ಸಿವಿ ರಾಮನ್ ನಗರ ಸೇರಿ ವಿವಿಧೆಡೆ ಫೆ 20ರಂದು ಕಾವೇರಿ ನೀರು ಪೂರೈಕೆ ಇರಲ್ಲ; ಬೆಂಗಳೂರು ಜಲ ಮಂಡಳಿಯಿಂದ ನೀರಿನ ಅದಾಲತ್ ವಿವರ ಹೀಗಿದೆ
ಕನ್ನಡ ಸುದ್ದಿ  /  ಕರ್ನಾಟಕ  /  ಸಿವಿ ರಾಮನ್ ನಗರ ಸೇರಿ ವಿವಿಧೆಡೆ ಫೆ 20ರಂದು ಕಾವೇರಿ ನೀರು ಪೂರೈಕೆ ಇರಲ್ಲ; ಬೆಂಗಳೂರು ಜಲ ಮಂಡಳಿಯಿಂದ ನೀರಿನ ಅದಾಲತ್ ವಿವರ ಹೀಗಿದೆ

ಸಿವಿ ರಾಮನ್ ನಗರ ಸೇರಿ ವಿವಿಧೆಡೆ ಫೆ 20ರಂದು ಕಾವೇರಿ ನೀರು ಪೂರೈಕೆ ಇರಲ್ಲ; ಬೆಂಗಳೂರು ಜಲ ಮಂಡಳಿಯಿಂದ ನೀರಿನ ಅದಾಲತ್ ವಿವರ ಹೀಗಿದೆ

BWSSB Updates: ಬೆಂಗಳೂರಿನ ಸಿವಿ ರಾಮನ್‌ನಗರ, ಇಂದಿರಾ ನಗರ ಸೇರಿ ವಿವಿಧ ಪ್ರದೇಶಗಳಲ್ಲಿ ಫೆ 20ರಂದು ಕಾವೇರಿ ನೀರು ಪೂರೈಕೆ ಇರುವುದಿಲ್ಲ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ. ಇದೇ ದಿನ ವಿವಿಧ ಉಪವಿಭಾಗಗಳಲ್ಲಿ ನೀರಿನ ಅದಾಲತ್ ಕೂಡ ಆಯೋಜಿಸಿರುವುದಾಗಿ ಅದು ಹೇಳಿದೆ.

ಸಿವಿ ರಾಮನ್ ನಗರ ಸೇರಿ ವಿವಿಧೆಡೆ ಫೆ 20ರಂದು ಕಾವೇರಿ ನೀರು ಪೂರೈಕೆ ಇರಲ್ಲ, ಇದೇ ದಿನ ಬೆಂಗಳೂರು ಜಲ ಮಂಡಳಿಯಿಂದ ನೀರಿನ ಅದಾಲತ್ ಕೂಡ ಇದೆ. (ಸಾಂಕೇತಿಕ ಚಿತ್ರ)
ಸಿವಿ ರಾಮನ್ ನಗರ ಸೇರಿ ವಿವಿಧೆಡೆ ಫೆ 20ರಂದು ಕಾವೇರಿ ನೀರು ಪೂರೈಕೆ ಇರಲ್ಲ, ಇದೇ ದಿನ ಬೆಂಗಳೂರು ಜಲ ಮಂಡಳಿಯಿಂದ ನೀರಿನ ಅದಾಲತ್ ಕೂಡ ಇದೆ. (ಸಾಂಕೇತಿಕ ಚಿತ್ರ)

BWSSB Updates: ಬೆಂಗಳೂರು ನಗರದ ಸಿವಿ ರಾಮನ್ ನಗರ, ಇಂದಿರಾ ನಗರ ಸೇರಿ ವಿವಿಧೆಡೆ ಫೆ 20ರಂದು ಬೆಳಿಗ್ಗೆ 9 ರಿಂದ 12 ಗಂಟೆ ಕಾಲ ಕಾವೇರಿ ನೀರು ಪೂರೈಕೆ ಇರುವುದಿಲ್ಲ ಎಂದು ಬೆಂಗಳೂರು ಜಲ ಮಂಡಳಿ ಇಂದು (ಫೆ 18) ತಿಳಿಸಿದೆ. ಇದೇ ದಿನ ವಿವಿಧ ಉಪವಿಭಾಗಗಳಲ್ಲಿ ನೀರಿನ ಅದಾಲತ್ ಆಯೋಜಿಸಲಾಗಿದೆ. ನೀರಿನ ಪೂರೈಕೆ ಸೇರಿ, ಜಲ ಮಂಡಳಿಗೆ ಸಂಬಂಧಿಸಿದ ವಿವಿಧ ಅಹವಾಲುಗಳನ್ನು ಜನ ಈ ಅದಲಾತ್ ಮೂಲಕ ಪರಿಹರಿಸಿಕೊಳ್ಳಬಹುದು ಎಂದು ಬೆಂಗಳೂರು ಜಲ ಮಂಡಳಿ ತಿಳಿಸಿದೆ.

ಬೆಂಗಳೂರು ಜಲ ಮಂಡಳಿಯಿಂದ ನೀರಿನ ಅದಾಲತ್

ಬೆಂಗಳೂರು ಜಲ ಮಂಡಳಿಯ ವಿವಿಧ ಉಪ ವಿಭಾಗಗಳಾದ ವಾಯುವ್ಯ-2, ವಾಯುವ್ಯ-4, ಕೇಂದ್ರ 1-2, ಈಶಾನ್ಯ - 2, ಉತ್ತರ 1-2, ಉತ್ತರ 2-2, ದಕ್ಷಿಣ 1-2, ದಕ್ಷಿಣ 2–2, ನೈಋತ್ಯ -2, ನೈಋತ್ಯ -5, ಪೂರ್ವ 1-3 ಮತ್ತು ಪೂರ್ವ 2-3, ಉಪವಿಭಾಗಗಳಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದು ಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಫೆಬ್ರವರಿ 20 ರಂದು ಬೆಳಿಗ್ಗೆ 9.30 ಗಂಟೆಯಿಂದ 11.00 ಗಂಟೆಯವರೆಗೆ ನೀರಿನ ಅದಾಲತ್‍ನ್ನು ನಡೆಸಲಾಗುವುದು ಎಂದು ಜಲ ಮಂಡಳಿ ತಿಳಿಸಿದೆ.

ಹೆಚ್.ಎಂ.ಟಿ ಪೀಣ್ಯ, ದಾಸರಹಳ್ಳಿ, ಪೀಣ್ಯ, ಲಿಂಗಧೀರನಹಳ್ಳಿ, ಅಂದರಹಳ್ಳಿ ಸೇವಾಠಾಣೆಗಳ ದೂರವಾಣಿ ಸಂಖ್ಯೆ 28360030, ಹೆಗ್ಗನಹಳ್ಳಿ, ಕೊಟ್ಟಿಗೆಪಾಳ್ಯ, ಹೇರೋಹಳ್ಳಿ ಸೇವಾಠಾಣೆಗಳ ದೂರವಾಣಿ ಸಂಖ್ಯೆ 9964216530, ಫ್ರೇಜರ್‍ಟೌನ್, ಮಚಲಿಬೆಟ್ಟ, ಪಿಳ್ಳಣ್ಣ ಗಾರ್ಡನ್ 1&2 ಸೇವಾಠಾಣೆಗಳ ದೂರವಾಣಿ ಸಂಖ್ಯೆ 9845444053, ಕೆಂಪೇಗೌಡ ಟವರ್, ಕುಮಾರ ಪಾರ್ಕ್, ಜಯಮಹಲ್, ಸಂಜಯನಗರ, ನ್ಯೂ ಬಿ.ಇ.ಎಲ್. ರಸ್ತೆ ಸೇವಾಠಾಣೆಗಳ ದೂರವಾಣಿ ಸಂಖ್ಯೆ 22945135, ಆರ್.ಟಿ.ನಗರ ಕಾವಲ್ ಬೈರಸಂದ್ರ, ಗಂಗಾನಗರ, ಆನಂದನಗರ, ಮನೋರಾಯನಪಾಳ್ಯ ಸೇವಾಠಾಣೆಗಳ ದೂರವಾಣಿ ಸಂಖ್ಯೆ 22945139, ಸಿಂಗಾಪುರ, ವಿದ್ಯಾರಣ್ಯಪುರ, ಸಹಕಾರನಗರ, ಹೆಚ್.ಎಸ್.ಆರ್-1, ಕೋಡಿಚಿಕ್ಕನಹಳ್ಳಿ, ಬೊಮ್ಮನಹಳ್ಳಿ ಸೇವಾಠಾಣೆಗಳ ದೂರವಾಣಿ ಸಂಖ್ಯೆ 40977432, ಕೂಡ್ಲು, ಬೇಗೂರು ಸೇವಾಠಾಣೆಗಳ ದೂರವಾಣಿ ಸಂಖ್ಯೆ 9845444090, ವಿ.ವಿ.ಪುರಂ, ಸುಧಾಮನಗರ-2, ಕೆಂಪೇಗೌಡ ನಗರ, ಜಗಜೀವನರಾಮ್ ನಗರ, ಚಾಮರಾಜಪೇಟೆ ಸೇವಾಠಾಣೆಗಳ ದೂರವಾಣಿ ಸಂಖ್ಯೆ 984544085, ಬನಗಿರಿನಗರ, ಬಿ.ಎಸ್.ಕೆ-1 &2, ಕುಮಾರಸ್ವಾಮಿ ಲೇಔಟ್, ಇಸ್ರೋ ಲೇಔಟ್, ಪೂರ್ಣ ಪ್ರಜ್ಞಾ ಲೇಔಟ್ ಸೇವಾಠಾಣೆಗಳ ದೂರವಾಣಿ ಸಂಖ್ಯೆ 22945198, ಪೂರ್ವ ವಿಲೇಜ್-2-1,& 2-2, ಕಾಡುಗೋಡಿ, ವರ್ತೂರು ಸೇವಾಠಾಣೆಗಳ ದೂರವಾಣಿ ಸಂಖ್ಯೆ 9535544974, ಐ.ಎಸ್.ಪಿ.ಎಸ್. ಹೊರಮಾವು, ರಾಜಾಕೆನಲ್ ವ್ಯಾಪ್ತಿಯಲ್ಲಿ ನೀರಿನ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಲ ಮಂಡಳಿ ತಿಳಿಸಿದೆ.

ಸಾರ್ವಜನಿಕರು ಕುಂದು ಕೊರತೆಗಳಿಗೆ ಸಂಬಂಧಿಸಿ ಬೆಂಗಳೂರು ಜಲ ಮಂಡಳಿಯ 24/7 ದೂರು ನಿರ್ವಹಣಾ ಕೇಂದ್ರದ ಸಹಾಯವಾಣಿ 1916ಗೆ ಕರೆ ಮಾಡಿ ದೂರುಗಳನ್ನು ದಾಖಲಿಸಬಹುದು. ಹಾಗೂ ವಾಟ್ಸ್‍ಆಫ್ ಸಂಖ್ಯೆ 8762228888 ಸಂದೇಶದ ಮೂಲಕ ದೂರನ್ನು ಸಲ್ಲಿಸಬಹುದಾಗಿದೆ ಎಂದು ಬೆಂಗಳೂರು ಜಲ ಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಸಿವಿ ರಾಮನ್ ನಗರ ಸೇರಿ ವಿವಿಧೆಡೆ ಫೆ 20ರಂದು ಕಾವೇರಿ ನೀರು ಪೂರೈಕೆ ಇರಲ್ಲ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾವೇರಿ 4ನೇ ಹಂತ 2ನೇ ಘಟ್ಟದ ಕಾನಿಅ(ಪೂರ್ವ)-1 ರ ವ್ಯಾಪ್ತಿಗೆ ಒಳಪಡುವ ಮಾರತ್ತಹಳ್ಳಿ ಜೀವಿಕಾ ಆಸ್ಪತ್ರೆ ಸಮೀಪ 800 ಮಿ.ಮೀ. ವ್ಯಾಸದ ಹೂಡಿ ಜಿ.ಎಲ್.ಆರ್. ಹರಿವು ಮಾರ್ಗವನ್ನು ಸ್ಥಗಿತಗೊಳಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಫೆಬ್ರವರಿ 20 ರಂದು ಬೆಳಿಗ್ಗೆ 09:00 ಗಂಟೆಯಿಂದ ರಾತ್ರಿ 09:00 ಗಂಟೆಯವರೆಗೆ ಸುಮಾರು 12 ಗಂಟೆಗಳ ಕಾಲ ವಿವಿಧ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಮಾರತ್ತಹಳ್ಳಿ ದೊಡ್ಡಕುಂದಿ, ಮುನ್ನಕೊಳಲು, ಓ.ಎಂ.ಬಿ.ಆರ್. ಲೇಔಟ್, ಹೆಚ್.ಆರ್.ಬಿ.ಆರ್ ಲೇಔಟ್, ಸಿಗೇಹಳ್ಳಿ, ಬಟ್ಟರಹಳ್ಳಿ, ಮೇಡೆಹಳ್ಳಿ, ಟಿ.ಸಿ.ಪಾಳ್ಯ, ವಿಜಿನಪುರ, ಬೆಳಂದೂರು, ಯಮಲೂರು, ಮುರುಗೇಶ್ ಪಾಳ್ಯ, ಕೋಣನಅಗ್ರಹಾರ, ಸಿ.ವಿ.ರಾಮನ್ ನಗರ, ಇಂದಿರಾನಗರ, ತಿಪ್ಪಸಂದ್ರ ಜೀವನ್ ಭೀಮಾನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ವ್ಯತ್ಯಯವಾಗಲಿದೆ. ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸಲು ಹಾಗೂ ಅಗತ್ಯವಿರುವ ನೀರನ್ನು ಶೇಖರಿಸಿಟ್ಟುಕೊಳ್ಳುವಂತೆ ಬೆಂಗಳೂರು ಜಲಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner