ಆಪರೇಷನ್ ಸಿಂದೂರ ಯಶಸ್ವಿ ಹೆಜ್ಜೆಯ ನಂತರ ಉಡುಪಿ ಶ್ರೀಕೃಷ್ಣನಿಗೆ ವಿಶೇಷಾಲಂಕಾರ: ಹೀಗೆ ಕಂಡ ಸಿಂದೂರ ಬಟ್ಟಲು ಹಿಡಿದ ಚಕ್ರಧರ
ಕನ್ನಡ ಸುದ್ದಿ  /  ಕರ್ನಾಟಕ  /  ಆಪರೇಷನ್ ಸಿಂದೂರ ಯಶಸ್ವಿ ಹೆಜ್ಜೆಯ ನಂತರ ಉಡುಪಿ ಶ್ರೀಕೃಷ್ಣನಿಗೆ ವಿಶೇಷಾಲಂಕಾರ: ಹೀಗೆ ಕಂಡ ಸಿಂದೂರ ಬಟ್ಟಲು ಹಿಡಿದ ಚಕ್ರಧರ

ಆಪರೇಷನ್ ಸಿಂದೂರ ಯಶಸ್ವಿ ಹೆಜ್ಜೆಯ ನಂತರ ಉಡುಪಿ ಶ್ರೀಕೃಷ್ಣನಿಗೆ ವಿಶೇಷಾಲಂಕಾರ: ಹೀಗೆ ಕಂಡ ಸಿಂದೂರ ಬಟ್ಟಲು ಹಿಡಿದ ಚಕ್ರಧರ

ಉಡುಪಿಯ ಶ್ರೀ ಕೃಷ್ಣನನ್ನು ನೀವು ನೋಡಿರಬಹುದು. ಪಾಕಿಸ್ತಾನದ ಉಗ್ರರನ್ನು ಸೆದೆ ಬಡಿದು ಚಕ್ರಧಾರಿಯಾಗಿ ನಿಂತ ಕೃಷ್ಣನನ್ನು ಕಂಡೀರಾ. ಈಗ ಅಂತಹ ಅಲಂಕಾರದಲ್ಲಿ ಶ್ರೀಕೃಷ್ಣನ ದರ್ಶನ ಮಾಡಬಹುದು.ವರದಿ: ಹರೀಶ ಮಾಂಬಾಡಿ. ಮಂಗಳೂರು

ಉಡುಪಿಯಲ್ಲಿ ಗಮನ ಸೆಳೆದ ವಿಶೇಷ ಅಲಂಕಾರ
ಉಡುಪಿಯಲ್ಲಿ ಗಮನ ಸೆಳೆದ ವಿಶೇಷ ಅಲಂಕಾರ

ಉಡುಪಿ: ಒಂದು ಕೈಯಲ್ಲಿ ಚಕ್ರ, ಇನ್ನೊಂದು ಕೈಯಲ್ಲಿ ಸಿಂಧೂರ ಬಟ್ಟಲು. ಇವನ್ನು ಹಿಡಿದುಕೊಂಡ ಉಡುಪಿಯ ಶ್ರೀಕೃಷ್ಣ. ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಕಿರಿಯ ಶ್ರೀಗಳು ಆಪರೇಷನ್ ಸಿಂದೂರ ಕಾರ್ಯಾಚರಣೆಯ ದ್ಯೋತಕವಾಗಿ ಶ್ರೀಕೃಷ್ಣನ ಅಲಂಕಾರವನ್ನು ಹೀಗೆ ಮಾಡಿದ್ದರು. ಪರ್ಯಾಯ ಕಿರಿಯ ಶ್ರೀಪಾದರಿಂದ ಪ್ರತಿದಿನ ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಭಾರತದ ಮೇಲೆ ಪಾಕಿಸ್ತಾನ ಪ್ರೇಷಿತ ಉಗ್ರಗಾಮಿಗಳು ಪಹಲ್ಗಾಮ್‌ನಲ್ಲಿ 26 ಮಂದಿ ಹಿಂದುಗಳನ್ನು ನಿರ್ದಯವಾಗಿ ಹತ್ಯೆ ಮಾಡಿದ್ದಕ್ಕಾಗಿ ಭಾರತ ಪ್ರಬಲ ಪ್ರತಿರೋಧವನ್ನು ತೋರಿತ್ತು. ಆಪರೇಷನ್ ಸಿಂದೂರ ಹೆಸರಲ್ಲಿ 26 ಮಂದಿ ಮಹಿಳೆಯರ ಸಿಂದೂರ ಕಸಿದ ಭಯೋತ್ಪಾದಕರನ್ನು ತಯಾರು ಮಾಡುವ ಉಗ್ರಗಾಮಿ ನೆಲೆಗಳಿಗೆ ನುಗ್ಗಿ ಅದನ್ನು ಧ್ವಂಸ ಮಾಡಿದ ಆಪರೇಷನ್ ಸಿಂದೂರ ಕಾರ್ಯಾಚರಣೆಯ ದ್ಯೋತಕವಾಗಿ ಪ್ರತಿ ದೇವಸ್ಥಾನಗಳಲ್ಲೂ ವಿಶೇಷ ಪ್ರಾರ್ಥನೆ, ಸೈನಿಕರಿಗೆ ಶಕ್ತಿ ತುಂಬಲು ಪೂಜೆ, ಪುನಸ್ಕಾರಗಳು ನಡೆಯುತ್ತಿವೆ. ಇದೇ ವೇಳೆ ಶ್ರೀಕೃಷ್ಣನನ್ನು ಚಕ್ರಪಾಣಿಯನ್ನಾಗಿಸಿ ಅಲಂಕಾರವನ್ನು ಮಾಡಲಾಗಿದೆ.

ಚಕ್ರ ಪಾಣಿ ಶ್ರೀಕೃಷ್ಣ ಒಂದು ಕೈಯಲ್ಲಿ ಚಕ್ರ,ಇನ್ನೊಂದು ಕೈಯಲ್ಲಿ ಸಿಂಧೂರ ಬಟ್ಟಲನ್ನು ಹೊಂದಿರುವ ಶ್ರೀಕೃಷ್ಣ ಇಲ್ಲಿ ಕಂಡುಬಂದಿದ್ದಾನೆ. ದುಷ್ಟಸಂಹಾರ ಮತ್ತು ಶಿಷ್ಟ ಪರಿಪಾಲಕ ನಾಗಿ ಕಂಗೊಳಿಸುತ್ತಿದ್ದಾನೆ ಉಡುಪಿಯ ಕೃಷ್ಣ.ನ ಈ ಅಲಂಕಾರ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಉಡುಪಿಯಲ್ಲಿ ಶ್ರೀ ಕೃಷ್ಣನಿಗೆ ಆಗಾಗ ವಿಶೇಷ ಅಲಂಕಾರವನ್ನು ಮಾಡಲಾಗುತ್ತದೆ. ಹಬ್ಬ, ವಿಶೇಷ ದಿನಗಳಲ್ಲಿ ಅಲಂಕಾರ ಇರಲಿದೆ. ಅದೇ ರೀತಿ ಇಂತಹ ವಿಶೇಷ ಸನ್ನಿವೇಶದಲ್ಲೂ ದೇವರ ಮೂರ್ತಿಯನ್ನು ಅಲಂಕರಿಸಲಾಗುತ್ತದೆ. ಆರು ತಿಂಗಳ ಹಿಂದೆ ಉಡುಪಿ ಶ್ರೀಕೃಷ್ಣನಿಗೆ ವೃಂದಾವನಾಂತ ಸಂಚಾರಿ ಅಲಂಕಾರ ಮಾಡಲಾಗಿತ್ತು. ಉಡುಪಿ ಶ್ರೀ ಕೃಷ್ಣದೇವರ ಅಕ್ಷಯ ತೃತೀಯಾ ಅಲಂಕಾರವೂ ವಿಭಿನ್ನವಾಗಿತ್ತು.

ಕಳೆದ ವರ್ಷದ ಹೊಸ ವರ್ಷಕ್ಕೆ ಸ್ವಾಗತ ಹಾಗೂ ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರ ಸಂನ್ಯಾಸ ದೀಕ್ಷೆಯ ಸುವರ್ಣ ಮಹೋತ್ಸವದ ನಿಮಿತ್ತ ಶ್ರೀಕೃಷ್ಣನಿಗೆ ಕಿರಿಯ ಸ್ವಾಮೀಜಿ ಸುಶ್ರೀಂದ್ರ ತೀರ್ಥ ಶ್ರೀಪಾದರು ಗೀತೋಪದೇಶ ಅಲಂಕಾರ ಮಾಡಿದ್ದರು. ಇದೂ ಕೂಡ ಗಮನ ಸೆಳೆದಿತ್ತು. ಹಿರಿಯ ಶ್ರೀಗಳು ಮಹಾಪೂಜೆ ನೆರವೇರಿಸಿದರು.

ಉಡುಪಿಯ ಶ್ರೀ ಕೃಷ್ಣ ದೇವಸ್ಥಾನ, ಉಡುಪಿ ಭಾಗದ ಇತರ ಏಳು ಸ್ಥಳಗಳ ಯಾತ್ರಾ ಸ್ಥಳಗಳಲ್ಲಿ ಮೊದಲ ಸ್ಥಾನವನ್ನು ಆಕ್ರಮಿಸಿದೆ. ಶ್ರೀಕೃಷ್ಣ ಮಠ ದ ಅನನ್ಯ ಲಕ್ಷಣವೆಂದರೆ, ಕೃಷ್ಣನನ್ನು “ನವಗ್ರಹ ಕಿಟಿಕಿ” ಎಂದು ಕರೆಯಲಾಗುವ ಒಂಬತ್ತು ರಂಧ್ರಗಳಿರುವ ಕಿಟಕಿ ಮೂಲಕ ಪೂಜಿಸಲಾಗುತ್ತದೆ. ಈ ನವಗ್ರಹ ಕಿಟಿಕಿ ಸುಂದರವಾಗಿ ಲಲಿತಕಲೆಗಳಿಂದ ಅಲಂಕರಿಸಲ್ಪಟ್ಟಿದೆ ಮತ್ತು ಕೆತ್ತನೆಗಳ ಮೂಲಕ ಮತ್ತು ಬೆಳ್ಳಿ ಫಲಕಗಳಿಂದ ಲೇಪಿತವಾಗಿ ಹೆಚ್ಚು ಸೌಂದರ್ಯವನ್ನು ಸೇರಿಸಿದೆ. ಭಗವಾನ್ ಕೃಷ್ಣನನ್ನು ನೋಡುವ ವಿಶಿಷ್ಟ ಮಾರ್ಗಗಳಲ್ಲಿ ಇದೂ ಒಂದು.

ವರದಿ: ಹರೀಶ ಮಾಂಬಾಡಿ. ಮಂಗಳೂರು

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.