Convocation Event: ವೈದ್ಯಕೀಯ ಸೇವೆ ದೈವಿಕ ಸೇವೆ; ತಪೋವನ ಘಟಿಕೋತ್ಸವದಲ್ಲಿ ರಾಜ್ಯಪಾಲರು
Convocation Event: ದಾವಣಗೆರೆಯ ತಪೋವನ ಆಯುರ್ವೇದಿಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮೊದಲನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಭಾಗವಹಿಸಿದರು.
ಬೆಂಗಳೂರು: ವೈದ್ಯಕೀಯ ಸೇವೆ ಅತ್ಯಂತ ದೊಡ್ಡ ಮಾನವ ಮತ್ತು ದೈವಿಕ ಸೇವೆಯಾಗಿದೆ. ವೈದ್ಯರನ್ನು ದೇವರ ರೂಪವೆಂದು ಪರಿಗಣಿಸಲಾಗುತ್ತದೆ ಎಂದು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಹೇಳಿದರು.
ಟ್ರೆಂಡಿಂಗ್ ಸುದ್ದಿ
ಅವರು ಶನಿವಾರ, ದಾವಣಗೆರೆಯ ತಪೋವನ ಆಯುರ್ವೇದಿಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮೊದಲನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.
ವೈದ್ಯರಾಗಿ ಸೇವೆಗಳನ್ನು ಒದಗಿಸಿದಾಗ ಮತ್ತು ಮಾನವೀಯ ಸೇವೆಯ ರೂಪವನ್ನು ನೀಡಿದಾಗ ಭವಿಷ್ಯದಲ್ಲಿ ಶ್ರೇಷ್ಠತೆಯನ್ನು ಸಾಧಿಸಬಹುದು ಎಂದು ರಾಜ್ಯಪಾಲರು ಹೇಳಿದರು.
ಆಯುರ್ವೇದವು ಪ್ರಪಂಚದ ಅತ್ಯಂತ ಹಳೆಯ ವೈದ್ಯಕೀಯ ವ್ಯವಸ್ಥೆಗಳಲ್ಲಿ ಒಂದಾಗಿದೆ. ಆಯುರ್ವೇದದ ದಾಖಲಾತಿಯನ್ನು ವೇದಗಳಲ್ಲಿ ವಿವರಿಸಲಾಗಿದೆ. ಆಯುರ್ವೇದವು ವಿವಿಧ ವೈದಿಕ ಮಂತ್ರಗಳಿಂದ ವಿಕಸನಗೊಂಡಿದೆ. ಆಯುರ್ವೇದದ ಧಾತುರೂಪದ ಜ್ಞಾನವು ಪಂಚಮಹಾಭೂತ ತತ್ತ್ವವನ್ನು ಆಧರಿಸಿದೆ. ಇಂದು ಇಡೀ ಪ್ರಪಂಚದ ಗಮನವು ಆಯುರ್ವೇದ ಔಷಧ ಪದ್ಧತಿಯತ್ತ ಆಕರ್ಷಿತವಾಗುತ್ತಿದೆ. ಭಾರತೀಯರು ಗಿಡಮೂಲಿಕೆಗಳನ್ನು ಔಷಧದಲ್ಲಿ ಬಳಸುತ್ತಿದ್ದಾರೆ. ಇದು ಹೆಚ್ಚು ಪ್ರಯೋಜನಕಾರಿ, ಪರಿಣಾಮಕಾರಿ ಎಂಬುದು ಎಲ್ಲರಿಗೂ ವೇದ್ಯವಾಗಿರುವ ವಿಚಾರ ಎಂದು ಅವರು ಹೇಳಿದರು.
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ನಾವು ಆಯುರ್ವೇದದ ಮಹತ್ವವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ. ಭಾರತ ಸರ್ಕಾರದ ಆಯುಷ್ ಸಚಿವಾಲಯವು ಆಯುರ್ವೇದ, ಯೋಗ, ನ್ಯಾಚುರೋಪತಿ, ಯುನಾನಿ, ಸಿದ್ಧ, ಸೋವಾ- ರಿಗ್ಪಾ ಮತ್ತು ಹೋಮಿಯೋಪತಿ ಸೇರಿ ಸಾಂಪ್ರದಾಯಿಕ ಮತ್ತು ಅಲೋಪತಿಯೇತರ ಆರೋಗ್ಯ ರಕ್ಷಣೆ ಮತ್ತು ಚಿಕಿತ್ಸಾ ವ್ಯವಸ್ಥೆಗಳ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ತಿಳಿಸಿದರು.
ತಪೋವನ ಆಯುರ್ವೇದ ಯೋಗ ಮತ್ತು ನೇಚರ್ ಕ್ಯೂರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯು ಮಧ್ಯ ಕರ್ನಾಟಕದ ಏಕೈಕ ಉತ್ತಮ ನಿರ್ವಹಣೆಯ ಸಂಸ್ಥೆಯಾಗಿದೆ. ಇದು ದೇಶದ ಉನ್ನತ ಕಾಲೇಜುಗಳಲ್ಲಿ ಒಂದಾಗಿದೆ. ಆಯುರ್ವೇದ, ಯೋಗ ಮತ್ತು ಪ್ರಕೃತಿಚಿಕಿತ್ಸೆಯ ಉಪಯುಕ್ತತೆ ಮತ್ತು ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ತಪೋವನವನ್ನು ಸ್ಥಾಪಿಸಲಾಗಿದೆ. ತಪೋವನ ಆಯುರ್ವೇದ ವೈದ್ಯಕೀಯ ಕಾಲೇಜು ತನ್ನ ವಿದ್ಯಾರ್ಥಿಗಳನ್ನು ಸಮುದಾಯದ ಆರೋಗ್ಯ ರಕ್ಷಣೆಗಾಗಿ ಭವಿಷ್ಯದ ಅತ್ಯುತ್ತಮ ಆಯುರ್ವೇದ ವೈದ್ಯರನ್ನಾಗಿ ಮಾಡಲು ಶ್ರಮಿಸುತ್ತಿದೆ ಎಂದು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಹೇಳಿದರು.
ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಆಯುಷ್ ಮುಂತಾದ ವೈದ್ಯಕೀಯ ವ್ಯವಸ್ಥೆಗಳ ಅಭಿವೃದ್ಧಿಗೆ ಶ್ರಮಿಸಿದ ಈ ಕಾಲೇಜಿನ ಅಧ್ಯಕ್ಷ ಡಾ. ಶಶಿಕುಮಾರ್ ಮತ್ತು ಅವರ ತಂಡವನ್ನು ಶ್ಲಾಘಿಸಿದ ರಾಜ್ಯಪಾಲ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು, ಆರೋಗ್ಯವು ದೇವರು ನೀಡಿದ ದೊಡ್ಡ ಸಂಪತ್ತು. ಆರೋಗ್ಯಕರ ಮನಸ್ಸು ಮತ್ತು ಮೆದುಳು ದೇಹದಲ್ಲಿ ವಾಸಿಸುತ್ತವೆ. ಆರೋಗ್ಯ ಸೇವೆಯು ದೈವಿಕ ಸೇವೆಯಾಗಿದೆ, ಈ ದೈವಿಕ ಸೇವಾ ಕಾರ್ಯದಲ್ಲಿ ವೈದ್ಯರು ನಿರಂತರವಾಗಿ ತೊಡಗಿಸಿಕೊಳ್ಳಲಿ ಎಂದು ಕರೆ ನೀಡಿದರು.
ಸಂಸದ ಡಾ.ಜಿ.ಎಂ. ಸಿದ್ಧೇಶ್ವರ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್. ವಿ. ಹಾಲ್ಸೆ, ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಮಾಜಿ ಡೀನ್ ಡಾ. ಶ್ರೀನಿವಾಸ್, ತಪೋವನ ಸಂಸ್ಥಾನದ ಅಧ್ಯಕ್ಷ ಡಾ.ಶ ಶಿಕುಮಾರ್ ವಿ.ಎಂ.ಜಿ., ತಪೋವನ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀಕಾಂತ್ ಬಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.