Honeytrap Issue: ಮಧುಬಲೆ ಪ್ರಕರಣ: ಇದು ಅಪರಿಚಿತರ ಕೃತ್ಯ, ಇಂದೇ ಗೃಹಸಚಿವರಿಗೆ ದೂರು ಸಲ್ಲಿಸ್ತೀನಿ ಎಂದ ಕೆಎನ್ ರಾಜಣ್ಣ
ಕನ್ನಡ ಸುದ್ದಿ  /  ಕರ್ನಾಟಕ  /  Honeytrap Issue: ಮಧುಬಲೆ ಪ್ರಕರಣ: ಇದು ಅಪರಿಚಿತರ ಕೃತ್ಯ, ಇಂದೇ ಗೃಹಸಚಿವರಿಗೆ ದೂರು ಸಲ್ಲಿಸ್ತೀನಿ ಎಂದ ಕೆಎನ್ ರಾಜಣ್ಣ

Honeytrap Issue: ಮಧುಬಲೆ ಪ್ರಕರಣ: ಇದು ಅಪರಿಚಿತರ ಕೃತ್ಯ, ಇಂದೇ ಗೃಹಸಚಿವರಿಗೆ ದೂರು ಸಲ್ಲಿಸ್ತೀನಿ ಎಂದ ಕೆಎನ್ ರಾಜಣ್ಣ

Honeytrap Issue: ಕರ್ನಾಟಕದಲ್ಲಿ ಸದ್ಯ ಸದ್ದು ಮಾಡುತ್ತಿರುವ ಮಧುಬಲೆ (ಹನಿಟ್ರ್ಯಾಪ್‌) ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಕೆಎಸ್‌ ರಾಜಣ್ಣ, ಇದು ಅಪರಿಚಿತರ ಕೃತ್ಯ, ಈ ಬಗ್ಗೆ ಇಂದು (ಮಾರ್ಚ್ 24) ಗೃಹಸಚಿವರಿಗೆ ದೂರ ಸಲ್ಲಿಸ್ತೀನಿ ಎಂದು ಹೇಳಿದ್ದಾರೆ.

ಮಧುಬಲೆ ಪ್ರಕರಣ: ಇದು ಅಪರಿಚಿತರ ಕೃತ್ಯ, ಗೃಹಸಚಿವರಿಗೆ ಇಂದು ದೂರು ಸಲ್ಲಿಸ್ತೀನಿ ಎಂದ ಕೆಎನ್ ರಾಜಣ್ಣ
ಮಧುಬಲೆ ಪ್ರಕರಣ: ಇದು ಅಪರಿಚಿತರ ಕೃತ್ಯ, ಗೃಹಸಚಿವರಿಗೆ ಇಂದು ದೂರು ಸಲ್ಲಿಸ್ತೀನಿ ಎಂದ ಕೆಎನ್ ರಾಜಣ್ಣ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿರುವ ಮಧುಬಲೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಕೆಎನ್ ರಾಜಣ್ಣ ಇಂದು ಪ್ರತಿಕ್ರಿಯೆ ನೀಡಿದ್ದಾರೆ. ‘ಇದು ಅಪರಿಚಿತರ ಕೃತ್ಯ, ಈ ಬಗ್ಗೆ ನನ್ನ ಬಳಿ ಯಾವುದೇ ದಾಖಲೆಗಳಿಲ್ಲ‘ ಎಂದು ಹೇಳಿದ್ದಾರೆ. ಮಾತ್ರವಲ್ಲ ‘ಇಂದು ಗೃಹಸಚಿವರಿಗೆ ದೂರು ನೀಡುತ್ತೇನೆ‘ ಎಂದು ಸಹ ಹೇಳಿದ್ದಾರೆ.

ಸಹಕಾರಿ ಸಚಿವರಾಗಿರುವ ರಾಜಣ್ಣ ‘ಇವತ್ತು ಮಧುಬಲೆ ಪ್ರಕರಣಕ್ಕೆ ಸಂಬಂಧಿಸಿ ದೂರು ದಾಖಲಿಸುತ್ತೇನೆ. ಗೃಹ ಸಚಿವರಿಗೆ ದೂರು ಕೊಡ್ತೀನಿ. ಇಷ್ಟು ದಿನಗಳ ಕಾಲ ನಿರಂತರ ಕಾರ್ಯಕ್ರಮಗಳಿದ್ದ ಕಾರಣ ದೂರು ಕೊಡಲು ಆಗಿರಲಿಲ್ಲ. ನಾನೇ ಇವತ್ತು ಕುಳಿತು ದೂರು ರೆಡಿ ಮಾಡಿದ್ದೇನೆ. ಪರಮೇಶ್ವರ್ ಅವರನ್ನು ಹುಡುಕಿಕೊಂಡು ಹೋಗಿ ದೂರು ಕೊಡ್ತೀನಿ. ಆದರೆ ಈ ಪ್ರಕರಣ ಸಂಬಂಧ ನನ್ನ ಬಳಿ ಯಾವುದೇ ದಾಖಲೆಯಿಲ್ಲ. ಆದರೆ ಒಟ್ಟು ಮೂರು ಪುಟಗಳ ದೂರು ಬರೆದಿದ್ದೇನೆ. ಅದನ್ನು ಪರಮೇಶ್ವರ್ ಅವರಿಗೆ ಕೊಡ್ತೀನಿ ಎಂದು ಹೇಳಿದ್ದಾರೆ.

ಮನೆಯಲ್ಲಿ ಸಿಸಿಟಿವಿ ಇಲ್ಲ!

ನಮ್ಮ ಬೆಂಗಳೂರು ಮನೆಯಲ್ಲಿ ಸಿಸಿಟಿವಿ ಇರಲಿಲ್ಲ. ಹಾಗಾಗಿ ಸಿಸಿಟಿವಿ ವಿಡಿಯೊಗಳಿಲ್ಲ. ಯಾರು ಬಂದು ಹೋಗಿರ್ತಾರೆ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದೇನೆ. ದೂರಿನಲ್ಲಿ ಅಪರಿಚಿತರು ಅಂತ ದಾಖಲಿಸಿದ್ದೇನೆ. ನನಗೆ ಅವರು ಯಾರು ಎಂಬುದು ತಿಳಿದಿಲ್ಲ. ಎರಡು ಸಲ ಒಬ್ಬನೇ ಹುಡುಗ ಇದ್ದ. ಆದರೆ ಬೇರೆ ಹುಡುಗಿಯರಿದ್ದರು. ಅವರು ಹೈಕೋರ್ಟ್ ಲಾಯರ್ ಅಂತ ಪರಿಚಯ ಹೇಳಿಕೊಂಡು ಮನೆಗೆ ಬಂದಿದ್ರು. ಪೋಟೊ ನೋಡಿದರೆ ನಾನು ಅವರ ಗುರುತು ಹಿಡಿಯತ್ತೇನೆ ಎಂದು ರಾಜಣ್ಣ ಹೇಳಿದ್ದಾರೆ.

ನ್ಯಾಯದೀಶರ ಮೇಲೆ ಹನಿಟ್ರ್ಯಾಪ್ ಆಗಿದೆ ಎಂದು ನಾನು ಹೇಳಿಲ್ಲ. ಪಕ್ಷದ ಎಲ್ಲಾ ರಾಜಕಾರಣಿಗಳ ಮೇಲೆ ಕಳಂಕ ತರಲು ಈ ರೀತಿ ಮಾಡಿದ್ದಾರೆ ಎಂದು ನಾನು ಹೇಳಿದ್ದೇನೆ ಎಂದು ರಾಜಣ್ಣ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಈ ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಾದ ನಂತರ ತನಿಖೆ ನಡೆಯಲಿದೆ ಎಂದಿದ್ದಾರೆ.

ಮಧುಬಲೆ ಪ್ರಕರಣದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಮಾಹಿತಿ ಕಲೆ ಹಾಕಿದೆ. ಮುಖ್ಯಮಂತ್ರಿಗಳ ಜೊತೆಗೂ ಹೈಕಮಾಂಡ್ ಚರ್ಚೆ ನಡೆಸಿದೆ. ಮಾರ್ಚ್ 30ರ ನಂತರ ನಾನೇ ಖುದ್ದಾಗಿ ಹೈಕಮಾಂಡ್ ಭೇಟಿ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.