ಜೂನ್ 14 ರಿಂದ ಬೆಂಗಳೂರಿನ ಹೊರ ವಲಯದಲ್ಲಿ ಭಾರತ ಗೌರವ ಶಿಬಿರ; ಏನೆಲ್ಲಾ ಇರುತ್ತೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ
ಕನ್ನಡ ಸುದ್ದಿ  /  ಕರ್ನಾಟಕ  /  ಜೂನ್ 14 ರಿಂದ ಬೆಂಗಳೂರಿನ ಹೊರ ವಲಯದಲ್ಲಿ ಭಾರತ ಗೌರವ ಶಿಬಿರ; ಏನೆಲ್ಲಾ ಇರುತ್ತೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ

ಜೂನ್ 14 ರಿಂದ ಬೆಂಗಳೂರಿನ ಹೊರ ವಲಯದಲ್ಲಿ ಭಾರತ ಗೌರವ ಶಿಬಿರ; ಏನೆಲ್ಲಾ ಇರುತ್ತೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ

ಸಾಕ್ಷಿ ಟ್ರಸ್ಟ್ ವತಿಯಿಂದ ಬೆಂಗಳೂರಿನ ಹೊರವಲಯದಲ್ಲಿ ಜೂನ್ 14 ರಿಂದ 22 ರವರೆಗೆ ಭಾರತ ಗೌರವ ಶಿಬಿರವನ್ನು ಆಯೋಜಿಸಲಾಗಿದೆ. ಅರ್ಹತೆ, ನಿಯಮಗಳು, ಶಿಬಿರದಲ್ಲಿ ಏನೆಲ್ಲಾ ಇರುತ್ತೆ ಎಂಬುದರ ಮಾಹಿತಿ ಇಲ್ಲಿದೆ.

ಜೂನ್ 14 ರಿಂದ ಬೆಂಗಳೂರಿನ ಹೊರವಲಯದಲ್ಲಿ ಭಾರತ ಗೌರವ ಶಿಬಿರವನ್ನು ಆಯೋಜಿಸಲಾಗಿದೆ.
ಜೂನ್ 14 ರಿಂದ ಬೆಂಗಳೂರಿನ ಹೊರವಲಯದಲ್ಲಿ ಭಾರತ ಗೌರವ ಶಿಬಿರವನ್ನು ಆಯೋಜಿಸಲಾಗಿದೆ.

ಭಾರತ ಗೌರವ ಶಿಬಿರ: ಬೆಂಗಳೂರಿನ ಹೊರವಲಯದಲ್ಲಿ ಜೂನ್ 14 ರಿಂದ 22 ರವರೆಗೆ ಸಾಕ್ಷಿ ಟ್ರಸ್ಟ್ ವತಿಯಿಂದ ಭಾರತ ಗೌರವ ಎಂಬ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ. ಪ್ರವೇಶ ಉಚಿತವಾಗಿದ್ದು, ಆಸಕ್ತರು ಶಿಬಿರದಲ್ಲಿ ಭಾಗವಹಿಸಬಹುದಾದಿದೆ. ಈ ಶಿಬಿರದಲ್ಲಿ ಏನೆಲ್ಲಾ ಇರುತ್ತೆ ಎಂಬ ಮಾಹಿತಿಯನ್ನು ಸಾಕ್ಷಿ ಟ್ರಸ್ಟ್ ಹಂಚಿಕೊಂಡಿದೆ.

ಭಾರತದ ಪರಂಪರೆ ಪೂರ್ಣವಾಗಿ ಅರಿಯಬೇಕಾಗಿದೆ. ಮಸುಕಾದ ನಮ್ಮ ಸಂಸ್ಕೃತಿ-ಸ್ಮರಣೆಗೆ ಹೊಳಪು ನೀಡಬೇಕಾಗಿದೆ. ಭಾರತದಲ್ಲಿ ಅಗಿಹೋದ ಪ್ರಾತಃಸ್ಮರಣೀಯರನ್ನು ನೆನೆಯಬೇಕು. ವಿಶ್ವಗುರು ಪರಂಪರೆ ಮೆರೆಯಲು ನಾವೆಲ್ಲ ಸಿದ್ಧರಾಗಬೇಕು. ಸಂಸ್ಕೃತಿಯ ತೇರು ಎಳೆಯಲು, ಪರಂಪರೆಯ ಪಲ್ಲಕ್ಕಿ ಹೊರಲು ಮನಸ್ಸು ಮಾಡಬೇಕು. ದೇವರು ದಯಪಾಲಿಸಿದ ಶಕ್ತಿ, ಯುಕ್ತಿ, ಸಾಮರ್ಥ್ಯ ಮತ್ತು ಸದ್ಗುಣಗಳನ್ನು ಪೂರ್ಣಪ್ರಮಾಣದಲ್ಲಿ ತೊಡಗಿಸಬೇಕು. ಈ ಸಿದ್ಧತೆಗಾಗಿ “ಭಾರತ ಗೌರವ ಶಿಬಿರ" ಆಯೋಜಿಸಲಾಗಿದೆ ಎಂದು ಸಾಕ್ಷಿ ಟ್ರಸ್ಟ್ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ವೇದಗಳು ಭಾರತೀಯ ಸಂಸ್ಕೃತಿಯ ಅಡಿಗಲ್ಲು. ಅಂದು ಇಂದು ಮುಂದು ವೇದಗಳೇ ನಮ್ಮ ಬೆಳಕು. ಮನುಷ್ಯನ ಅಂತಃಸ್ಸತ್ವ ಅರಳಿಸುವ ಜ್ಞಾನ ವೇದಗಳಲ್ಲಿ ಇದೆ. ಕತ್ತಲೆ ಕಳೆಯಬೇಕು, ಬೆಳಕು ಪಡೆಯಬೇಕು. ಇದಕ್ಕಾಗಿ ವೇದಗಳು ಬೇಕು. ಇದರ ಮರ್ಮ ಅರಿಯಲು “ಭಾರತ ಗೌರವ ಶಿಬಿರ" ಹಮ್ಮಿಕೊಂಡಿರುವುದಾಗಿ ತಿಳಿದೆ.

ಭಾರತ ಗೌರವ ಶಿಬಿರದ ವಿವರಗಳು

ದಿನಾಂಕ: 2025ರ ಜೂನ್ 14 ರಿಂದ 2 ರವರೆಗೆ

ಸ್ಥಳ: ಅರೋವೇದ ತೋಟ (ಏಡಮಡು ಗ್ರಾಮ), ಬೆಂಗಳೂರು ಹೊರವಲಯ

ಯಾರು ಭಾಗವಹಿಸಬಹುದು: 20 ರಿಂದ 50 ವರ್ಷದೊಳಗಿನ ಪುರುಷರು ಹಾಗೂ ಮಹಿಳೆಯರು

ಪ್ರವೇಶ ಲಭ್ಯತೆ: ಕೇವಲ 30 ರಿಂದ 35 ಆಸಕ್ತರಿಗೆ ಮಾತ್ರ

ಪ್ರವೇಶ ಶುಲ್ಕ: ಉಚಿತ

ವ್ಯವಸ್ಥೆ: ಸರಳ ಮತ್ತು ಸಾತ್ವಿಕ ಆಹಾರ, ವಸತಿ ವ್ಯವಸ್ಥೆ ಇರುತ್ತದೆ

ಮಾರ್ಗದರ್ಶನ: ವಿವಿಧ ಕ್ಷೇತ್ರದ ಸಾಧಕರು, ವಿದ್ವಾಂಸರು ಮಾರ್ಗದರ್ಶನ ನೀಡಲಿದ್ದಾರೆ.

ಅಧ್ಯಯನ ಸಾಮಗ್ರಿ: ಎಲ್ಲ ಶಿಬಿರಾರ್ಥಿಗಳಿಗೂ ಅಧ್ಯಯನ ಸಾಮಗ್ರಿ ಉಚಿತವಾಗಿ ನೀಡಲಾಗುತ್ತೆ

ಶಿಬಿರದ ವಿಶೇಷಗಳು

ಯೋಗ, ಪ್ರಾಣಾಯಾಮ, ಧ್ಯಾನ

ವೈಚಾರಿಕ ಚರ್ಚೆಗಳು, ಆಟೋಟಗಳು

ಅರ್ಜಿ ಹಾಗೂ ಇತರ ಮಾಹಿತಿಗಾಗಿ ಬಿಂದುಮಾಧವ ವಿ.ಜೆ ಇವರನ್ನು ಸಂಪರ್ಕಿಸಿ. ಮೊಬೈಲ್ ಸಂಖ್ಯೆ 9008833886. info@vedah.com, www.vedah.com

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.