Kashi Yatra 2023: ಫೆ.21ರಿಂದ ಕರ್ನಾಟಕ – ಭಾರತ್ ಗೌರವ್ ಕಾಶಿ ದರ್ಶನ 3ನೇ ಟ್ರಿಪ್; ಬುಕ್ಕಿಂಗ್ ಶುರುವಾಗಿದೆ..
Kashi Yatra 2023: “ಕರ್ನಾಟಕ – ಭಾರತ್ ಗೌರವ್ ಕಾಶಿ ದರ್ಶನ” ರೈಲು ಪ್ರವಾಸದ ಮೂರನೇ ಟ್ರಿಪ್ ಫೆ.21 ರಂದು ಪ್ರಾರಂಭವಾಗಲಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಅ ಜೊಲ್ಲೆ ತಿಳಿಸಿದ್ದಾರೆ.
ಬೆಂಗಳೂರು: ಉತ್ತರ ಭಾರತದಲ್ಲಿ ತೀವ್ರ ಚಳಿಯ ಕಾರಣದಿಂದ ಮುಂದೂಡಲಾಗಿದ್ದ “ಕರ್ನಾಟಕ – ಭಾರತ್ ಗೌರವ್ ಕಾಶಿ ದರ್ಶನ” ರೈಲು ಪ್ರವಾಸದ ಮೂರನೇ ಟ್ರಿಪ್ ಫೆ.21 ರಂದು ಪ್ರಾರಂಭವಾಗಲಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಅ ಜೊಲ್ಲೆ ತಿಳಿಸಿದ್ದಾರೆ.
ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಕಾಶಿ ದರ್ಶನ ರೈಲು ಪ್ಯಾಕೇಜ್ ಟೂರ್ ಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು. ಆ ನಂತರ ನಡೆದಂತಹ 2 ನೇ ಟ್ರಿಪ್ ರೈಲು ಪ್ರವಾಸ ಅತ್ಯಂತ ಯಶಸ್ವಿಯಾಗಿ ನಡೆದು. ಮೋದಿಜಿ ಅವರ ಮುತುವರ್ಜಿಯಿಂದ ಪುನರ್ ನಿರ್ಮಾಣಗೊಳಿಸಲಾಗಿರುವ ಭವ್ಯ ಕಾಶಿ – ದಿವ್ಯ ಕಾಶಿಯನ್ನು ರಾಜ್ಯದ ಜನರು ಕಡಿಮೆ ವೆಚ್ಚದಲ್ಲಿ ಕಣ್ತುಂಬಿಕೊಂಡಿದ್ದಾರೆ. ಈ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರೋತ್ಸಾಹ ನೀಡುವ ಮೂಲಕ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ತಿಳಿಸಿದ್ದಾರೆ.
“ಕರ್ನಾಟಕ – ಭಾರತ್ ಗೌರವ್ ಕಾಶಿ ದರ್ಶನ” ರೈಲು ಪ್ರವಾಸ ಮೂರನೇ ಟ್ರಿಪ್ನ್ನು ಫೆಬ್ರವರಿ 21 ರಂದು ನಿಗದಿ ಮಾಡಲಾಗಿದೆ. 8 ದಿನಗಳ ಈ ಯಾತ್ರೆಯಲ್ಲಿ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗರಾಜ್ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಬೆಂಗಳೂರಿಗೆ ಹಿಂದಿರುಗಲಿದೆ. ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಬಾರಿಗೆ ಭಾರತ್ ಗೌರವ್ ರೈಲನ್ನ ಪ್ರಾರಂಭಿಸುತ್ತಿರುವ ಹೆಗ್ಗಳಿಕೆಗೆ ಕರ್ನಾಟಕ ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ಪಾತ್ರವಾಗಿದೆ. ಪ್ರಯಾಣೀಕರ ಅನುಕೂಲಕ್ಕಾಗಿ 3 ಟಯರ್ ಎಸಿಯ ವ್ಯವಸ್ಥೆಯನ್ನು ಮಾಡಲಾಗಿದ್ದು, 14 ಬೋಗಿಗಳ ಮೇಲೂ ರಾಜ್ಯದ 28 ದೇವಸ್ಥಾನಗಳ ಛಾಯಾಚಿತ್ರಗಳ ಬ್ರಾಂಡಿಂಗ್ ಮಾಡಲಾಗಿದೆ.
ಐಆರ್ಸಿಟಿಸಿ ಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು ಊಟ, ಉಪಹಾರ, ಯಾತ್ರಾ ಸ್ಥಳದಲ್ಲಿ ತಂಗುವ ವ್ಯವಸ್ಥೆ ಹಾಗೂ ಯಾತ್ರಾ ಸ್ಥಳಗಳಿಗೆ ಪ್ರಯಾಣಿಸಲು ಸ್ಥಳೀಯ ಸಾರಿಗೆ ವ್ಯವಸ್ಥೆ ಹಾಗೂ ತುರ್ತು ವೈದ್ಯಕೀಯ ಸೇವೆ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದಿದ್ದಾರೆ.
ನಿಯತ ರೈಲು ಪ್ರವಾಸದ ವೇಳಾಪಟ್ಟಿ
ಪ್ರತಿ ತಿಂಗಳು ನಿಯತವಾಗಿ “ಕರ್ನಾಟಕ – ಭಾರತ್ ಗೌರವ್ ಕಾಶಿ ದರ್ಶನ” ರೈಲನ್ನು ಓಡಿಸಬೇಕು ಎನ್ನುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ರೈಲ್ವೇ ಇಲಾಖೆಯ, ಐಆರ್ಸಿಟಿಸಿ ಹಾಗೂ ಮುಜರಾಯಿ ಇಲಾಖೆ ಪ್ರಮುಖ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಮುಂದಿನ ಟ್ರಿಪ್ಗಳ ವೇಳಾ ಪಟ್ಟಿಯನ್ನು ಶೀಘ್ರದಲ್ಲಿ ಬಿಡುಗಡೆಗೊಳಿಸಲು ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಕಾಶಿ ಯಾತ್ರೆ ಎಷ್ಟು ದಿನ? ಹೀಗಿರಲಿದೆ ಪ್ರಯಾಣ
ದಿನ 1
ಬೆಂಗಳೂರಿನಿಂದ ಅಪರಾಹ್ನ 1 ಗಂಟೆಗೆ ರೈಲು ಹೊರಡಲಿದೆ.
ಬೀರೂರು, ಹಾವೇರಿ, ಹುಬ್ಬಳ್ಳಿ, ಬೆಳಗಾವಿ, ರಾಯಬಾಗ ನಿಲ್ದಾಣಗಳಲ್ಲಿ ಪ್ರವಾಸಿಗರಿಗೆ ರೈಲು ಏರಲು ಅವಕಾಶ.
ಸಂಜೆ ಚಹಾ, ರಾತ್ರಿ ಊಟ ರೈಲಿನಲ್ಲಿ ಕುಳಿತಲ್ಲಿಗೇ ರವಾನೆ ಮತ್ತು ರಾತ್ರಿಯ ರೈಲು ಪ್ರಯಾಣ.
ದಿನ 2
ರೈಲು ಪ್ರಯಾಣ ಮುಂದುವರಿಕೆ
ಬೆಳಗಿನ ಚಹಾ ಮತ್ತು ಉಪಹಾರ ಕುಳಿತಲ್ಲಿಗೇ ರವಾನೆ
ರೈಲಿನಲ್ಲಿ ಕುಳಿತಲ್ಲೇ ಮಧ್ಯಾಹ್ನದ ಊಟ ಮತ್ತು ಸಂಜೆಯ ಚಹಾ.
ರೈಲಿನಲ್ಲಿ ಕುಳಿತಲ್ಲೇ ರಾತ್ರಿ ಭೋಜನ ಮತ್ತು ರಾತ್ರಿಯ ರೈಲು ಪ್ರಯಾಣ.
ದಿನ 3
ವಾರಾಣಸಿ
ಬೆಳಗಿನ ಚಹಾ, ಉಪಹಾರ ಮತ್ತು ಮಧ್ಯಾಹ್ನದ ಊಟ ರೈಲಿನಲ್ಲೇ ಆಗಲಿದೆ.
ಮಧ್ಯಾಹ್ನ ವಾರಣಾಸಿ ರೈಲು ನಿಲ್ದಾಣ ಆಗಮನ.
ಹೋಟೆಲ್ಗೆ ವರ್ಗಾಯಿಸಿ ಮತ್ತು ಚೆಕ್-ಇನ್ ಮಾಡಿ
ವಾರಣಾಸಿಯಲ್ಲಿ ಭೋಜನ ಮತ್ತು ರಾತ್ರಿಯ ವಾಸ್ತವ್ಯ
ದಿನ 4
ವಾರಾಣಸಿ
ಹೋಟೆಲ್ನಲ್ಲಿ ಉಪಹಾರ ಮತ್ತು ತುಳಸಿ ಮಂದಿರ ಮತ್ತು ಸಂಕಟ್ ಮೋಚನ್ ಹನುಮಾನ್ ಮಂದಿರಕ್ಕೆ ಭೇಟಿ ನೀಡಿ.
ಊಟದ ನಂತರ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಗಂಗಾನದಿಯ ಪವಿತ್ರ ಸ್ನಾನಕ್ಕೆ ಭೇಟಿ ನೀಡಿ
ವಾರಾಣಸಿಯಲ್ಲಿ ಭೋಜನ ಮತ್ತು ರಾತ್ರಿಯ ತಂಗುವಿಕೆ.
ದಿನ 5
ವಾರಣಾಸಿ - ಅಯೋಧ್ಯೆ
ಹೋಟೆಲ್ನಿಂದ ಮುಂಜಾನೆ ಚೆಕ್-ಔಟ್ ಮತ್ತು ವಾರಣಾಸಿ ರೈಲು ನಿಲ್ದಾಣಕ್ಕೆ ವಾಪಸ್
ವಾರಣಾಸಿಯಿಂದ ಬೆಳಗ್ಗೆ 6 ಗಂಟೆಗೆ ನಿರ್ಗಮನ.
ಉಪಹಾರ ರೈಲಿನಲ್ಲೆ ಕುಳಿತಲ್ಲಿಗೆ ರವಾನೆ.
ಅಯೋಧ್ಯೆ ರೈಲು ನಿಲ್ದಾಣಕ್ಕೆ ಮಧ್ಯಾಹ್ನ ಆಗಮನ.
ಊಟದ ನಂತರ ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿ ಮತ್ತು ಹನುಮಾನ್ ಗರ್ಹಿಗೆ ಭೇಟಿ
ಸಂಜೆ ಸರಯು ಆರತಿ.
ರಾತ್ರಿ 9.30ಕ್ಕೆ ಅಯೋಧ್ಯೆ ರೈಲು ನಿಲ್ದಾಣಕ್ಕೆ ಹಿಂತಿರುಗಬೇಕು.
ರಾತ್ರಿ ಊಟ ರೈಲಿನಲ್ಲೇ ಲಭ್ಯ ಮತ್ತು ರಾತ್ರಿ 11 ಗಂಟೆಗೆ ಪ್ರಯಾಗ್ರಾಜ್ಗೆ ನಿರ್ಗಮನ.
ದಿನ 6
ಪ್ರಯಾಗರಾಜ್
ಬೆಳಗಿನ ಚಹಾ ಮತ್ತು ಉಪಹಾರ ರೈಲಿನಲ್ಲಿ ಲಭ್ಯ
ಪ್ರಯಾಗರಾಜ್ ರೈಲು ನಿಲ್ದಾಣಕ್ಕೆ ಮುಂಜಾನೆ ತಲುಪಲಿದೆ.
ಹೋಟೆಲ್ಗೆ ಹೋಗಿ ಫ್ರೆಶ್ ಆಗಲು ಅವಕಾಶ
ಸಂಗಮ ಪ್ರಯಾಗದಲ್ಲಿ ತ್ರಿವೇಣಿ ಸಂಗಮ ಮತ್ತು ಹನುಮಾನ್ ದೇವಸ್ಥಾನಕ್ಕೆ ಭೇಟಿ
ಅಪರಾಹ್ನ 1 ಗಂಟೆಗೆ ಪ್ರಯಾಗರಾಜ್ ರೈಲು ನಿಲ್ದಾಣಕ್ಕೆ ಹಿಂತಿರುಗಬೇಕು.
ಅಪರಾಹ್ನ 2 ಗಂಟೆಗೆ ಬೆಂಗಳೂರಿಗೆ ವಾಪಸ್ ಪ್ರಯಾಣ.
ಊಟ, ಸಂಜೆ ಚಹಾ ಮತ್ತು ರಾತ್ರಿಯ ಊಟ ರೈಲಿನಲ್ಲೇ ಲಭ್ಯ
ರಾತ್ರಿಯ ರೈಲು ಪ್ರಯಾಣ.
ದಿನ 7
ರೈಲು ಪ್ರಯಾಣ
ಬೆಳಗಿನ ಚಹಾ ಮತ್ತು ಉಪಹಾರ ರೈಲಿನಲ್ಲೇ ಲಭ್ಯ
ಮಧ್ಯಾಹ್ನದ ಊಟ ಮತ್ತು ಸಂಜೆ ಚಹಾ ರೈಲಿನಲ್ಲೇ ಲಭ್ಯ.
ರಾತ್ರಿ ಭೋಜನ ಕೂಡ ರೈಲಲ್ಲೇ ಲಭ್ಯ
ರಾತ್ರಿಯ ರೈಲು ಪ್ರಯಾಣ.
ದಿನ 8
ಬೆಂಗಳೂರು
ಬೆಳಗಿನ ಚಹಾ, ಉಪಹಾರ ಮತ್ತು ಮಧ್ಯಾಹ್ನದ ಊಟ ರೈಲಿನಲ್ಲಿ
ರಾಯಬಾಗ, ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ಬೀರೂರು ನಿಲ್ದಾಣಗಳಲ್ಲಿ ಪ್ರವಾಸಿಗರು ಇಳಿಯವುದಕ್ಕೆ ಅವಕಾಶ
ಅಪರಾಹ್ನ 1.30ಕ್ಕೆ ಬೆಂಗಳೂರು ರೈಲು ನಿಲ್ದಾಣ ವಾಪಸ್.
ಹೆಚ್ಚಿನ ವಿವರಕ್ಕೆ ಐಆರ್ಸಿಟಿಸಿ ವೆಬ್ತಾಣದ ನೇರ ಲಿಂಕ್ ಇಲ್ಲಿದೆ ಕ್ಲಿಕ್ ಮಾಡಿ.