ಸಿದ್ದರಾಮಯ್ಯ ಹಾಗೂ ಕುಟುಂಬಕ್ಕೆ ಒಳಿತಾಗಲಿ ಎಂದು ಅಭಿಮಾನಿಗಳಿಂದ ಹುಣ್ಣಿಮೆ ಪೂಜೆ; ಬಿಜೆಪಿ ವಿರುದ್ಧ ತನ್ವೀರ್ ಸೇಠ್, ಮಹದೇವಪ್ಪ ವ್ಯಂಗ್ಯ
ಕನ್ನಡ ಸುದ್ದಿ  /  ಕರ್ನಾಟಕ  /  ಸಿದ್ದರಾಮಯ್ಯ ಹಾಗೂ ಕುಟುಂಬಕ್ಕೆ ಒಳಿತಾಗಲಿ ಎಂದು ಅಭಿಮಾನಿಗಳಿಂದ ಹುಣ್ಣಿಮೆ ಪೂಜೆ; ಬಿಜೆಪಿ ವಿರುದ್ಧ ತನ್ವೀರ್ ಸೇಠ್, ಮಹದೇವಪ್ಪ ವ್ಯಂಗ್ಯ

ಸಿದ್ದರಾಮಯ್ಯ ಹಾಗೂ ಕುಟುಂಬಕ್ಕೆ ಒಳಿತಾಗಲಿ ಎಂದು ಅಭಿಮಾನಿಗಳಿಂದ ಹುಣ್ಣಿಮೆ ಪೂಜೆ; ಬಿಜೆಪಿ ವಿರುದ್ಧ ತನ್ವೀರ್ ಸೇಠ್, ಮಹದೇವಪ್ಪ ವ್ಯಂಗ್ಯ

ಮುಡಾ‌ ಹಗರಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬ ಹೊರಬರಬೇಕು ಎಂದು ಹಾರೈಸಿ ಮೈಸೂರಿ‌ನಲ್ಲಿ ಅಭಿಮಾನಿಗಳಿಂದ ಹುಣ್ಣಿಮೆ ಪೂಜೆ ನಡೆಯಿತು. ವಿವಿಧ ಬೆಳವಣಿಗೆಗಳ ಕುರಿತು ರಾಜಕೀಯ ನಾಯಕರ ಹೇಳಿಕೆಗಳು ಇಲ್ಲಿವೆ.

ಸಿದ್ದರಾಮಯ್ಯ ಹಾಗೂ ಕುಟುಂಬಕ್ಕೆ ಒಳಿತಾಗಲಿ ಎಂದು ಅಭಿಮಾನಿಗಳಿಂದ ಹುಣ್ಣಿಮೆ ಪೂಜೆ; ಬಿಜೆಪಿ ವಿರುದ್ಧ ತನ್ವೀರ್ ಸೇಠ್, ಮಹದೇವಪ್ಪ ವ್ಯಂಗ್ಯ
ಸಿದ್ದರಾಮಯ್ಯ ಹಾಗೂ ಕುಟುಂಬಕ್ಕೆ ಒಳಿತಾಗಲಿ ಎಂದು ಅಭಿಮಾನಿಗಳಿಂದ ಹುಣ್ಣಿಮೆ ಪೂಜೆ; ಬಿಜೆಪಿ ವಿರುದ್ಧ ತನ್ವೀರ್ ಸೇಠ್, ಮಹದೇವಪ್ಪ ವ್ಯಂಗ್ಯ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬಕ್ಕೆ ಒಳಿತಾಗಲಿ ಎಂದು ಹಾರೈಸಿ ಮೈಸೂರಿ‌ನಲ್ಲಿ ಅಭಿಮಾನಿಗಳಿಂದ ಹುಣ್ಣಿಮೆ ಪೂಜೆ ನಡೆಯಿತು. ಇಲ್ಲಿನ ಅಗ್ರಹಾರದ ನವಗ್ರಹ ಗಣಪತಿ ದೇವಸ್ಥಾನದಲ್ಲಿ ಸತ್ಯ ನಾರಾಯಣ ಪೂಜೆ, ಹೋಮ ಹವನ, ಬೆಣ್ಣೆ ಅಲಂಕಾರದ ಸೇವೆಯೂ ನಡೆದಿದೆ. ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ, ಡಾ ಯತೀಂದ್ರ ಹೆಸರಿನಲ್ಲಿ ಅರ್ಚನೆ ಕೂಡ ಮಾಡಲಾಗಿದೆ. ಮಹಾನಗರ ಪಾಲಿಕೆ ಮಾಜಿ ಸದಸ್ಯ ಲೋಕೇಶ್ ಪ್ರಿಯಾ ನೇತೃತ್ವದಲ್ಲಿ ಪೂಜೆ, ಹೋ‌ಮ‌ ಹವನ‌ ನೆರವೇರಿಸಲಾಗಿದೆ. ಸಿಎಂ ಭಾವಚಿತ್ರ ಹಿಡಿದು ವಿಶೇಷ ಪೂಜೆ ಸಲ್ಲಿಸಿ ಮುಡಾ‌ ಹಗರಣದಿಂದ ಸಿದ್ದರಾಮಯ್ಯ ಹಾಗೂ ಅವರ ಕುಟುಂಬ ಹೊರಬರಬೇಕು. ದೈವ ಬಲ ಸಿಗಬೇಕು. ವಿರೋಧಿಗಳು ಸರ್ವನಾಶ ಆಗಬೇಕು. ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯಬೇಕು ಎಂದು ವಿಶೇಷ ಪೂಜೆ, ಅರ್ಚನೆ ಫ್ಯಾನ್ಸ್ ಪ್ರಾರ್ಥಿಸಿದ್ದಾರೆ.

ಹೆಚ್​ಸಿ ಮಹದೇವಪ್ಪ‌ ಹೇಳಿಕೆ

ಮುಡಾ ಅಧ್ಯಕ್ಷ ಮರೀಗೌಡ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿ ಮೈಸೂರಿನಲ್ಲಿ ಸಚಿವ ಹೆಚ್​ಸಿ ಮಹದೇವಪ್ಪ‌ ಪ್ರತಿಕ್ರಿಯಿಸಿದ್ದಾರೆ. ಮರೀಗೌಡರಿಗೆ ಹೆಚ್ಚು ರಕ್ತದೊತ್ತಡ ಇತ್ತು. ಅವರಿಗೆ ಯಾವುದೇ ರಾಜಕಾರಣಿಗಳ ಒತ್ತಡ ಇರಲಿಲ್ಲ. ಅವರಿಗೆ ರಕ್ತದ ಒತ್ತಡ ಹೆಚ್ಚಿದ್ದ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಇದೇ ವೇಳೆ ರಾಜ್ಯದಲ್ಲಿ ಜಾತಿ ಗಣತಿ ಜಾರಿಗೆ ಬರುವುದು ನಿಶ್ಚಿತ. ಜಾತಿ ಗಣತಿ ಜಾರಿಗೆ ಪರ- ವಿರೋಧ ಚರ್ಚೆಗಳು ನಡೆಯುತ್ತಿವೆ. ಲೋಪ ದೋಷಗಳನ್ನು ಸರಿಪಡಿಸಿ ಜಾರಿಗೆ ತರಲಾಗುವುದು ಎಂದರು.

ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ವ್ಯಂಗ್ಯ

ಚನ್ನಪಟ್ಟಣ ಉಪಚುನಾವಣೆಗೆ ಸಂಬಂಧಿಸಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಯ್ಕೆ ಕಸರತ್ತಿನ ಬಗ್ಗೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ವ್ಯಂಗ್ಯವಾಡಿದ್ದಾರೆ. ಒಬ್ಬರ ಕೈಯಲ್ಲಿ ಹಾರೆ, ಮತ್ತೊಬ್ಬರ ಕೈಯಲ್ಲಿ ಗುದ್ದಲಿ ಕೊಟ್ಟಿದ್ದೇವೆ. ಯಾರಿಗೆ ಟಿಕೆಟ್ ಸಿಕ್ಕರೂ ಒಬ್ಬರು ತೋಡುತ್ತಾರೆ, ಮತ್ತೊಬ್ಬರು ಎಳೆಯುತ್ತಾರೆ. ನಮ್ಮ ಗೆಲುವು ನಿಶ್ಚಿತ‌. ರಾಷ್ಟ್ರ ರಾಜಕಾರಣವೇ ಬೇರೆ. ಚನ್ನಪಟ್ಟಣದ ಪರಿಸ್ಥಿತಿಯೇ ಬೇರೆ. ಉಪ ಚುನಾವಣೆಯಲ್ಲಿ ಚನ್ನಪಟ್ಟಣ ಬಹಳ‌ ವಿಶೇಷವಾಗಿದೆ ಎಂದು ಹೇಳಿದ್ದಾರೆ.

ಶಿಗ್ಗಾವಿ, ಸಂಡೂರು ಒಂದಾದರೆ, ಚನ್ನಪಟ್ಟಣ ಅತ್ಯಂತ ಕುತೂಹಲ ಮೂಡಿಸಿದೆ. ಈಗಾಗಲೇ ಅಭ್ಯರ್ಥಿ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಮೈತ್ರಿ ಅಭ್ಯರ್ಥಿ ಯಾರು? ಕಾಂಗ್ರೆಸ್‌ನಿಂದ ಯಾರು? ಎಂಬುದು ಪ್ರಶ್ನೆ. ಡಿಸಿಎಂ ನಾನೇ ಅಭ್ಯರ್ಥಿ ಅಂತ ಹೇಳಿದ್ದಾರೆ. ಆದಾಗ್ಯೂ ಪರಿಸ್ಥಿತಿಗೆ ಅನುಗುಣವಾಗಿ ಕಾಂಗ್ರೆಸ್ ಅಭ್ಯರ್ಥಿ ಹಾಕುವ ಕೆಲಸ ಮಾಡುತ್ತದೆ. ನಾಲ್ಕೈದು ದಿನದಲ್ಲಿ ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಆಗುತ್ತದೆ. ಡಿಕೆ ಸುರೇಶ್ ರಾಜಕೀಯವಾಗಿ ಮುಂದುವರಿಯಬೇಕಾದ ಅನಿವಾರ್ಯತೆ ಪಕ್ಷಕ್ಕಿದೆ. ಸಾಮಾಜಿಕ ನ್ಯಾಯದ ವಿಚಾರದಲ್ಲಿ ಶಿಗ್ಗಾವಿಯಲ್ಲಿ ಮುಸ್ಲಿಂ ಅಭ್ಯರ್ಥಿ ನಿಲ್ಲಿಸಿ ಅಂತ ನಾನೂ ಕೂಡ ಮನವಿ ಮಾಡಿದ್ದೇನೆ ಎಂದರು.

ಬಿಜೆಪಿ ರಾಜಕಾರಣ ಏನು ಅಂತ ಅರ್ಥ ಮಾಡಿಕೊಳ್ಳಬೇಕು. ಅವರು ರಾಜಕಾರಣವನ್ನು ನೀಚ ಮಟ್ಟಕ್ಕೆ ತಂದು ನಿಲ್ಲಿಸಿದ್ದಾರೆ. ಸರ್ಕಾರ ಕಾನೂನು ಬದ್ಧವಾಗಿ ನಡೆದುಕೊಂಡಿದೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಒಂದು ಸಮುದಾಯವನ್ನು ಗುರಿಯಾಗಿ ಇಟ್ಟುಕೊಂಡು ಅಮಾಯಕರ ಮೇಲೆ ಕೇಸ್ ಹಾಕಿತ್ತು. ಕೇವಲ ಒಂದು ಸಮುದಾಯದ ಹೆಸರು ಬಂದಾಗ ಬಿಜೆಪಿ ರಾಜಕೀಯ ಬೇಳೆ ಬೇಯಿಸಿಕೊಳ್ಳೋದು ತಪ್ಪು. ಹುಬ್ಬಳಿ ಪ್ರಕರಣ ಮಾತ್ರವಲ್ಲ‌ ಇತರ ಪ್ರಕರಣಗಳ ಬಗ್ಗೆಯೂ ಮಾತಾಡಬೇಕಲ್ಲ. ಕಾನೂನಾತ್ಮಕವಾಗಿ ನಾವು ನಡೆದುಕೊಂಡಿದ್ದೇವೆ. ಆ ಕೇಸ್ ಈಗ ವಾಪಸ್ ಪಡೆದಿದ್ದೇವೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

ಮುಡಾ ಅಧ್ಯಕ್ಷ ಸ್ಥಾನಕ್ಕೆ ಕೆ ಮರಿಗೌಡ ರಾಜೀನಾಮೆ ಕೊಟ್ಟ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಆರೋಗ್ಯದ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದೇನೆ ಎಂದಿದ್ದಾರೆ. ರಾಜೀನಾಮೆ ತನಿಖೆಗೆ ಒಳ್ಳೆಯದೇ. ಮರಿಗೌಡ ಸಿಎಂ ಆಪ್ತರು. ಪಾರದರ್ಶಕ ತನಿಖೆಗೆ ಸಹಕಾರಿ ಆಗಲಿ ಅಂತ ರಾಜೀನಾಮೆ ಕೊಟ್ಟಿದ್ದಾರೆ. ಮುಡಾದಿಂದ ಸಿಎಂಗೆ ಅಂಟಿರುವ ಕಳಂಕ ದೂರ ಆಗತ್ತದೆ. 2021ರಲ್ಲಿ ಮುಡಾ ಸಭೆಗೆ ವಿರುದ್ಧವಾಗಿ 50-50 ಅನುಪಾತದ ತೀರ್ಮಾನವಾಗಿದೆ‌. ಒಂದೇ ಸಭೆಯಲ್ಲಿ 175 50-50 ಸೈಟ್ ಕೊಟ್ಟಿದ್ದಾರೆ. ಅದರಲ್ಲಿ‌ ಸಿದ್ದರಾಮಯ್ಯ ಅವರ‌ 14 ಸೈಟ್ ವಾಪಸ್ ಬಂದಿದೆ. ಉಳಿದ 161 ಸೈಟ್ ವಾಪಸ್ ಪಡೆಯಬೇಕು. ಎಲ್ಲಾ 175 ಸೈಟ್ ರದ್ದಾಗಬೇಕು. ಮುಡಾ ಸಭೆಯಲ್ಲಿ 50-50 ಅನುಪಾತದಲ್ಲಿ ಒಂದು ಸೈಟ್‌ಗೂ ಅನುಮೋದನೆ ಕೊಟ್ಟಿಲ್ಲ ಎಂದಿದ್ದಾರೆ.

ಎಲ್ಲಾ ಸೈಟ್ ವಾಪಸ್ ಪಡೆಯಿರಿ: ಶಾಸಕ ಶ್ರೀವತ್ಸ

ಸಿಎಂ ಸಿದ್ದರಾಮಯ್ಯಗೆ ಪತ್ರ ಕೊಟ್ಟ ವಿಚಾರಕ್ಕೆ ಸಂಬಂಧಿಸಿ ಶಾಸಕ ಶ್ರೀವತ್ಸ ಮಾತನಾಡಿದ್ದು, ಮುಡಾ 50-50 ನಿಯಮದಲ್ಲಿ ಪಡೆದ ಸೈಟ್‌ಗಳು ಪರಭಾರೆ ಆಗ್ತಿವೆ. 2020 ರಿಂದ 2024ರ ವರೆಗಿನ ಎಲ್ಲ 50-50 ಸೈಟ್ ರದ್ದತಿಗೆ ಮನವಿ ಮಾಡಿದ್ದೇನೆ. ಇದು ಆಗಬಾರದು ಎಂದು ಸಿದ್ದರಾಮಯ್ಯಗೆ ಮನವಿ ಮಾಡಿದ್ದೇನೆ‌. ಟೆಕ್ನಿಕಲ್ ಕಮಿಟಿ ವರದಿ ಜಾರಿ ಮಾಡಿ. ಇಬ್ಬರು ಕಮಿಷನರ್ ವಜಾಗೆ ಆಗ್ರಹಿಸಿದ್ದೇನೆ. ಅವರು ಕೂಡ ತನಿಖೆ ನಡೆಯುತ್ತಿದೆ, ಮಾರಾಟಕ್ಕೆ ಅವಕಾಶ ಕೊಡಲ್ಲ ಎಂದು ಹೇಳಿದ್ದಾರೆ. ನಮ್ಮ ಪ್ರಕಾರ 50-50 ನಿಯಮದಲ್ಲಿ 14000ಕ್ಕೂ ಹೆಚ್ಚು ನಿವೇಶನ ನೀಡಲಾಗಿದೆ. ಅದೆಲ್ಲವನ್ನು ವಾಪಸ್ ಪಡೆಯಬೇಕು. ತನಿಖೆ ಮುಗಿಸಿ ಅರ್ಹರಿಗೆ ಕೊಡಿ ಎಂದು ಹೇಳಿಕೆ ನೀಡಿದ್ದಾರೆ.

50-50 ಅಷ್ಟೇ ಅಲ್ಲ, ಬದಲಿ ನಿವೇಶನ ಹಂಚಿಕೆಯಲ್ಲೂ ಮುಡಾದಲ್ಲಿ ಅಕ್ರಮ ನಡೆದಿದೆ. ಸುಮ್ಮನೆ ಎಲ್ಲರ ಹೆಸರು ಓಡಾಡುತ್ತಿದೆ. ಬೇರೆ ಬೇರೆ ರಾಜಕಾರಣಿಗಳ ಹೆಸರೂ ಬರುತ್ತಿದೆ. ಮೊದಲು ತನಿಖೆ ಮಾಡಿ, ತಪಿತಸ್ಥರಿಗೆ ಶಿಕ್ಷೆ ಆಗಲಿ. ಎಲ್ಲಾ 4,500 ಸೈಟ್‌ಗಳ ಬಗ್ಗೆಯೂ ನಮ್ಮ ಹೋರಾಟ ಇದೆ‌. ಮೊದಲು 50-50 ರದ್ದು ಮಾಡಿ, ನಂತರ ಅವರ ಪ್ರತಿಕ್ರಿಯೆ ಗೊತ್ತಾಗುತ್ತದೆ ಎಂದು ಶಾಸಕ ಶ್ರೀವತ್ಸ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.