Indian Army: ಆಪರೇಶನ್ ಸಿಂದೂರ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ ಮೇಡ್ ಇನ್ ಬೆಂಗಳೂರು ಸೂಸೈಡ್ ಡ್ರೋನ್‌ಗಳು
ಕನ್ನಡ ಸುದ್ದಿ  /  ಕರ್ನಾಟಕ  /  Indian Army: ಆಪರೇಶನ್ ಸಿಂದೂರ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ ಮೇಡ್ ಇನ್ ಬೆಂಗಳೂರು ಸೂಸೈಡ್ ಡ್ರೋನ್‌ಗಳು

Indian Army: ಆಪರೇಶನ್ ಸಿಂದೂರ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ ಮೇಡ್ ಇನ್ ಬೆಂಗಳೂರು ಸೂಸೈಡ್ ಡ್ರೋನ್‌ಗಳು

ಆಪರೇಷನ್ ಸಿಂದೂರ್‌ ಯಶಸ್ಸಿನಲ್ಲಿ ನಮ್ಮ ರಾಜ್ಯದ ಕೊಡುಗೆಯೂ ಇದೆ. ಬೆಂಗಳೂರಿನ ಶಸ್ತ್ರಾಸ್ತ್ರ ತಯಾರಿಕಾ ಘಟಕವೊಂದರಲ್ಲಿ ತಯಾರಾದ ಸೂಸೈಡ್ ಡ್ರೋನ್‌ಗಳು ಸೇನೆಯ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಶತ್ರು ನಾಶಗೈಯುವ ಮೂಲಕ ಯಶಸ್ಸು ತಂದುಕೊಟ್ಟಿದೆ.

ಆಪರೇಷನ್ ಸಿಂದೂರ್‌ ಯಶಸ್ಸಿನ ಬಳಿಕ ಬಿಕಾನೇರ್‌ನಲ್ಲಿ ಮಹಿಳೆಯರಿಂದ ಸಂಭ್ರಮಾಚರಣೆ
ಆಪರೇಷನ್ ಸಿಂದೂರ್‌ ಯಶಸ್ಸಿನ ಬಳಿಕ ಬಿಕಾನೇರ್‌ನಲ್ಲಿ ಮಹಿಳೆಯರಿಂದ ಸಂಭ್ರಮಾಚರಣೆ (Dinesh Gupta)

ಬೆಂಗಳೂರು: ಶತ್ರುವನ್ನು ಪತ್ತೆಹಚ್ಚಿ, ಗುರುತಿಸಿ ಹಾಗೂ ನಿಖರವಾಗಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಸ್ಕೈ ಸ್ಟ್ರೈಕರ್ ಸೂಸೈಡ್ ಡ್ರೋನ್‌ಗಳು ಬುಧವಾರ ಬೆಳಗ್ಗೆ ನಡೆದ ಆಪರೇಶನ್ ಸಿಂದೂರ್‌ನಲ್ಲಿ ಭಾಗವಹಿಸಿ ಗಮನ ಸೆಳೆದಿದೆ. ಈ ಮೂಲಕ ಬಾಲಾಕೋಟ್ ದಾಳಿಯ ನಂತರ ಭಾರತೀಯ ಸೇನೆ ತನ್ನ ಶಸ್ತ್ರಾಸ್ತ್ರಗಳ ಶ್ರೇಣಿಗೆ ಮತ್ತೊಂದು ಅತ್ಯಂತ ಶಕ್ತ ಲಾಯಿಟರಿಂಗ್ ಮ್ಯೂನಿಷನ್‌ಗಳನ್ನು ಸೇರಿಸಿ ನಡೆಸಿರುವ ಕಾರ್ಯಾಚರಣೆ ಫಲ ಕೊಟ್ಟಿದೆ ಎನ್ನುವುದು ದೃಢಪಟ್ಟಿದೆ. ಆದರೆ ಈ ದಾಳಿಯಲ್ಲಿ ಬಳಸಿರುವ ಡ್ರೋನ್‌ಗಳು ಬೆಂಗಳೂರಿನಲ್ಲಿ ತಯಾರಾಗಿರುವುದು ಇನ್ನೊಂದು ಗಮನಾರ್ಹ ಸಂಗತಿಯಾಗಿದೆ.

ಈ ಸುಸೈಡ್ ಡ್ರೋನ್‌ಗಳು ಪಶ್ಚಿಮ ಬೆಂಗಳೂರು ಕೈಗಾರಿಕಾ ಪ್ರದೇಶದಲ್ಲಿರುವ ಘಟಕದಲ್ಲಿ ತಯಾರಾಗಿದ್ದು, ಬೆಂಗಳೂರು ಮೂಲದ ಅಲ್ಫಾ ಡಿಸೈನ್ ಮತ್ತು ಇಸ್ರೇಲ್‌ನ ಎಲ್‌ಬಿಟ್ ಸೆಕ್ಯುರಿಟಿ ಸಿಸ್ಟಮ್ಸ್ ನಡುವಿನ ಜಂಟಿ ಪ್ರಾಜೆಕ್ಟ್‌ನ ಭಾಗವಾಗಿದೆ ಎಂದು ಮೂಲಗಳು ಖಚಿತಪಡಿಸಿವೆ. 2021 ರಲ್ಲಿ ಭಾರತೀಯ ಸೇನೆ ಸುಮಾರು 100 ಸ್ಕೈ ಸ್ಟ್ರೈಕರ್‌ಗಳಿಗೆ ತುರ್ತು ಖರೀದಿ ಆರ್ಡರ್ ನೀಡಿತ್ತು.

100 ಕಿಮೀ ವ್ಯಾಪ್ತಿಯ ಈ ಡ್ರೋನ್ ಪ್ರತಿ ಡ್ರೋನ್‌ನಲ್ಲಿ 5 ಕೆಜಿ ಅಥವಾ 10 ಕೆಜಿ ತೂಕದ ಯುದ್ಧಾಸ್ತ್ರ ಹೊಂದಿರುತ್ತದೆ. ಎಲೆಕ್ಟ್ರಿಕ್ ಪ್ರೊಪಲ್ಷನ್ ವ್ಯವಸ್ಥೆಯು ಇದರ ಧ್ವನಿಯನ್ನೆ ತಗ್ಗಿಸುವುದರಿಂದ ಕಡಿಮೆ ಎತ್ತರದಲ್ಲಿ ನಡೆಸುವ ರಹಸ್ಯ ದಾಳಿಗಳಿಗೆ ಇದು ಸಹಕಾರಿಯಾಗಿದೆ. ಅಲ್ಫಾ ಡಿಸೈನ್‌ನ ಅಧ್ಯಕ್ಷ ಹಾಗೂ ನಿವೃತ್ತ ಕರ್ನಲ್ ಎಚ್ ಎಸ್ ಶಂಕರ್, ಸ್ಕೈ ಸ್ಟ್ರೈಕರ್‌ಗಳು ಆಪರೇಶನ್ ಸಿಂದೂರಿನಲ್ಲಿ ಭಾಗವಹಿಸಿದ್ದವೆಯೇ ಎಂಬ ಪ್ರಶ್ನೆಗಳಿಗೆ ಸರ್ಕಾರದ ಅಧಿಕಾರಿಗಳು ಮಾತ್ರ ಪ್ರತಿಕ್ರಿಯಿಸಬೇಕು ಎಂದು ಹೇಳಿದ್ದು, ಅಧಿಕೃತವಾಗಿ ಯಾವುದೇ ವಿವರ ನೀಡಲು ನಿರಾಕರಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in