ಬೆಳಗಾವಿ- ಬೆಂಗಳೂರು- ಮೈಸೂರು ವಿಶ್ವಮಾನವ ಎಕ್ಸ್‌ಪ್ರೆಸ್‌ ರೈಲು ಸಂಚಾರ ಪುನಾರಂಭ, ಹುಬ್ಬಳ್ಳಿ- ಚಿತ್ರದುರ್ಗ ರೈಲು ಸಂಚಾರ ವಿಳಂಬ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಳಗಾವಿ- ಬೆಂಗಳೂರು- ಮೈಸೂರು ವಿಶ್ವಮಾನವ ಎಕ್ಸ್‌ಪ್ರೆಸ್‌ ರೈಲು ಸಂಚಾರ ಪುನಾರಂಭ, ಹುಬ್ಬಳ್ಳಿ- ಚಿತ್ರದುರ್ಗ ರೈಲು ಸಂಚಾರ ವಿಳಂಬ

ಬೆಳಗಾವಿ- ಬೆಂಗಳೂರು- ಮೈಸೂರು ವಿಶ್ವಮಾನವ ಎಕ್ಸ್‌ಪ್ರೆಸ್‌ ರೈಲು ಸಂಚಾರ ಪುನಾರಂಭ, ಹುಬ್ಬಳ್ಳಿ- ಚಿತ್ರದುರ್ಗ ರೈಲು ಸಂಚಾರ ವಿಳಂಬ

ಬೆಳಗಾವಿಯಿಂದ ಬೆಂಗಳೂರು ಮಾರ್ಗವಾಗಿ ಮೈಸೂರಿಗೆ ತಲುಪುವ ವಿಶ್ವಮಾನವ ಎಕ್ಸ್‌ಪ್ರೆಸ್‌ ರೈಲಿನ ಪ್ರಯಾಣದಲ್ಲಿ ವ್ಯತ್ಯಯವಾಗುವ ಮಾಹಿತಿಯನ್ನು ನೈರುತ್ಯ ರೈಲ್ವೆ ನೀಡಿತ್ತಾದರೂ ಈಗ ಯಥಾರೀತಿ ಸಂಚರಿಸಲಿದೆ ಎಂದು ತಿಳಿಸಲಾಗಿದೆ.

ಬೆಳಗಾವಿ ಬೆಂಗಳೂರು ಮೈಸೂರು ವಿಶ್ವಮಾನವ ರೈಲು ಸಂಚಾರ ಪುನಾರಂಭಗೊಂಡಿದೆ.
ಬೆಳಗಾವಿ ಬೆಂಗಳೂರು ಮೈಸೂರು ವಿಶ್ವಮಾನವ ರೈಲು ಸಂಚಾರ ಪುನಾರಂಭಗೊಂಡಿದೆ.

ಬೆಂಗಳೂರು: ಬೆಳಗಾವಿಯಿಂದ ಹುಬ್ಬಳ್ಳಿ, ದಾವಣಗೆರೆ, ಕಡೂರು,ಅರಸಿಕೆರೆ, ತುಮಕೂರು, ಬೆಂಗಳೂರು, ಮಂಡ್ಯ ಮಾರ್ಗವಾಗಿ ಮೈಸೂರು ನಡುವೆ ಸಂಚರಿಸುವ ವಿಶ್ವಮಾನವ ಎಕ್ಸ್ ಪ್ರೆಸ್ ಪುನರಾರಂಭ ಮಾಡಲಾಗಿದೆ.ಈ ಮೊದಲು ಮೇ ತಿಂಗಳಲ್ಲಿ ರೈಲಿನ ನಿಯಂತ್ರಣದ ಮಾಹಿತಿ ನೀಡಲಾಗಿತ್ತಾದರೂ ಈಗ ಎಂದಿನಂತೆ ಈ ರೈಲು ಸಂಚರಿಸಲಿದೆ. ಇದಲ್ಲದೇ ಹಾವೇರಿ ಮತ್ತು ಬ್ಯಾಡಗಿ ನಿಲ್ದಾಣಗಳ ನಡುವಿನ ರೈಲ್ವೆ ಹಳಿಯಲ್ಲಿ ಅಗತ್ಯ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳು ನಡೆಯುತ್ತಿರುವುದರಿಂದ, ಈ ಕೆಳಗಿನ ರೈಲುಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗುತ್ತಿದೆ. ಬಿಕಾನೇರ್–ಯಶವಂತಪುರ ದ್ವಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ಹಾಗೂ ಹುಬ್ಬಳ್ಳಿ–ಚಿತ್ರದುರ್ಗ ಡೈಲಿ ಎಕ್ಸ್ ಪ್ರೆಸ್ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಯಾಣಿಕರು ಬದಲಾವಣೆಗಳನ್ನು ಗಮನಿಸುವಂತೆ ಮನವಿ ಮಾಡಿದ್ದಾರೆ

1. ರೈಲು ಸಂಖ್ಯೆ 17325 ಬೆಳಗಾವಿ–ಮೈಸೂರು ವಿಶ್ವಮಾನವ ದೈನಂದಿನ ಎಕ್ಸ್ ಪ್ರೆಸ್ ರೈಲು ಈ ಮೊದಲು 2025ರ ಮೇ 5, 6, 8, 9, 11, 12, 13, 15 ಮತ್ತು 16, ರಂದು ಬೆಳಗಾವಿಯಿಂದ 60 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ ಮತ್ತು ಮಾರ್ಗ ಮಧ್ಯೆ 45 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು ಎಂದು ತಿಳಿಸಲಾಗಿತ್ತು. ಆದರೆ, ಈಗ ಈ ರೈಲು ಮೇ 5 ರಿಂದ ತನ್ನ ಮೊದಲಿನ ವೇಳಾಪಟ್ಟಿಯ ಪ್ರಕಾರ ಎಂದಿನಂತೆ ಸಂಚಾರ ಆರಂಭಿಸಲಿದೆ.

2. 2025ರ ಮೇ 6, 8, 13, 15 ಮತ್ತು 20, 2025 ರಂದು ಬಿಕಾನೇರ್ ನಿಂದ ಹೊರಡುವ ರೈಲು ಸಂಖ್ಯೆ 16588 ಬಿಕಾನೇರ್–ಯಶವಂತಪುರ ದ್ವಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಮಾರ್ಗ ಮಧ್ಯೆ 75 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.

3. 2025 ರ ಮೇ 5, 6, 8, 9, 11, 12, 13, 15, 16, 18, 19, 20, 22 ಮತ್ತು 23, 2025 ರಂದು ಹೊರಡುವ ರೈಲು ಸಂಖ್ಯೆ 17347 ಹುಬ್ಬಳ್ಳಿ–ಚಿತ್ರದುರ್ಗ ಡೈಲಿ ಎಕ್ಸ್ ಪ್ರೆಸ್ ಹುಬ್ಬಳ್ಳಿಯಿಂದ 75 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ ಮತ್ತು ಮಾರ್ಗ ಮಧ್ಯೆ 25 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಾಲ್ಗುಡಿ ಎಕ್ಸ್ ಪ್ರೆಸ್ ರೈಲು ಸಮಯ ಪರಿಷ್ಕರಣೆ

ನೈಋತ್ಯ ರೈಲ್ವೆಯು ತನ್ನ ವ್ಯಾಪ್ತಿಯಲ್ಲಿ ಚಲಿಸುವ ಮಾಲ್ಗುಡಿ ಎಕ್ಸ್ ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ. ಈ ಪರಿಷ್ಕೃತ ಸಮಯವು ಮೇ 5, 2025 ರಿಂದ ಜಾರಿಗೆ ಬರಲಿದೆ.

ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ರೈಲು ಸಂಖ್ಯೆ 20623 ಅಶೋಕಪುರಂ-ಕೆಎಸ್ಆರ್ ಬೆಂಗಳೂರು ಮಾಲ್ಗುಡಿ ಡೈಲಿ ಎಕ್ಸ್ ಪ್ರೆಸ್ ಇನ್ನು ಮುಂದೆ ಅಶೋಕಪುರಂನಿಂದ ಬೆಳಿಗ್ಗೆ 08.30ರ ಬದಲು 10 ನಿಮಿಷ ಮುಂಚಿತವಾಗಿ, ಅಂದರೆ 08.20ಕ್ಕೆ ಹೊರಡಲಿದೆ. ಈ ರೈಲು ಮೈಸೂರು ಜಂಕ್ಷನ್ಗೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ 08.30ಕ್ಕೆ ಆಗಮಿಸಿ, 08.35ಕ್ಕೆ ನಿರ್ಗಮಿಸಲಿದೆ. ನಂತರ, ಈ ರೈಲು ಪಾಂಡವಪುರಕ್ಕೆ 08.54ಕ್ಕೆ ಆಗಮಿಸಿ 08.55ಕ್ಕೆ, ಮಂಡ್ಯಕ್ಕೆ 09.11ಕ್ಕೆ ಆಗಮಿಸಿ 09.12ಕ್ಕೆ, ಮದ್ದೂರಿಗೆ 09.26ಕ್ಕೆ ಆಗಮಿಸಿ 09.27ಕ್ಕೆ, ಚನ್ನಪಟ್ಟಣಕ್ಕೆ 09.42ಕ್ಕೆ ಆಗಮಿಸಿ 09.43ಕ್ಕೆ, ರಾಮನಗರಂ ನಿಲ್ದಾಣಕ್ಕೆ 09.52ಕ್ಕೆ ಆಗಮಿಸಿ 09.53ಕ್ಕೆ, ಬಿಡದಿಗೆ 10.05ಕ್ಕೆ ಆಗಮಿಸಿ 10.06ಕ್ಕೆ ಮತ್ತು ಕೆಂಗೇರಿಗೆ 10.22ಕ್ಕೆ ಆಗಮಿಸಿ 10.23ಕ್ಕೆ ನಿರ್ಗಮಿಸಲಿದೆ. ಅಂತಿಮವಾಗಿ, ಈ ರೈಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ನಿಲ್ದಾಣವನ್ನು ಬೆಳಿಗ್ಗೆ 11.20ರ ಬದಲು 15 ನಿಮಿಷ ಮುಂಚಿತವಾಗಿ, ಅಂದರೆ 11.05ಕ್ಕೆ ತಲುಪಲಿದೆ.

ಇದಲ್ಲದೆ, ರೈಲು ಸಂಖ್ಯೆ 56210 ಮೈಸೂರು-ಚಾಮರಾಜನಗರ ಡೈಲಿ ಪ್ಯಾಸೆಂಜರ್ ರೈಲಿನ ವೇಳಾಪಟ್ಟಿಯಲ್ಲೂ ಬದಲಾವಣೆ ಮಾಡಲಾಗಿದೆ. ಈ ರೈಲು ಮೈಸೂರಿನಿಂದ ಬೆಳಿಗ್ಗೆ 08.20ರ ಬದಲು 15 ನಿಮಿಷ ಮುಂಚಿತವಾಗಿ, ಅಂದರೆ 08.05ಕ್ಕೆ ಹೊರಡಲಿದೆ. ಪರಿಷ್ಕೃತ ಸಮಯದ ಪ್ರಕಾರ, ಈ ರೈಲು ಚಾಮರಾಜಪುರಂ ನಿಲ್ದಾಣಕ್ಕೆ 08.11ಕ್ಕೆ ಆಗಮಿಸಿ 08.12ಕ್ಕೆ ನಿರ್ಗಮಿಸಲಿದೆ, ಅಶೋಕಪುರಂಗೆ 08.18ಕ್ಕೆ ಆಗಮಿಸಿ 08.34ಕ್ಕೆ ನಿರ್ಗಮಿಸಲಿದೆ, ಕಡಕೋಳಕ್ಕೆ 08.48ಕ್ಕೆ ಆಗಮಿಸಿ 08.49ಕ್ಕೆ, ತಾಂಡವಪುರ ಹಾಲ್ಟ್'ಗೆ 08.54ಕ್ಕೆ ಆಗಮಿಸಿ 08.55ಕ್ಕೆ, ಸುಜಾತಪುರಂ ಹಾಲ್ಟ್'ಗೆ 09.00ಕ್ಕೆ ಆಗಮಿಸಿ 09.01ಕ್ಕೆ, ನಂಜನಗೂಡು ಟೌನ್'ಗೆ 09.06ಕ್ಕೆ ಆಗಮಿಸಿ 09.08ಕ್ಕೆ, ಚಿನ್ನದಗುಡಿಹುಂಡಿ ಹಾಲ್ಟ್'ಗೆ 09.17ಕ್ಕೆ ಆಗಮಿಸಿ 09.18ಕ್ಕೆ, ನರಸಾಂಬುಧಿ ಹಾಲ್ಟ್'ಗೆ 09.21ಕ್ಕೆ ಆಗಮಿಸಿ 09.22ಕ್ಕೆ, ಕವಲಂದೆ ಹಾಲ್ಟ್'ಗೆ 09.28ಕ್ಕೆ ಆಗಮಿಸಿ 09.29ಕ್ಕೆ, ಕೋನನೂರು ಹಾಲ್ಟ್'ಗೆ 09.34ಕ್ಕೆ ಆಗಮಿಸಿ 09.35ಕ್ಕೆ, ಬದನಗುಪ್ಪೆ ಹಾಲ್ಟ್'ಗೆ 09.40ಕ್ಕೆ ಆಗಮಿಸಿ 09.41ಕ್ಕೆ ಮತ್ತು ಮರಿಯಾಳ್ ಗಂಗಾವಾಡಿ ಹಾಲ್ಟ್'ಗೆ 09.46ಕ್ಕೆ ಆಗಮಿಸಿ 09.47ಕ್ಕೆ ನಿರ್ಗಮಿಸಲಿದೆ. ಈ ರೈಲು ಚಾಮರಾಜನಗರವನ್ನು ಎಂದಿನಂತೆ ಬೆಳಿಗ್ಗೆ 10.10ಕ್ಕೆ ತಲುಪಲಿದೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.