Bengaluru Water Tariff: ಬೆಂಗಳೂರು ಜನತೆಗೆ ಮತ್ತೊಮ್ಮೆ ಬೆಲೆ ಏರಿಕೆಯ ಬಿಸಿ; 11 ವರ್ಷಗಳ ಬಳಿಕ ನೀರಿನ ದರ ಹೆಚ್ಚಳ
Bengaluru Water Tariff: ಬೆಂಗಳೂರು ಜಲಮಂಡಳಿಯು ತನ್ನ ವಾರ್ಷಿಕ 1000 ಕೋಟಿ ನಷ್ಟವನ್ನು ಸರಿದೂಗಿಸಲು 11 ವರ್ಷಗಳ ಬಳಿಕ ನೀರಿನ ದರವನ್ನು ಲೀಟರ್ಗೆ 1 ಪೈಸೆಯಲು ನಿರ್ಧರಿಸಿದೆ. ಹೊಸ ದರದ ಅನ್ವಯ ಹೆಚ್ಚುವರಿ ಎಷ್ಟು ಪಾವತಿಸಬೇಕಾಗಬಹುದು ಎನ್ನುವ ವಿವರ ಇಲ್ಲಿದೆ.

ಬೆಂಗಳೂರು: ಹೆಚ್ಚಾದ ಬಿಸಿಲಿನ ಶಾಖದ ನಡುವೆ ಬೆಲೆ ಏರಿಕೆಯ ಬಿಸಿಯೂ ಬೆಂಗಳೂರಿಗರಿಗೆ ತಟ್ಟುತ್ತಿದೆ. ಕಳೆದೊಂದು ದಶಕದಿಂದ ಬದಲಾಗದ ನೀರಿನ ದರ ಇದೀಗ ಏರಿಕೆಯಾಗಿದೆ. ಲೀಟರ್ಗೆ 1 ಪೈಸೆಯಷ್ಟು ಏರಿಕೆ ಮಾಡುವುದಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. 11 ವರ್ಷಗಳ ನಂತರ ಬೆಂಗಳೂರು ಜಲಮಂಡಳಿಯು ನೀರಿನ ದರವನ್ನು ಹೆಚ್ಚಳ ಮಾಡುತ್ತಿದೆ. ಬಿಬಿಎಂಪಿ ಬಜೆಟ್ಗೆ ಮುಂಚಿತವಾಗಿ ಬೆಂಗಳೂರಿನ ಶಾಸಕರೊಂದಿಗಿನ ಸಭೆಯ ನಂತರ ಹೊಸ ದರ ಅಧಿಕೃತವಾಗಿ ಜಾರಿಗೊಳ್ಳುವ ನಿರೀಕ್ಷೆ ಇದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಆರಂಭದಲ್ಲಿ ತನ್ನ ಹೆಚ್ಚುತ್ತಿರುವ ನಷ್ಟವನ್ನು ಸರಿದೂಗಿಸಲು ಲೀಟರ್ಗೆ 7 ರಿಂದ 8 ಪೈಸೆಯಷ್ಟು ದರ ಹೆಚ್ಚಳದ ಬಗ್ಗೆ ಪ್ರಸ್ತಾಪಿಸಿತ್ತು. ಆದರೆ ಈ ವಿಚಾರವಾಗಿ ಮಧ್ಯೆ ಪ್ರವೇಶಿಸಿದ ಡಿಕೆ ಶಿವಕುಮಾರ್ ನೀರಿನ ದರ ಅಷ್ಟೊಂದು ಏರಿಕೆ ಮಾಡುವುದು ಸಮಂಜಸವಲ್ಲ ಎಂದಿದ್ದಾರೆ. ‘ಕಳೆದ ಕೆಲವು ದಿನಗಳ ಹಿಂದೆ ಬಿಡ್ಬ್ಲೂಎಸ್ಎಸ್ಬಿ ಅಧಿಕಾರಿಗಳು ನೀರಿನ ಸುಂಕವನ್ನು 7 ರಿಂದ 8 ಪೈಸೆಯಷ್ಟು ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದ್ದರು. ಆದರೆ ಈ ರೀತಿ ಮಾಡಿದರೆ ಜನರು ಖಂಡಿತ ಪ್ರತಿಭಟನೆ ಮಾಡುತ್ತಾರೆ, ಹಾಗಾಗಿ ಲೀಟರ್ ಮೇಲೆ 1 ಪೈಸೆ ಹೆಚ್ಚಿಸಲು ನಿರ್ಧಾರ ಮಾಡಲಾಗಿದೆ‘ ಎಂದು ಅವರು ತಿಳಿಸಿದ್ದಾರೆ.
ನೀರು ಸರಬರಾಜಿನ ವೆಚ್ಚಗಳು ಹೆಚ್ಚುತ್ತಿದ್ದರೂ, 2014 ರಿಂದ ಸುಂಕವನ್ನು ಪರಿಷ್ಕರಿಸಲಾಗಿಲ್ಲ. 100 ಕಿ.ಮೀ ದೂರದಲ್ಲಿರುವ ಸ್ಥಳದಿಂದ ನಗರಕ್ಕೆ ನೀರನ್ನು ಪಡೆಯಲಾಗುತ್ತಿದೆ ಎಂದು ಶಿವಕುಮಾರ್ ಒತ್ತಿ ಹೇಳಿದರು. ಇದು ನೀರು ಸರಬರಾಜಿನ ವೆಚ್ಚದ ಹೆಚ್ಚಳಕ್ಕೂ ಕಾರಣವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಬಿಡ್ಬ್ಯೂಎಸ್ಎಸ್ಬಿಗೆ ಹೆಚ್ಚುತ್ತಿರುವ ನಷ್ಟ
ಬಿಡ್ಬ್ಯೂಎಸ್ಎಸ್ಬಿ ವರ್ಷಕ್ಕೆ ಸುಮಾರು 1,000 ಕೋಟಿ ರೂ. ನಷ್ಟವನ್ನು ಅನುಭವಿಸುತ್ತಿದೆ, ಇದಕ್ಕೆ ಪ್ರಮುಖ ಕಾರಣ ಸುಂಕಗಳ ಸ್ಥಗಿತ ಮತ್ತು ಹೆಚ್ಚುತ್ತಿರುವ ಸರಬರಾಜು ವೆಚ್ಚಗಳು. ಬಿಡ್ಬ್ಯೂಎಸ್ಎಸ್ಬಿ 2014 ರಿಂದ ಸುಂಕ ಪರಿಷ್ಕರಣೆಯಿಲ್ಲದೆ ಬೆಂಗಳೂರಿಗೆ ನೀರು ಸರಬರಾಜು ಮಾಡುತ್ತಿದೆ. ಅದೇ ಸಮಯದಲ್ಲಿ, ಎಲ್ಲಾ ಇತರ ಉಪಯುಕ್ತತೆ ಸೇವೆಗಳ ಬೆಲೆಗಳು ಗಣನೀಯವಾಗಿ ಏರಿಕೆಯಾಗಿವೆ. ಇದಲ್ಲದೆ, ಪ್ರತಿ ವರ್ಷ ವಿದ್ಯುತ್ ಸುಂಕವನ್ನು ಸಹ ಪರಿಷ್ಕರಿಸಲಾಗುತ್ತಿದೆ, ಇದು ನಮ್ಮ ನೀರು ಪಂಪ್ ಮಾಡುವ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ವಿದ್ಯುತ್ ಬಿಲ್ಗಳನ್ನು ಹೆಚ್ಚಿಸುತ್ತದೆ" ಎಂದು ಶಿವಕುಮಾರ್ ವಿವರಿಸಿದರು.
ಪರಿಷ್ಕೃತ ದರವು ಮಾಸಿಕ ಮನೆಯ ನೀರಿನ ಶುಲ್ಕವನ್ನು 400 ರಿಂದ 500 ರೂ.ಗಳಷ್ಟು ಹೆಚ್ಚಿಸಬಹುದು ಎಂದು ಬಿಡಬ್ಲ್ಯೂಎಸ್ಎಸ್ಬಿಯ ಮೂಲಗಳು ಬಹಿರಂಗಪಡಿಸಿವೆ.
ಅಕ್ರಮ ಸಂಪರ್ಕಗಳು ಮತ್ತು ಬಿಲ್ಡರ್ ಬಾಕಿಗಳನ್ನು ಪರಿಹಾರಕ್ಕೆ ಕ್ರಮ
ಈ ಸಂದರ್ಭ ಡಿಕೆ ಶಿವಕುಮಾರ್ ಅಕ್ರಮ ನೀರಿನ ಸಂಪರ್ಕಗಳು ಮತ್ತು ಬಿಲ್ಡರ್ಗಳಿಂದ ಪಾವತಿಸದ ಬಾಕಿಗಳ ಸಮಸ್ಯೆಯನ್ನು ಸಹ ಪ್ರಸ್ತಾಪಿಸಿದರು. "ಬೆಂಗಳೂರಿನ ಭಾಗವಾಗಿರುವ 110 ಹಳ್ಳಿಗಳಲ್ಲಿ ಹಲವಾರು ಬಿಲ್ಡರ್ಗಳು ಬೃಹತ್ ಅಪಾರ್ಟ್ಮೆಂಟ್ಗಳನ್ನು ನಿರ್ಮಿಸಿದ್ದಾರೆ ಮತ್ತು ಮನೆ ಖರೀದಿದಾರರಿಂದ ಅದೇ ಮೊತ್ತವನ್ನು ಸಂಗ್ರಹಿಸಿದರೂ ಯಾರೂ ಬಿಡಬ್ಲ್ಯೂಎಸ್ಎಸ್ಬಿಗೆ ಠೇವಣಿ ಶುಲ್ಕವನ್ನು ಪಾವತಿಸಿಲ್ಲ. ಕೆಲವರು ಅಕ್ರಮವಾಗಿ ನೀರಿನ ಸಂಪರ್ಕಗಳನ್ನು ಪಡೆದಿದ್ದಾರೆ. ಆ ಬಿಲ್ಡರ್ಗಳ ನೋಟಿಸ್ಗಳನ್ನು ಜಾರಿಗೊಳಿಸಲು ಮತ್ತು ಬಾಕಿ ಹಣವನ್ನು ವಸೂಲಿ ಮಾಡಲು ಮತ್ತು ಅವೆಲ್ಲವನ್ನೂ ಕಾವೇರಿ ನೀರಿನ ಸಂಪರ್ಕದೊಂದಿಗೆ ಸಂಪರ್ಕಿಸಲು ಬಿಡಬ್ಲ್ಯೂಎಸ್ಎಸ್ಬಿಗೆ ಸೂಚಿಸಿದ್ದೇನೆ‘ ಎಂದು ಅವರು ಹೇಳಿದರು.
