ಕರ್ನಾಟಕ ಹವಾಮಾನ ಏ 26: ಯಾವುದಕ್ಕೂ ಕೈಯಲ್ಲೊಂದು ಛತ್ರಿ ಇರಲಿ, ಬಿಸಿಲಿಗಾದರೂ ಆಗುತ್ತೆ, ಮಳೆ ಬಂದರೂ ಕೈಹಿಡಿಯುತ್ತೆ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಹವಾಮಾನ ಏ 26: ಯಾವುದಕ್ಕೂ ಕೈಯಲ್ಲೊಂದು ಛತ್ರಿ ಇರಲಿ, ಬಿಸಿಲಿಗಾದರೂ ಆಗುತ್ತೆ, ಮಳೆ ಬಂದರೂ ಕೈಹಿಡಿಯುತ್ತೆ

ಕರ್ನಾಟಕ ಹವಾಮಾನ ಏ 26: ಯಾವುದಕ್ಕೂ ಕೈಯಲ್ಲೊಂದು ಛತ್ರಿ ಇರಲಿ, ಬಿಸಿಲಿಗಾದರೂ ಆಗುತ್ತೆ, ಮಳೆ ಬಂದರೂ ಕೈಹಿಡಿಯುತ್ತೆ

ಕರ್ನಾಟಕ ಹವಾಮಾನ: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದು ಹಗುರದಿಂದ ಸಾಧಾರಣ ಮಳೆಯಾಗಬಹುದು. ಏನಿದ್ದರೂ ಬಿಸಿಲು-ಮಳೆಯಾಟ ನಿರೀಕ್ಷಿಸಬಹುದು. ಯಾವುದಕ್ಕೂ ಕೈಯಲ್ಲೊಂದು ಛತ್ರಿ ಇರಲಿ, ಬಿಸಿಲಿಗಾದರೂ ಆಗುತ್ತೆ, ಮಳೆ ಬಂದರೂ ಕೈಹಿಡಿಯುತ್ತೆ. ಇಂದಿನ ಹವಾಮಾನ ವಿವರ ಇಲ್ಲಿದೆ.

ಕರ್ನಾಟಕ ಹವಾಮಾನ ಏ 26: ಬಿಸಲು- ಮಳೆಯಾಟ ಇರುವ ಕಾರಣ ಯಾವುದಕ್ಕೂ ಕೈಯಲ್ಲೊಂದು ಛತ್ರಿ ಇರಲಿ, ಬಿಸಿಲಿಗಾದರೂ ಆಗುತ್ತೆ, ಮಳೆ ಬಂದರೂ ಕೈಹಿಡಿಯುತ್ತೆ, ಮರೆಯಬೇಡಿ ಮತ್ತೆ. (ಸಾಂಕೇತಿಕ ಚಿತ್ರ)
ಕರ್ನಾಟಕ ಹವಾಮಾನ ಏ 26: ಬಿಸಲು- ಮಳೆಯಾಟ ಇರುವ ಕಾರಣ ಯಾವುದಕ್ಕೂ ಕೈಯಲ್ಲೊಂದು ಛತ್ರಿ ಇರಲಿ, ಬಿಸಿಲಿಗಾದರೂ ಆಗುತ್ತೆ, ಮಳೆ ಬಂದರೂ ಕೈಹಿಡಿಯುತ್ತೆ, ಮರೆಯಬೇಡಿ ಮತ್ತೆ. (ಸಾಂಕೇತಿಕ ಚಿತ್ರ)

ಇಂದಿನ ಹವಾಮಾನ: ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಅಲ್ಲಲ್ಲಿ ಇಂದು (ಏಪ್ರಿಲ್ 26) ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಕಡೆ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆಯಾಗಬಹುದು. ಬಹುತೇಕ ಮೇ 2 ರ ತನಕವೂ ಬಿಸಲು- ಮಳೆಯಾಟ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ನೀಡಿರುವ ಹವಾಮಾನ ಮುನ್ಸೂಚನೆ ವರದಿ ಹೇಳಿದೆ. ಯಾವುದಕ್ಕೂ ಕೈಯಲ್ಲೊಂದು ಛತ್ರಿ ಇರಲಿ, ಬಿಸಿಲಿಗಾದರೂ ಆಗುತ್ತೆ, ಮಳೆ ಬಂದರೂ ಕೈಹಿಡಿಯುತ್ತೆ.

ಬೆಂಗಳೂರು ಹವಾಮಾನ ಏ 26; ಭಾಗಶಃ ಮೋಡ ಕವಿದ ವಾತಾವರಣ; 35 ಡಿಗ್ರಿ ತಾಪಮಾನ

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಇಂದು (ಏಪ್ರಿಲ್ 26) ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಹಾಗೆಂದು ತಾಪಮಾನ ಏನೂ ಕಡಿಮೆ ಇರಲ್ಲ. ಬೇಸಿಗೆ ಆದ ಕಾರಣ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಶಿಯಸ್ ಹಾಗೂ ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಶಿಯಸ್ ಇರಬಹುದು. ನಿನ್ನೆ ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನ 35.4 ಡಿಗ್ರಿ ಸೆಲ್ಶಿಯಸ್, ಕನಿಷ್ಠ ತಾಪಮಾನ 24.4 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು. ಇದೇ ರೀತಿ ಬೆಂಗಳೂರು ಗ್ರಾಮಾಂತರದಲ್ಲಿ 35.5 ಡಿಗ್ರಿ ಸೆಲ್ಶಿಯಸ್ ಗರಿಷ್ಠ ತಾಪಮಾನ ಹಾಗೂ 23.3 ಡಿಗ್ರಿ ಸೆಲ್ಶಿಯಸ್ ಕನಿಷ್ಠ ತಾಪಮಾನ ದಾಖಲಾಗಿತ್ತು. ಮುಂಜಾನೆ ಮಂಜುಕವಿದ ವಾತಾವರಣವಿತ್ತು ಎಂದು ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ವಿಜ್ಞಾನಿ ಡಾ ರಾಜವೇಲ್ ಮಣಿಕ್ಕಮ್ ತಿಳಿಸಿದ್ದಾರೆ.

ಕರ್ನಾಟಕದ ಹವಾಮಾನ: ಬಿಸಿಲು-ಮಳೆಯಾಟ, ಕರಾವಳಿ, ಉತ್ತರ ಒಳನಾಡಲ್ಲಿ ಅಲ್ಲಲ್ಲಿ ಮಳೆ

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇಂದು ಬಿಸಿಲು-ಮಳೆಯಾಟದ ಸಾಧ್ಯತೆ. ಕರಾವಳಿ ಜಿಲ್ಲೆಗಳು, ಕರ್ನಾಟಕದ ಉತ್ತರ ಒಳನಾಡು ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಇಂದು ಅಲ್ಲಲ್ಲಿ ಮಳೆಯಾಗಬಹುದು ಎಂದು ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ಹವಾಮಾನ ಮುನ್ಸೂಚನೆ ವರದಿ ಹೇಳಿದೆ.

ಕರಾವಳಿ ಕರ್ನಾಟಕ ಇಂದಿನ ಹವಾಮಾನ: ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ತನಕ ಅಂದರೆ ಮೇ 2 ತನಕ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು ಕೂಡ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು. ಕೆಲವು ಕಡೆಗೆ ಗುಡುಗು, ಸಿಡಿಲು ಸಹಿತ ಮಳೆಯಾಗಬಹುದು. ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ತಾಪಮಾನ ಸ್ವಲ್ಪ ಏರಿಕೆಯಾಗಲಿದ್ದು, ತೇವಾಂಶದ ಸಮಸ್ಯೆಯೂ ಕಾಡಬಹುದು.

ಕರ್ನಾಟಕದ ಉತ್ತರ ಒಳನಾಡು ಇಂದಿನ ಹವಾಮಾನ: ಬಹುತೇಕ ಪ್ರದೇಶಳಲ್ಲಿ ಇನ್ನೆರಡು ದಿನ ಗರಿಷ್ಠ ತಾಪಮಾನದಲ್ಲಿ 2 ರಿಂದ 3 ಡಿಗ್ರಿ ಸೆಲ್ಶಿಯಸ್ ಏರಿಕೆಯಾಗಬಹುದು. ಆದಾಗ್ಯೂ ಅಲ್ಲಲ್ಲಿ ಇಂದಿನಿಂದ ಏಪ್ರಿಲ್ 29ರ ತನಕ ಗುಡುಗು ಸಿಡಿಲು, ಬಿರುಗಾಳಿ (ಗಂಟೆಗೆ 40 ರಿಂದ 50 ಕಿಮೀ ವೇಗ) ಯೊಂದಿಗೆ ಮಳೆಯಾಗಬಹುದು. ಕೆಲವು ಕಡೆ ಆಲಿಕಲ್ಲು ಮಳೆಯಾಗುವ ಸಾಧ್ಯತೆಯೂ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡು ಇಂದಿನ ಹವಾಮಾನ: ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ ಕಡಿಮೆ. ಆದಾಗ್ಯೂ ಕೆಲವು ಕಡೆ ಹಗುರ ಮಳೆಯಾಗಬಹುದು. ಮೋಡ ಕವಿದ ವಾತಾವರಣ ಇರಬಹುದು. ಉಳಿದೆಡೆ ಗುಡುಗು, ಸಿಡಿಲು, ಬಿರುಗಾಳಿ (ಗಂಟೆಗೆ 30-40 ಕಿಮೀ ವೇಗ)ಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗಬಹುದು. ಏಪ್ರಿಲ್ 29ರ ತನಕವೂ ಬಿಸಿಲು-ಮಳೆಯಾಟವನ್ನು ನಿರೀಕ್ಷಿಸಬಹುದು ಎಂದು ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ಪ್ರಕಟಿಸಿರುವ ಹವಾಮಾನ ಮುನ್ಸೂಚನೆ ವರದಿ ಹೇಳಿದೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.