ಶ್ರೀಲಂಕಾದಿಂದ ಧನುಷ್‌ಕೋಡಿಯವರೆಗೆ 28 ಕಿಮೀ ಕಡಲು ಈಜಿದ ಖಾಕಿ ಐರನ್ ಮ್ಯಾನ್ ಮುರುಗೇಶ ಚನ್ನಣ್ಣವರ; ತಂಡದ ಸಾಥ್
ಕನ್ನಡ ಸುದ್ದಿ  /  ಕರ್ನಾಟಕ  /  ಶ್ರೀಲಂಕಾದಿಂದ ಧನುಷ್‌ಕೋಡಿಯವರೆಗೆ 28 ಕಿಮೀ ಕಡಲು ಈಜಿದ ಖಾಕಿ ಐರನ್ ಮ್ಯಾನ್ ಮುರುಗೇಶ ಚನ್ನಣ್ಣವರ; ತಂಡದ ಸಾಥ್

ಶ್ರೀಲಂಕಾದಿಂದ ಧನುಷ್‌ಕೋಡಿಯವರೆಗೆ 28 ಕಿಮೀ ಕಡಲು ಈಜಿದ ಖಾಕಿ ಐರನ್ ಮ್ಯಾನ್ ಮುರುಗೇಶ ಚನ್ನಣ್ಣವರ; ತಂಡದ ಸಾಥ್

ಹುಬ್ಬಳ್ಳಿಯ ಪೊಲೀಸ್‌ ಅಧಿಕಾರಿ ಮುರುಗೇಶ ಚನ್ನಣ್ಣವರ ದಾಖಲೆ ಮಾಡಿದ್ದಾರೆ. ಈಗಾಗಲೇ ಹಲವು ದಾಖಲೆ ಮಾಡಿರುವ ಅವರು, ಈ ಬಾರಿ ತಂಡದೊಂದಿಗೆ ಶ್ರೀಲಂಕಾದಿಂದ ಧನುಷ್‌ಕೋಡಿಯವರೆಗೆ 28 ಕಿ.ಮೀ. ದೂರ ಸಮುದ್ರದಲ್ಲಿ ಈಜಿ ಹೊಸ ಸಾಹಸ ಪ್ರದರ್ಶಿಸಿದ್ದಾರೆ.

ಶ್ರೀಲಂಕಾದಿಂದ ಧನುಷ್‌ಕೋಡಿಯವರೆಗೆ 28 ಕಿಮೀ ಕಡಲೀಜಿದ ಖಾಕಿ ಐರನ್ ಮ್ಯಾನ್ ಮುರುಗೇಶ ಚನ್ನಣ್ಣವರ
ಶ್ರೀಲಂಕಾದಿಂದ ಧನುಷ್‌ಕೋಡಿಯವರೆಗೆ 28 ಕಿಮೀ ಕಡಲೀಜಿದ ಖಾಕಿ ಐರನ್ ಮ್ಯಾನ್ ಮುರುಗೇಶ ಚನ್ನಣ್ಣವರ

ಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್ ಆಗಿರುವ ಮುರುಗೇಶ ಚನ್ನಣ್ಣವರ, ತಮ್ಮ ಸಾಹಸಿ ತಂಡದೊಂದಿಗೆ ಹೊಸ ದಾಖಲೆ ನಿರ್ಮಿಸಿದ್ದಾರೆ. ಇದು ಒಬ್ಬ ಪೊಲೀಸ್‌ ಅಧಿಕಾರಿಯಾಗಿ ಅಲ್ಲ. ಬದಲಿಗೆ ಸಮುದ್ರ ಈಜುವ ಸಾಹಸಮಯ ಕ್ರೀಡೆಯಿಂದ. ಬರೋಬ್ಬರಿ 28 ಕಿ.ಮೀ ದೂರ ಕಡಲೀಜಿ ದಾಖಲೆ ಬರೆದಿದ್ದಾರೆ. ಇವರಿಗೆ ಎಂಬಿಬಿಎಸ್ ವಿದ್ಯಾರ್ಥಿ ಅಮನ್ ಶಾನಭಾಗ ಸೇರಿದಂತೆ ಹಲವರು ಸಾಥ್‌ ನೀಡಿದ್ದಾರೆ

ಕ್ರೀಡೆ ಮನುಷ್ಯನ ಆರೋಗ್ಯ ಸುಧಾರಿಸುತ್ತದೆ. ಸದೃಢ ಮತ್ತು ಆರೋಗ್ಯವಂತ ದೇಹಕ್ಕೆ ಕ್ರೀಡೆ ಅತ್ಯಗತ್ಯ. ಕೆಲವು ಕ್ರೀಡೆಗಳಿಗೆ ಶಕ್ತಿ ಮಾತ್ರವಲ್ಲದೆ ಯುಕ್ತಿಯ ಅಗತ್ಯವಿದೆ. ಅದರಲ್ಲಿ ಈಜು ಕೂಡಾ ಒಂದು. ಶಕ್ತಿ, ಯುಕ್ತಿಯ ಜೊತೆಗೆ ತಾಳ್ಮೆಯ ಅಗತ್ಯವಿರುವ ಈಜಿನ ಮೂಲಕ ಮುರುಗೇಶ ಚನ್ನಣ್ಣವರ ದಾಖಲೆ ಮಾಡಿದ್ದಾರೆ. ಇವರ ಸಾಧನೆಯ ಶಿಖರವೇರಲು ತಾಳ್ಮೆಯ ಜೊತೆಗೆ ಸತತ ಪರಿಶ್ರಮ ಬೇಕಾಗಿತ್ತು.

ಹುಬ್ಬಳ್ಳಿ ಗ್ರಾಮೀಣ ಠಾಣೆಯ ಅಧಿಕಾರಿಯಾಗಿರುವ ಇವರು ಹೊಸ ಮೈಲುಗಲ್ಲು ಸಾಧಿಸಿದ್ದಾರೆ. ರಾಮಸೇತು ಈಜುವ ಮೂಲಕ ಈ ಸಾಧನೆ ಮಾಡಿದ್ದಾರೆ. ಶ್ರೀಲಂಕಾದಿಂದ ಭಾರತದ ಧನುಷ್‌ಕೋಡಿಯವರೆಗೆ ರಾಮ ಸೇತು ಮೂಲಕ 28 ಕಿ.ಮೀ. ದೂರವನ್ನು ಈಜು ರಿಲೇ ತಂಡದೊಂದಿಗೆ ಮುಗಿಸಿದ್ದಾರೆ. ಇದಕ್ಕಾಗಿ ಇವರ ತಂಡ ತೆಗೆದುಕೊಂಡ ಸಮಯ 8 ಗಂಟೆ 30 ನಿಮಿಷಗಳು.

ಈ ವಿಶೇಷ ತಂಡದಲ್ಲಿ ಉತ್ತರ ಪ್ರದೇಶ ಮತ್ತು ಹರಿಯಾಣದ ಇಬ್ಬರು ಐಎಎಸ್ ಅಧಿಕಾರಿಗಳು ಹಾಗೂ ಪಶ್ಚಿಮ ಬಂಗಾಳ ಮತ್ತು ಹರಿಯಾಣದ ವಿಕಲಚೇತನ ಕ್ರೀಡಾಪಟುಗಳು ಕೂಡಾ ಇದ್ದಾರೆ.

ಸಮುದ್ರದ ಕ್ಲಿಷ್ಟಕರ ಮಾರ್ಗ

ಈ ತಂಡವು ಕಷ್ಟಕರವಾದ 28 ಕಿ.ಮೀ ಈಜನ್ನು ಹಿಂದೂಮಹಾಸಾಗರ ಮತ್ತು ಬಂಗಾಲಕೊಲ್ಲಿಯ ಸಮುದ್ರದಲ್ಲಿ ಪ್ರತಿಕೂಲ ವಾತಾವರಣ ಮತ್ತು ಭಾರಿ ಅಲೆಗಳ ಅಡೆತಡೆಯ ನಡುವೆಯೂ ಮುಗಿಸಿದ್ದಾರೆ. ನಿರಂತರವಾಗಿ ಎಂಟೂವರೆ ಗಂಟೆಯಲ್ಲಿ ಈಜಿ ಗುರಿ ತಲುಪಿದ್ದಾರೆ.

ಮುರುಗೇಶ ಅವರು ಈಜು ಸಾಧನೆಗೆ ಸ್ಫೂರ್ತಿಯಾಗಿ ಧರ್ಮಪತ್ನಿ ಶ್ವೇತಾ ಚನ್ನಣ್ಣವರ ಅವರನ್ನು ಜೊತೆಯಲ್ಲಿ ಬೋಟಿನಲ್ಲಿ ಶ್ರೀಲಂಕಾಗೆ ಕರೆದುಕೊಂಡು ಹೋಗಿದ್ದರು. ಈ ಹಿಂದೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕ್ಲಿಂಗ್ ಮುಂತಾದ ಸಾಧನೆಗಳ ಮೂಲಕ ಇವರು ಗಮನೆ ಸೆಳೆದು ಐರನ್‌ಮ್ಯಾನ್ ಎಂದೇ ಖ್ಯಾತಿ ಪಡೆದಿದ್ದಾರೆ.

ಮುಂದಿನ ಗುರಿ ಇಂಗ್ಲಿಷ್‌ ಕಾಲುವೆ

ಮೇಲಿಂದ ಮೇಲೆ ಒಂದೊಂದು ಸಾಧನೆಯ ಗುರಿ ಹಾಕಿಕೊಂಡಿರುವ ಇವರು, ಮತ್ತೊಂದು ಮೈಲುಗಲ್ಲು ಸಾಧಿಸುವ ನಿರೀಕ್ಷೆಯಲ್ಲಿದ್ದಾರೆ. ಚನ್ನಣ್ಣನವರ ಮತ್ತು ಅಮನ್ ಶಾನಭಾಗ ಮುಂಬರುವ ಜೂನ್ ತಿಂಗಳಲ್ಲಿ ವಿಶ್ವದ ಅತಿ ಕಷ್ಟಕರ ಎನಿಸಿರುವ ಇಂಗ್ಲಿಷ್‌ ಕಾಲುವೆಯನ್ನು ಈಜಲು ಹೊರಟಿದ್ದಾರೆ. ಇಂಗ್ಲೆಂಡ್‌ ಮತ್ತು ಫ್ರಾನ್ಸ್ ನಡುವೆ 36 ಕಿಲೋ ಮೀಟರ್ ಕಾಲುವೆ ದೂರದ ಕಾಲುವೆ ಇದಾಗಿದೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.