ಕನ್ನಡ ಸುದ್ದಿ  /  Karnataka  /  Davanagere News Mla Shamanuru Dissatisfaction For Not Giving Important Post To Lingayat Political News In Kannada Kvy

Davanagere News: ವೀರಶೈವ ಲಿಂಗಾಯತರಿಗೆ ಸರ್ಕಾರ ಮೂಲೆಗುಂಪು ಮಾಡ್ತಿದೆ; ಸ್ವಪಕ್ಷದ ವಿರುದ್ಧ ಶಾಸಕ ಶಾಮನೂರು ವಾಗ್ದಾಳಿ

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಗುರುವಾರ ವೀರಶೈವ ಮಹಾಸಭಾ ಕಾರ್ಯಕ್ರಮ ಇತ್ತು. ಆ ಸಮಾರಂಭದಲ್ಲಿ ಕುಮಾರಸ್ವಾಮಿಗಳ ಹೆಸರಿನ ಪ್ರಶಸ್ತಿ ಪ್ರದಾನ ಮಾಡಿದ ವೇಳೆ ವೀರಶೈವ ಲಿಂಗಾಯತ ಅಧಿಕಾರಿಗಳನ್ನು ಮೂಲೆಗುಂಪು ಮಾಡುತ್ತಾರೆಂದು ಹೇಳಿದ್ದು ನಿಜ ಎಂದು ಹೇಳಿದರು.

ವೀರಶೈವ ಲಿಂಗಾಯತರಿಗೆ ಸರ್ಕಾರ ಮೂಲೆಗುಂಪು ಮಾಡ್ತಿದೆ; ಸ್ವಪಕ್ಷದ ವಿರುದ್ಧ ಶಾಸಕ ಶಾಮನೂರು ವಾಗ್ದಾಳಿ (HT PHOTO)
ವೀರಶೈವ ಲಿಂಗಾಯತರಿಗೆ ಸರ್ಕಾರ ಮೂಲೆಗುಂಪು ಮಾಡ್ತಿದೆ; ಸ್ವಪಕ್ಷದ ವಿರುದ್ಧ ಶಾಸಕ ಶಾಮನೂರು ವಾಗ್ದಾಳಿ (HT PHOTO)

ದಾವಣಗೆರೆ: ವೀರಶೈವ ಲಿಂಗಾಯತ ಅಧಿಕಾರಿಗಳನ್ನು ಮೂಲೆಗುಂಪು ಮಾಡುತ್ತಾರೆಂದು ಬೆಂಗಳೂರಿನಲ್ಲಿ ನಾನು ಹೇಳಿದ್ದು ನಿಜ. ಅದನ್ನೇ ಮಾಡಲಾಗುತ್ತಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಕಾಂಗ್ರೆಸ್ಸಿನ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸ್ವಪಕ್ಷದ ವಿರುದ್ಧವೇ ಇರುವ ಅಸಮಾಧಾನ ಮತ್ತೊಮ್ಮೆ ಪುನರುಚ್ಛರಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಗುರುವಾರ ವೀರಶೈವ ಮಹಾಸಭಾ ಕಾರ್ಯಕ್ರಮ ಇತ್ತು. ಆ ಸಮಾರಂಭದಲ್ಲಿ ಕುಮಾರಸ್ವಾಮಿಗಳ ಹೆಸರಿನ ಪ್ರಶಸ್ತಿ ಪ್ರದಾನ ಮಾಡಿದ ವೇಳೆ ವೀರಶೈವ ಲಿಂಗಾಯತ ಅಧಿಕಾರಿಗಳನ್ನು ಮೂಲೆಗುಂಪು ಮಾಡುತ್ತಾರೆಂದು ಹೇಳಿದ್ದು ನಿಜ ಎಂದು ಹೇಳಿದರು.

ಬೆಂಗಳೂರಿನಲ್ಲಿ ವೀರಶೈವ ಮಹಾಸಭಾದ ಸಮಾರಂಭದ ವೇದಿಕೆಯಲ್ಲಿ ಭಾಷಣ ಮಾಡುವಾಗ ನಾನು ಸತ್ಯವನ್ನು ಹೇಳಿದ್ದೇನೆ. ಮುಖ್ಯವಾದ ಹುದ್ದೆಗಳನ್ನು ಬಹಳಷ್ಟು ಜನರಿಗೆ ನೀಡಿಲ್ಲ. ರಾಜ್ಯದಲ್ಲಿ ನಮ್ಮ ವೀರಶೈವ ಲಿಂಗಾಯತ ಸಮಾಜದ ಅಧಿಕಾರಿಗಳಿಗೆ ತೊಂದರೆಯಾಗಿದೆ. ಇದರ ಬಗ್ಗೆ ನಾನು ಯಾವುದೇ ಮಂತ್ರಿಗಳ ಬಳಿಯೂ ಹೇಳಲು ಹೋಗಿಲ್ಲ ಎಂದು ಅವರು ಸ್ವಪಕ್ಷದ ಸರ್ಕಾರದ ವಿರುದ್ಧವೇ ಚಾಟಿ ಬೀಸಿದರು.

ಸಮಾಜದ ಹಿರಿಯರಾಗಿದ್ದ ಎಸ್‌.ನಿಜಲಿಂಗಪ್ಪ, ವೀರೇಂದ್ರ ಪಾಟೀಲ್‌ ಸೇರಿದಂತೆ ವೀರಶೈವ ಲಿಂಗಾಯತ ಮುಖ್ಯಮಂತ್ರಿಗಳು ಇದ್ದರು. ಆಗ ಎಲ್ಲರೂ ಚನ್ನಾಗಿಯೇ ಇದ್ದರು. ಈಗ ನಮ್ಮ ಸಮುದಾಯದ ಅಧಿಕಾರಿಗಳು ಕಂಗಾಲಾಗಿದ್ದಾರೆ. ವೀರಶೈವ ಲಿಂಗಾಯತ ಶಾಸಕರಿಗೆ ಸ್ಥಾನಮಾನ ಸಿಗದಿರುವುದೂ ಬೇರೆ ವಿಚಾರ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ವೀರಶೈವ ಲಿಂಗಾಯತರಿಗೆ ಉಪ ಮುಖ್ಯಮಂತ್ರಿ ತಗೊಂಡು ಏನು ಮಾಡಬೇಕು? ಆಗುವುದಿದ್ದರೆ ಅದು ಮುಖ್ಯಮಂತ್ರಿಯೇ ಆಗಬೇಕು. ವೀರಶೈವ ಲಿಂಗಾಯತರ ಹೆಸರು ಯಾವಾಗಲೂ ಮುಖ್ಯಮಂತ್ರಿ ಹುದ್ದೆಗೆ ಪ್ರಪೋಸಲ್ ಇದ್ದೇ ಇರುತ್ತದೆ ಎಂದು ಅಭಾವೀಮ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ವೀರಶೈವ ಲಿಂಗಾಯತ ಸಮುದಾಯದ ಪರವಾಗಿ ಬ್ಯಾಟಿಂಗ್ ಮಾಡಿದರು.