ಪಹಲ್‌ಗಾಮ್ ಉಗ್ರರ ದಾಳಿಗೆ ಮೃತಪಟ್ಟ ಕನ್ನಡಿಗರಿಬ್ಬರ ಮೃತದೇಹ ಇಂದು ತಾಯ್ನಾಡಿಗೆ, ಪ್ರವಾಸಿಗರ ನೆರವಿಗೆ ಸರ್ಕಾರದಿಂದ ಸಹಾಯವಾಣಿ
ಕನ್ನಡ ಸುದ್ದಿ  /  ಕರ್ನಾಟಕ  /  ಪಹಲ್‌ಗಾಮ್ ಉಗ್ರರ ದಾಳಿಗೆ ಮೃತಪಟ್ಟ ಕನ್ನಡಿಗರಿಬ್ಬರ ಮೃತದೇಹ ಇಂದು ತಾಯ್ನಾಡಿಗೆ, ಪ್ರವಾಸಿಗರ ನೆರವಿಗೆ ಸರ್ಕಾರದಿಂದ ಸಹಾಯವಾಣಿ

ಪಹಲ್‌ಗಾಮ್ ಉಗ್ರರ ದಾಳಿಗೆ ಮೃತಪಟ್ಟ ಕನ್ನಡಿಗರಿಬ್ಬರ ಮೃತದೇಹ ಇಂದು ತಾಯ್ನಾಡಿಗೆ, ಪ್ರವಾಸಿಗರ ನೆರವಿಗೆ ಸರ್ಕಾರದಿಂದ ಸಹಾಯವಾಣಿ

ಪಹಲ್‌ಗಾಮ್ ಉಗ್ರದಾಳಿಗೆ ಮೃತಪಟ್ಟ ಕನ್ನಡಿಗರಿಬ್ಬರ ಮೃತದೇಹ ಇಂದು ತಾಯ್ನಾಡಿಗೆ ತಲುಪುವ ನಿರೀಕ್ಷೆ ಇದೆ. ಸಂತ್ರಸ್ತ ಕುಟುಂಬದ ಸದಸ್ಯರು ಕೂಡ ಮನೆ ಸೇರಲು ಬಯಸುತ್ತಿದ್ದಾರೆ. ಈ ನಡುವೆ, ಕರ್ನಾಟಕದಿಂದ ಕಾಶ್ಮೀರಕ್ಕೆ ತೆರಳಿದ ಪ್ರವಾಸಿಗರ ನೆರವಿಗೆ ಸರ್ಕಾರದಿಂದ ಸಹಾಯವಾಣಿ ಆರಂಭಿಸಲಾಗಿದ್ದು, ಅದರ ವಿವರ ಇಲ್ಲಿದೆ.

ಪಹಲ್‌ಗಾಮ್ ಉಗ್ರರ ದಾಳಿಗೆ ಮೃತಪಟ್ಟ ಕನ್ನಡಿಗರಿಬ್ಬರ ಪಾರ್ಥಿವ ಶರೀರ ಇಂದು ತಾಯ್ನಾಡಿಗೆ ತಲುಪುವ ನಿರೀಕ್ಷೆ ಇದೆ. ಉಗ್ರರ ದಾಳಿಗೆ ಮೃತಪಟ್ಟ ಶಿವಮೊಗ್ಗದ ಮಂಜುನಾಥ್ ರಾವ್ (ಎಡಚಿತ್ರ) ಮತ್ತು ಬೆಂಗಳೂರು ಟೆಕ್ಕಿ ಭರತ್ ಭೂಷಣ್ (ಬಲ ಚಿತ್ರ)
ಪಹಲ್‌ಗಾಮ್ ಉಗ್ರರ ದಾಳಿಗೆ ಮೃತಪಟ್ಟ ಕನ್ನಡಿಗರಿಬ್ಬರ ಪಾರ್ಥಿವ ಶರೀರ ಇಂದು ತಾಯ್ನಾಡಿಗೆ ತಲುಪುವ ನಿರೀಕ್ಷೆ ಇದೆ. ಉಗ್ರರ ದಾಳಿಗೆ ಮೃತಪಟ್ಟ ಶಿವಮೊಗ್ಗದ ಮಂಜುನಾಥ್ ರಾವ್ (ಎಡಚಿತ್ರ) ಮತ್ತು ಬೆಂಗಳೂರು ಟೆಕ್ಕಿ ಭರತ್ ಭೂಷಣ್ (ಬಲ ಚಿತ್ರ)

ಬೆಂಗಳೂರು: ಕಾಶ್ಮೀರದ ಪಹಲ್‌ಗಾಮ್‌ ಉಗ್ರರ ದಾಳಿಗೆ ಬಲಿಯಾದ ಕನ್ನಡಿಗರಿಬ್ಬರ ಪಾರ್ಥಿವ ಶರೀರ ಇಂದು (ಏಪ್ರಿಲ್ 23) ತಾಯ್ನಾಡಿಗೆ ತಲುಪುವ ನಿರೀಕ್ಷೆ ಇದೆ. ಅವರ ಪಾರ್ಥಿವ ಶರೀರಗಳನ್ನು ಹೊತ್ತು ತರುವ ವಿಮಾನ, ಹೊರಡುವ ಸಮಯ, ದಾರಿ ಹಾಗೂ ಜತೆಗೆ ಯಾರು ಇರುತ್ತಾರೆ ಎಂಬಿತ್ಯಾದಿ ವಿವರಗಳನ್ನು ಸರ್ಕಾರ ಪ್ರಕಟಿಸಿದೆ. ಇದರಂತೆ, ಹಾವೇರಿ ಮೂಲದ ಬೆಂಗಳೂರಿನ ಟೆಕ್ಕಿ ಭರತ್ ಭೂಷಣ್ ಅವರ ಮೃತದೇಹ ಮುಂಬಯಿ ಮೂಲಕವಾಗಿ ಬೆಂಗಳೂರು ತಲುಪಲಿದೆ. ಇದೇ ರೀತಿ ಶಿವಮೊಗ್ಗದ ಮಂಜುನಾಥ್ ಅವರ ಮೃತದೇಹ ನವದೆಹಲಿ, ಬೆಂಗಳೂರು ಮೂಲಕವಾಗಿ ಶಿವಮೊಗ್ಗಕ್ಕೆ ತಲುಪಲಿದೆ.

ಪಹಲ್‌ಗಾಮ್ ಉಗ್ರರ ದಾಳಿಗೆ ಮೃತಪಟ್ಟ ಕನ್ನಡಿಗರಿಬ್ಬರ ಮೃತದೇಹ ಇಂದು ತಾಯ್ನಾಡಿಗೆ

1) ಭರತ್ ಭೂಷಣ್‌ ಪಾರ್ಥಿವ ಶರೀರ: ಪಹಲ್‌ಗಾಮ್‌ ಉಗ್ರರ ದಾಳಿಗೆ ಮೃತಪಟ್ಟ ಇಬ್ಬರು ಕನ್ನಡಿಗರ ಪೈಕಿ ಬೆಂಗಳೂರು ಟೆಕ್ಕಿ, ರಾಣೆಬೆನ್ನೂರು ಮೂಲದ ಭರತ್ ಭೂಷಣ್ ಅವರ ಮೃತದೇಹವನ್ನು 6E 3105 / 6E 5252 ವಿಮಾನ ಮೂಲಕ ಸಾಗಿಸಲಾಗುತ್ತಿದೆ. ಮುಂಬಯಿ ಮೂಲಕವಾಗಿ ಬೆಂಗಳೂರಿಗೆ ಸಾಗಿಸಲಾಗುತ್ತಿದೆ. ಇದೇ ವಿಮಾನಗಳಲ್ಲಿ ಸುಜಾತಾ, ಹವಿಷ್‌, ಪ್ರೀತಂ ಚನ್ನವೀರಪ್ಪ ನರಸಿಂಹ, ಕೆಜೆ ಚಂದ್ರಶೇಖರ, ಶ್ರೀಹರಿ ಪ್ರಸಾದ್ ಎನ್‌, ಎಂ ದೀಪು, ಎಂಎಸ್ ರಾಹುಲ್ ಕೂಡ ಪ್ರಯಾಣಿಸುತ್ತಿದ್ದಾರೆ. ವಿಮಾನ ಹಾರಾಟದ ಸಮಯ ಅಪರಾಹ್ನ 3 ಗಂಟೆ ಎಂದು ವಿವರದಲ್ಲಿ ಉಲ್ಲೇಖಿಸಲಾಗಿದೆ.

2) ಮಂಜುನಾಥ್‌ ರಾವ್ ಪಾರ್ಥಿವ ಶರೀರ: ಶಿವಮೊಗ್ಗದ ಮಂಜುನಾಥ್ ರಾವ್ ಅವರು ಪಹಲ್‌ಗಾಮ್‌ ಉಗ್ರರ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಅವರ ಪಾರ್ಥಿವ ಶರೀರವನ್ನು ಇಂದು ನವದೆಹಲಿ, ಬೆಂಗಳೂರು ದಾರಿಯಾಗಿ ಶಿವಮೊಗ್ಗಕ್ಕೆ ತರಲಾಗುತ್ತಿದೆ. ಮಂಜುನಾಥ್ ರಾವ್ ಅವರ ಮೃತದೇಹವನ್ನು 6E 3103 / 6E 5269 / 6E 7731 ವಿಮಾನದ ಮೂಲಕ ಸಾಗಿಸಲಾಗುತ್ತಿದೆ. ಈ ವಿಮಾನದ ಸಮಯ ಸಂಜೆ 6 ಗಂಟೆ ಎಂದು ನಮೂದಿಸಲಾಗಿದೆ. ಈ ವಿಮಾನದಲ್ಲಿ ಮಂಜುನಾಥ್ ರಾವ್ ಅವರ ಪತ್ನಿ ಪಲ್ಲವಿ, ಮಗ ಅಭಿಜಯ ಕೂಡ ಜತೆಗಿರುತ್ತಾರೆ ಎಂದು ವಿವರ ತಿಳಿಸಿದೆ.

ಪ್ರವಾಸಿಗರ ನೆರವಿಗೆ ಸರ್ಕಾರದಿಂದ ಸಹಾಯವಾಣಿ

ಕಾಶ್ಮೀರದ ಪಹಲ್‌ಗಾಮ್ ಉಗ್ರರ ದಾಳಿಯಲ್ಲಿ ಕನ್ನಡಿಗರಿಬ್ಬರು ಸಾವಿಗೀಡಾಗಿರುವುದು ವಿಷಾದನೀಯ ಸಂಗತಿ. ಆದ್ದರಿಂದ ಜಮ್ಮು-ಕಾಶ್ಮೀರದ ಪ್ರವಾಸಕ್ಕೆ ತೆರಳಿರುವ ಕನ್ನಡಿಗರನ್ನು ರಾಜ್ಯಕ್ಕೆ ಮರಳಿ ತರಲು ಸರ್ಕಾರವು ಪಯತ್ನಿಸುತ್ತಿದೆ. ಆದ್ದರಿಂದ ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ. ಸಹಾಯವಾಣಿ ಸಂಖ್ಯೆಗಳು ಹೀಗಿವೆ - 080-43344334, 080-43344335, 080-43344336, 080-43344342 ಎಂದು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಪುವಾಸ ನಿರ್ವಹಿಸುತ್ತಿರುವ ಪುವಾಸಿ ಕಾರ್ಯಾಚರಣೆದಾರರು ತಮ್ಮ ಮೂಲಕ ಜಮ್ಮು-ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿರುವ ಪ್ರಯಾಣಿಕರ ವಿವರಗಳನ್ನು ಈ ಕೆಳಕಂಡ ಸಹಾಯವಾಣಿಗೆ ನೀಡಬೇಕು ಎಂದು ಇಲಾಖೆ ತಿಳಿಸಿದೆ.

ಅದೇ ರೀತಿ, ಜಮ್ಮು-ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿರುವ ಪ್ರವಾಸಿಗರ ಸಂಬಂಧಿಕರು ಅಥವಾ ಪರಿಚಯಸ್ಥರು ಪವಾಸಕ್ಕೆ ತೆರಳಿರುವವರ ವಿವರಗಳನ್ನು ಈ ಕೆಳಕಂಡ ಸಹಾಯವಾಣಿಗೆ ನೀಡಬೇಕೆಂದು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಕೋರಿದೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.