ಶಿರೂರು ಭೂ ಕುಸಿತ; ನಾಪತ್ತೆಯಾದವರ ಪತ್ತೆಗಾಗಿ ಬಳಸಲಾಗುತ್ತಿರುವ ಅಡ್ವಾನ್ಸ್ಡ್ ಡ್ರೋನ್, ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ಹೀಗಿದೆ
ಕನ್ನಡ ಸುದ್ದಿ  /  ಕರ್ನಾಟಕ  /  ಶಿರೂರು ಭೂ ಕುಸಿತ; ನಾಪತ್ತೆಯಾದವರ ಪತ್ತೆಗಾಗಿ ಬಳಸಲಾಗುತ್ತಿರುವ ಅಡ್ವಾನ್ಸ್ಡ್ ಡ್ರೋನ್, ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ಹೀಗಿದೆ

ಶಿರೂರು ಭೂ ಕುಸಿತ; ನಾಪತ್ತೆಯಾದವರ ಪತ್ತೆಗಾಗಿ ಬಳಸಲಾಗುತ್ತಿರುವ ಅಡ್ವಾನ್ಸ್ಡ್ ಡ್ರೋನ್, ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ಹೀಗಿದೆ

ಶಿರೂರು ಭೂ ಕುಸಿತ; ಕೇರಳದ ಚಾಲಕ ಅರ್ಜುನ್ ಇದ್ದ ಲಾರಿ ಇರುವ ಸ್ಥಳ ಪತ್ತೆಯನ್ನು ಕರ್ನಾಟಕ ಸರ್ಕಾರ ದೃಢಪಡಿಸಿದೆ. ಈ ನಡುವೆ, ನಾಪತ್ತೆಯಾದವರ ಪತ್ತೆಗಾಗಿ ಬಳಸಲಾಗುತ್ತಿರುವ ಅಡ್ವಾನ್ಸ್ಡ್ ಡ್ರೋನ್, ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ವಿರ ಹೀಗಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಶಿರೂರು ಭೂ ಕುಸಿತ; ನಾಪತ್ತೆಯಾದವರ ಪತ್ತೆಗಾಗಿ ಬಳಸಲಾಗುತ್ತಿರುವ ಅಡ್ವಾನ್ಸ್ಡ್ ಡ್ರೋನ್, ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ವಿವರ. (ಸಾಂಕೇತಿಕ ಚಿತ್ರ)
ಶಿರೂರು ಭೂ ಕುಸಿತ; ನಾಪತ್ತೆಯಾದವರ ಪತ್ತೆಗಾಗಿ ಬಳಸಲಾಗುತ್ತಿರುವ ಅಡ್ವಾನ್ಸ್ಡ್ ಡ್ರೋನ್, ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ವಿವರ. (ಸಾಂಕೇತಿಕ ಚಿತ್ರ)

ಕಾರವಾರ: ಶಿರೂರು ಗುಡ್ಡ ಕುಸಿತದಿಂದ ನಾಪತ್ತೆಯಾದವರಿಗೆ ಹಾಗೂ ಬೆಂಜ್ ಲಾರಿ ಪತ್ತೆಗೆ ಅಡ್ವಾನ್ಸ್ಡ್ ಡ್ರೋನ್ ಬೇಸ್ಡ್ ಇಂಟೆಲಿಜೆಂಟ್ ಅಂಡರ್ ಗ್ರೌಂಡ್ ಬರಿಡ್ ಆಬ್ಜೆಕ್ಟ್ ಡಿಟೆಕ್ಟರ್ ಹಾಗೂ ಹೆಲಿಕಾಪ್ಟರ್ ಮೂಲಕ ಹುಡುಕಾಟ ನಡೆಯುತ್ತಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಶಿರೂರು ಗುಡ್ಡ ಕುಸಿತ ಪ್ರದೇಶದ ಬಳಿ ಗಂಗಾವಳಿ ನದಿಯಲ್ಲಿ ಹಾಗೂ ಬೆಂಜ್ ಲಾರಿ ಲೋಕೇಶನ್ ಪತ್ತೆಯಾದ ಪ್ರದೇಶದಲ್ಲಿ ಹುಡುಕಾಟ ಮುಂದುವರಿಸಲಾಗಿದೆ. ದಡದಿಂದ ಲಾಂಗ್ ಆರ್ಮ್ ಬೂಮರ್ ಯಂತ್ರದ ಮೂಲಕ ನಿರಂತರವಾಗಿ ಡ್ರೆಜ್ಜಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದರ ನಡುವೆ ನೌಕಾನೆಲೆಯ ಹೆಲಿಕಾಪ್ಟರ್ ಮೂಲಕ ಗಂಗಾವಳಿ ನದಿ ಪ್ರದೇಶದಲ್ಲಿ ಮೃತಪಟ್ಟವರಿಗಾಗಿ ಹುಡುಕಾಟ ಆರಂಭಿಸಲಾಗಿದೆ.

ನಾಪತ್ತೆಯಾದವರ ಪತ್ತೆಗಾಗಿ ಅಡ್ವಾನ್ಸ್ಡ್ ಡ್ರೋನ್, ಹೆಲಿಕಾಪ್ಟರ್‌ ಬಳಕೆ

ಇದಲ್ಲದೆ ಲಾರಿ ಹಾಗೂ ನಾಪತ್ತೆಯಾದವರಿಗಾಗಿ ದೆಹಲಿಯಿಂದ ಆಗಮಿಸಿದ ಅಡ್ವಾನ್ಸ್ಡ್ ಡ್ರೋನ್ ಬೇಸ್ಡ್ ಇಂಟೆಲಿಜೆಂಟ್ ಅಂಡರ್ ಗ್ರೌಂಡ್ ಬರಿಡ್ ಆಬ್ಜೆಕ್ಟ್ ಡಿಟೆಕ್ಟರ್ ನಿಂದಲೂ ನದಿ ಹಾಗೂ ನದಿ ತೀರದಲ್ಲಿ ಹುಡುಕಾಟ ಆರಂಭಗೊಂಡಿದೆ. ಈ ಡ್ರೋನ್ ಸಾಧಾರಣ ಸಾಧನವಲ್ಲ. 2.4 ಕಿ.ಮೀ ಎತ್ತರದಲ್ಲಿ ಹಾರಾಟ ನಡೆಸಬಹುದಾದ, ಮಣ್ಣಿನಲ್ಲಿ 20 ಮೀಟರ್ ಮತ್ತು ನೀರಿನಲ್ಲಿ 70 ಮೀಟರ್ ಆಳದಲ್ಲೂ ಪರೀಕ್ಷೆ ನಡೆಸಬಲ್ಲ ಡ್ರೋಣ್ ಆಗಿದೆ. ಹಿಮ, ನೀರು, ಬಂಡೆ ಮತ್ತು ಮರುಭೂಮಿಗಳಲ್ಲಿ ಪತ್ತೆ ಕಾರ್ಯಕ್ಕೆ ಈ ಡ್ರೋನ್ ಬಳಕೆಯಾಗುತ್ತದೆ. ಈ ಸಾಧನವನ್ನು ಇಬ್ಬರು ತರಬೇತಿ ಪಡೆದ ಸೈನಿಕರು ನಿರ್ವಹಿಸುತ್ತಾರೆ.

ಭಾರೀ ಪ್ರವಾಹಗಳು ಮತ್ತು ಹಿಮಕುಸಿತಗಳು ಸಂಭವಿಸಿದ ಸ್ಥಳಗಳಲ್ಲಿ ಇದನ್ನು ಮುಖ್ಯವಾಗಿ ಬಳಸಲಾಗುತ್ತದೆ. ನೆಲದಡಿಯಲ್ಲಿ ಮಾನವ ಉಪಸ್ಥಿತಿಯನ್ನು ಕೂಡ ಇದರಿಂದ ಕಂಡುಹಿಡಿಯಬಹುದು. ಮೃತದೇಹ ಪತ್ತೆ ಕಾರ್ಯಾಚರಣೆಗೂ ಸಹಕಾರಿಯಾಗಲಿದೆ. IED / ಗಣಿ ಪತ್ತೆಯನ್ನೂ ಮಾಡಬಹುದು.

ರಕ್ಷಣಾ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬಲ್ಲ ಈ ಡ್ರೋಣನ್ನು ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಬಳಸಬಹುದು. ಭಾರೀ ಮಳೆ ಮತ್ತು ಗಂಟೆಗೆ 40 ಕಿ.ಮೀ.ವರೆಗೆ ಗಾಳಿಯ ವೇಗದಲ್ಲಿ ಬಳಸಬಹುದು. ಮೇ 2024ರಲ್ಲಿ ಸೇನೆಯು ಇದರ ಪ್ರಯೋಗವನ್ನು ನಡೆಸಿತ್ತು. ಕುಪ್ವಾರ ಮತ್ತು ದೆಹಲಿಯಲ್ಲಿ ಪ್ರಯೋಗ ನಡೆಸಲಾಗಿತ್ತು. ಇದರ ಬೆಲೆ ಮೂರು ಕೋಟಿ ರೂಪಾಯಿಗಳಿಗಿಂತ ಹೆಚ್ಚಿದೆ ಎನ್ನಲಾಗಿದೆ.

ಗಂಗಾವಳಿ ನದಿಯಲ್ಲಿ ಟ್ರಕ್ ಪತ್ತೆ

ಗಂಗಾವಳಿ ನದಿಯಲ್ಲಿ ಕೊಚ್ಚಿಹೋಗಿದ್ದ ಕೇರಳ ಮೂಲದ ಟಿಂಬರ್ ಟ್ರಕ್ ಹಾಗೂ ಗ್ಯಾಸ್ ಟ್ಯಾಂಕರ್ ನ ಕ್ಯಾಬಿನ್ ನೀರಿನ ಆಳದಲ್ಲಿ ಸಿಲುಕಿದೆ ಎನ್ನಲಾಗಿದೆ. ನೀರಿನಡಿ ಲೋಹ ಮತ್ತು ಇತರ ವಸ್ತು ಪತ್ತೆಹಚ್ಚುವ ಸುಧಾರಿತ ಐಬೋರ್ಡ್ ಡ್ರೋನ್ ಬಳಸಿ ನಡೆಸಿದ ಕಾರ್ಯಾಚರಣೆಯಲ್ಲಿ ಇವು ಪತ್ತೆಯಾಗಿದ್ದು, ಹೈಟೆನ್ಶನ್ ವಯರ್ ಸಾಗುವ ಮಾರ್ಗದ ತುಂಡಾದ ಟವರ್ ಮತ್ತು ರಸ್ತೆ ಬದಿಯ ರೇಲಿಂಗ್ ನದಿಯಲ್ಲಿ ಬಿದ್ದಿರುವುದು ಕಂಡುಬಂದಿದೆ.

ಗಂಗಾವಳಿ ನದಿಯ ತಟದಿಂದ ಸುಮಾರು 60 ಮೀಟರ್ ದೂರ ಹ ಾಗೂ 9 ಮೀಟರ್ ಆಳದಲ್ಲಿ ಟ್ರಕ್ ಸಿಲುಕಿರುವ ಶಂಕೆ ಇದೆ. ಅದರ ಕ್ಯಾಬಿನ್ ನಲ್ಲಿ ಅರ್ಜುನ್ ಇದ್ದಾನೋ ಇಲ್ಲವೋ ಎಂಬುದು ಇನ್ನೂ ಖಚಿತವಾಗಿಲ್ಲ. ಗುರುವಾರ ನೀರಿನ ರಭಸ ಹೆಚ್ಚಿತ್ತು. ಶುಕ್ರವಾರವೂ ಕಾರ್ಯಾಚರಣೆ ನಡೆಯುತ್ತಿದೆ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆಎಚ್‌ಟಿ ಕನ್ನಡ ಬೆಸ್ಟ್‌.ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲುkannada.hindustantimes.com/nation-and-world ಕ್ಕೆ ಭೇಟಿ ನೀಡಿ.)

Whats_app_banner