2024-25ರ ರಾಷ್ಟ್ರೀಯ-ರಾಜ್ಯ ಪ್ರಶಸ್ತಿ ಘೋಷಣೆ; ಎಸ್ಆರ್ ಗುಂಜಾಳರಿಗೆ ಬಸವ ರಾಷ್ಟ್ರೀಯ ಪುರಸ್ಕಾರ, ಡಾ ವಿವೇಕ್‌ ರೈಗೆ ಪಂಪ ಪ್ರಶಸ್ತಿ
ಕನ್ನಡ ಸುದ್ದಿ  /  ಕರ್ನಾಟಕ  /  2024-25ರ ರಾಷ್ಟ್ರೀಯ-ರಾಜ್ಯ ಪ್ರಶಸ್ತಿ ಘೋಷಣೆ; ಎಸ್ಆರ್ ಗುಂಜಾಳರಿಗೆ ಬಸವ ರಾಷ್ಟ್ರೀಯ ಪುರಸ್ಕಾರ, ಡಾ ವಿವೇಕ್‌ ರೈಗೆ ಪಂಪ ಪ್ರಶಸ್ತಿ

2024-25ರ ರಾಷ್ಟ್ರೀಯ-ರಾಜ್ಯ ಪ್ರಶಸ್ತಿ ಘೋಷಣೆ; ಎಸ್ಆರ್ ಗುಂಜಾಳರಿಗೆ ಬಸವ ರಾಷ್ಟ್ರೀಯ ಪುರಸ್ಕಾರ, ಡಾ ವಿವೇಕ್‌ ರೈಗೆ ಪಂಪ ಪ್ರಶಸ್ತಿ

ಡಾ.ಎಸ್.ಆರ್.ಗುಂಜಾಳ ಅವರನ್ನು ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಎ.ಶಾಂತಿರಾಜ ಶಾಸ್ತ್ರಿ ಟ್ರಸ್ಟ್‌ಗೆ ಶ್ರೀ ಭಗವಾನ್‌ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿ, ಬಸಪ್ಪ ಎಚ್. ಭಜಂತ್ರಿಗೆ ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ ಹಾಗೂ ಬೇಗಂ ಪರ್ವಿನ್‌ ಸುಲ್ತಾನಾರಿಗೆ ಗಾನಯೋಗಿ ಪಂಡಿತ್‌ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ರಾಷ್ಟ್ರೀಯ-ರಾಜ್ಯ ಪ್ರಶಸ್ತಿ ಘೋಷಣೆ; ಎಸ್ಆರ್ ಗುಂಜಾಳರಿಗೆ ಬಸವ ರಾಷ್ಟ್ರೀಯ ಪುರಸ್ಕಾರ
ರಾಷ್ಟ್ರೀಯ-ರಾಜ್ಯ ಪ್ರಶಸ್ತಿ ಘೋಷಣೆ; ಎಸ್ಆರ್ ಗುಂಜಾಳರಿಗೆ ಬಸವ ರಾಷ್ಟ್ರೀಯ ಪುರಸ್ಕಾರ

ಬೆಂಗಳೂರು: ರಾಜ್ಯ ಸರ್ಕಾರವು 2024-25ನೇ ಸಾಲಿನ 4 ರಾಷ್ಟ್ರೀಯ ಹಾಗೂ 15 ರಾಜ್ಯ ಪ್ರಶಸ್ತಿಗಳನ್ನು ಘೋಷಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬಸವ ರಾಷ್ಟ್ರೀಯ ಪುರಸ್ಕಾರ, ಶ್ರೀ ಭಗವಾನ್‌ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿ, ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ, ಗಾನಯೋಗಿ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಒಟ್ಟು 19 ಪ್ರಶಸ್ತಿಗಳನ್ನು ಇಂದು (ಫೆ.13, ಗುರುವಾರ) ಘೋಷಿಸಲಾಗಿದೆ. ಆಯ್ಕೆ ಸಮಿತಿಯು ನಾಲ್ವರು ಸಾಧಕರನ್ನು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಡಾ.ಎಸ್.ಆರ್.ಗುಂಜಾಳ ಅವರನ್ನು ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ಪಂಡಿತರತ್ನ ಎ.ಶಾಂತಿರಾಜ ಶಾಸ್ತ್ರಿ ಟ್ರಸ್ಟ್‌ಗೆ ಶ್ರೀ ಭಗವಾನ್‌ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿ ಘೋಷಣೆಯಾಗಿದೆ. ಇದೇ ವೇಳೆ ಬಸಪ್ಪ ಎಚ್. ಭಜಂತ್ರಿಯವರನ್ನು ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ ಹಾಗೂ ಮುಂಬೈಯ ಬೇಗಂ ಪರ್ವಿನ್‌ ಸುಲ್ತಾನಾ ಅವರನ್ನು ಗಾನಯೋಗಿ ಪಂಡಿತ್‌ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ತಲಾ 10 ಲಕ್ಷ ರೂ. ನಗದು, ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ.

ಸಾಹಿತ್ಯ, ನಾಟಕ ವಿಭಾಗದಲ್ಲಿ ಡಾ.ಬಿ. ಎ. ವಿವೇಕ್‌ ರೈ ಅವರಿಗೆ ಪಂಪ ಪ್ರಶಸ್ತಿ, ಸ.ರಘುನಾಥ ಅವರಿಗೆ ಪ್ರೊ.ಕೆ. ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ, ಡಾ.ವೈ. ಸಿ. ಭಾನುಮತಿ ಅವರಿಗೆ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಜೆ. ಲೋಕೇಶ್‌ ಅವರಿಗೆ ಬಿ.ವಿ.ಕಾರಂತ ಪ್ರಶಸ್ತಿ, ಕೆ. ನಾಗರತ್ನಮ್ಮ ಅವರಿಗೆ ಡಾ.ಗುಬ್ಬಿ ವೀರಣ್ಣ ಪ್ರಶಸ್ತಿ, ಡಾ.ಎಲ್. ಹನುಮಂತಯ್ಯ ಅವರಿಗೆ ಡಾ.ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿ ಘೋಷಣೆಯಾಗಿದೆ.

ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಶಸ್ತಿ ವಿಭಾಗದಲ್ಲಿ ಕೆ. ರಾಜ್‌ ಕುಮಾರ್‌ ಅವರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, ಡಾ.ಹೇಮಾ ಪಟ್ಟಣಶೆಟ್ಟಿ ಅವರಿಗೆ ಅಕ್ಕಮಹಾದೇವಿ ಪ್ರಶಸ್ತಿ ಘೋಷಿಸಲಾಗಿದೆ.

ಕಲಾ ವಿಭಾಗದಲ್ಲಿ ಎಂ. ಜೆ. ಕಮಲಾಕ್ಷಿಗೆ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ, ಎಂ. ರಾಮಮೂರ್ತಿಯವರಿಗೆ ಜಕಣಚಾರಿ ಪ್ರಶಸ್ತಿ, ನಿಂಗಪ್ಪ ಭಜಂತ್ರಿ ಅವರನ್ನು ಜಾನಪದಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

5 ಲಕ್ಷ ರೂ.ನಗದು

ಸಂಗೀತ-ನೃತ್ಯ ವಿಭಾಗದಲ್ಲಿ ಅನಂತ ತೇರದಾಳ (ಹಿಂದೂಸ್ಥಾನಿ ಗಾಯನ) ಅವರಿಗೆ ಶ್ರೀನಿಜಗುಣ ಪುರಂದರ ಪ್ರಶಸ್ತಿ, ಡಾ.ಎ. ವಿ. ಪ್ರಸನ್ನ (ಗಮಕ ವ್ಯಾಖ್ಯಾನ) ಅವರಿಗೆ ಕುಮಾರವ್ಯಾಸ ಪ್ರಶಸ್ತಿ, ಪದ್ಮಿನಿ ರವಿ(ಭರತನಾಟ್ಯ) ಅವರಿಗೆ ಶಾಂತಲಾ ನಾಟ್ಯ ಪ್ರಶಸ್ತಿ, ಪ್ರೊ.ಎಸ್. ಮಲ್ಲಣ್ಣ ಅವರಿಗೆ ಸಂತ ಶಿಶುನಾಳ ಶರೀಫ ಪ್ರಶಸ್ತಿ ನೀಡಲಾಗುತ್ತಿದೆ. ಈ ಪ್ರಶಸ್ತಿಗಳು ತಲಾ 5 ಲಕ್ಷ ರೂ.ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿರುತ್ತದೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
Whats_app_banner