ಕನ್ನಡ ಸುದ್ದಿ  /  Karnataka  /  Hd Kumaraswamy Slams Pralhad Joshi Over His Remark Against Pancharatna Rathayatra

HDK slams Pralhad Joshi: 'ಶೃಂಗೇರಿಯ ಮಠ ಒಡೆದ ಬ್ರಾಹ್ಮಣ ವರ್ಗ ಜೋಶಿ ಅವರದ್ದು, ಗಾಂಧಿಯನ್ನು ಕೊಂದ ಬ್ರಾಹ್ಮಣರಿವರು'

ಪ್ರಹ್ಲಾದ್ ಜೋಶಿಯನ್ನ ಚುನಾವಣೆ ನಂತರ ಸಿಎಂ ಮಾಡಬೇಕು ಅಂತ ಸಂಘ ಪರಿವಾರ ನಿರ್ಧರಿಸಿದೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿದ ಹೆಚ್​ಡಿಕೆ, ಜೋಶಿ ಅವರು ನಮ್ಮ ಭಾಗದ ಹಳೆಯ ಕಾಲದ ಬ್ರಾಹ್ಮಣರಲ್ಲ. ಬ್ರಾಹ್ಮಣರಲ್ಲಿ ಎರಡು ಮೂರು ವಿಧಗಳಿವೆ. ಶೃಂಗೇರಿಯ ಮಠ ಒಡೆದ ಬ್ರಾಹ್ಮಣ ವರ್ಗ ಜೋಶಿ ಅವರದ್ದು. ಮಹಾತ್ಮ ಗಾಂಧಿ ಅವರನ್ನು ಕೊಂದ ಬ್ರಾಹ್ಮಣರು ಇವರು ಎಂದರು.

ಪ್ರಲ್ಹಾದ್ ಜೋಶಿ - ಹೆಚ್​ ಡಿ ಕುಮಾರಸ್ವಾಮಿ
ಪ್ರಲ್ಹಾದ್ ಜೋಶಿ - ಹೆಚ್​ ಡಿ ಕುಮಾರಸ್ವಾಮಿ

ಬೆಂಗಳೂರು: ಜೆಡಿಎಸ್‌ನ ಪಂಚರತ್ನ ರಥಯಾತ್ರೆಯನ್ನು ನವಗ್ರಹ ಯಾತ್ರೆ ಎಂದು ಲೇವಡಿ ಮಾಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂಚರತ್ನ ಯಾತ್ರೆಗೆ ಜನಸ್ಪಂದನೆ ನೋಡಿ ಅವರು ಹೆದರಿದ್ದಾರೆ. ಅದಕ್ಕೇ ಹೀಗೆಲ್ಲಾ ಮಾತನಾಡುತ್ತಿದ್ದಾರೆ ಎಂದರು.

ಬೆಂಗಳೂರಿನ ದಾಸರಹಳ್ಳಿಯಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ನಡೆಸಿ ಮಾತನಾಡಿದ ಹೆಚ್​ಡಿಕೆ, ಪ್ರಹ್ಲಾದ್ ಜೋಶಿಯನ್ನ ಚುನಾವಣೆ ನಂತರ ಸಿಎಂ ಮಾಡಬೇಕು ಅಂತ ಸಂಘ ಪರಿವಾರ ನಿರ್ಧರಿಸಿದೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಜೋಶಿ ಅವರು ನಮ್ಮ ಭಾಗದ ಹಳೆಯ ಕಾಲದ ಬ್ರಾಹ್ಮಣರಲ್ಲ. ಬ್ರಾಹ್ಮಣರಲ್ಲಿ ಎರಡು ಮೂರು ವಿಧಗಳಿವೆ. ಶೃಂಗೇರಿಯ ಮಠ ಒಡೆದ ಬ್ರಾಹ್ಮಣ ವರ್ಗ ಜೋಶಿ ಅವರದ್ದು. ಮಹಾತ್ಮ ಗಾಂಧಿ ಅವರನ್ನು ಕೊಂದ ಬ್ರಾಹ್ಮಣರು ಇವರು. ಇವರು ಶೃಂಗೇರಿ ಮಠಕ್ಕೆ ಸೇರಿದವರಲ್ಲ. ಮರಾಠಿ ಪೇಶ್ವೆ ಸಮುದಾಯಕ್ಕೆ ಸೇರಿದವರು. ಇವರು ಶೃಂಗೇರಿ ಮಠವನ್ನು ಒಡೆದವರು. ನಮ್ಮ ಭಾಗದ ಹಳೇ ಬ್ರಾಹ್ಮಣರು ಸರ್ವೇಜನ ಸುಖಿನೋ ಭವಂತು ಅನ್ನೋರು. ಸರ್ವ ಜನರ ಕ್ಷೇಮ ಬಯಸುವವರು. ಬಆದ್ರೆ ಇವರು ದೇಶ ಹೊಡೆಯುವ, ದೇಶಕ್ಕೆ ಕೊಡುಗೆ ನೀಡಿದವರನ್ನ ಹತ್ಯೆ ಮಾಡಿದವರು ಎಂದು ಕಿಡಿಕಾರಿದರು.

ಬಿಜೆಪಿಯ ಹುನ್ನಾರ, ಆರ್​ಎಸ್​ಎಸ್​ ಕುತಂತ್ರಕ್ಕೆ ಬಲಿಯಾಗಬೇಡಿ. ಇವರು ದೇಶವನ್ನ ಹಾಳು ಮಾಡ್ತಾರೆ. ದೆಹಲಿಯಲ್ಲಿ ಎಂಟು ಜನ ಉಪ ಮುಖ್ಯಮಂತ್ರಿ ಮಾಡುವ ಸಭೆ ಮಾಡಿದ್ದಾರೆ. ಅದು ನನ್ನ ಗಮನಕ್ಕೆ ಬಂದಿದೆ. ಎಂಟು ಜನ ಯಾರು ಅಂತ ಹೆಸರು ಬೇಕಾದ್ರೂ ಕೊಡ್ತೀನಿ ಎಂದರು.

ಮಾರ್ಚ್​ನಲ್ಲಿ ಬೆಂಗಳೂರಿನಲ್ಲಿ ಪಂಚರತ್ನ ರಥಯಾತ್ರೆ ಸಾಗಲಿದೆ. ಈ ತಿಂಗಳ 27 ರ ವರೆಗೂ ನಿರಂತರವಾಗಿ ರಥಯಾತ್ರೆ ನಡೆಯಲಿದೆ. ಶಿವರಾತ್ರಿ ಒಂದು ದಿನ ಮಾತ್ರ ಬಿಡುವು ನೀಡುತ್ತೇವೆ. ಬೆಂಗಳೂರಿನ ಲ್ಲಿ 8ರಿಂದ 10 ಕ್ಷೇತ್ರ ಗೆಲ್ಲಬೇಕಿದೆ. ಮಾರ್ಚ್ 20-25ಕ್ಕೆ ಸಮಾರೋಪ ಸಮಾರಂಭ ಇದೆ. ಬೃಹತ್ ಕಾರ್ಯಕ್ರಮ ಮಾಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.

ಬೆಂಗಳೂರಿನ ದಾಸರಹಳ್ಳಿಯ ನಮ್ಮ ಶಾಸಕ ಮಂಜುನಾಥ್ ಇದ್ದಾರೆ. ಅವರ ಕಾರ್ಯಕ್ರಮ ಮಾಡಲು ಬಿಡದೆ ತೊಂದರೆ ಕೊಡ್ತಿದ್ದಾರೆ. ಟೆಂಡರ್ ಪ್ರೋಸೆಸ್ ಮಾಡಲು ಬಿಡದೆ ಕಿರುಕುಳ ನೀಡಿದ್ದಾರೆ. ಸದಾನಂದ ಗೌಡರು ಸೇರಿದಂತೆ ಹಲವರು ಅಡ್ಡಗಾಲು ಹಾಕಿದ್ದಾರೆ. ಜನಮನ್ನಣೆ ನೀಡದೆ ಕಿರುಕುಳ ನೀಡ್ತಿದ್ದಾರೆ ಎಂದು ಆರೋಪಿಸಿದರು.

ಕ್ಷುಲ್ಲಕ ಕಾರಣದಿಂದ ಬೆಂಗಳೂರು ನಗರ ಸೇರದಂತೆ ಎಲ್ಲೆಡೆ ಬಿಜೆಪಿ ತನ್ನ ಸ್ಥಾನ ಕಳೆದುಕೊಳ್ಳಲಿದೆ. ನಾನು ಸಿಎಂ ಆಗಿದ್ದಾಗ ಈ ಭಾಗಕ್ಕೆ ಕೋಟ್ಯಾಂತರ ಹಣ ಬಿಡುಗಡೆ ಮಾಡಿದೆ. ಆದ್ರೆ ಬಿಜೆಪಿ ಬಂದ ಬಳಿಕ ಅದೆಲ್ಲವನ್ನೂ ವಾಪಸ್ ಪಡೆದ್ರು. ಈ ಭಾಗದ ಮಾಜಿ ಶಾಸಕ, ಸದಾನಂದಗೌಡ ಇಬ್ನರೂ ಸೇರಿ ಅನುದಾನಕ್ಕೆ ಕೊಕ್ಕೆ ಹಾಕಿದ್ರು. ವಿದೇಶಕ್ಕೆ ಹೋಗಿ ಪಾಠ ಕಲಿತು ಬಂದಿಲ್ಲ ಎಂದರು.

ಪ್ರತೀ ದಿನ ನನ್ನ ಮನೆಗೆ ಅನೇಕರು ಸಮಸ್ಯೆ ಹೇಳಿಕೊಂಡು ಬರ್ತಾರೆ. ಮನೆ ಬಾಗಿಲಿಗೆ ಬಂದ ಹೆಣ್ಣುಮಕ್ಕಳು ಕಣ್ಣೀರು ಹಾಕ್ತಾರೆ. ಇವರೆಲ್ಲ ದಾಸರಹಳ್ಳಿಯ ಕ್ಷೇತ್ರದಲ್ಲಿ ಹುಟ್ಟಿದವರಲ್ಲ. ತುಮಕೂರು, ಮಧುಗಿರಿ, ಪಾವಗಡ ಬೇರೆ ಬೇರೆ ಭಾಗದಿಂದ ಇಲ್ಲಿಗೆ ಬಂದವರು ಎಂದು ಹೇಳಿದರು.

ರಾಜ್ಯದಲ್ಲಿ ಪ್ರತೀ ಬಡ ಕುಟುಂಬದ ಮಕ್ಕಳ ಶಿಕ್ಷಣ ನೀಡುವ ಗುರಿ ಇದೆ. ಉತ್ತಮ ಶಿಕ್ಷಕರ ನೇಮಕ ಮಾಡುತ್ತೇನೆ. ಸರ್ಕಾರದಿಂದ ವಿಮೆ ಹಣ ತಂದು ಕಟ್ಟುತ್ತೇವೆ. ಬೆಳಗ್ಗೆ ಹೊರಟಾಗ ಕೆ.ಆರ್ ಪೇಟೆ ತಾಲ್ಲೂಕಿನ ಬಡ ಕುಟುಂಬ ಬಂದಿತ್ತು. 60 ಲಕ್ಷ ಸಾಲ ಮಾಡಿದ್ದು, ನೀವು ಕೈ ಹಿಡಿಯದಿದ್ರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೇಳಿದ್ರು. ಇಂತ ಬಡ ಕುಟುಂಬ ಅನೇಕ ಇವೆ. ಪ್ರತೀ ಕುಟುಂಬಕ್ಕೆ 15-20 ಸಾವಿರ ಆದಾಯ ಬರುವ ಕಾರ್ಯಕ್ರಮ ರೂಪಿಸಲು ಚಾಲನೆ ನೀಡಿದ್ದೇವೆ ಎಂದು ತಿಳಿಸಿದರು.

ನಗರ, ಗ್ರಾಮೀಣ ಪ್ರದೇಶದಲ್ಲಿ ಮುಂದಿನ ಐದು ವರ್ಷದಲ್ಲಿ ಮನೆ ಇಲ್ಲ ಅಂತ ಯಾವುದೇ ಕುಟುಂಬ ಹೇಳಬಾರದು. ಐದು ಲಕ್ಷ ಮನೆ ಕಟ್ಟಿಕೊಡಲಾಗುವುದು. ಶಿವರಾಮ ಕಾರಂತ ಬಡಾವಣೆ ಇದೆ. ನೀವ್ಯಾರು ಹೆದರೋ ಅವಶ್ಯಕತೆ ಇಲ್ಲ. ಚುನಾವಣೆ ಇನ್ನ ಮೂರು ತಿಂಗಳಲ್ಲಿ ಬರ್ತಿದೆ. ನಾವು ಅಧಿಕಾರಕ್ಕೆ ಬಂದ್ರೆ ಬಡಾವಣೆಗೆ ಶಾಶ್ವತ ಪರಿಹಾರ ನೀಡುತ್ತೇನೆ ಎಂದು ಭರವಸೆ ನೀಡಿದರು.

ಸ್ಯಾಂಟ್ರೋ ರವಿ ಅರೆಸ್ಟ್ ಮಾಡಿದ್ದಾರೆ, ಯಾರ ಹೆಸರೂ ಹೊರಗೆ ಬರಲ್ಲ ಅಂತ ಬಿಜೆಪಿ ಸರ್ಕಾರ ಬಿಜೆಪಿ ಇದೆ. ನಮ್ಮ ಸರ್ಕಾರ ಬಂದ್ರೆ ಕಳ್ಳ, ಸುಳ್ಳರನ್ನ ಒಳಗೆ ಹಾಕಿಸ್ತೀನಿ. ಅಭಿವೃದ್ಧಿ ಆಗಿದ್ರೆ ಕುಮಾರಸ್ವಾಮಿ ಅವಧಿಯಲ್ಲಿ. ಆ ಕಾಲದಲ್ಲಿ ದುಡ್ಡು ಲೂಟಿ ಮಾಡಿದ್ರೆ, ಇವತ್ತು ಬಿಜೆಪಿ ಮನೆಯಲ್ಲಿ ಇರ್ತಿತ್ತು. ಕಾರ್ಯಕ್ರಮ ಅನುಷ್ಠಾನಕ್ಕೆ ತರದೆ ಅಶೋಕ್ ಲೂಟಿ ಹೊಡೆಯುತ್ತಿದ್ದಾರೆ. ನಿಮ್ಮ ಬದುಕಿನಲ್ಲಿ ಚೆಲ್ಲಾಟ ಆಡ್ತಿದ್ದಾರೆ. ನೀವ್ಯಾರು ತಲೆ ಕೆಡಿಸಿಕೊಳ್ಳಬೇಡಿ. ಈ ನಾಡಿನಲ್ಲಿ ಜನತಾದಳ ಸರ್ಕಾರ ಬರಲಿದೆ. 61 ದಿನಗಳ ರಾತ್ರಿ, ಹಗಲು ಕ್ಷೇತ್ರ ಸುತ್ತುವ ಕೆಲಸ ಮಾಡಿದ್ದೇನೆ.

ನೀವು ಮಂಜಣ್ಣ ಅವರನ್ನ ಮತ್ತೆ ಆಯ್ಕೆ ಮಾಡಿ, ಉಸ್ತುವಾರಿ ಸಚಿವರನ್ನಾಗಿ ಮಾಡಿ. ಮಂಜಣ್ಣ ನೀನು ಹೊಸದಾಗಿ ಆಯ್ಕೆಯಾಗಿದ್ದೀಯಾ. ಪಕ್ಕದ ಕ್ಷೇತ್ರದಲ್ಲಿ ಟೋಪಿ ಹಾಕಿ ಕೆಲಸ ಮಾಡ್ತಿದ್ದಾರೆ. ಅವರ ಬಳಿ ಅನುಭವ ತಗೋ ಎಂದಾಗ ಅಣ್ಣ ನನಗೆ ಅಂತ ಸಹವಾಸ ಬೇಡ ಅಂದ್ರು ಮಂಜಣ್ಣ. ಅಂತಹ ಕೆಲಸ ಮಾಡೋದು ಒಂದೇ, ಮನೆಯಲ್ಲಿರೋದು ಒಂದೆ. ಅತ್ಯಂತ ಪ್ರಾಮಾಣಿಕ ವ್ಯಕ್ತಿ ಮಂಜಣ್ಣ. ಪ್ರಾಮಾಣಿಕ ವ್ಯಕ್ತಿಯನ್ನ ಆರಿಸಿದ್ದೀರಿ ಎಂದರು.

IPL_Entry_Point

ವಿಭಾಗ