ಜೀವನದಿ ಕಾವೇರಿ: ಚಾಮರಾಜನಗರದಲ್ಲಿ ಸಾಕ್ಷ್ಯಚಿತ್ರದ ಕನ್ನಡ ಆವೃತ್ತಿಯ ಮೊಟ್ಟ ಮೊದಲ ಪ್ರದರ್ಶನ
ಜೀವನದಿ ಕಾವೇರಿ ಕುರಿತು ಪ್ರಸ್ತುತಪಡಿಸಲಾಗಿರುವ ಸಾಕ್ಷ್ಯಚಿತ್ರದ ಕನ್ನಡ ಆವೃತ್ತಿಯ ಮೊಟ್ಟ ಮೊದಲ ಪ್ರದರ್ಶನವನ್ನು ಚಾಮರಾಜನಗರದಲ್ಲಿ ಆಯೋಜಿಸಲಾಗಿದೆ.

ಬೆಂಗಳೂರು: ಜೀವನದಿ ಕಾವೇರಿ ಹೆಸರಿನಲ್ಲಿ ಕಾವೇರಿ ನದಿ ಮತ್ತು ರಾಜ್ಯದ ಸುಂದರ ಪ್ರಕೃತಿ ತಾಣ, ಅರಣ್ಯ ಸಂಪತ್ತಿನ ಕುರಿತು ನಿರ್ಮಿಸಲಾದ ಸಾಕ್ಷ್ಯಚಿತ್ರದ ಕನ್ನಡ ಆವೃತ್ತಿಯ ಮೊಟ್ಟ ಮೊದಲ ಪ್ರದರ್ಶನವನ್ನು ಚಾಮರಾಜನಗರದಲ್ಲಿ 5 ನೇ ಮೇ, 2025ರ ಸೋಮವಾರದಂದು ಆಯೋಜಿಸಲಾಗಿದೆ. ಈ ಸಾಕ್ಷ್ಯಚಿತ್ರದ ಕಾರ್ಯನಿರ್ವಾಹಕ ನಿರ್ಮಾಪಕರಾದ ಸಂಜಯ್ ಗುಬ್ಬಿಯವರು ಸಾಕ್ಷ್ಯ ಚಿತ್ರದ ಟ್ರೇಲರ್ ಅನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದು, ಎಲ್ಲರಿಗೂ ಆತ್ಮೀಯ ಆಹ್ವಾನ ನೀಡಿದ್ದಾರೆ.
ಕರ್ನಾಟಕ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ, ಇವನಾಸೆನ್ಸ್ ಸ್ಟುಡಿಯೋಸ್ ಮತ್ತು ಹೊಳೆಮತ್ತಿ ನೇಚರ್ ಫೌಂಡೇಶನ್ ಇವರು ಜೀವನದಿ ಕಾವೇರಿ ಎಂಬ ಸಾಕ್ಷ್ಯಚಿತ್ರವನ್ನು ಹೊರತಂದಿದ್ದು ದಿನಾಂಕ 05 ನೇ ಮೇ, 2025 ಸೋಮವಾರದಂದು ಚಾಮರಾಜನಗರದ ಸಿಂಹ ಥಿಯೇಟರ್ನಲ್ಲಿ ಪ್ರಥಮ ಪ್ರದರ್ಶನಗೊಳ್ಳುತ್ತಿದೆ. ಈ ಸುಂದರ ಸಾಕ್ಷ್ಯಚಿತ್ರದ ಪ್ರಥಮ ಪ್ರದರ್ಶನಕ್ಕೆ ತಮ್ಮನ್ನು ಸಹೃದಯದಿಂದ ಆಹ್ವಾನಿಸುತ್ತೇವೆ ಎಂದು ಸಂಜಯ್ ಗುಬ್ಬಿ ತಿಳಿಸಿದ್ದಾರೆ.
ಜೀವನದಿ ಕಾವೇರಿ ಕನ್ನಡ ಆವೃತ್ತಿಯ ಮೊಟ್ಟ ಮೊದಲ ಪ್ರದರ್ಶನ ನಡೆಯುವ ತಾಣದ ವಿಳಾಸ ಇಂತಿದೆ.
ಸಿಂಹ ಮೂವಿ ಪ್ಯಾರಡೈಸ್,
ನಂಜನಗೂಡು ರಸ್ತೆ,
ಚಾಮರಾಜನಗರ – 571313
ಜೀವನದಿ ಕಾವೇರಿ ಸಾಕ್ಷ್ಯಚಿತ್ರದ ಟ್ರೇಲರ್ ಇಲ್ಲಿದೆ
ಸಾಕ್ಷ್ಯಚಿತ್ರದ ಟ್ರೇಲರ್ ಈಗಾಗಲೇ ಪರಿಸರ ಪ್ರಿಯರ ಗಮನ ಸೆಳೆದಿದ್ದು, ರಾಜ್ಯದ ಶ್ರೀಮಂತ ಅರಣ್ಯ ಮತ್ತು ವನ್ಯಜೀವಿ ಸಂಪತ್ತಿನ ಕುರಿತು ಬೆಳಕು ಚೆಲ್ಲಲಿದೆ.
ಸಂಜಯ್ ಗುಬ್ಬಿಯವರ ಫೇಸ್ಬುಕ್ ಪೋಸ್ಟ್ ಲಿಂಕ್
ಕರ್ನಾಟಕ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ, ಇವನಾಸೆನ್ಸ್ ಸ್ಟುಡಿಯೋಸ್ ಮತ್ತು ಹೊಳೆಮತ್ತಿ ನೇಚರ್ ಫೌಂಡೇಶನ್ ಹೊರತಂದಿರುವ ಜೀವನದಿ ಕಾವೇರಿ ಸಾಕ್ಷ್ಯಚಿತ್ರದಲ್ಲಿ ಸುಂದರ ಅರಣ್ಯ ಪರಿಸರ, ಹಿನ್ನೆಲೆ ಧ್ವನಿ ವಿವರಣೆ ಮತ್ತು ಸಂಗೀತ ಜನರ ಮನಸ್ಸನ್ನು ಸೂರೆಗೊಳ್ಳಲಿದೆ.