ಬೆಂಗಳೂರಿಗರೇ ನೀರಿನ ಸಮಸ್ಯೆ ಎದುರಿಸುತ್ತಿದ್ದೀರಾ, ಹಾಗಾದ್ರೆ ಜಲಮಂಡಳಿ ಅಧಿಕಾರಿಗಳ ಬಳಿ ಅಹವಾಲು ಹೇಳಿಕೊಳ್ಳಿ, ಇಂದು ಜಲಮಂಡಳಿ ಅದಾಲತ್
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿಗರೇ ನೀರಿನ ಸಮಸ್ಯೆ ಎದುರಿಸುತ್ತಿದ್ದೀರಾ, ಹಾಗಾದ್ರೆ ಜಲಮಂಡಳಿ ಅಧಿಕಾರಿಗಳ ಬಳಿ ಅಹವಾಲು ಹೇಳಿಕೊಳ್ಳಿ, ಇಂದು ಜಲಮಂಡಳಿ ಅದಾಲತ್

ಬೆಂಗಳೂರಿಗರೇ ನೀರಿನ ಸಮಸ್ಯೆ ಎದುರಿಸುತ್ತಿದ್ದೀರಾ, ಹಾಗಾದ್ರೆ ಜಲಮಂಡಳಿ ಅಧಿಕಾರಿಗಳ ಬಳಿ ಅಹವಾಲು ಹೇಳಿಕೊಳ್ಳಿ, ಇಂದು ಜಲಮಂಡಳಿ ಅದಾಲತ್

BWSSB Adalat Today: ಇಂದು ಜಲಮಂಡಳಿ ಅದಾಲತ್ ನಡೆಯಲಿದೆ. ಬೆಂಗಳೂರಿಗರೇ ನೀರಿನ ಸಮಸ್ಯೆ ಎದುರಿಸುತ್ತಿದ್ದೀರಾ, ಹಾಗಾದ್ರೆ ಜಲಮಂಡಳಿ ಅಧಿಕಾರಿಗಳ ಬಳಿ ಅಹವಾಲು ಹೇಳಿಕೊಳ್ಳಿ. ಎಲ್ಲಿ, ಎಷ್ಟು ಗಂಟೆಗೆ ಇಲ್ಲಿದೆ ವಿವರ.

ಇಂದು ಜಲಮಂಡಳಿ ಅದಾಲತ್. (ಸಾಂಕೇತಿಕ ಚಿತ್ರ)
ಇಂದು ಜಲಮಂಡಳಿ ಅದಾಲತ್. (ಸಾಂಕೇತಿಕ ಚಿತ್ರ)

BWSSB Adalat Today: ಬೆಂಗಳೂರು ಜಲ ಮಂಡಳಿಯ ವಿವಿಧ ಉಪ ವಿಭಾಗಗಳಲ್ಲಿ ಇಂದು (ಫೆ 13) ನೀರಿನ ಅದಾಲತ್ ನಡೆಯಲಿದೆ. ವಿಶೇಷವಾಗಿ, ಉತ್ತರ-2-1, ದಕ್ಷಿಣ-1-1, ದಕ್ಷಿಣ-2-1, ನೈರುತ್ಯ -1, ನೈರುತ್ಯ - 4, ಪೂರ್ವ -1-2, ಪೂರ್ವ -2-2, ಆಗ್ನೇಯ - 2, ಆಗ್ನೇಯ – 5, ಪಶ್ಚಿಮ-1-2 ಮತ್ತು ಪಶ್ಚಿಮ-2-2, ಉಪವಿಭಾಗಗಳಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದು ಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಫೆಬ್ರವರಿ 13 ರಂದು ಬೆಳಿಗ್ಗೆ 9.30 ಗಂಟೆಯಿಂದ 11 ಗಂಟೆಯವರೆಗೆ ನೀರಿನ ಅದಾಲತ್‍ನ್ನು ಹಮ್ಮಿಕೊಳ್ಳಲಾಗಿದೆ.

ಬೆಂಗಳೂರು ಜಲಮಂಡಳಿ ಅದಾಲತ್ ಬೆಳಿಗ್ಗೆ 9.30 - 11 ಗಂಟೆ ತನಕ

ಬೆಂಗಳೂರಿಗರು ನೀರಿನ ಸಮಸ್ಯೆ ಎದುರಿಸುತ್ತಿದ್ದರೆ ಬೆಂಗಳೂರು ಜಲ ಮಂಡಳಿಯ ಆಯಾ ಭಾಗದ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಅಹವಾಲು ಸಲ್ಲಿಸಬಹುದು. ದೂರವಾಣಿ ಸಂಖ್ಯೆಗಳ ವಿವರ ಹೀಗಿದೆ - ಯಲಹಂಕ ಓಲ್ಡ್ ಟೌನ್, ಯಲಹಂಕ ನ್ಯೂಟೌನ್, ಅಟ್ಟೂರು ಸೇವಾ ಠಾಣೆಯ ದೂರವಾಣಿ ಸಂಖ್ಯೆ: 9740984163, ಜೆ.ಪಿ.ನಗರ-2, ಕೊತ್ತನೂರು ದಿಣ್ಣೆ, ವಿಜಯಬ್ಯಾಂಕ್ ಕಾಲೋನಿ, ಅರಕೆರೆ & ಮೈಕೋ ಲೇಔಟ್ ಸೇವಾ ಠಾಣೆಯ ದೂರವಾಣಿ ಸಂಖ್ಯೆ: 9900983569, ಜೆ.ಪಿ.ನಗರ – 1&3, ಜಯನಗರ 4ನೇ ಟಿ ಬ್ಲಾಕ್, ಜಯನಗರ 4ನೇ ಬ್ಲಾಕ್, ಹೊಂಬೇಗೌಡನಗರ, ಬೈರಸಂದ್ರ ಸೇವಾ ಠಾಣೆಯ ದೂರವಾಣಿ ಸಂಖ್ಯೆ: 8904148794, ಎಲ್.ಎಲ್.ಆರ್, ಚಿಕ್ಕಲಾಲ್‍ಬಾಗ್, ಬನ್ನಪ್ಪ ಪಾರ್ಕ್, ಸುಧಾಮನಗರ-1 ಸೇವಾ ಠಾಣೆಯ ದೂರವಾಣಿ ಸಂಖ್ಯೆ: 9845444081, ಕತ್ರಿಗುಪ್ಪೆ, ಹೊಸಕೆರೆಹಳ್ಳಿ, ದೇವಗಿರಿ-1, ಇಟ್ಟಮಡು, ಬನಗಿರಿನಗರ ಸೇವಾ ಠಾಣೆಯ ದೂರವಾಣಿ ಸಂಖ್ಯೆ: 9845444113 ನಂಬರ್‌ಗೆ ಕರೆ ಮಾಡಿ ಅಹವಾಲು ಸಲ್ಲಿಸಬಹುದು.

ಎ.ನಾರಾಯಣಪುರ, ದೊಡ್ಡನಕುಂದಿ, ವಿಜ್ಞಾನನಗರ ಸೇವಾ ಠಾಣೆಯ ದೂರವಾಣಿ ಸಂಖ್ಯೆ: 9845444051, ಬಾಣಸವಾಡಿ, ಓ.ಎಂ.ಬಿ.ಆರ್., ಲಿಂಗರಾಜಪುರಂ, ಕಸ್ತೂರಿನಗರ ಸೇವಾ ಠಾಣೆಯ ದೂರವಾಣಿ ಸಂಖ್ಯೆ: 9845444058, ಹಲಸೂರು, ದೊಮ್ಮಲೂರು, ಮಾರತ್‍ಹಳ್ಳಿ ಸೇವಾ ಠಾಣೆಯ ದೂರವಾಣಿ ಸಂಖ್ಯೆ: 9845444118, ಕೋರಮಂಗಲ- 1&2, ಬೆಳ್ಳಂದೂರು ಸೇವಾ ಠಾಣೆಯ ದೂರವಾಣಿ ಸಂಖ್ಯೆ: 9972001265, ಚಂದ್ರ ಲೇಔಟ್, ವಿಜಯನಗರ ಓ.ಎಚ್.ಟಿ, ಮೂಡಲಪಾಳ್ಯ ಸೇವಾ ಠಾಣೆಯ ದೂರವಾಣಿ ಸಂಖ್ಯೆ: 9980421461, ನಾಗರಬಾವಿ, ಅನ್ನಪೂರ್ಣೇಶ್ವರಿನಗರ, ಸರ್.ಎಂ.ವಿ ಲೇಔಟ್, ಮೂಡಲಪಾಳ್ಯ ಸೇವಾ ಠಾಣೆಯ ದೂರವಾಣಿ ಸಂಖ್ಯೆ: 23212181 ಗೆ ಸಂಪರ್ಕಿಸಬಹುದು.

ಸಾರ್ವಜನಿಕರು ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಮಂಡಳಿಯ 24/7 ದೂರು ನಿರ್ವಹಣಾ ಕೇಂದ್ರದ ಸಹಾಯವಾಣಿ 1916ಗೆ ಕರೆ ಮಾಡಿ ದೂರುಗಳನ್ನು ದಾಖಲಿಸಬಹುದು. ಹಾಗೂ ವಾಟ್ಸ್‍ಆಫ್ ಸಂಖ್ಯೆ 8762228888 ಸಂದೇಶದ ಮೂಲಕ ದೂರನ್ನು ಸಲ್ಲಿಸಬಹುದಾಗಿದೆ ಎಂದು ಬೆಂಗಳೂರು ಜಲ ಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner