Karnataka Weather: ಬೀದರ್‌, ವಿಜಯಪುರ, ಕಲಬುರಗಿಗಳಲ್ಲಿ ಶೀತಗಾಳಿ ಮುನ್ನೆಚ್ಚರಿಕೆ, ಕರ್ನಾಟಕದಲ್ಲಿ ಒಣಹವೆ, ಬೆಂಗಳೂರು ಸುತ್ತಮುತ್ತ ಚಳಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Weather: ಬೀದರ್‌, ವಿಜಯಪುರ, ಕಲಬುರಗಿಗಳಲ್ಲಿ ಶೀತಗಾಳಿ ಮುನ್ನೆಚ್ಚರಿಕೆ, ಕರ್ನಾಟಕದಲ್ಲಿ ಒಣಹವೆ, ಬೆಂಗಳೂರು ಸುತ್ತಮುತ್ತ ಚಳಿ

Karnataka Weather: ಬೀದರ್‌, ವಿಜಯಪುರ, ಕಲಬುರಗಿಗಳಲ್ಲಿ ಶೀತಗಾಳಿ ಮುನ್ನೆಚ್ಚರಿಕೆ, ಕರ್ನಾಟಕದಲ್ಲಿ ಒಣಹವೆ, ಬೆಂಗಳೂರು ಸುತ್ತಮುತ್ತ ಚಳಿ

Karnataka Weather: ಕರ್ನಾಟಕದಲ್ಲಿ ಇಂದು ಚಳಿಗಾಲದ ಒಣಹವೆ ಇರಲಿದ್ದು, ಬೀದರ್‌, ವಿಜಯಪುರ, ಕಲಬುರಗಿಗಳಲ್ಲಿ ಶೀತಗಾಳಿ ಬೀಸುವ ಕುರಿತು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಬೆಂಗಳೂರು ಸುತ್ತಮುತ್ತ ಕನಿಷ್ಠ ತಾಪಮಾನ ಇಳಿಕೆಯಾಗಿ ಚಳಿ ಕಾಡಬಹುದು ಎಂದು ಹವಾಮಾನ ಮುನ್ಸೂಚನೆ ವರದಿ ಎಚ್ಚರಿಸಿದೆ.

 ಬೀದರ್‌, ವಿಜಯಪುರ, ಕಲಬುರಗಿಗಳಲ್ಲಿ ಶೀತಗಾಳಿ ಮುನ್ನೆಚ್ಚರಿಕೆ, ಕರ್ನಾಟಕದಲ್ಲಿ ಒಣಹವೆ, ಬೆಂಗಳೂರು ಸುತ್ತಮುತ್ತ ಚಳಿ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿ ಹೇಳಿದೆ. (ಪ್ರಾತಿನಿಧಿಕ ಚಿತ್ರಗಳು)
ಬೀದರ್‌, ವಿಜಯಪುರ, ಕಲಬುರಗಿಗಳಲ್ಲಿ ಶೀತಗಾಳಿ ಮುನ್ನೆಚ್ಚರಿಕೆ, ಕರ್ನಾಟಕದಲ್ಲಿ ಒಣಹವೆ, ಬೆಂಗಳೂರು ಸುತ್ತಮುತ್ತ ಚಳಿ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿ ಹೇಳಿದೆ. (ಪ್ರಾತಿನಿಧಿಕ ಚಿತ್ರಗಳು) (HT News)

Karnataka Weather: ಕರ್ನಾಟಕದಲ್ಲಿ ಚಳಿಗಾಲದ ಒಣಹವೆ ಇದ್ದು, ವಾತಾವರಣದಲ್ಲಿ ಆದ್ರರ್ತೆಯ ಮಟ್ಟ ಕಡಿಮೆ ಇದೆ. ಭಾರತೀಯ ಹವಾಮಾನ ಇಲಾಖೆ ನಿನ್ನೆ ಅಪರಾಹ್ನ ನೀಡಿದ ಹವಾಮಾನ ಮುನ್ಸೂಚನೆ ಪ್ರಕಾರ ಇಂದು (ಜನವರಿ 4) ಬೀದರ್, ವಿಜಯಪುರ, ಕಲಬುರಗಿ ಜಿಲ್ಲೆಗಳಲ್ಲಿ ಶೀತಗಾಳಿ ಬೀಸಲಿದೆ. ಜನರು ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಜಿಲ್ಲಾಡಳಿತಗಳು ಮನವಿ ಮಾಡಿವೆ. ಮತ್ತೊಂದೆಡೆ, ಕರ್ನಾಟಕದ ರಾಜಧಾನಿ ಬೆಂಗಳೂರು ಸುತ್ತಮುತ್ತ ಕನಿಷ್ಠ ತಾಪಮಾನ 15 ಡಿಗ್ರಿ ಆಸುಪಾಸು ಇರಲಿದ್ದು, ಚಳಿ ಕಾಡಲಿದೆ. ಮುಂಜಾನೆ ಮಂಜು, ಇಬ್ಬನಿ ಕೂಡ ಚಳಿ ಅನುಭವವನ್ನು ಹೆಚ್ಚು ಮಾಡಲಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು ಸುತ್ತಮುತ್ತ ಭಾರಿ ಚಳಿ, ಕನಿಷ್ಠ ತಾಪಮಾನ 15 ಡಿಗ್ರಿ ಆಸುಪಾಸು

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಇಂದು (ಜನವರಿ 4) ಚಳಿಗಾಲದ ಸಹಜ ವಾತಾವರಣ ಇರಲಿದೆ. ಆದಾಗ್ಯೂ ಕನಿಷ್ಠ ತಾಪಮಾನ 15 ಡಿಗ್ರಿ ಆಸುಪಾಸು ಇರುವ ಕಾರಣ ರಾತ್ರಿ ವೇಳೆ ವಿಪರೀತ ಚಳಿಯ ಅನುಭವಾಗಬಹುದು. ಮುಂಜಾನೆ ಮಂಜು ಮತ್ತು ಇಬ್ಬನಿ ಕೂಡ ಸೇರಿಕೊಂಡು ಹೆಚ್ಚಿನ ಚಳಿಯ ಅನುಭವವನ್ನು ಕೊಡಬಹುದು.

ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ಬಿಡುಗಡೆ ಮಾಡಿರುವ ಹವಾಮಾನ ಮುನ್ಸೂಚನೆ ವರದಿ ಪ್ರಕಾರ, ಮುಂಜಾನೆ ಕೆಲವು ಪ್ರದೇಶಗಳಲ್ಲಿ ದಟ್ಟ ಮಂಜು ಮುಸುಕಿದ ವಾತಾವರಣ ಇಲಿದೆ. ಮೋಡ ಕವಿದ ವಾತಾವರಣ ಇರಲಿದ್ದು, ಸೂರ್ಯ ಕಿರಣಗಳು ಕಾಣ ಸಿಗುವುದು ಕಷ್ಟ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಶಿಯಸ್‌ ಮತ್ತು ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಶಿಯಸ್ ಇರಬಹುದು. ನಿನ್ನೆ (ಜನವರಿ 3) ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನ 27.4 ಡಿಗ್ರಿ ಸೆಲ್ಶಿಯಸ್‌, ಕನಿಷ್ಠ ತಾಪಮಾನ 16.4 ಡಿಗ್ರಿ ಸೆಲ್ಶಿಯಸ್‌ ಇತ್ತು. ಅದೇ ರೀತಿ, ಬೆಂಗಳೂರು ಗ್ರಾಮಾಂತರದಲ್ಲಿ ಗರಿಷ್ಠ ತಾಪಾಮಾನ 28.1 ಡಿಗ್ರಿ ಸೆಲ್ಶಿಯಸ್, ಕನಿಷ್ಠ ತಾಪಮಾನ 15.1 ಡಿಗ್ರಿ ಸೆಲ್ಶಿಯಸ್ ಇತ್ತು ಎಂದು ವಿಜ್ಞಾನಿ ಡಾ ರಾಜವೇಲ್ ಮಣಿಕ್ಕಮ್ ತಿಳಿಸಿದ್ದಾರೆ.

ಪ್ರಮುಖ ನಗರಗಳಲ್ಲಿ ತಾಪಮಾನ ಮತ್ತು ಆರ್ದ್ರತಾ ಮಟ್ಟ ಬೆಳಗ್ಗೆ 6 ಗಂಟೆಗೆ

ಬೆಂಗಳೂರು ನಗರ - ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಶಿಯಸ್‌ ಮತ್ತು ಆರ್ದ್ರತಾ ಮಟ್ಟ 86%

ಮಂಗಳೂರು - ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಶಿಯಸ್‌ ಮತ್ತು ಆರ್ದ್ರತಾ ಮಟ್ಟ 78%

ಚಿತ್ರದುರ್ಗ - ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಶಿಯಸ್‌ ಮತ್ತು ಆರ್ದ್ರತಾ ಮಟ್ಟ 34%

ಗದಗ - ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಶಿಯಸ್‌ ಮತ್ತು ಆರ್ದ್ರತಾ ಮಟ್ಟ 81%

ಹೊನ್ನಾವರ - ಕನಿಷ್ಠ ತಾಪಮಾನ 24.2 ಡಿಗ್ರಿ ಸೆಲ್ಶಿಯಸ್‌ ಮತ್ತು ಆರ್ದ್ರತಾ ಮಟ್ಟ 52%

ಕಲಬುರಗಿ - ಕನಿಷ್ಠ ತಾಪಮಾನ 16.7 ಡಿಗ್ರಿ ಸೆಲ್ಶಿಯಸ್‌ ಮತ್ತು ಆರ್ದ್ರತಾ ಮಟ್ಟ 60%

ಬೆಳಗಾವಿ - ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಶಿಯಸ್‌ ಮತ್ತು ಆರ್ದ್ರತಾ ಮಟ್ಟ 53%

ಕಾರವಾರ - ಕನಿಷ್ಠ ತಾಪಮಾನ 30.4 ಡಿಗ್ರಿ ಸೆಲ್ಶಿಯಸ್‌ ಮತ್ತು ಆರ್ದ್ರತಾ ಮಟ್ಟ 62%

ಬೀದರ್‌, ವಿಜಯಪುರ, ಕಲಬುರಗಿಗಳಲ್ಲಿ ಶೀತಗಾಳಿ ಮುನ್ನೆಚ್ಚರಿಕೆ, ಕರ್ನಾಟಕದಲ್ಲಿ ಒಣಹವೆ

ಬೀದರ್, ವಿಜಯನಗರ, ಕಲಬುರಗಿ ಜಿಲ್ಲೆಗಳಲ್ಲಿ ಇಂದು (ಜನವರಿ 4) ಶೀತಗಾಳಿಯ ಮುನ್ನೆಚ್ಚರಿಕೆಯನ್ನು ನೀಡಿರುವ ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ಹವಾಮಾನ ಮುನ್ಸೂಚನೆ ವರದಿ, ರಾಜ್ಯದಲ್ಲಿ ಚಳಿಗಾಲದ ಒಣಹವೆ ಇರುವುದಾಗಿ ಹೇಳಿದೆ. ನಿನ್ನೆ ಅಪರಾಹ್ನ ಪ್ರಕಟಿಸಿದ ವರದಿ ಪ್ರಕಾರ, ಮುಂದಿನ 2 ದಿನಗಳ ಕಾಲ ಉತ್ತರ ಒಳನಾಡಿನ ಬೀದರ್, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ಶೀತಗಾಳಿಯ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಜನವರಿ 6 ರ ತನಕ ಕರ್ನಾಟಕದ ಉತ್ತರ ಒಳನಾಡಿದ ಕೆಲವು ಪ್ರದೇಶಗಳಲ್ಲಿ ದಟ್ಟ ಮಂಜು ಕಾಡಬಹುದು.

ಅದೇ ರೀತಿ, ಕರ್ನಾಟಕದ ದಕ್ಷಿಣ ಒಳನಾಡಿನ ಹಲವು ಪ್ರದೇಶಗಳಲ್ಲಿ ಜನವರಿ 6ರ ತನಕ ಸಾಧಾರಣ ಮಂಜು, ಇಬ್ಬನಿ ಕಂಡುಬರಲಿದೆ. ಕರಾವಳಿ ಜಿಲ್ಲೆಗಳಲ್ಲಿ ಸಹಜ ವಾತಾವರಣ ಇರಲಿದ್ದು, ಚಳಿಗಾಲದ ಶುಷ್ಕ ಹವೆ ಮುಂದುವರಿಯಲಿದೆ ಎಂದು ಹವಾಮಾನ ಮುನ್ಸೂಚನೆ ವರದಿ ವಿವರಿಸಿದೆ.

Whats_app_banner