಾರೆ.
Fri, 28 Mar 202503:01 PM IST
Price Hike in Karnataka: ಕರ್ನಾಟಕದಲ್ಲಿ ಈಗ ಎಲ್ಲವೂ ದುಬಾರಿಯೇ. ಹಾಲು, ವಿದ್ಯುತ್, ನೀರು, ಅಬಕಾರಿ, ಆಸ್ತಿ ನೊಂದಣಿ, ಬಸ್ ಹಾಗೂ ಮೆಟ್ರೋ ಪಯಣ ಕೂಡ. ಒಂದು ವರ್ಷದಲ್ಲಿ ದುಬಾರಿ ಪ್ರಮಾಣ ಹೀಗಿದೆ.
Fri, 28 Mar 202501:11 PM IST
Fri, 28 Mar 202511:56 AM IST
- Kodagu Crime: ಕೊಡಗು ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ವ್ಯಕ್ತಿಯೊಬ್ಬ ಕೊಲೆ ಮಾಡಿದ್ದಾನೆ. ಇದರಲ್ಲಿ ಇಬ್ಬರು ವಯಸ್ಸಾದವರು, ಒಬ್ಬ ಬಾಲಕಿ ಸೇರಿದ್ದಾಳೆ.
Fri, 28 Mar 202511:44 AM IST
- Dakshina Kannada Home Stay: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಗಟ್ಟಿಯಾಗಿ ನೆಲೆಯೂರಿದ್ದು, ಹೋಂಸ್ಟೇಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.
- ವರದಿ: ಹರೀಶ ಮಾಂಬಾಡಿ. ಮಂಗಳೂರು
Fri, 28 Mar 202511:02 AM IST
- SSLC Exam 2025: ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆಯಲ್ಲಿ ಶನಿವಾರ ಸಮಾಜ ವಿಜ್ಞಾನದ ವಿಷಯ ಕುರಿತು ಪರೀಕ್ಷೆ ಇರಲಿದೆ. ಇದಕ್ಕೆ ನಿಮ್ಮ ತಯಾರಿ ಹೀಗಿದ್ದರೆ ಚೆನ್ನ.ಕೊಪ್ಪಳ ಜಿಲ್ಲೆ ಹಿಟ್ನಾಳ ವಸತಿ ಶಾಲೆ ಪ್ರಾಂಶುಪಾಲ ಶಿ.ಗು.ಹಿರೇಮಠ ಕೆಲ ಸಲಹೆ ನೀಡಿದ್ದಾರೆ.
Fri, 28 Mar 202509:44 AM IST
ಬೇಸಿಗೆ ಬಂತೆಂದರೆ ಸಾಕು, ಬೆಂಗಳೂರಲ್ಲಿ ನೀರಿನ ಸಮಸ್ಯೆ ಬೃಹದಾಕಾರವಾಗಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸೆಟ್ಬ್ಯಾಕ್ ಏರಿಯಾ ಸಿಮೆಂಟೀಕರಣ ನಿಷೇಧಕ್ಕೆ ಸರ್ಕಾರದ ಚಿಂತನೆ ನಡೆಸಿದೆ. ಅದರ ವಿವರ ಇಲ್ಲಿದೆ.
Fri, 28 Mar 202507:25 AM IST
Price Hike: ಬೆಲೆ ಏರಿಕೆ, ದರ ಏರಿಕೆ, ತೆರಿಗೆ ಏರಿಕೆಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಯುಗಾದಿ ಹಬ್ಬಕ್ಕೆ ಬೆಲೆ ಏರಿಕೆ ಹೋಳಿಗೆ ಎಂದು ವ್ಯಂಗ್ಯವಾಡಿದ್ದಾರೆ. ಇದು ಪ್ರಜಾಪ್ರಭುತ್ವ ಸರಕಾರವಲ್ಲ, ದರ ಏರಿಕೆ, ತೆರಿಗೆ ಹೇರಿಕೆ ಸರಕಾರ ಎಂದು ಅಸಮಾಧಾ ವ್ಯಕ್ತಪಡಿಸಿದರು.
Fri, 28 Mar 202506:56 AM IST
B N Garudachar IPS Death: ಚಿಕ್ಕಪೇಟೆ ಶಾಸಕ ಉದಯ ಗರುಡಾಚಾರ್ ಅವರ ತಂದೆ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಬಿಎನ್ ಗರುಡಾಚಾರ್ ಇಂದು (ಮಾರ್ಚ್ 28) ನಸುಕಿನ 3 ಗಂಟೆಗೆ ನಿಧನರಾದರು.
Fri, 28 Mar 202505:13 AM IST
ಬೆಂಗಳೂರು ಚಾಮರಾಜಪೇಟೆಯ ಕೋಟೆ ಪ್ರೌಢಶಾಲೆ ಆವರಣದಲ್ಲಿ 87ನೇ ಶ್ರೀ ರಾಮನವಮಿ ಜಾಗತಿಕ ಸಂಗೀತೋತ್ಸವ 2025 ಏಪ್ರಿಲ್ 6 ರಿಂದ ಮೇ 2 ರ ತನಕ ನಡೆಯಲಿದೆ. ಕಾರ್ಯಕ್ರಮ ವಿವರ, ಟಿಕೆಟ್ ಎಲ್ಲಿ ಖರೀದಿಸಬೇಕು ಎಂಬಿತ್ಯಾದಿ ವಿವರ ಇಲ್ಲಿದೆ.
Fri, 28 Mar 202503:29 AM IST
- ಖ್ಯಾತ ಪತ್ರಕರ್ತ, ಲೇಖಕ ರವಿ ಬೆಳಗೆರೆ ಅವರ ಸ್ಮರಣಾರ್ಥ ಬೆಂಗಳೂರಿನಲ್ಲಿ ‘ಖಾಸ್ ಗೀತ್‘ ಎಂದೂ ಮರೆಯದ ಹಾಡು ವಿಶೇಷ ಕಾರ್ಯಕ್ರಮ ನಡೆಯಲಿದೆ. ಏಪ್ರಿಲ್ 4ಕ್ಕೆ ನಡೆಯಲಿರುವ ಈ ಕಾರ್ಯಕ್ರಮದ ಕುರಿತ ಇನ್ನಷ್ಟು ವಿವರ ಇಲ್ಲಿದೆ.
Fri, 28 Mar 202501:30 AM IST
- Karnataka Tiger Estimation: ಕರ್ನಾಟಕದ ಹುಲಿ ಸಂಖ್ಯೆಯಲ್ಲಿ ಭಾರೀ ಏರಿಕೆಯೇನೂ ಕಂಡುಬಂದಿಲ್ಲ.ಕುಸಿತವೇನೂ ಇಲ್ಲದೇ ಸ್ಥಿರತೆ ಇರುವುದು ವಾರ್ಷಿಕ ಗಣತಿ ವರದಿಯಲ್ಲಿ ಕಂಡು ಬಂದಿದೆ.
Fri, 28 Mar 202501:05 AM IST
Karnataka Weather March 28: ಕರ್ನಾಟಕದ ವಿವಿಧೆಡೆ ಇಂದಿನಿಂದ ಏಪ್ರಿಲ್ 3ರ ತನಕ ಮಳೆಯಾಗುವ ಸಾಧ್ಯತೆ ಇದೆ. ಇಂದು ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಬಹುದು. ಅದೇ ರೀತಿ, ಮೈಸೂರು, ಕೊಡಗು, ಚಿಕ್ಕಮಗಳೂರಲ್ಲಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ವರದಿ ಹೇಳಿದೆ.