ಬೆಂಗಳೂರಲ್ಲಿ ರಥಸಪ್ತಮಿ ಉತ್ಸವ; ಆಡುಗೋಡಿ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ, ಸಂಚಾರ ಪೊಲೀಸರ ಸಲಹೆ ಹೀಗಿದೆ
Bengaluru Ratha Saptami: ರಥ ಸಪ್ತಮಿ ಜಾತ್ರಾ ಮಹೋತ್ಸವದ ಕಾರಣ, ಬೆಂಗಳೂರು ಆಡುಗೋಡಿ ಸಮೀಪ ಸಂಚಾರ ವ್ಯವಸ್ಥೆ ಬದಲಾವಣೆ ಮಾಡಲಾಗಿದೆ. ಸಂಚಾರ ಪೊಲೀಸರು ನೀಡಿರುವ ಸಂಚಾರ ಸಲಹೆಯ ಪೂರ್ಣ ವಿವರ ಇಲ್ಲಿದೆ.

Bengaluru Ratha Saptami: ಬೆಂಗಳೂರು ಆಡುಗೋಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು (ಫೆ 4) ರಥ ಸಪ್ತಮಿ ಜಾತ್ರಾ ಮಹೋತ್ಸವದ ಕಾರಣ ಸಂಚಾರ ವ್ಯವಸ್ಥೆ ಬದಲಾವಣೆ ಮಾಡಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ. ಈ ಸಂಚಾರ ವ್ಯವಸ್ಥೆ ಬದಲಾವಣೆಯು ಇಂದು ಸಂಜೆ 7 ಗಂಟೆಯಿಂದ ನಾಳೆ (ಫೆ 5) ಬೆಳಗ್ಗೆ 9 ಗಂಟೆ ತನಕ ಚಾಲ್ತಿಯಲ್ಲಿ ಇರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಡುಗೋಡಿ ಮುಖ್ಯ ರಸ್ತೆಯಲ್ಲಿ ರಥ ಸಪ್ತಮಿ ಜಾತ್ರಾ ಮಹೋತ್ಸವ ಹಾಗೂ ವಿವಿಧ ದೇವರುಗಳ ಸುಮಾರು 32 ಕ್ಕೂ ಹೆಚ್ಚು ಪಲ್ಲಕ್ಕಿಗಳ ಮೆರವಣಿಗೆ ಕಾರ್ಯಕ್ರಮ ಇದ್ದು, ಸದರಿ ರಥಸಮಪ್ತಮಿ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವುದರಿಂದ ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ತಾತ್ಕಾಲಿಕವಾಗಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿರುತ್ತದೆ ಎಂದು ಪೊಲೀಸರು ವಿವರಿಸಿದ್ದಾರೆ
ಬೆಂಗಳೂರಲ್ಲಿ ರಥಸಪ್ತಮಿ ಉತ್ಸವ; ಆಡುಗೋಡಿ ಸುತ್ತಮುತ್ತ ಸಂಚಾರ ನಿರ್ಬಂಧ
ರಥ ಸಪ್ತಮಿ ಜಾತ್ರಾ ಮಹೋತ್ಸವ ನಡೆಯುವ ಆಡುಗೋಡಿ ಮುಖ್ಯ ರಸ್ತೆಯಲ್ಲಿ ಆನೇಪಾಳ್ಯ ಜಂಕ್ಷನ್ನಿಂದ ಯುಕೋ ಬ್ಯಾಂಕ್ ಜಂಕ್ಷನ್ವರೆಗೆ ಎರಡು ಬದಿಯಲ್ಲಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.
ಆಡುಗೋಡಿ ಜಂಕ್ಷನ್ಗೆ ಸಂಪರ್ಕ ಕಲ್ಪಿಸುವ ಅಡ್ಡ ರಸ್ತೆಗಳಾದ ನ್ಯೂ ಮೈಕೋ ಲಿಂಕ್ ರಸ್ತೆ ಮತ್ತು ಬಜಾರ್ ಸ್ಟ್ರೀಟ್ ರಸ್ತೆಗಳಲ್ಲಿಯೂ ಸಹಾ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಟ್ರಾಫಿಕ್ ಡೈವರ್ಷನ್ ಸ್ಥಳಗಳು: > ಆನೇಪಾಳ್ಯ ಜಂಕ್ಷನ್ ಯುಕೋ ಬ್ಯಾಂಕ್ ಜಂಕ್ಷನ್, ಮೈಕೋ ಬಂಡೆ ಜಂಕ್ಷನ್, ಬಜಾರ್ ಸ್ಟ್ರೀಟ್ ರಸ್ತೆ (ಶನಿಮಹಾತ್ಮ ದೇವಸ್ಥಾನ ಜಂಕ್ಷನ್) ಡೈರಿ ಸರ್ಕಲ್ ಬಳಿ ಟ್ರಾಫಿಕ್ ಡೈವರ್ಷನ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಥಸಪ್ತಮಿ ಉತ್ಸವ ನಿಮಿತ್ತ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಹೀಗಿದೆ
1) ಯುಕೋ ಬ್ಯಾಂಕ್ ಜಂಕ್ಷನ್ ಕಡೆಯಿಂದ ಆನೇಪಾಳ್ಯ ಮತ್ತು ಎಂ.ಜಿ ರಸ್ತೆಗೆ ಸಾಗುವ ವಾಹನಗಳು, ಯುಕೋ ಬ್ಯಾಂಕ್ ಜಂಕ್ಷನ್ನಲ್ಲಿ ಬಲತಿರುವು ಪಡೆದು, ಎನ್.ಜಿ.ವಿ ಬ್ಯಾಕ್ ಗೇಟ್ ಜಂಕ್ಷನ್ನಲ್ಲಿ ಎಡ ತಿರುವು ಪಡೆದು ಪಾಸ್ಟ್ ಆಫೀಸ್ ಬಳಿ ಬಲತಿರುವು ಪಡೆದು ಬುಚರಿ ಜಂಕ್ಷನ್ ಮುಖಾಂತರ ಆನೇಪಾಳ್ಯ ಮತ್ತು ಎಂ.ಜಿ ರಸ್ತೆಯ ಕಡೆಗೆ ಸಾಗುವುದು.
2) ಆನೇಪಾಳ್ಯ ಜಂಕ್ಷನ್ ಕಡೆಯಿಂದ ಮಡಿವಾಳ ಚೆಕ್ಪೋಸ್ಟ್ ಹಾಗೂ ಹೊಸೂರು ರಸ್ತೆ ಕಡೆಗೆ ಸಾಗುವ ವಾಹನಗಳು ಆನೇಪಾಳ್ಯ ಜಂಕ್ಷನ್ನಲ್ಲಿ ಬಲತಿರುವು ಪಡೆದು, ಬಿ.ಜಿ ರಸ್ತೆಯ ಮುಖಾಂತರ ಸಾಗಿ ಡೈರಿ ಸರ್ಕಲ್ ಸರ್ವಿಸ್ ರಸ್ತೆಯಲ್ಲಿ ಸಾಗಿ ಡೈರಿ ಸರ್ಕಲ್ ಜಂಕ್ಷನ್ನಲ್ಲಿ ಎಡತಿರುವು ಪಡೆದು ಡಾ| ಮರಿಗೌಡ ರಸ್ತೆಯ ಮುಖಾಂತರ ಮಡಿವಾಳ ಚೆಕ್ ಪೋಸ್ಟ್ ಮತ್ತು ಹೊಸೂರು ರಸ್ತೆಗೆ ತಲುಪಿ ಮುಂದೆ ಸಾಗುವುದು.
3) ಲಕ್ಕಸಂದ್ರ ಮೆಟ್ರೋ ಕಾಮಗಾರಿ ಸಂಬಂಧ ಬಿ.ಜಿ ರಸ್ತೆ ಚಿನ್ನಯ್ಯನ ಪಾಳ್ಯ ಕ್ರಾಸ್ನಿಂದ ಆನೇಪಾಳ್ಯ ಜಂಕ್ಷನ್ವರೆಗೆ ಸಂಚಾರವನ್ನು ನಿರ್ಬಂಧಿಸಿ ಅಧಿಸೂಚನೆ ಹೊರಡಿಸಿದ್ದು, ರಥ ಸಪ್ತಮಿ ಜಾತ್ರಾ ಮಹೋತ್ಸವ ಸಂಬಂಧ ಮೈಕೋಬಂಡೆ ಜಂಕ್ಷನ್ನಿಂದ ಆಡುಗೋಡಿ ಜಂಕ್ಷನ್ವರೆಗೆ ಮೈಕೋ ಲಿಂಕ್ ರಸ್ತೆಯ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿರುವುದರಿಂದ ಡೈರಿ ಸರ್ಕಲ್ ಕಡೆಯಿಂದ ಆನೇಪಾಳ್ಯ ಹಾಗೂ ಎಂ.ಜಿ ರಸ್ತೆಯ ಕಡೆಗೆ ಸಾಗುವ ವಾಹನಗಳು ಮೈಕೋ ಬಂಡೆ ಜಂಕ್ಷನ್ನಿಂದ ಬಿ.ಜಿ ರಸ್ತೆಯಲ್ಲಿಯೇ ಸ್ವಲ್ಪ ಮುಂದೆ ಸಾಗಿ ಚಿನ್ನಯ್ಯನ ಪಾಳ್ಯ ಕ್ರಾಸ್ನಲ್ಲಿ ಎಡತಿರುವು ಪಡೆದು ವಿಲ್ಸನ್ ಗಾರ್ಡನ್ 10ನೇ ಕ್ರಾಸ್ ಕಡೆಗೆ ಸಂಚರಿಸಿ ಕೆ.ಹೆಚ್. ರಸ್ತೆಯ ಮೂಲಕ ಮುಂದೆ ಸಾಗುವುದು.
4) ಡೈರಿ ಸರ್ಕಲ್ ಜಂಕ್ಷನ್ನಲ್ಲಿ ಭಾರಿ ಗಾತ್ರದ ವಾಹನಗಳು ಹಾಗೂ ಬಸ್ಸುಗಳ ಸಂಚಾರವನ್ನು ಮೈಕೋಬಂಡೆ ಜಂಕ್ಷನ್, ಚಿನ್ನಯ್ಯನಪಾಳ್ಯ ಕ್ರಾಸ್ ಕಡೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಿದ್ದು, ಸದರಿ ವಾಹನಗಳು ನಿಮ್ಹಾನ್ಸ್, ವಿಲ್ಸನ್ ಗಾರ್ಡನ್ 10ನೇ ಕ್ರಾಸ್ ಮುಖಾಂತರ ಸಾಗುವುದು.
5) ಮಡಿವಾಳ ಚೆಕ್ ಪೋಸ್ಟ್ ಕಡೆಯಿಂದ ಯುಕೋ ಬ್ಯಾಂಕ್ ಜಂಕ್ಷನ್ ಕಡೆಗೆ ಭಾರಿ ಗಾತ್ರದ ವಾಹನಗಳು ಹಾಗೂ ಬಸ್ಸುಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದ್ದು, ಸದರಿ ವಾಹನಗಳು ಡಾ||ಮರೀಗೌಡ ರಸ್ತೆ-ಡೈರಿಸರ್ಕಲ್-ನಿಮ್ಹಾನ್ಸ್-ವಿಲ್ಸನ್ ಗಾರ್ಡನ್ 10ನೇ ಕ್ರಾಸ್ ಮುಖಾಂತರ ಸಾಗಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
ಪಾರ್ಕಿಂಗ್ ನಿಷೇಧಿಸಿರುವ ಸ್ಥಳಗಳು
1) ಆಡುಗೋಡಿ ಮುಖ್ಯ ರಸ್ತೆಯಲ್ಲಿ ಆನೇಪಾಳ್ಯ ಜಂಕ್ಷನ್ನಿಂದ ಯುಕೋ ಬ್ಯಾಂಕ್ ಜಂಕ್ಷನ್ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ
2) ಮೈಕೋ ಬಂಡೆ ಜಂಕ್ಷನ್ ನಿಂದ ಆಡುಗೋಡಿ ಜಂಕ್ಷನ್ ವರೆಗೆ ನ್ಯೂ ಮೈಕೋ ಲಿಂಕ್ ರಸ್ತೆಯ ಎರಡೂ ಬದಿಗಳಲ್ಲಿ
3) ಆಡುಗೋಡಿ ಬಜಾರ್ ಸ್ಟ್ರೀಟ್ ರಸ್ತೆಯ ಎರಡೂ ಬದಿಗಳಲ್ಲಿ
ರಥ ಸಪ್ತಮಿ ಜಾತ್ರಾ ಮಹೋತ್ಸವದ ನಿಮಿತ್ತ ಆಡುಗೋಡಿ ಸಂಚಾರ ಠಾಣಾ ಸರಹದ್ದಿನ ಆಡುಗೋಡಿಯ ವಿವಿಧ ಬಡಾವಣೆಗಳ ನಿವಾಸಿಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ:
1) ಆಡುಗೋಡಿಯ ನಂಜಪ್ಪ ಲೇಔಟ್, ಮಹಾಲಿಂಗೇಶ್ವರ ಬಡಾವಣೆ, ಅನ್ಸಲ್ ಕೃಷ್ಣ ಅಪಾರ್ಟ್ಮೆಂಟ್, ಬೃಂದಾವನ ಅಪಾರ್ಟ್ ಮೆಂಟ್, ಪ್ರೆಸ್ಟೀಜ್ ಅಪಾರ್ಟ್ಮೆಂಟ್ ನಿವಾಸಿಗಳು ಡೈರಿ ಸರ್ಕಲ್ ಪೊಲೀಸ್ ವಸತಿಗೃಹದ ಪಕ್ಕದ ರಸ್ತೆಯಿಂದ ಸಂಚರಿಸುವುದು.
2) ಆಡುಗೋಡಿ ಸಿ.ಎ.ಆರ್ ದಕ್ಷಿಣ ಪೊಲೀಸ್ ವಸತಿಗೃಹದ ನಿವಾಸಿಗಳು ಮೇಲ್ಕಂಡ ಸಮಯದಲ್ಲಿ ಆಡುಗೋಡಿ ಮುಖ್ಯರಸ್ತೆಯ ಬದಲಾಗಿ ಮಂಗಳ ಕಲ್ಯಾಣ ಮಂಟಪದ ಗೇಟ್ ಮುಖಾಂತರ ಸಂಚರಿಸುವುದು.
