ಎಸ್‌ಎಸ್‌ಎಲ್‌ಸಿ ಟಾಪರ್‌ ಸಂದರ್ಶನ: ಶಿವಮೊಗ್ಗದ ಪ್ರಿಯಾದರ್ಶಿನಿ ಹೈಸ್ಕೂಲ್‌ ವಿದ್ಯಾರ್ಥಿನಿ ನಮನಾ ಯಶಸ್ಸಿನ ಗುಟ್ಟೇನು?
ಕನ್ನಡ ಸುದ್ದಿ  /  ಕರ್ನಾಟಕ  /  ಎಸ್‌ಎಸ್‌ಎಲ್‌ಸಿ ಟಾಪರ್‌ ಸಂದರ್ಶನ: ಶಿವಮೊಗ್ಗದ ಪ್ರಿಯಾದರ್ಶಿನಿ ಹೈಸ್ಕೂಲ್‌ ವಿದ್ಯಾರ್ಥಿನಿ ನಮನಾ ಯಶಸ್ಸಿನ ಗುಟ್ಟೇನು?

ಎಸ್‌ಎಸ್‌ಎಲ್‌ಸಿ ಟಾಪರ್‌ ಸಂದರ್ಶನ: ಶಿವಮೊಗ್ಗದ ಪ್ರಿಯಾದರ್ಶಿನಿ ಹೈಸ್ಕೂಲ್‌ ವಿದ್ಯಾರ್ಥಿನಿ ನಮನಾ ಯಶಸ್ಸಿನ ಗುಟ್ಟೇನು?

ಎಸ್‌ಎಸ್‌ಎಲ್‌ಸಿ ಟಾಪರ್‌ ಸಂದರ್ಶನ: ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ರಾಜ್ಯಕ್ಕೆ ಟಾಪರ್‌ ಆಗಿ ಹೊರಹೊಮ್ಮಿದ ಶಿವಮೊಗ್ಗದ ಪ್ರಿಯಾದರ್ಶಿನಿ ಹೈಸ್ಕೂಲ್‌ ವಿದ್ಯಾರ್ಥಿನಿ ನಮನಾ ಕೆ. ತನ್ನ ಯಶಸ್ಸಿನ ಗುಟ್ಟನ್ನು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

 ಕರ್ನಾಟಕ ಎಸ್‌ಎಸ್‌ಎಲ್‌ಸಿ ಟಾಪರ್‌ ನಮನಾ ಕೆ. ಮತ್ತು ತಂದೆ ಕೃಷ್ಣಮೂರ್ತಿ ಎಚ್‌, ತಾಯಿ ಪದ್ಮಿನಿ ಸಿ ಮತ್ತು ಸಹೋದರ ಗೌತಮ್‌.
ಕರ್ನಾಟಕ ಎಸ್‌ಎಸ್‌ಎಲ್‌ಸಿ ಟಾಪರ್‌ ನಮನಾ ಕೆ. ಮತ್ತು ತಂದೆ ಕೃಷ್ಣಮೂರ್ತಿ ಎಚ್‌, ತಾಯಿ ಪದ್ಮಿನಿ ಸಿ ಮತ್ತು ಸಹೋದರ ಗೌತಮ್‌.

ಎಸ್‌ಎಸ್‌ಎಲ್‌ಸಿ ಟಾಪರ್‌ ಸಂದರ್ಶನ: ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ರಾಜ್ಯಕ್ಕೆ ಟಾಪರ್‌ ಆಗಿ ಶಿವಮೊಗ್ಗದ ಪ್ರಿಯಾದರ್ಶಿನಿ ಹೈಸ್ಕೂಲ್‌ ವಿದ್ಯಾರ್ಥಿನಿ ನಮನಾ ಕೆ. ಹೊರಹೊಮ್ಮಿದ್ದಾರೆ. ಈಕೆಯ ಯಶಸ್ಸಿನ ಹಿಂದೆ ಟೀಚರ್‌ಗಳು ಮಾತ್ರವಲ್ಲದೆ ಅಪ್ಪ ಉಪತಹಶಿಲ್ದಾರ್‌ ಕೃಷ್ಣಮೂರ್ತಿ ಎಚ್‌, ತಾಯಿ ಪದ್ಮಿನಿ ಸಿ. ಮಾತ್ರವಲ್ಲದೆ ಸಹೋದರನ ಬೆಂಬಲವೂ ಇದೆ.

ಎಸ್‌ಎಸ್‌ಎಲ್‌ಸಿ ಟಾಪರ್‌ ನಮನಾ ಕೆ ಸಂದರ್ಶನ

"ಕಷ್ಟವೆನಿಸುವ ವಿಷಯಗಳನ್ನು ಶಾಲಾ ಆರಂಭದ ದಿನಗಳಿಂದಲೇ ಹೆಚ್ಚು ಓದುತ್ತಿದ್ದೆ. ಬೆಳಗ್ಗೆ ಮತ್ತು ರಾತ್ರಿಯೂ ಇಂತಹ ವಿಷಯಗಳ ಕಡೆಗೆ ಹೆಚ್ಚು ಗಮನ ನೀಡುತ್ತ ಇದ್ದೆ. ಶಾಲೆಯಲ್ಲಿಯೂ ನನಗೆ ಕಷ್ಟವೆನಿಸುವ ವಿಷಯಗಳ ಕುರಿತು ಟೀಚರ್ಸ್‌ ಬಳಿ ಕೇಳಿ ಡೌಟ್‌ ಬಗೆಹರಿಸಿಕೊಳ್ಳುತ್ತಿದ್ದೆ" ಎಂದು ನಮನಾ ಹೇಳಿದ್ದಾರೆ.

ನಿರಂತರ ಓದು

"ಶಾಲೆಯ ಆರಂಭದ ದಿನಗಳಿಂದಲೂ ಬೆಳಗ್ಗೆ 4.30 ಗಂಟೆಗೆ ಎದ್ದು ಓದುವ ಅಭ್ಯಾಸ ಬೆಳೆಸಿಕೊಂಡಿದ್ದೆ. ಬೆಳಗ್ಗೆ 7.30ರ ತನಕ ಓದುತ್ತಿದ್ದೆ. ಸಂಜೆ 6.30ರಿಂದ 9 ತನಕ ಓದುತ್ತಿದ್ದೆ. ಆಮೇಲೆ ಊಟ ಮಾಡಿ, ಹತ್ತು ಗಂಟೆಯಿಂದ 12.30 ಗಂಟೆಯ ತನಕ ಓದುತ್ತಿದ್ದೆ. ಹೀಗೆ ಟೈಂಟೇಬಲ್‌ ಮಾಡಿಕೊಡು ಶ್ರದ್ಧೆಯಿಂದ ಓದುತ್ತಿದ್ದೆ. ನನಗೆ ಮ್ಯಾಥ್ಸ್‌ ಮತ್ತು ಸೈನ್ಸ್‌ ಇಷ್ಟದ ಸಬ್ಜೆಕ್ಟ್‌. ಆರಂಭದಲ್ಲಿ ಸೈನ್ಸ್‌ ಕಷ್ಟ ಅನಿಸುತ್ತಿತ್ತು. ಆಮೇಲೆ ಆಮೇಲೆ... ಸುಲಭ ಆಯ್ತು" ಎಂದು ನಮನಾ ಹೇಳಿದ್ದಾರೆ.

ಮನೆಯಲ್ಲಿ ಅಪ್ಪ ಮತ್ತು ಅಮ್ಮ ಓದಲು ಸಹಾಯ ಮಾಡುತ್ತಿದ್ದರು. ಅಣ್ಣ ಗೌತಮ್‌ ನನಗೆ ಹೆಚ್ಚು ನೆರವು ನೀಡುತ್ತಿದ್ದ. ಅವನು ಎಂಜಿನಿಯರಿಂಗ್‌ ಓದುತ್ತಿದ್ದಾನೆ. ಸ್ಕೂಲ್‌ನಲ್ಲಿ ಟೀಚರ್ಸ್‌ ಚೆನ್ನಾಗಿ ಕಲಿಸ್ತಾ ಇದ್ರು. ಸ್ಪೆಷಲ್‌ ಕ್ಲಾಸ್‌ ತೆಗೆದುಕೊಳ್ಳುತ್ತಿದ್ದರು. ನಾನು ಪ್ರತಿದಿನ ನ್ಯೂಟ್ರಿಷಿಯನ್‌ ಇರುವ ಫುಡ್‌ ತಿನ್ನಲು ಆದ್ಯತೆ ನೀಡುತ್ತಿದ್ದೆ. ಜಂಕ್‌ ಫುಡ್‌ ತಿನ್ನುತ್ತಿರಲಿಲ್ಲ. ಮನೆಯಲ್ಲಿ ಮಾಡುವ ಆಹಾರಗಳನ್ನು ತಿನ್ನುತ್ತಿದ್ದೆ" ಏಂದು ನಮನಾ ಹೇಳಿದ್ದಾರೆ.

10+ ಬಾರಿ ಪ್ರಿಪರೇಟರಿ ಬರೆದಿದ್ದೇನೆ

ತುಂಬಾ ಸಲ ರಿವಿಷನ್‌ ಮಾಡಿದೆ. ಓದಿದ್ದನ್ನೇ ಓದುತ್ತಿದ್ದೆ. ಸುಮಾರು ಐದು ವರ್ಷಗಳ ಪ್ರಶ್ನೆಗಳನ್ನು ಸ್ಟಡಿ ಮಾಡಿದ್ದೇನೆ. ಸ್ಕೂಲ್‌ನವರು ಕೊಶ್ಚನ್‌ ಪೇಪರ್‌ ಕೊಡುತ್ತಿದ್ದರು. ಪ್ರಿಪರೇಟರಿ ಸುಮಾರು ಹತ್ತರಿಂದ ಹನ್ನೊಂದು ಬಾರಿ ಬರೆದಿದ್ದೇನೆ. ಯಾವುದೇ ಟೆನ್ಷನ್‌ ಇಲ್ಲದೆ ಓದುತ್ತಿದ್ದೆ. ರಜಾ ದಿನಗಳಲ್ಲಿ ಮಾತ್ರ ಆಸಕ್ತಿಯ ಚಟುವಟಿಕೆಗಳಿಗೆ ಗಮನ ನೀಡುತ್ತಿದ್ದೆ.

ಡಾಕ್ಟರ್‌ ಆಗುವ ಕನಸು

ಭವಿಷ್ಯದಲ್ಲಿ ಡಾಕ್ಟರ್‌ ಆಗಬೇಕೆಂದಿದ್ದೇನೆ. ಸರ್ಜನ್‌ ಆಗಬೇಕೆಂದುಕೊಂಡಿದ್ದೇನೆ. ಅದಕ್ಕೆ ಸಂಬಂಧಪಟ್ಟಂತೆ ಮುಂದಿನ ವಿದ್ಯಾಭ್ಯಾಸ ಕೈಗೊಳ್ಳುವೆ. ಮುಂದೆಯೂ ಇದೇ ರೀತಿ ಸತತ ಪರಿಶ್ರಮದಿಂದ ಓದುವುದನ್ನು ಮುಂದುವರೆಸುವೆ.

ಯಶಸ್ಸು ಪಡೆಯಲು ಬಯಸುವವರಿಗೆ ಟಿಪ್ಸ್‌: "ಮೊದಲ ದಿನದಿಂದಲೂ ಚೆನ್ನಾಗಿ ಓದುತ್ತಾ ಬರಬೇಕು. ಕೊನೆಗೆ ಪರೀಕ್ಷೆ ಹತ್ತಿರವಿದ್ದಾಗ ಓದಿದ್ರಾಯ್ತು ಎಂದುಕೊಳ್ಳಬಾರದು. ಟೈಂಟೇಬಲ್‌ ಮಾಡಿಕೊಂಡು ಓದಬೇಕು.

ತಂತ್ರಜ್ಞಾನದ ಬಳಕೆ: ನನಗೆ ಆರಂಭದಲ್ಲಿ ಕಷ್ಟವಾಗುವ ವಿಷಯಗಳನ್ನು ಗೂಗಲ್‌ ಅಥವಾ ಯೂಟ್ಯೂಬ್‌ನಲ್ಲಿ ನೋಡುತ್ತಿದ್ದೆ. ರೀಲ್ಸ್‌ ಇತ್ಯಾದಿಗಳನ್ನು ನೋಡುವುದನ್ನು ಅವಾಯ್ಡ್‌ ಮಾಡುತ್ತಿದ್ದೆ.

ತಾಯಿ ಪದ್ಮಿನಿ ಮಾತು

ಮಗಳ ಸಾಧನೆ ಕುರಿತು ನಮನಾ ಅವರ ತಾಯಿ ಪದ್ಮಿನಿ ಸಿ. ಖುಷಿ ವ್ಯಕ್ತಪಡಿಸಿದ್ದಾರೆ. "ನಮಗೆ ಅವಳು ಫಸ್ಟ್‌ ಬರ್ತಾಳೆ ಎನ್ನುವ ನಿರೀಕ್ಷೆ ಇತ್ತು. ಏಕೆಂದರೆ, ಪರೀಕ್ಷೆ ತುಂಬಾ ಚೆನ್ನಾಗಿ ಮಾಡಿದ್ದೇನೆ ಎಂದು ಹೇಳಿದ್ದಳು. ನಾವು ಅವಳಿಗೆ ಯಾವುದೇ ಒತ್ತಡ ಹಾಕಿಲ್ಲ. ಅವಳೇ ಪರಿಶ್ರಮಪಟ್ಟು ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದಾಳೆ. ಮುಂದೇ ಇದೇ ಕರಿಯರ್‌ ಆಯ್ಕೆ ಮಾಡಿಕೊಳ್ಳು ಎಂದು ನಾವು ಬಲವಂತ ಮಾಡಿಲ್ಲ. ಅವಳು ಡಾಕ್ಟರ್‌ ಆಗ್ತೀನಿ ಅನ್ತಿದ್ದಾಳೆ. ಅದಕ್ಕೆ ಸಪೋರ್ಟ್‌ ಮಾಡ್ತಿವಿ" ಎಂದು ತಾಯಿ ಪದ್ಮಿನಿ ಹೇಳಿದ್ದಾರೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in