ಕೇಂದ್ರ ಸಾಹಿತ್ಯ ಅಕಾಡೆಮಿಯ 2025ರ ಸಾಲಿನ ಭಾಷಾಂತರ ಪ್ರಶಸ್ತಿಗೆ ಪ್ರವೇಶ ಆಹ್ವಾನ, ಯಾವೆಲ್ಲಾ ಭಾಷೆಯವರಿಗೆ ಉಂಟು ಅವಕಾಶ
ಕನ್ನಡ ಸುದ್ದಿ  /  ಕರ್ನಾಟಕ  /  ಕೇಂದ್ರ ಸಾಹಿತ್ಯ ಅಕಾಡೆಮಿಯ 2025ರ ಸಾಲಿನ ಭಾಷಾಂತರ ಪ್ರಶಸ್ತಿಗೆ ಪ್ರವೇಶ ಆಹ್ವಾನ, ಯಾವೆಲ್ಲಾ ಭಾಷೆಯವರಿಗೆ ಉಂಟು ಅವಕಾಶ

ಕೇಂದ್ರ ಸಾಹಿತ್ಯ ಅಕಾಡೆಮಿಯ 2025ರ ಸಾಲಿನ ಭಾಷಾಂತರ ಪ್ರಶಸ್ತಿಗೆ ಪ್ರವೇಶ ಆಹ್ವಾನ, ಯಾವೆಲ್ಲಾ ಭಾಷೆಯವರಿಗೆ ಉಂಟು ಅವಕಾಶ

ಕೇಂದ್ರ ಸಾಹಿತ್ಯ ಅಕಾಡೆಮಿಯು ಕನ್ನಡವೂ ಸೇರಿದಂತೆ ದಕ್ಷಿಣ ಭಾರತದ ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳ ಭಾಷಾಂತರ ಪ್ರಶಸ್ತಿಗೆ ಅರ್ಜಿಯನ್ನು ಆಹ್ವಾನಿಸಿದೆ. ಇದರ ವಿವರಗಳು ಇಲ್ಲಿವೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾಂತರ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾಂತರ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.

ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿಯು 2025ರ ಸಾಲಿನ ಭಾಷಾಂತರ ಪ್ರಶಸ್ತಿಗೆ ಪ್ರವೇಶಗಳನ್ನು ಆಹ್ವಾನಿಸಿದೆ. ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅದರೊಂದಿಗೆ ಅನುವಾದಿತ ಪುಸ್ತಕದ ಒಂದು ಪ್ರತಿಯನ್ನು ಇದೇ ಮೇ 31ರೊಳಗೆ ಕಳಿಸಬೇಕು.2025ರ ಭಾಷಾಂತರ ಪ್ರಶಸ್ತಿಗೆ 2019 ರಿಂದ 2023ರವರೆಗಿನ ಅವಧಿಯಲ್ಲಿ ಪ್ರಕಟವಾದ ಅನುವಾದಿತ ಕೃತಿಗಳು ಅರ್ಹವಾಗಿರುತ್ತವೆ.ಅನುವಾದಕ/ಪ್ರಕಾಶಕ/ಅನುವಾದಕರ ಹಿತೈಷಿಗಳು- ಯಾರಾದರೂ ಪುಸ್ತಕ ಕಳಿಸಬಹುದು.ಕನ್ನಡಕ್ಕೆ ಅನುವಾದಗೊಂಡಿರುವ ಪುಸ್ತಕಗಳನ್ನು ಬೆಂಗಳೂರಿನಲ್ಲಿ ಇರುವ ದಕ್ಷಿಣ ಭಾರತ ವಲಯ ಕಚೇರಿಗೇ ಕಳಿಸಬೇಕು. (ತೆಲುಗು, ತಮಿಳು ಮತ್ತು ಮಲಯಾಳಂ ಗೆ ಅನುವಾದಗೊಂಡಿರುವ ಪುಸ್ತಕಗಳನ್ನೂ ಕೂಡ ಬೆಂಗಳೂರಿನ ಕಚೇರಿಗೇ ಸಲ್ಲಿಸಬೇಕು.)

ಬೆಂಗಳೂರು ಕಚೇರಿಯ ವಿಳಾಸ:

ಆಫೀಸರ್-ಇನ್-ಚಾರ್ಜ್‌ ಕೇಂದ್ರ ಸಾಹಿತ್ಯ ಅಕಾಡೆಮಿ, ದಕ್ಷಿಣ ಭಾರತ ವಲಯ ಕಚೇರಿ, ಕಲಾಗ್ರಾಮದ ಎದುರು, ಪೆಟ್ರೋಲ್ ಬಂಕ್ ಹತ್ತಿರ, ಹಳೆಯ ಹೊರವರ್ತುಲ ರಸ್ತೆ, ಜ್ಞಾನ ಜ್ಯೋತಿನಗರ, ಬೆಂಗಳೂರು-560056

ಇನ್ನೂ ಹೆಚ್ಚಿನ ಮಾಹಿತಿ ನಿರೀಕ್ಷಿಸುವವರು ಅಕಾಡೆಮಿಯ ವೆಬ್‌ಸೈಟ್ www.sahitya-akademi.gov.in ಗೆ ಭೇಟಿ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದೂರವಾಣಿಸಂಖ್ಯೆಗಳು 080-22245152,22130870. ಫ್ಯಾಕ್ಸ್‌ ನಂಬರ್‌ 080-22121932

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.