ಇಂದೂ ರಾಜ್ಯದಲ್ಲಿ ಮಳೆರಾಯನ ಆರ್ಭಟ; ದಕ್ಷಿಣ ಕನ್ನಡದಲ್ಲಿ ಯೆಲ್ಲೋ ಅಲರ್ಟ್, ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ
ಮಂಗಳವಾರ ದ.ಕನ್ನಡ, ಉ. ಕನ್ನಡ, ಉಡುಪಿಯಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು ಭಾರೀ ಮಳೆ ಆಗಿದೆ. ಇಂದು ಕೂಡಾ ವರುಣನ ಆರ್ಭಟ ಮುಂದುವರೆಯಲಿದ್ದು ದಕ್ಷಿಣ ಕನ್ನಡದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ.

ಕರ್ನಾಟಕ ಹವಾಮಾನ ಜುಲೈ 10: ಇಂದು ಬೆಳಗ್ಗೆ 05:50ಕ್ಕೆ ಸೂರ್ಯೋದಯವಾಗಿದ್ದು ಸಂಜೆ 6:50ಕ್ಕೆ ಸೂರ್ಯಾಸ್ತವಾಗಲಿದೆ. 09:35 ಕ್ಕೆ ಚಂದ್ರೋಯವಾಗಲಿದೆ. ಹವಾಮಾನ ಇಲಾಖೆ ವರದಿಯ ಪ್ರಕಾರ ಇಂದು ಸಿಲಿಕಾನ್ ಸಿಟಿ ಬೆಂಗಳೂರಿನ ವಾತಾವರಣ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ನಿನ್ನೆ ಕರ್ನಾಟಕದ ಯಾವ ಸ್ಥಳಗಳಲ್ಲಿ ಮಳೆ ಆಯ್ತು? ಇಂದು ಎಲ್ಲೆಲ್ಲಿ ಮಳೆ ಆಗಲಿದೆ? ಹವಾಮಾನ ಇಲಾಖೆ ಎಲ್ಲೆಲ್ಲಿ ಅಲರ್ಟ್ ಘೋಷಿಸಿದೆ? ಇಲ್ಲಿದೆ ವಿವರ.
ನಿನ್ನೆ ಎಲ್ಲೆಲ್ಲಿ, ಎಷ್ಟು ಮಳೆ ಆಯ್ತು?
ರಾಜ್ಯದಲ್ಲಿ ನೈರುತ್ಯ ಮುಂಗಾರು ಸಾಮಾನ್ಯವಾಗಿದ್ದು ಕರಾವಳಿ, ದಕ್ಷಿಣ ಒಳನಾಡಿನ ಅನೆಕ ಕಡೆ ಮಳೆ ಆಗಿದೆ. ಕೋಟ, ಉಡುಪಿ, ಮಂಗಳೂರಿನಲ್ಲಿ 11 ಸೆಮೀ, ಕಾರ್ಕಳದಲ್ಲಿ 10, ಮೂಲ್ಕಿ, ಮಾಣಿಯಲ್ಲಿ 9, ಪಣಂಬೂರಿನಲ್ಲಿ 8 ಸೆಮೀ, ಉಪ್ಪಿನಂಗಡಿಯಲ್ಲಿ 6, ಶಿರಾಲಿ, ಕುಮಟಾ , ಬ್ರಹ್ಮಾವರ, ಆಗುಂಬೆ, ಮಂಗಳೂರಿನಲ್ಲಿ ತಲಾ 6 ಸೆಮೀ, ಪುತ್ತೂರು, ಧರ್ಮಸ್ಥಳ, ಗೇರ್ಸೊಪ್ಪ, ಬೆಳ್ತಂಗಡಿ, ಮುದಗಲ್, ಕೊಟ್ಟಿಗೆ ಹಾರದಲ್ಲಿ ತಲಾ 5 ಸೆಮೀ, ಹೊನ್ನಾವರ, ಸಿದ್ದಾಪುರ, ಲಿಂಗನಮಕ್ಕೀ, ಗೋಕರ್ಣ, ಶೋರಾಪುರದಲ್ಲಿ ತಲಾ 3, ಕಮಲಾಪುರ ಕಳಸ, ಮಾಗಡಿ, ಕಪಪ್ಪ, ಅಂಕೋಲಾದಲ್ಲಿ ತಲಾ 3, ಸಿದ್ದಾಪುರ, ಕಾರವಾರ, ಸುಳ್ಯ, ದೇವರಹಿಪ್ಪರಗಿ, ಜೇವರ್ಗಿ, ಕಲಬುರ್ಗಿ, ಮಸ್ಕಿ, ಲೋಂಡಾ , ಹುಮಾನಾಬಾದ್, ಜಯಪುರ, ಶೃಂಗೇರಿ, ನಾಪೋಕ್ಲು, ಹಗರಿಬೊಮ್ಮನಹಳ್ಳಿ, ಕದ್ರಾದಲ್ಲಿ ತಯಾಲ 2 ಸೆಮೀನಷ್ಟು ಮಳೆ ಆಗಿದೆ.
ಇಂದು ಎಲ್ಲಿ ಮಳೆ ಆಗಲಿದೆ?
ಇಂದು ಉತ್ತರ ಒಳಭಾಗದ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರದಲ್ಲಿ ಸಾಧಾರಣ ಮಳೆ ಆಗಲಿದೆ. ದ.ಒಳನಾಡು ಜಿಲ್ಲೆಗಳಾದ ಬಳ್ಳಾರಿ, ಬೆಂಗಳೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಸೇರಿದಂತೆ ಹಲವೆಡೆ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ.
ಯಾವ ಸ್ಥಳದಲ್ಲಿ ಎಚ್ಚರಿಕೆ ಅಗತ್ಯ?
ದ.ಕನ್ನಡ, ಉಡುಪಿ, ಉ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ. ಬೀದರ್, ಕಲಬುರ್ಗಿ, ಯಾದಗಿರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಆಗಲಿದೆ. ಸಮುದ್ರ ತೀರದಲ್ಲಿ ಭಾರೀ ಅಲೆ ಇರಲಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ದಕ್ಷಿಣ ಕನ್ನಡದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಬೆಂಗಳೂರಿನ ವಾತಾವರಣ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಮೋಡ ಕವಿದ ವಾತಾವಣವಿದ್ದು ಹಗುರದಿಂದ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ. ನಿರಂತರ ಗಾಳಿಯ ವೇಗ ಗಂಟೆಗೆ 30-40 ವೇಗದಲ್ಲಿ ಬೀಸಲಿದೆ. ಗರಿಷ್ಠ ತಾಪಮಾನ 28° ಹಾಗೂ ಕನಿಷ್ಠ ತಾಪಮಾನ 20° C ಇರಲಿದೆ. ಮುಂದಿನ 48 ಗಂಟೆಗಳಲ್ಲಿ ಕೂಡಾ ಇದೇ ವಾತಾವರಣ ಮುಂದುವರೆಯಲಿದೆ.
ಇಂದು ಪ್ರಮುಖ ನಗರಗಳ ವಾತಾವರಣ
ಭಾರತೀಯ ಹವಾಮಾನ ಇಲಾಖೆಯ ದತ್ತಾಂಶದ ಪ್ರಕಾರ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು (ಜೂನ್ 28) ಬೆಳಗ್ಗೆ 6 ಗಂಟೆಗೆ ದಾಖಲಾಗಿರುವ ಹವಾಮಾನ ವಿವರ.
ಬೆಂಗಳೂರು - 20.6°ಸೆ.
ಮಂಗಳೂರು- 23°ಸೆ.
ಚಿತ್ರದುರ್ಗ- 21.4°ಸೆ.
ಗದಗ- 21.8°ಸೆ.
ಹೊನ್ನಾವರ- 24.2°ಸೆ.
ಕಲಬುರ್ಗಿ- 23 ಸೆ.
ಬೆಳಗಾವಿ- 22°ಸೆ.
ಕಾರವಾರ- 27°ಸೆ.